08:43 AM (IST) Jul 08

Karnataka News Live 8 July 2026TB Dam - ರೈತರಿಗೆ ಶುಭ ಸುದ್ದಿ, ತುಂಗಭದ್ರೆಗೆ ಒಳಹರಿವು ಹೆಚ್ಚಳ! ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟು?

ಕಳೆದ ಎರಡು ದಿನಗಳಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮುಂಗಾರು ಬೆಳೆ ಕೈತಪ್ಪುವ ಭೀತಿಯಲ್ಲಿದ್ದ ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
Read Full Story
08:35 AM (IST) Jul 08

Karnataka News Live 8 July 2026ಬೆಂಗಳೂರು - ಫುಟ್‌ಪಾತ್ ತೆರವು ವಿರುದ್ಧ ರೊಚ್ಚಿಗೆದ್ದ ಬೀದಿಬದಿ ವ್ಯಾಪಾರಿಗಳು, ಬೃಹತ್ ಪ್ರತಿಭಟನೆ, ಬೇಡಿಕೆಗಳೇನು?

ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಜುಲೈ 8 ರಂದು ನಗರಾದ್ಯಂತ ಬಂದ್ ಆಚರಿಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ಕ್ರಮವು ಕಾನೂನುಬಾಹಿರವಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ, 13 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
Read Full Story
08:35 AM (IST) Jul 08

Karnataka News Live 8 July 2026ಸತ್ಯಶೋಧಕ್ಕೆ ಮುಂದಾದ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್; ಅಪಘಾತ ಜನ್ಮರಹಸ್ಯ ಬಯಲಾಗುತ್ತಾ?

ಕರ್ಣ ಸೀರಿಯಲ್‌ನಲ್ಲಿ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಪತ್ನಿ ನಿಧಿಯ ತಂದೆ-ತಾಯಿಯ ಸಾವು ಅಪಘಾತವಲ್ಲ, ಕೊಲೆ ಎಂದು ತಿಳಿದು, ಹಳೆಯ ಕ್ಯಾಮೆರಾದ ಸಹಾಯದಿಂದ ಸತ್ಯಶೋಧಕ್ಕೆ ಮುಂದಾಗಿದ್ದಾರೆ. ಈ ತನಿಖೆಯು ಕರ್ಣನ ಜನ್ಮರಹಸ್ಯವನ್ನೂ ಬಯಲು ಮಾಡುವ ಹಾದಿಯಲ್ಲಿದೆ.
Read Full Story
08:13 AM (IST) Jul 08

Karnataka News Live 8 July 2026'ಮೇಕೆದಾಟು ಯೋಜನೆ ರಹಸ್ಯವಾಗಿ ನಡೆಯುತ್ತಿದೆ..' ಸ್ಥಳ ಪರಿಶೀಲನೆ ಬಳಿಕ ತಮಿಳುನಾಡು ರೈತರ ನಿಯೋಗ ಗಂಭೀರ ಆರೋಪ!

ತಮಿಳುನಾಡು ರೈತಸಂಘದ ಅಧ್ಯಕ್ಷ ಪಿ.ಆರ್.ಪಾಂಡಿಯನ್ ನೇತೃತ್ವದ ನಿಯೋಗವು ಉದ್ದೇಶಿತ ಮೇಕೆದಾಟು ಯೋಜನೆ ಸ್ಥಳಕ್ಕೆ ಭೇಟಿ ನೀಡಿ, ಕರ್ನಾಟಕ ಸರ್ಕಾರ ರಹಸ್ಯವಾಗಿ ಸರ್ವೆ ಕಾರ್ಯ ಆರಂಭಿಸಿದೆ ಎಂದು ಆರೋಪಿಸಿದೆ. 

Read Full Story
07:42 AM (IST) Jul 08

Karnataka News Live 8 July 2026ರಾ.ಹೆ. 275ರ ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ 49.22 ಕೋಟಿ ರು. ಕೇಂದ್ರ ವಿಶೇಷ ಅನುದಾನ

ರಾ.ಹೆ. 275ರ ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿ ಕಾಮಗಾರಿಗೆ ಕೇಂದ್ರ ಸರ್ಕಾರವು 49.22 ಕೋಟಿ ರು.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ಇದರೊಂದಿಗೆ, ಈ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸಂಸದ ಬ್ರಿಜೇಶ್ ಚೌಟ ಅವರು ಹೆದ್ದಾರಿ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
Read Full Story
07:17 AM (IST) Jul 08

Karnataka News Live 8 July 2026ರೈಲು ಇಂಜಿನ್ ಡಿಕ್ಕಿ - ಪತ್ನಿಯನ್ನ ಸುರಕ್ಷಿತ ಸ್ಥಳಕ್ಕೆ ತಳ್ಳಿ ಸೇತುವೆಯಿಂದ ಬಿದ್ದು ವ್ಯಕ್ತಿ ಸಾವು

ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿ, ರೈಲು ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ತುಂಗಭದ್ರಾ ರೈಲು ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಪತ್ನಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ತಳ್ಳಿ, ತಾನು ಪಾರಾಗುವ ಯತ್ನದಲ್ಲಿ ಇಂಜಿನ್ ಬಡಿದು ಮೃತಪಟ್ಟಿದ್ದಾರೆ.
Read Full Story