
ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?
ಅದಾನಿ ಸಾಮ್ರಾಜ್ಯ ಮುಳುಗಿ ಹೋಗಿದ್ದು, ಮತ್ತೆ ಕೋಟೆ ಕಟ್ಟಲು ಅವರು ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದು ಹೇಗೆ, ಅವರ ಆಸ್ತಿ, ಸಂಪತ್ತು ಕರಗಲು ಕಾರಣವೇನು ಎಂಬುದರ ವಿವರ ಇಲ್ಲಿದೆ..
ಹಿಂಡನ್ಬರ್ಗ್ ವರದಿ ಗೌತಮ್ ಅದಾನಿ ಸಮೂಹದ ಲಕ್ಷಾಂತರ ಕೋಟಿರೂ. ಆಸ್ತಿಯನ್ನು ಕರಗಿಸಿಬಿಟ್ಟಿದೆ. ಇನ್ನು, ಹಿಂಡನ್ಬರ್ಗ್ ವರದಿಯಲ್ಲಿ ಅಂತದ್ದೇನಿದೆ ಎಂಬ ಬಗ್ಗೆ ನಿಮಗೆ ಅನುಮಾನಗಳಿದ್ಯಾ..? ಹಾಗೂ, ಹಿಂಡನ್ಬರ್ಗ್ ಆರೋಪದಲ್ಲಿ ಸತ್ಯವಿದೆಯಾ ಎಂಬ ಬಗ್ಗೆಯೂ ಅನೇಕರಿಗೆ ಅನುಮಾನವಿದೆ. ಇನ್ನು, ಮೋದಿ ಸರ್ಕಾರಕ್ಕೂ.. ಅದಾನಿ ಸಮೂಹಕ್ಕೂ ನಂಟಿದೆಯಾ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್ ಗೊತ್ತಾ..? ಬಿಬಿಸಿ ಡಾಕ್ಯುಮೆಂಟರಿ ಮುಂದುವರಿದ ಭಾಗವಾ ಈ ವರದಿ..? ನಿಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.. ಹಿಂಡನ್ಬರ್ಗ್ ವರದಿಯ ಹಿಂದೆ ಕಾಣದ ಕೈಗಳ ಕೈವಾಡವಿದೆಯಾ..? ಷೇರುದಾರರಿಗೆ ಮಂಕುಬೂದಿ ಎರಚಿದ್ದು ಯಾರು? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್.
Add Asianetnews Kannada as a Preferred Source
