
ಮದುವೆ ನಿರಾಕರಿಸಿದ ಅತ್ತೆ ಮಗಳ ಕಿಡ್ನಾಪ್, ಬಲವಂತವಾಗಿ ತಾಳಿ ಕಟ್ಟಿದ!
ಯುವತಿಯ ಅಪಹರಣ ಬಲವಂತವಾಗಿ ಕತ್ತಿಗೆ ತಾಳಿ| ದುಷ್ಕೃತ್ಯ ಎಸಗಿದ ಯುವಕ ಪೊಲೀಸ್ ವಶಕ್ಕೆ| ರಾಮನಗರದಲ್ಲಿ ಯುವತಿ ರಕ್ಷಣೆ | ಮದುವೆ ಪ್ರಸ್ತಾಪ ನಿರಾಕರಣೆ ಹಿನ್ನಲೆ ಈ ಕೃತ್ಯ| ಯುವತಿ ಅತ್ತೆ ಮಗ ಮನುನಿಂದಲೇ ಕೃತ್ಯ
ಹಾಸನ[ಫೆ.05]: ಯುವತಿಯೊಬ್ಬಳನ್ನ ಅಪಹರಿಸಿ, ಕಾರಿನಲ್ಲೇ ಬಲವಂತವಾಗಿ ತಾಳಿ ಕಟ್ಟಿರುವ ಘಟನೆ ಹಾಸನದ ಡೈರಿ ಸರ್ಕಲ್ ಬಳಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮನದನ್ನೆಯನ್ನ ಕರೆ ತರಲು ಹೆಲಿಕಾಪ್ಟರ್ ಕಳುಹಿಸಿದ ಅನ್ನದಾತ
ಯುವತಿಯ ಅತ್ತೆ ಮಗ ಮನು ಎಂಬಾತ ಮದುವೆ ಪ್ರಸ್ತಾಪವಿಟ್ಟಿದ್ದ. ಆದರೆ ಯುವತಿ ಅದನ್ನು ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಗೆಳೆಯರ ಸಹಾಯದಿಂದ ಅವಳನ್ನ ಅಪಹರಿಸಿದ ಮನು, ಬಲವಂತವಾಗಿ ತಾಳಿ ಕಟ್ಟಿದ್ದಾನೆ.
ರಾಜ್ಯ ಸರ್ಕಾರದಿಂದಲೇ ಮದುವೆ ಭಾಗ್ಯ: ಲವ್ ಮ್ಯಾರೇಜ್ಗೆ ಇದ್ಯಾ ಸೌಭಾಗ್ಯ..?
ಘಟನೆ ಬೆನ್ನಲ್ಲೇ ಮನು ಬೆನ್ನತ್ತಿದ ಪೊಲೀಸರು ರಾಮನಗರದಲ್ಲಿ ಅವನನ್ನ ವಶಕ್ಕೆ ತೆಗೆದುಕೊಂಡು, ಯುವತಿಯನ್ನ ರಕ್ಷಿಸಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಯುವತಿ ತಂದೆ ಅಸ್ವಸ್ಥರಾಗಿದ್ದಾರೆ.