Asianet Suvarna News Asianet Suvarna News

6 ತಿಂಗಳ ಮುಂಚೆಯೇ ಶ್ರೀಗಳಿಗೆ ಸಿಕ್ಕಿತ್ತಾ ಸಾವಿನ ಮುನ್ಸೂಚನೆ?

ಶ್ರೀಗಳನ್ನ ನೆನೆದು ಕಣ್ಣೀರಿಟ್ಟ ಹಿರೇಮಠ ಕುಟುಂಬ| ಬಸಮ್ಮ ವಿಭೂತಿ ತಯಾರಿಸೋ ವೀರಯ್ಯನ ಪತ್ನಿ| ನಾವು ತಯಾರಿಸಿದ ವಿಭೂತಿ ಬಳಸಿದ್ದು ನಮ್ಮ ಪುಣ್ಯ| ಸಮಾಧಿಗೆ ಬೇಕೆಂದೇ ವಿಭೂತಿ ಗಟ್ಟಿ ಕೇಳಿದ್ರಾ ಶ್ರೀಗಳು..?| 25 ವರ್ಷಗಳಿಂದ ವಿಭೂತಿ ಗಟ್ಟಿ ತಯಾರಿಸ್ತಿರೋ ಕುಟುಂಬ

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜ.24): ನಡೆದಾಡುವ ದೇವರೆಂದೆ ಹೆಸರಾದ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಸಮಾಧಿ ವೇಳೆ ಉತ್ತರ ಕನಾ೯ಟಕದ ಬಾಗಲಕೋಟೆಯ ವಿಭೂತಿ ಗಟ್ಟಿಗಳನ್ನ ಬಳಸಲಾಗಿದ್ದು, ಇದಕ್ಕೆ ಶ್ರೀಗಳು 6 ತಿಂಗಳ ಮೊದಲೇ ತಮ್ಮ ಭಕ್ತನಿಗೆ 10 ಸಾವಿರ ವಿಭೂತಿ ಗಟ್ಟಿ ತಯಾರಿಸಿಕೊಡುವಂತೆ ಹೇಳಿದ್ದರು ಎನ್ನಲಾಗಿದೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರದ ವೀರಯ್ಯ ಹಿರೇಮಠ ಎಂಬುವರು ಶ್ರೀಗಳ ಅಂತ್ಯಕ್ರಿಯೆಗೆ  ಕ್ರಿಯಾಗಟ್ಟಿ ಸೇವೆ ಸಲ್ಲಿಸಿದ್ದಾರೆ.

 ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories