Asianet Suvarna News Asianet Suvarna News

ಅಬ್ಬಬ್ಬಾ... ಇದೆಂಥಾ ಫ್ರೆಂಡ್‌ಶಿಪ್: ಪ್ರತಿಷ್ಠೆಗಾಗಿ ಪ್ರೇಯಸಿಯನ್ನೇ ಗಿಫ್ಟ್‌ ಕೊಟ್ಟ ಗೆಳೆಯ!

ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಗೊತ್ತೇ ಇದೆ. ಅದೆಷ್ಟೋ ಸಿನಿಮಾಗಳಲ್ಲಿ ನಟರು ತಮ್ಮ ಪ್ರೀತಿಯನ್ನು ಬಚ್ಚಿಟ್ಟು ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಸ್ನೇಹಿತನ ಜೊತೆ ಮದುವೆ ಮಾಡಿಸಿ ತ್ಯಾಗಮಯಿ ಅನಿಸಿಕೊಂಡಿದ್ದಾರೆ. 

ರಾಮನಗರ (ಅ.05): ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಗೊತ್ತೇ ಇದೆ. ಅದೆಷ್ಟೋ ಸಿನಿಮಾಗಳಲ್ಲಿ ನಟರು ತಮ್ಮ ಪ್ರೀತಿಯನ್ನು ಬಚ್ಚಿಟ್ಟು ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಸ್ನೇಹಿತನ ಜೊತೆ ಮದುವೆ ಮಾಡಿಸಿ ತ್ಯಾಗಮಯಿ ಅನಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ಕೊಂಚ ಭಿನ್ನವಾಗಿರುವ ಘಟನೆಯೊಂದು ರಾಮನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತ ಕೇಳಿದನೆಂದು ಪ್ರಿಯತಮೆಗೂ ವಿಷಯ ತಿಳಿಸದೇ ಈಗಾಗಲೇ ಮದುವೆ ಆಗಿದ್ದ ಸ್ನೇಹಿತನಿಗೆ ಯುವತಿಯನ್ನು ಬಿಟ್ಟುಕೊಟ್ಟು ಮತ್ತೊಮ್ಮೆ ಮದುವೆ ಆಗಲು ಕಿರಾತಕನೊಬ್ಬ ಸಹಾಯ ಮಾಡಿದ್ದಾನೆ. ಈಗ ಸದ್ಯಕ್ಕೆ ಕಿಡ್ನಾಪ್ ಕೇಸ್​ನಲ್ಲಿ ಮಂಜು(21) ಮತ್ತು ರವಿ (33) ಯನ್ನು ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಐಜೂರಿನ ನ್ಯೂ ಎಕ್ಸಪರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯ ಜೊತೆಗೆ ಮಂಜು ಸಲುಗೆ ಬೆಳೆಸಿದ್ದ. ಇವರಿಬ್ಬರು ಭೇಟಿ ಮಾಡಿದಾಗ ಕೆಲವು ಫೋಟೋಗಳನ್ನು ತೆಗೆಸಿಕೊಂಡಿದ್ದರು. ಅಲ್ಲದೆ ಮಂಜು ತನ್ನ ಸ್ನೇಹಿತ ರವಿ ಬಳಿ ಹೋಗಿ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದನು. ಮಂಜು ಹಾಗೂ ರವಿ ಇಬ್ಬರೂ ಒಂದೇ ಗ್ರಾಮದವರು. ಮಂಜು ತನ್ನ ಎಲ್ಲಾ ವಿಚಾರಗಳನ್ನು ರವಿ ಬಳಿ ಹೇಳಿಕೊಳ್ಳುತ್ತಿದ್ದನು. ಮಂಜು ಮತ್ತು ಯುವತಿ ಓಡಾಡುತ್ತಿದ್ದದನ್ನು ರವಿ ನೋಡಿದ್ದನು. ಕೊನೆಗೆ ರವಿ ತನ್ನ ಸ್ನೇಹಿತ ಮಂಜುಗೆ ತನ್ನ ಗರ್ಲ್ ಫ್ರಂಡ್ ಅನ್ನು ಬಿಟ್ಟು ಕೊಡುವಂತೆ ಕೇಳಿದ್ದಾನೆ. 

ನಿನ್ನ ಗರ್ಲ್ ಫ್ರೆಂಡ್ ನನಗೆ ಕೊಡು. ನಾನು ಆಕೆಯನ್ನು ಮದುವೆ ಮಾಡಿಕೊಳ್ಳಬೇಕು. ನೀನೇನು ನೋಡಲು ಚೆನ್ನಾಗಿದ್ದೀಯಾ ಎಷ್ಟು ಬೇಕಾದರೂ ಹುಡುಗಿಯರನ್ನು ಪಟಾಯಿಸಬಹುದು. ನನಗೆ ನಿನ್ನ ಗರ್ಲ್ ಫ್ರೆಂಡ್ ಕೊಟ್ಟರೆ ಮದುವೆ ಆಗುತ್ತೇನೆ ಎಂದು ಮಂಜುಗೆ ಡಿಮ್ಯಾಂಡ್ ಮಾಡಿದ್ದನು. ರವಿ ಮಾತಿಗೆ ಮರಳಾದ ಮಂಜು ತನ್ನ ಪ್ರಿಯತಮೆಯನ್ನು ಮದುವೆ ಮಾಡಿಕೋ ಎಂದು ಯುವತಿಯನ್ನು ರವಿಯ ಜೊತೆ ಕಳಿಸಲು ಪ್ಲ್ಯಾನ್ ಮಾಡಿದ್ದಾನೆ. ಯುವತಿಯನ್ನು ಆಟದ ಗೊಂಬೆಯಂತೆ ತನ್ನ ಕೈಯಿಂದ ತನ್ನ ಸ್ನೇಹಿತನ ಕೈಗೆ ರವಾನಿಸುವಷ್ಟು ಸುಲಭವಾಗಿ ಯುವತಿಯನ್ನು ರವಿಯ ಜೊತೆ ಕಳುಹಿಸಿದ್ದಾನೆ.

Video Top Stories