Gaur Dies at Bannerghatta Biological Park Due to Suspected Anesthesia Overdose During Transfer ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ, ಹೈದರಾಬಾದ್ಗೆ ಸ್ಥಳಾಂತರಿಸಲು ಸಿದ್ಧವಾಗಿದ್ದ ಕಾಡೆಮ್ಮೆಯೊಂದು ಸೆರೆಹಿಡಿಯುವ ವೇಳೆ ಮೃತಪಟ್ಟಿದೆ.
ಅರವಳಿಕೆ ಓವರ್ಡೋಸ್, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನಲ್ಲಿ ಕಾಡೆಮ್ಮೆ ಸಾವು!

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇಂದು (ಅ.31) ಮುಕ್ತಾಯಗೊಳ್ಳುತ್ತಿದೆ. ಸೆಪ್ಟೆಂಬರ್ 22ರಿಂದ ಈ ಸಮೀಕ್ಷೆ ಆರಂಭಗೊಂಡಿದೆ. ಭಾರಿ ಪರ ವಿರೋಧಗಳ ನಡುವೆ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ಬಹುತೇಕ ಪೂರ್ಣಗೊಳಿಸಿದೆ. ಸಮೀಕ್ಷೆ ವೇಳೆ ಕೆಲವರು ಮಾಹಿತಿ ನೀಡಲು ನಿರಾಕರಿಸಿ ರಾಜ್ಯದ್ಯಂತ ಭಾರಿ ಸುದ್ದಿಯಾಗಿತ್ತು. ಇದೀಗ ಸಮೀಕ್ಷೆಯಲ್ಲಿ ಭಾಗಿಯಾಗದವರಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.
Karnataka News Live:ಅರವಳಿಕೆ ಓವರ್ಡೋಸ್, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ನಲ್ಲಿ ಕಾಡೆಮ್ಮೆ ಸಾವು!
Karnataka News Live:ಈಜುತ್ತಾ ಕೊಳಲು ನುಡಿಸಿ ಮಂಗಳೂರು ಯುವ ಪ್ರತಿಭೆಯಿಂದ ಅಚ್ಚರಿಯ ವಿಶ್ವದಾಖಲೆ!
ಮಂಗಳೂರಿನ ಯುವ ಪ್ರತಿಭೆ ರೂಬನ್ ಜೇಸನ್ ಮಚಾದೊ, ಈಜುತ್ತಾ ಕೊಳಲು ನುಡಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ 700 ಮೀಟರ್ಗೂ ಹೆಚ್ಚು ದೂರ ಈಜಿ ಸಾಧನೆ ಮಾಡಿದ್ದಾರೆ.
Karnataka News Live:ಆಸ್ತಿ ಚೆನ್ನಾಗಿದೆ, ಮಗಳು ಚೆನ್ನಾಗಿರ್ತಾಳೆ ಅಂತಾ ಮದ್ವೆ ಮಾಡಿಕೊಟ್ಟೆ, ಆದ್ರೆ ಹೀಗಾಗೋಯ್ತು!
Poojas Father Blames In-Laws Seeks Justice for Daughter & Grandson ಗೃಹಿಣಿ ಪೂಜಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮದುವೆಯಾದ ದಿನದಿಂದಲೂ ಪತಿಯ ಮನೆಯವರು ನಿರಂತರ ಚಿತ್ರಹಿಂಸೆ ನೀಡಿದ್ದೇ ಸಾವಿಗೆ ಕಾರಣ ಎಂದು ಪೂಜಾಳ ತಂದೆ ಈಶ್ವರಪ್ಪ ಆರೋಪಿಸಿದ್ದಾರೆ.
Karnataka News Live:ನವೆಂಬರ್ 2025ರಲ್ಲಿ ಸಾಲು ಸಾಲು ಬ್ಯಾಂಕ್ ರಜೆ, ಪಟ್ಟಿ ಬಿಡುಗಡೆ ಮಾಡಿದ ಆರ್ಬಿಐ, ವ್ಯವಹಾರ ಹೇಗೆ!
Karnataka News Live:ಕನ್ನಡ ರಾಜ್ಯೋತ್ಸವದಂದು ಬಿಎಂಆರ್ಸಿಎಲ್ ಬಿಗ್ ಗಿಫ್ಟ್, ಹಳದಿ ಮಾರ್ಗ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ
ಬೆಂಗಳೂರಿನ ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ನವೆಂಬರ್ 1ರಿಂದ ಸಿಹಿ ಸುದ್ದಿ. ಬಿಎಮ್ಆರ್ಸಿಎಲ್ ಐದನೇ ರೈಲನ್ನು ಸೇರಿಸುತ್ತಿದ್ದು, ಇದರಿಂದ ರೈಲುಗಳ ಸಂಚಾರದ ಅಂತರ 20 ನಿಮಿಷದಿಂದ 15 ನಿಮಿಷಕ್ಕೆ ಇಳಿಕೆಯಾಗಲಿದೆ. ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲಿದೆ.
Karnataka News Live:Brahmagantu - ಸುಕನ್ಯಾ ಕುತಂತ್ರಕ್ಕೆ ಬೆಂಕಿಯಲ್ಲಿ ದೀಪಾ-ಚಿರು! ಹರಿದ ಮಂಗಳಸೂತ್ರ- ಏನಿದು ಅಪಾಯ?
Karnataka News Live:'ಡೆವಿಲ್' ನಾಯಕಿ ರಚನಾ ರೈ ಕನಸಿನ ಹುಡುಗ ಹೀಗಿರ್ಬೇಕಂತೆ! ಇದ್ಯಾಕೋ ನಂಬಲು ಆಗ್ತಿಲ್ಲ ಎನ್ನೋದಾ ನೆಟ್ಟಿಗರು?
Karnataka News Live:ಅಮೆಜಾನ್ ನಲ್ಲಿ 14 ಸಾವಿರ ಉದ್ಯೋಗಿಗಳ ವಜಾಕ್ಕೆ AI ಕಾರಣ ಅಲ್ಲ, ಸಿಇಒ ಆಂಡಿ ಜಾಸ್ಸಿ ಸ್ಪಷ್ಟನೆ!
ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ನ 14,000 ಉದ್ಯೋಗಿಗಳ ವಜಾಗೊಳಿಸುವಿಕೆಗೆ ಕೃತಕ ಬುದ್ಧಿಮತ್ತೆ (AI) ಅಥವಾ ಆರ್ಥಿಕ ಒತ್ತಡ ಕಾರಣವಲ್ಲ ಎಂದು ಸಿಇಒ ಆಂಡಿ ಜಾಸ್ಸಿ ಸ್ಪಷ್ಟಪಡಿಸಿದ್ದಾರೆ. ಕಂಪನಿಯ ಚುರುಕುತನ ಮತ್ತು ನವೋದ್ಯಮ ಸಂಸ್ಕೃತಿಯನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
Karnataka News Live:135 ಕೋಟಿ ವೆಚ್ಚದಲ್ಲಿ ಮಂಗಳೂರು ಟೆಕ್ ಪಾರ್ಕ್ಗೆ ಟೆಂಡರ್ ಕರೆದ ಕರ್ನಾಟಕ ಸರ್ಕಾರ
Karnataka Invites Tenders for ₹135 Cr Mangaluru Tech Park in PPP Model ಮಂಗಳೂರಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 135 ಕೋಟಿ ರೂ. ವೆಚ್ಚದ ಹೊಸ ಟೆಕ್ ಪಾರ್ಕ್ ನಿರ್ಮಾಣವಾಗಲಿದೆ. ಈ ಯೋಜನೆಯು 11,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
Karnataka News Live:ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಕಂಡೀಷನ್ ಅಪ್ಲೈ
ರಾಜ್ಯ ಸರ್ಕಾರವು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಮಾಲೀಕರಿಗೆ ದಂಡ ಪಾವತಿಸಿ ಸಕ್ರಮಗೊಳಿಸಲು ಅವಕಾಶ ನೀಡಿದೆ. ಶೇಕಡಾ 15ರ ಮಿತಿಯೊಳಗಿನ ಉಲ್ಲಂಘನೆಗಳಿಗೆ ಮಾತ್ರ ಅನ್ವಯವಾಗುವ ಈ ಯೋಜನೆಯಲ್ಲಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ನಿಗದಿಪಡಿಸಲಾಗಿದೆ.
Karnataka News Live:ಮುಟ್ಟಿನ ಬಗೆಗಿನ ಈ 5 ಸಂದೇಹಗಳಿಗೆ ವೈದ್ಯೆಯಿಂದ ಸ್ಪಷ್ಟ ಉತ್ತರ - ಪ್ರತಿ ಹೆಣ್ಣೂ ಅರಿಯಲೇಬೇಕು!
ಮುಟ್ಟಿನ ಕುರಿತಾದ ಸಾಮಾನ್ಯ ಸಮಸ್ಯೆಗಳಿಗೆ ಸ್ತ್ರೀರೋಗ ತಜ್ಞೆ ಡಾ. ಶಿಲ್ಪಾ ಅವರು ಪರಿಹಾರ ಸೂಚಿಸಿದ್ದಾರೆ. ಮುಟ್ಟಿನ ಅವಧಿ, ರಕ್ತಸ್ರಾವದ ದಿನಗಳು, ಅಧಿಕ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೊಟ್ಟೆನೋವಿನಂತಹ ಐದು ಪ್ರಮುಖ ವಿಷಯಗಳ ಬಗ್ಗೆ ಅವರು ಸಲಹೆ ನೀಡಿದ್ದಾರೆ.
Karnataka News Live:Karna Serial - ನಿತ್ಯಾ ಹುಚ್ಚಾಟಕ್ಕೆ ತೇಜಸ್ ಇನ್ನು ಕನಸು ಮಾತ್ರ? ಕರ್ಣ-ನಿಧಿ ಒಂದಾಗೋದು ಡೌಟೆ!
ಕಿಡ್ನ್ಯಾಪ್ ಆದ ತೇಜಸ್ ಚಿಕ್ಕಮಗಳೂರಿನಲ್ಲಿರುವ ಸುಳಿವು ಸಿಕ್ಕ ಖುಷಿಯಲ್ಲಿ ಕರ್ಣ ಮತ್ತು ನಿತ್ಯಾ ಹೊರಡಲು ಸಿದ್ಧರಾಗುತ್ತಾರೆ. ಆದರೆ, ಈ ಈ ವಿಷಯವನ್ನು ನಿತ್ಯಾ ಖಳನಾಯಕ ರಮೇಶ್ ಮುಂದೆ ಬಾಯಿಬಿಟ್ಟಿದ್ದಾಳೆ. ಇನ್ನು ಏನಿದ್ರೂ ತೇಜಸ್ ಸಿಗೋದು ಡೌಟೇ. ಮುಂದೇನು?
Karnataka News Live:ಗುಣಮುಖರಾದ ನಟ ಮುಮ್ಮುಟ್ಟಿ - ರಾಜರಾಜಶ್ವೇರನಿಗೆ ಚಿನ್ನದ ಕಳಶ ನೀಡಿ ಹರಕೆ ತೀರಿಸಿದ RSS ಮುಖಂಡ
ಮಲೆಯಾಳಂ ಖ್ಯಾತ ನಟ ಮಮ್ಮುಟ್ಟಿ ಆರೋಗ್ಯ ಸುಧಾರಿಸಿ ತಾಯ್ನಾಡಿಗೆ ವಾಪಾಸಾದ ಹಿನ್ನೆಲೆ ಅವರ ಚೇತರಿಕೆಗೆ ಹರಕೆ ಕಟ್ಟಿಕೊಂಡಿದ್ದ ಆರ್ಎಸ್ಎಸ್ ಮುಖಂ ಜಯಕುಮಾರ್ ಅವರು ಕಣ್ಣೂರಿನ ರಾಜರಾಜೇಶ್ವರ ದೇಗುಲಕ್ಕೆ ಚಿನ್ನದ ಕಳಸವನ್ನು ಕೊಡುಗೆಯಾಗಿ ನೀಡಿದರು.
Karnataka News Live:ಅಭಿಷೇಕ್ ಶರ್ಮಾ ಹೋರಾಟ ವ್ಯರ್ಥ - ಆಸೀಸ್ಗೆ ರೋಚಕ ಟಿ20 ಜಯ
ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ವಿಕೆಟ್ಗಳ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ (68) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತದ ಬ್ಯಾಟಿಂಗ್ ವಿಫಲವಾಯಿತು. ಸಾಧಾರಣ ಗುರಿ ಬೆನ್ನಟ್ಟಿದ ಆಸೀಸ್ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
Karnataka News Live:ನಾನು ಪಂಜಾಬ್ನ ವಿಶೇಷ ಪಾನೀಯ ಕುಡಿಯುವುದನ್ನು ಬಿಟ್ಟಿದ್ದೇನೆ - ಅಮಿತಾಭ್ ಬಚ್ಚನ್ ಹೇಳಿಕೆ ವೈರಲ್!
'ನಾನು ಧೂಮಪಾನ ಮಾಡುವುದಿಲ್ಲ, ಕುಡಿಯುವುದಿಲ್ಲ, ಅಥವಾ ಮಾಂಸ ತಿನ್ನುವುದಿಲ್ಲ. ಇದು ಧಾರ್ಮಿಕ ಕಾರಣಗಳಿಗಾಗಿ ಅಲ್ಲ, ಕೇವಲ ವೈಯಕ್ತಿಕ ಆದ್ಯತೆ. ನನ್ನ ತಂದೆ ಸಸ್ಯಾಹಾರಿ, ನನ್ನ ತಾಯಿ ಅಲ್ಲ, ಮತ್ತು ಜಯಾ ಮಾಂಸ ತಿನ್ನುತ್ತಾರೆ ಆದರೆ ನಾನು ತಿನ್ನುವುದಿಲ್ಲ' ಎಂದಿದ್ದಾರೆ ಅಮಿತಾಭ್ ಬಚ್ಚನ್.
Karnataka News Live:ನವೆಂಬರ್ 21ರಂದು ಡಿಕೆಶಿ ಸಿಎಂ ಪದಗ್ರಹಣ, ಕೆಂಡಾಮಂಡಲವಾದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ನಲ್ಲಿ ತೀವ್ರ ಚರ್ಚೆ
ನವೆಂಬರ್ 21 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಡಿಕೆಶಿ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
Karnataka News Live:ಜೆಮಿಮಾ ರೋಡ್ರಿಗ್ಸ್ - ಈಕೆ ಕೇವಲ ಆಟಗಾರ್ತಿಯಲ್ಲ, ಅನೇಕರಿಗೆ ಸ್ಫೂರ್ತಿಯ ಚಿಲುಮೆ!
2022ರ ವಿಶ್ವಕಪ್ನಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಜೆಮಿಮಾ ರೋಡ್ರಿಗ್ಸ್ ಮಾನಸಿಕ ಸವಾಲುಗಳನ್ನು ಮೆಟ್ಟಿನಿಂತು ಮತ್ತೆ ಮಿಂಚಿದ್ದಾರೆ. ಬಿದ್ದು ಎದ್ದ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
Karnataka News Live:ಮೊದಲ ಪ್ರಯತ್ನದಲ್ಲೇ NEET ಪಾಸಾದ 4 ಮಕ್ಕಳ ತಾಯಿ 47ರ ಹರೆಯದ ಮಹಿಳೆ
Juvana Abdulla inspirational story: ನಾಲ್ಕು ಮಕ್ಕಳ ತಾಯಿಯಾದ 47 ವರ್ಷದ ಕೇರಳದ ಜುವಾನಾ ಅಬ್ದುಲ್ಲಾ ಮೊದಲ ಯತ್ನದಲ್ಲೇ ನೀಟ್ ಪರೀಕ್ಷೆ ಪಾಸು ಮಾಡಿದ್ದು, ವೈದ್ಯ ಪತಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಾದ ಮಕ್ಕಳಿಂದಲೇ ಸ್ಫೂರ್ತಿ ಪಡೆದಿರುವ ಅವರು ಡೆಂಟಲ್ ಡಾಕ್ಟರ್ ಆಗುವ ಹಾದಿಯಲ್ಲಿದ್ದಾರೆ.