Asianet Suvarna News Asianet Suvarna News

Union Budget 2022: ಆತ್ಮನಿರ್ಭರ ಮೂಲಕ ಜನರನ್ನು ತಲುಪುವ ಬಜೆಟ್

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ
ಜನರಿಗೆ ಯಾವುದೇ ಹೊರ ಇಲ್ಲದ ಬಜೆಟ್
ಅಭಿವೃದ್ಧಿಗೆ ವೇಗ ನೀಡುವಂಥ ಜನಸ್ನೇಹಿ ಬಜೆಟ್ ಮಂಡನೆ

ಬೆಂಗಳೂರು (ಫೆ. 1): ಇಂದಿನ ಬಜೆಟ್ ಯಾವುದೇ ಹೊರ ಇಲ್ಲದ, ಜನಪರ ಬಜೆಟ್ ಎಂದು ಕೇಂದ್ರ ಸಂದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi Minister of Parliamentary Affairs) ಹೇಳಿದ್ದಾರೆ. ಮುಂದಿನ ಇಪ್ಪತೈದು ವರ್ಷಗಳಲ್ಲಿ ಭಾರತ ನಡೆಯಬೇಕಿರುವ ಹಾದಿಯನ್ನು ಈ ಬಜೆಟ್ ಮೂಲಕ ಕಾಣಬಹುದಾಗಿದೆ ಎಂದು ಹೇಳಿದರು.

ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಅಭಿವೃದ್ಧಿಗೆ ಪೂರಕವಾಗಿರುವುದು ಮಾತ್ರವಲ್ಲೆ, ಅಭಿವೃದ್ಧಿಗೆ ವೇಗ ನೀಡುವಂಥ ಜನಸ್ನೇಹಿ ಬಜೆಟ್ ಆಗಿದೆ. ಆತ್ಮನಿರ್ಭರ ಭಾರತ ಮೂಲಕ ದೇಶದ ಜನರನ್ನು ತಲುಪುವ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಲಾಗಿದೆ.ಒಟ್ಟಾರೆ ಈ ಬಜೆಟ್ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದೆ ಎನ್ನುವ ವಿಶ್ವಾಸವಿದೆ ಎಂದು ಜೋಶಿ ಹೇಳಿದ್ದಾರೆ.

Video Top Stories