Asianet Suvarna News Asianet Suvarna News

ಚಿನ್ನಪ್ಪಿ ಮೈಮೇಲೆ ‘ಮಾರಮ್ಮ’? ಬಾಯ್ಬಿಟ್ರು ಸ್ಫೋಟಕ ಮಾಹಿತಿ!

ವಿಷಪ್ರಸಾದ ದುರಂತ ಸಂಭವಿಸಿದ ಸುಳ್ವಾಡಿ ಮಾರಮ್ಮ ದೇವಾಲಯದ ಟ್ರಸ್ಟಿ ಚಿನ್ನಪ್ಪಿ ಮೈಮೇಲೆ ಮಾರಮ್ಮ ದೇವಿ ಪ್ರವೆಶಿಸಿದ್ದಾರೆಂಬ ಮಾತು ಗ್ರಾಮದಲ್ಲಿ ಸದ್ದು ಮಾಡುತ್ತಿದೆ. ಇದ್ಕಕೆ ತಕ್ಕಂತೆ ವಿಚಿತ್ರವಾಗಿ ವರ್ತಿಸಿದ ಚಿನ್ನಪ್ಪಿ ಆವೇಶದಲ್ಲಿ ಹಲವಾರು ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿರುವುದು ಈ ಮಾತುಗಳಿಗೆ ಇಂಬು ನೀಡಿದೆ.

ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ದೇವಾಲಯದ ಟ್ರಸ್ಟಿ ಚಿನ್ನಪ್ಪಿ ಮೈ ಮೇಲೆ ಮಾರಮ್ಮ ದೇವಿ ಬಂದಿದ್ದು, ಆರೋಪಿಗಳು ನಾಲ್ವರು ಅಲ್ಲ, ಆರು ಜನ ಎಂದು ಹೇಳಿರುವುದಾಗಿ ಬಿಸಿ ಬಿಸಿ ಚರ್ಚೆ ಸುಳ್ವಾಡಿಯಲ್ಲಿ ಆರಂಭಗೊಂಡಿದೆ.