ಹುಟ್ಟುಹಬ್ಬ ಆಚರಿಸಲು ಹೋದವನು ಹೆಣವಾದ, ಯುವಕನ ಬರ್ತ್‌ ಡೇ ದಿನವೇ ಡೆತ್‌ ಡೇ

ಕುಡಿದ ನಶೆ ಮನುಷ್ಯನನ್ನ ಯಾವ ಲೆವೆಲ್ಗೆ ತೆಗೆದುಕೊಂಡು ಹೋಗುತ್ತೆ ಅನ್ನೋದಕ್ಕೆ ಇವತ್ತಿನ ಎಪಿಸೋಡ್ ಬೆಸ್ಟ್ ಎಕ್ಸಾಂಪಲ್. ಆತ ಉಂಡಾಡಿ ಗುಂಡ. ಏರಿಯಾದಲ್ಲಿ ಹವಾ ಮೇಂಟೇನ್ ಮಾಡಿಕೊಂಡು ಓಡಾಡ್ತಿದ್ದ. ಆದ್ರೆ ಒಂದು ದಿನ ಕುಡಿದ ನಶೆಯಲ್ಲಿ ರೌಡಿಯೊಬ್ಬನ ಬಗ್ಗೆ ಮಾತನ್ನಾಡಿಬಿಟ್ಟ ಅಷ್ಟೇ.

Share this Video
  • FB
  • Linkdin
  • Whatsapp

ಬೆಂಗಳೂರು, (ಜುಲೈ.26): ಕುಡಿದ ನಶೆ ಮನುಷ್ಯನನ್ನ ಯಾವ ಲೆವೆಲ್ಗೆ ತೆಗೆದುಕೊಂಡು ಹೋಗುತ್ತೆ ಅನ್ನೋದಕ್ಕೆ ಇವತ್ತಿನ ಎಪಿಸೋಡ್ ಬೆಸ್ಟ್ ಎಕ್ಸಾಂಪಲ್. ಆತ ಉಂಡಾಡಿ ಗುಂಡ. ಏರಿಯಾದಲ್ಲಿ ಹವಾ ಮೇಂಟೇನ್ ಮಾಡಿಕೊಂಡು ಓಡಾಡ್ತಿದ್ದ. ಆದ್ರೆ ಒಂದು ದಿನ ಕುಡಿದ ನಶೆಯಲ್ಲಿ ರೌಡಿಯೊಬ್ಬನ ಬಗ್ಗೆ ಮಾತನ್ನಾಡಿಬಿಟ್ಟ ಅಷ್ಟೇ.ಅದೇ ರೌಡಿಯ ಶಿಷ್ಯರಿಂದ ಬರ್ಬರವಾಗಿ ಕೊಲೆಯಾಗಿ ಹೋದ. ಕುಡಿದ ಮತ್ತಿನಲ್ಲಿ ಯಾವತ್ತೋ ಹೇಳಿದ್ದ ಅದೊಂದು ಮಾತು ಅವನ ಬರ್ತಡೇಯನ್ನ ಡೆತ್ ಡೇ ಆಗುವಂತೆ ಮಾಡಿಬಿಟ್ಟಿದೆ.

Add Asianetnews Kannada as a Preferred SourcegooglePreferred

ಹುಟ್ಟುಹಬ್ಬದಂದೇ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ

ಬರ್ತಡೇ ಪಾರ್ಟಿಗೆ ಹೋದವನು ಹೆಣವಾಗಿರ್ತಾನೆ. ತನಿಖೆ ನಡೆಸೋ ಪೊಲೀಸರಿಗೆ ಸ್ವತಹ ಹೇಮಂತನ ಅಕ್ಕ ಹೇಳಿದ ಸ್ನೇಹಿತರನ್ನ ಕರೆಸಿ ವಿಚಾರಣೆ ನಡೆಸಿದ್ರೂ ಯಾವುದೆ ಪ್ರಯೋಜನವಾಗಲ್ಲ. ಏನಪ್ಪ ಮಾಡೋದು ಅಂತ ಪೊಲೀಸರು ತಲೆಕೆಡಸಿಕೊಂಡು ಕೂತ ಪೊಲೀಸರಿಗೆ ಬೆಂಗಳೂರು ದಕ್ಷಿಣ ವಿಭಾಗದ ಕೆ.ಜೆ ನಗರ ಪೊಲೀಸ್ ಠಾಣೆಯಿಂದ ಒಂದು ಕಾಲ್ ಬರುತ್ತೆ. ಅದೇ ಕಾಲ್ ಹೇಮಂತ್ ಕೊಲೆ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿಬಿಡುತ್ತೆ. ಹಾಗಾದ್ರೆ ಆ ಟ್ವಿಸ್ಟ್ ಏನು..? ಕೆ.ಜೆ ನಗರ ಪೊಲೀಸರು ಕೆಂಗೇರಿ ಪೊಲೀಸ್ ಸ್ಟೇಷನ್ಗೆ ಕಾಲ್ ಮಾಡಿ ಹೇಳಿದ್ದೇನು..

ಬರ್ತಡೇ ಮಾಡಲು ಹೋದವನು ಬರ್ಬಬರವಾಗಿ ಕೊಲೆಯಾಗಿಹೋಗಿರ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ ಪೊಲೀಸರಿಗೆ ಆರಂಭದಲ್ಲಿ ಸುಳಿವುಗಳು ಸಿಗದೇ ಕಂಗಾಲಾಗಿರ್ತಾರೆ. ಆದ್ರೆ ಕೊಲೆ ನಡೆದು 5 ದಿನಗಳ ಬಳಿಕ ಕೆಂಗೇರಿ ಪೊಲೀಸರಿಗೆ ಪಕ್ಕದ ಕೆ.ಜೆ ನಗರದ ಪೊಲೀಸರು ಒಂದು ಮೇಜರ್ ಟ್ವಿಸ್ಟ್ ಕೊಟ್ಟುಬಿಡ್ತಾರೆ. ಅವತ್ತು ಹೆಮಂತ್ನನ್ನ ಕೊಲೆ ಮಾಡಿದ್ದ ವಿಡಿಯೋ ಕೆ.ಜೆ ನಗರ ಪೊಲೀಸರು ಯಾವುದೋ ಬೇರೆ ಕೇಸ್ ಮೇಲೆ ಅರೆಸ್ಟ್ ಮಾಡಿಕೊಂಡು ಕರೆತಂದಿದ್ದ ಆರೋಪಿಯ ಮೊಬೈಲ್ನಲ್ಲಿ ಇರುತ್ತೆ. ಹೀಗೆ ಹುಟ್ಟಿದ ಹಬ್ಬದ ದಿನವೇ ಭೀಕರವಾಗಿ ಕೊಲೆಯಾದ ಹುಡುಗನ ಮರ್ಡರ್ ಮಿಸ್ಟರಿ ಕಥೆಯೇ ಇವತ್ತಿನ ಎಫ್.ಐ.ಆರ್.

Related Video