MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಜೈದೇವ್​ ಹೆಣೆದಿರೋ ಬಲೆಗೆ ಸಿಕ್ಕಿಬೀಳ್ತಾಳಾ ಮಲ್ಲಿ? ಗೌತಮ್​ಗೆ ಸಿಕ್ಕಿತು ಅಪಾಯದ ಸೂಚನೆ!

Amruthadhaare Serial: ಜೈದೇವ್​ ಹೆಣೆದಿರೋ ಬಲೆಗೆ ಸಿಕ್ಕಿಬೀಳ್ತಾಳಾ ಮಲ್ಲಿ? ಗೌತಮ್​ಗೆ ಸಿಕ್ಕಿತು ಅಪಾಯದ ಸೂಚನೆ!

ಆಸ್ತಿ ಮಾರಾಟ ಮಾಡಲು ಗೌತಮ್ ಮತ್ತು ಭೂಮಿಕಾ ಅವರ ಸಹಿ ಅಗತ್ಯವಿರುವುದರಿಂದ, ಜೈದೇವ್ ಅವರನ್ನು ಹುಡುಕಲು ರೌಡಿಗಳನ್ನು ಕಳುಹಿಸಿದ್ದಾನೆ. ಈ ವಿಷಯ ತಿಳಿದು ಮಲ್ಲಿ ಆಘಾತಕ್ಕೊಳಗಾಗಿದ್ದು, ಆನಂದ್ ಈ ಬಗ್ಗೆ ಗೌತಮ್‌ಗೆ ಎಚ್ಚರಿಕೆ ನೀಡಿದ್ದಾನೆ.

1 Min read
Suchethana D
Published : Oct 31 2025, 04:04 PM IST
Share this Photo Gallery
  • FB
  • TW
  • Linkdin
  • Whatsapp
17
ಆಸ್ತಿ ಕೊಟ್ಟರೂ ನೆಮ್ಮದಿ ಇಲ್ಲ
Image Credit : Facebook

ಆಸ್ತಿ ಕೊಟ್ಟರೂ ನೆಮ್ಮದಿ ಇಲ್ಲ

ಇದ್ದಬಿದ್ದ ಆಸ್ತಿಯನ್ನೆಲ್ಲಾ ಬರೆದುಕೊಟ್ಟರೂ, ಜೈದೇವ್​ ಮತ್ತು ಶಕುಂತಲಾಗೆ ನೆಮ್ಮದಿ ಇಲ್ಲ. ಅವರು ಅದನ್ನು ಮಾರಾಟ ಮಾಡಲು ಕಾನೂನಿನ ತೊಡಕು ಎದುರಾಗ್ತಿದೆ. ಇದೇ ಕಾರಣಕ್ಕೆ ಗೌತಮ್​ ಮತ್ತು ಭೂಮಿಕಾ ಸಹಿ ಅವರಿಗೆ ಅಗತ್ಯವಿದೆ.

27
ರೌಡಿಗಳನ್ನು ಬಿಟ್ಟ ಜೈದೇವ್​
Image Credit : zee5

ರೌಡಿಗಳನ್ನು ಬಿಟ್ಟ ಜೈದೇವ್​

ಈ ಕಾರಣದಿಂದಾಗಿ ಅವರನ್ನು ಹುಡುಕಲು ರೌಡಿಗಳನ್ನು ಬಿಟ್ಟಿದ್ದಾನೆ ಜೈದೇವ್​. ಅಲ್ಲಿಯೇ ಎಲ್ಲಿಯೋ ವಾಸವಾಗಿರುವ ಬಗ್ಗೆ ತಿಳಿಯುತ್ತಲೇ ಅಲ್ಲಿ ಹುಡುಕಿಕೊಂಡು ಹೋಗಿದ್ದಾನೆ.

Related Articles

Related image1
Bigg Boss: ಸೀರಿಯಲ್​ ಕಲಾವಿದ್ರು ನಿಂಗೆ ಅದ್ರಲ್ಲೇ ಹೊಡೀತಾರೆ- ರಕ್ಷಿತಾಗೆ Ashwini Gowda ಆವಾಜ್​; ಏನಿದು ಗಲಾಟೆ?
Related image2
Bigg Boss ಮನೆಯಲ್ಲಿ ಶಾಕಿಂಗ್​ ಘಟನೆ: ನಡೆಯುತ್ತಲೇ ಕುಸಿದು ಬಿದ್ದ ಸ್ಪರ್ಧಿ- ಆತಂಕದ ವಾತಾವರಣ
37
ಮಲ್ಲಿಗೆ ಶಾಕ್​
Image Credit : Instagram

ಮಲ್ಲಿಗೆ ಶಾಕ್​

ಮಲ್ಲಿ ಅತ್ತ ಬರುತ್ತಲೇ ಶಕುನಿ ಮಾಮಾ ಎಂದೇ ಫೇಮಸ್​ ಆಗಿರೋ ಲಕ್ಷ್ಮೀಕಾಂತ, ಮಲ್ಲಿಗೆ ಎಚ್ಚರಿಸಲು ಓಡಿ ಬಂದರೂ, ಆತ ಬದಲಾಗಿರುವುದು ಮಲ್ಲಿಗೆ ಗೊತ್ತಿಲ್ಲವಲ್ಲ, ಆದ್ದರಿಂದ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾಳೆ. ಅತ್ತ ಜೈದೇವ್​ ಮತ್ತು ಇತ್ತ ರೌಡಿಗಳು ತನ್ನನ್ನು ಹುಡುಕುತ್ತಾ ಇರುವುದು ಆಕೆಗೆ ತಿಳಿದು ಶಾಕ್​ ಆಗಿದೆ.

47
ಆನಂದ್​ ಎಚ್ಚರಿಕೆ
Image Credit : Instagram

ಆನಂದ್​ ಎಚ್ಚರಿಕೆ

ಅದೇ ಇನ್ನೊಂದೆಡೆ, ಆನಂದ್​ ಗೌತಮ್​ ಮನೆಗೆ ಬಂದು ಜೈದೇವನ ಬಗ್ಗೆ ಎಚ್ಚರಿಸಿದ್ದಾನೆ. ಆತ ನಿನ್ನನ್ನು ಮತ್ತು ಅತ್ತಿಗೆಯನ್ನು ಹುಡುಕುತ್ತಿದ್ದಾನೆ ಎಂದಿದ್ದಾನೆ.

57
ಬದಲಾಗೋದು ನಂಬಲಾಗ್ತಿಲ್ಲ
Image Credit : Instagram

ಬದಲಾಗೋದು ನಂಬಲಾಗ್ತಿಲ್ಲ

ಇರೋ ಬರೋದನ್ನೆಲ್ಲಾ ಕೊಟ್ಟ ಮೇಲೆ ಮತ್ಯಾಕೆ ತನ್ನನ್ನು ಅವನು ಹುಡುಕಬೇಕು ಎನ್ನುವ ವಿಷ್ಯ ಗೌತಮ್​ಗೆ ತಿಳಿಯಲಿಲ್ಲ. ಅದೇ ವೇಳೆ ಮಾಮಾ ಬದಲಾಗಿರುವುದೂ ಅವನಿಂದ ನಂಬಲು ಆಗ್ತಿಲ್ಲ.

67
ಅಪಾಯದ ಎಚ್ಚರಿಕೆ
Image Credit : Instagram

ಅಪಾಯದ ಎಚ್ಚರಿಕೆ

ಒಟ್ಟಿನಲ್ಲಿ ಅಪಾಯ ಇರೋ ಬಗ್ಗೆ ತಿಳಿದಿದೆ. ಜೈದೇವನಿಂದ ಏನೂ ಮಾಡಲು ಆಗಲ್ಲ ಬಿಡು ಎನ್ನುತ್ತಲೇ ಎಚ್ಚರಿಕೆಯಿಂದ ಇದ್ದಾನೆ.

77
ಮುಂದೇನಾಗುತ್ತದೆ?
Image Credit : zee5

ಮುಂದೇನಾಗುತ್ತದೆ?

ಜೈದೇವನಿಗೆ ಇವರ ಇರುವಿಕೆ ತಿಳಿಯತ್ತಾ? ಮಲ್ಲಿ ಸಿಕ್ಕಿಹಾಕಿಕೊಳ್ತಾಳಾ ಎನ್ನುವುದು ಮುಂದಿರುವ ಪ್ರಶ್ನೆ.

ಸೀರಿಯಲ್​ ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved