- Home
- News
- State
- State News Live: ಕರ್ನಾಟಕದ ಅಡಕೆಗೆ ಮಹಾರಾಷ್ಟ್ರ ಕಿರಿಕ್; ವರ್ತಕರಿಗೆ ಸಂಕಷ್ಟ..! ಅಡಕೆ ಖರೀದಿಗೆ ದೊಡ್ಡ ಹೊಡೆತ
State News Live: ಕರ್ನಾಟಕದ ಅಡಕೆಗೆ ಮಹಾರಾಷ್ಟ್ರ ಕಿರಿಕ್; ವರ್ತಕರಿಗೆ ಸಂಕಷ್ಟ..! ಅಡಕೆ ಖರೀದಿಗೆ ದೊಡ್ಡ ಹೊಡೆತ

ಬೆಂಗಳೂರು (ಜೂ.19): ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನ ಬಿಜೆಪಿ ಪಾಳೆಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಅಡ್ಡಮತದಾನದ ಸತ್ಯಾಸತ್ಯತೆ ಮತ್ತು ವಾಸ್ತವ ತಿಳಿಯಲು ಮೂವರು ಮುಖಂಡರನ್ನು ಒಳಗೊಂಡ ತಂಡವೊಂದನ್ನು ರಚಿಸಿದ್ದು, ಈ ತಿಂಗಳ 25ರೊಳಗಾಗಿ ಸಮಗ್ರ ನೀಡುವಂತೆ ಸೂಚಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
Karnataka News Live 20th June: ಕರ್ನಾಟಕದ ಅಡಕೆಗೆ ಮಹಾರಾಷ್ಟ್ರ ಕಿರಿಕ್; ವರ್ತಕರಿಗೆ ಸಂಕಷ್ಟ..! ಅಡಕೆ ಖರೀದಿಗೆ ದೊಡ್ಡ ಹೊಡೆತ
Karnataka News Live 20th June: Bengaluru Balcony Commode - ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ಕಮೋಡ್ ಇಟ್ಟ ಕಿಲಾಡಿ; ಆ ಹುಡುಗಿ ಕಂಗಾಲು!
Modern Commode in Bengaluru Home Balcony: ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಅಥವಾ ಮನೆಯೊಂದರ ಬಾಲ್ಕನಿಯಲ್ಲಿ ಮಾಡರ್ನ್ ಕಮೋಡ್ ಇಡಲಾಗಿದೆ. ಇದನ್ನು ಇಬ್ಬರು ಹುಡುಗಿಯರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
Karnataka News Live 20th June: Namma Metro - ಮೂರನೇ ಹಂತದ ಯೋಜನೆಗೆ 3,627 ಮರಗಳಿಗೆ ಕೊಡಲಿ ಹಾಕಲು BMRCL ಪ್ರಸ್ತಾವನೆ!
ನಮ್ಮ ಮೆಟ್ರೋ ಮೂರನೇ ಹಂತದ ಹೊಸಹಳ್ಳಿ-ಕಡಬಗೆರೆ ಮಾರ್ಗ ನಿರ್ಮಾಣಕ್ಕಾಗಿ 3627 ಮರಗಳನ್ನು ತೆರವುಗೊಳಿಸಲು ಬಿಎಂಆರ್ಸಿಎಲ್ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಗಾಗಿ ಹೊಸಹಳ್ಳಿ, ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮರಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನ.
Karnataka News Live 20th June: 'ಈಗಲೇ ಕಾರು ಡೆಲಿವರಿ ಕೊಡಬೇಕು..' ಟೆಸ್ಟ್ ಡ್ರೈವ್ ವೇಳೆ ಸಿಗರೇಟು ಸೇದಬೇಡ ಅಂದಿದ್ದಕ್ಕೆ ಪೊರ್ಶೆ ಕಾರನ್ನೇ ಖರೀದಿಸಿದ್ದ ಶ್ರೀಕಿ!
ಟೆಸ್ಟ್ ಡ್ರೈವ್ ವೇಳೆ ಪೊರ್ಶೆ ಕಾರಿನಲ್ಲಿ ಸಿಗರೇಟ್ ಸೇದಲು ಸಿಬ್ಬಂದಿ ಆಕ್ಷೇಪಿಸಿದ್ದಕ್ಕೆ, ಹ್ಯಾಕರ್ ಶ್ರೀಕಿ ಬಿಟ್ ಕಾಯಿನ್ ಬಳಸಿ ತಕ್ಷಣವೇ ಆ ಕಾರನ್ನು ಖರೀದಿಸಿದ್ದ ಕಾರಿನಲ್ಲಿ ಕುಳಿತು ಸಿಗರೇಟ್ ಸೇದಿ ಸಿಬ್ಬಂದಿಗೆ ಕಿಚಾಯಿಸಿದ್ದನು. ಈ ಘಟನೆಯು ಬಿಟ್ ಕಾಯಿನ್ ಹಗರಣದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
Karnataka News Live 20th June: RSS Registration row: ನನ್ನ ಪ್ರಶ್ನೆಗೆ ಆರ್ಎಸ್ಎಸ್ ಉತ್ತರ ಕೊಡಲಿ, ಯಾರಾರೋ ಅಲ್ಲ: ಪ್ರಿಯಾಂಕ್ ಖರ್ಗೆ!
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ನೋಂದಣಿ ಕುರಿತು ಪ್ರಶ್ನಿಸಿದ್ದು, ಸಂಘಟನೆಯೇ ನೇರವಾಗಿ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ. ವಕೀಲರು ಅಥವಾ ಇತರರ ಅಭಿಪ್ರಾಯಗಳಿಗೆ ನಾನು ಉತ್ತರ ನೀಡುವುದಿಲ್ಲ, ಸಂಘದ ಲೆಟರ್ಹೆಡ್ನಲ್ಲೇ ಉತ್ತರ ಬರಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Karnataka News Live 20th June: Cabinet meeting: ಇಂದು ಸಚಿವ ಸಂಪುಟ ಸಭೆಯಲ್ಲಿ ಹೊಸ 2 ಖಾತೆ ಸೇರಿದಂತೆ ಈ ವಿಷಯಗಳ ಮೇಲೆ ಮಹತ್ವದ ಚರ್ಚೆ ಸಾಧ್ಯತೆ!
ಶನಿವಾರದ ಸಚಿವ ಸಂಪುಟ ಸಭೆಯಲ್ಲಿ 'ಮುಖ್ಯಮಂತ್ರಿಗಳ ಜನಸ್ಪಂದನ' ಮತ್ತು 'ಅನಿವಾಸಿ ಭಾರತೀಯ ವ್ಯವಹಾರ' ಎಂಬ ಎರಡು ಹೊಸ ಇಲಾಖೆಗಳ ರಚನೆ, ವಿಧಾನಪರಿಷತ್ನ ಐದು ಸ್ಥಾನಗಳಿಗೆ ನಾಮನಿರ್ದೇಶನ ಹಾಗೂ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
Karnataka News Live 20th June: Cross voting: ಯಾರನ್ನ ಕೇಳಿದ್ರೂ 'ನಾನವನಲ್ಲ ನಾನವನಲ್ಲ' ಅಂತಾರೆ, ಹಾಗಿದ್ರೆ ಅಡ್ಡಮತ ಹಾಕಿದ್ದು ಯಾರು?
ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೇಲಿ ಬಿಜೆಪಿ-ಜೆಡಿಎಸ್ನ 11 ಶಾಸಕರು ಅಡ್ಡ ಮತದಾನ ಮಾಡಿದ್ದು, ಯಾರು ಆ ಶಾಸಕರು ಎಂಬುದು ನಿಗೂಢವಾಗಿದೆ. ಹಲವರು ಮಾಡಿಲ್ಲವೆಂದು ಸ್ಪಷ್ಟನೆ ನೀಡುತ್ತಿದ್ದರೆ, ಜೆಡಿಎಸ್ನ ನಾಲ್ವರು ಶಾಸಕರು ಅಡ್ಡಮತ ಚಲಾಯಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Karnataka News Live 20th June: ವಿಧಾನಪರಿಷತ್ ಚುನಾವಣೇಲಿ ಬಿಜೆಪಿ ಅಡ್ಡ ಮತದಾನ; ಬಿಜೆಪಿ ರಾಷ್ಟ್ರಾಧ್ಯಕ್ಷ ಕರೆ ಮಾಡಿ ಕೇಳಿದ್ದೇನು?
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ವಿವರಣೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ದೆಹಲಿಗೆ ತೆರಳಲಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಿದ್ದಾರೆ.
Karnataka News Live 20th June: ಏನಾಗ್ತಿದೆ ರಾಜ್ಯದಲ್ಲಿ? ಒಂದಲ್ಲ ಎರಡಲ್ಲ, 5 ಜಿಲ್ಲಾ ಕೋರ್ಟ್ಗಳಿಗೆ ಇ-ಮೇಲ್ಹುಸಿ ಬಾಂಬ್ ಬೆದರಿಕೆ!
ಬಾಗಲಕೋಟೆ, ದಾವಣಗೆರೆ ಸೇರಿದಂತೆ ರಾಜ್ಯದ ಐದು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದೆ. ತಮಿಳುನಾಡಿನ ಘಟನೆಗೆ ಪ್ರತೀಕಾರವೆಂದು ಹೇಳಲಾದ ಈ ಬೆದರಿಕೆಯಿಂದಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿ, ತಪಾಸಣೆ ನಂತರ ಕಲಾಪಗಳು ಪುನಾರಂಭಗೊಂಡವು.