Asianet Suvarna News Asianet Suvarna News

ಅಶ್ವಿನಿ ಆಸೀನರಾಗಬೇಕಿದ್ದ ಕುರ್ಚಿ ಸ್ವಚ್ಛಗೊಳಿಸಿದ ಜೂ. ಎನ್‌ಟಿಆರ್

ನಟ ಸಾರ್ವಭೌಮ ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರಿಗೆ ವಿಧಾನಸೌಧದ ಮುಂಭಾಗ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಮರಣೋತ್ತರವಾಗಿ ಸನ್ಮಾನಿಸಲಾಯಿತು.

ಬೆಂಗಳೂರು: ನಟ ಸಾರ್ವಭೌಮ ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರಿಗೆ ವಿಧಾನಸೌಧದ ಮುಂಭಾಗ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಮರಣೋತ್ತರವಾಗಿ ಸನ್ಮಾನಿಸಲಾಯಿತು. ಪುನೀತ್ ಪತ್ನಿ ಆಶ್ವಿನಿಯವರು ರಾಜ್ಯದ ಅತ್ಯುನ್ನತ್ತ ಪ್ರಶಸ್ತಿಯನ್ನು ಪತಿ ಪರವಾಗಿ ಸ್ವೀಕರಿಸಿದರು. ಆದರೆ ಈ ಸಂದರ್ಭದಲ್ಲಿ ಜೋರಾಗಿ ಮಳೆ ಬಂದ ಪರಿಣಾಮ ಅಲ್ಲಿ ವೇದಿಕೆಯಲ್ಲಿ ಅತಿಥಿಗಳು ಕೂರಲು ಇಟ್ಟಿದ್ದ ಕುರ್ಚಿಗಳೆಲ್ಲಾ ತೇವಗೊಂಡಿದ್ದವು. ಸನ್ಮಾನ ಸ್ವೀಕರಿಸುವ ಸಲುವಾಗಿ ಅಶ್ವಿನಿಯವರು ಕುರ್ಚಿಯ ಮೇಲೆ ಕೂರಾಬೇಕಾಗಿತ್ತು. ಆದರೆ ಈ ವೇಳೆ ಒದ್ದೆಯಾಗಿದ್ದ ಕುರ್ಚಿಯನ್ನು ಸಮೀಪದಲ್ಲೇ ಇದ್ದ ನಟ ಜೂನಿಯರ್ ಎನ್‌ಟಿಆರ್ ಅವರು ಒರೆಸುವ ಮೂಲಕ ಸರಳತೆ ಮೆರೆದರು. 
 

Video Top Stories