ಮೂಲವ್ಯಾಧಿಗೆ ನಕಲಿ ಔಷಧಿ ಕೊಟ್ಟ ಆರೋಪ: ರೂಮಿನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ ಸ್ನೇಹಿತರು

ಬೆಂಗಳೂರಿನಲ್ಲಿ ಫೈಲ್ಸ್‌ಗೆ ಚಿಕಿತ್ಸೆ ಕೊಟ್ಟಿದ್ದವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ಮುರುಗನ್‌ ಎಂಬ ವ್ಯಕ್ತಿಗೆ ರಕ್ತ ಬರುವಂತೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ತಮಿಳುನಾಡು ಮೂಲದ ಮುರುಗನ್‌ ಎಂಬಾತನ ಮೇಲೆ ಹಲ್ಲೆ ಆತನ ಸ್ನೇಹಿತರೇ ಹಲ್ಲೆ ನಡೆಸಿದ್ದಾರೆ. ಫೈಲ್ಸ್‌ಗೆ ಮುರುಗನ್‌ ಆಯುರ್ವೇದಿಕ್ ಔಷಧಿ ಕೊಟ್ಟಿದ್ದ, ಔಷಧಿ ಪ್ರಯೋಜನ ಆಗದಿದ್ದಕ್ಕೆ ಹಲ್ಲೆ ಮಾಡಲಾಗಿದೆ. ರೂಮಿನಲ್ಲಿ ಮುರುಗನ್‌'ನನ್ನು ಕೂಡಿಹಾಕಿ ಹಲ್ಲೆ ಮಾಡಿ ವಿಡಿಯೋ ಶೂಟ್‌ ಮಾಡಿದ್ದಾರೆ. ಕೆ.ಆರ್‌ ಪುರಂ ಬಳಿ ಆರೋಪಿಗಳ ಬಟ್ಟೆ ಮೇಲೆ ರಕ್ತದ ರಕ್ತದ ಕಲೆ ನೋಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಲ್ಲೆ ವಿಚಾರ ಬಾಯಿ ಬಿಟ್ಟಿದ್ದಾರೆ. ಆರೋಪಿಗಳು ಹಣ ಪಡೆದು ವಂಚನೆ ಮಾಡಿದ್ದ ಎಂದು ಪೋಲಿಸರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.

Related Video