10:17 PM (IST) Jun 07

Karnataka News Live 7 June 2026ಸರ್ಕಾರಿ ಆಸ್ಪತ್ರೆಗಳಲ್ಲಿ 900 ಹುದ್ದೆ ಖಾಲಿ - ವಾರದೊಳಗೆ ನೇಮಕಾತಿಗೆ ಸಚಿವ ಖಾದರ್ ಖಡಕ್ ಸೂಚನೆ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 900 ರಷ್ಟು ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

Read Full Story
09:53 PM (IST) Jun 07

Karnataka News Live 7 June 20262028ರಲ್ಲೂ ಅವಕಾಶ ನೀಡಿ, ಜನರ ಋಣ ತೀರಿಸುತ್ತೇನೆ - ಕಬ್ಬಾಳಮ್ಮ ಸನ್ನಿಧಿಯಲ್ಲಿ ಡಿಕೆಶಿ ಭಾವುಕ!

ಕಬ್ಬಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದ್ದು, ತಾಯಿ ಕಬ್ಬಾಳಮ್ಮನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಜನರ ಆಶೀರ್ವಾದವೇ ತಮ್ಮ ರಾಜಕೀಯ ಶಕ್ತಿಯ ಮೂಲ ಎಂದು ಹೇಳಿದ್ದಾರೆ.

Read Full Story
08:46 PM (IST) Jun 07

Karnataka News Live 7 June 2026ತಾಯಿಯ ಫೋಟೋ ಹಂಚಿಕೊಂಡ ಸಿಎಂ ಡಿಕೆಶಿ - ಪೋಸ್ಟ್‌ನಲ್ಲಿ ಅಡಗಿದ್ದ ಭಾವನಾತ್ಮಕ ಕಥೆ ಏನು?

ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು..

Read Full Story
06:58 PM (IST) Jun 07

Karnataka News Live 7 June 2026ಇಂದಿಗೂ ಜನ ನನ್ನನ್ನು ಟೈಗರ್ ಪ್ರಭಾಕರ್ ಮಗಳು ಅಂತಾರೆ - ಆ ದೊಡ್ಡ ರಹಸ್ಯ ಬಿಚ್ಚಿಟ್ಟ ಅನು ಪ್ರಭಾಕರ್!

ಟೈಗರ್ ಪ್ರಭಾಕರ್ ತಮ್ಮ ತಂದೆಯಲ್ಲ ಎಂದು ನಟಿ ಅನು ಪ್ರಭಾಕರ್ ಸ್ಪಷ್ಟಪಡಿಸಿದ್ದಾರೆ. ತಂದೆ ಎಂ.ವಿ. ಪ್ರಭಾಕರ್ ಅವರ ವ್ಯಕ್ತಿತ್ವ, ಕನ್ನಡದ ಮೇಲಿನ ಪ್ರೀತಿ ಹಾಗೂ ಅವರ ಸಾವಿನ ಹಿಂದಿನ ಆಘಾತಕಾರಿ ಕಾರಣದ ಬಗ್ಗೆ ಅನು ಭಾವುಕರಾಗಿ ಮಾತನಾಡಿದ್ದಾರೆ.

Read Full Story
05:18 PM (IST) Jun 07

Karnataka News Live 7 June 2026ಜನರ ಮೇಲೆ ಮತ್ತೊಂದು ಹೊರೆ... ಸಿಲಿಂಡರ್ ದರ ಏರಿಕೆಗೆ ಡಿಸಿಎಂ ಪರಮೇಶ್ವರ್ ಆಕ್ರೋಶ

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸಿಲಿಂಡರ್..

Read Full Story
04:44 PM (IST) Jun 07

Karnataka News Live 7 June 2026ಐಟಿ ಕೆಲ್ಸ ಬಿಟ್ಟು ಬೆಂಗಳೂರಲ್ಲಿ ಆಟೋ ಓಡಿಸ್ತಿರೋ ಲೇಡಿ - ಅಮೆರಿಕದಲ್ಲಿಯೂ ಕನ್ನಡತಿಯ ಹವಾ

ಬೆಂಗಳೂರಿನ ನೇತ್ರಾ, ಐಟಿ ಕ್ಷೇತ್ರದ ಒತ್ತಡದ ಬದುಕನ್ನು ತ್ಯಜಿಸಿ ಆಟೋ ಚಾಲಕಿಯಾದರು. ಹಣಕ್ಕಿಂತ ನೆಮ್ಮದಿಯೇ ಮುಖ್ಯವೆಂದು ಸಾರುವ ಇವರು, ಈಗ ತಿಂಗಳಿಗೆ 60,000 ರೂ. ಸಂಪಾದಿಸುತ್ತಿದ್ದು, ಇವರ ಕಥೆ ಅಮೆರಿಕಾದಲ್ಲಿಯೂ ವೈರಲ್ ಆಗಿದೆ.
Read Full Story
04:41 PM (IST) Jun 07

Karnataka News Live 7 June 2026ಮುಂದಿನ 3 ಗಂಟೆ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ - ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗುವ ಲಕ್ಷಣಗಳು ಕಂಡುಬಂದಿವೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

Read Full Story
04:15 PM (IST) Jun 07

Karnataka News Live 7 June 2026ಕೆಲವೇ ದಿನಗಳಲ್ಲಿ ಆರಂಭವಾಗುವ Bigg Boss Kannada 13 ಶೋಗಾಗಿ, ಅಂತ್ಯ ಆಗುವ 3 ಧಾರಾವಾಹಿಗಳು ಯಾವುವು?

BB Kannada 13 Starting Date: ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಶೋ ಆದಷ್ಟು ಬೇಗ ಶುರು ಆಗಲಿದೆ. ಕಲರ್ಸ್‌ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ಬಿಗ್‌ ಬಾಸ್‌ ಶೋಗೆ ಸಂಬಂಧಪಟ್ಟಂತೆ ಪೂರ್ವ ತಯಾರಿ ನಡೆಯುತ್ತಿದೆ. ಹೀಗಿರುವಾಗ ಮೂರು ಧಾರಾವಾಹಿಗಳು ಅಂತ್ಯ ಆಗಬೇಕು.

Read Full Story
02:49 PM (IST) Jun 07

Karnataka News Live 7 June 2026Kottiyoor Temple - ಸತಿದೇವಿ ಪ್ರಾಣ ಬಿಟ್ಟ ಸ್ಥಳದಲ್ಲಿ ನೂಕು ನುಗ್ಗುಲು, ಗೂಂಡಾಗಿರಿ, ಕನ್ನಡಿಗರಿಗೆ ಕ್ಯಾರೆ ಎನ್ನಲ್ಲ!

Kottiyoor temple opening date 2026 for public: ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು ಲಕ್ಷಾಂತರ ಜನರು ಹೋಗುತ್ತಿದ್ದಾರೆ.

Read Full Story
02:27 PM (IST) Jun 07

Karnataka News Live 7 June 2026ಆ ಹೀರೋಗಾಗಿಯೇ ನಾನು ಸಿನಿಮಾ ಕ್ಷೇತ್ರಕ್ಕೆ ಬಂದೆ.. ಕೊನೆಗೂ ಅಸಲೀ ಸತ್ಯ ಬಿಚ್ಚಿಟ್ಟ ಸಾಯಿ ಪಲ್ಲವಿ!

ಸಾಮಾನ್ಯವಾಗಿ ಇಂದಿನ ಜನರೇಷನ್ ನಟಿಯರನ್ನು "ನಿಮ್ಮ ಫೇವರಿಟ್ ನಟ ಯಾರು?" ಎಂದು ಕೇಳಿದರೆ, ಅವರು ತಮ್ಮ ಸಮಕಾಲೀನ ಸ್ಟಾರ್ ನಟರಾದ ಮಹೇಶ್ ಬಾಬು, ಪ್ರಭಾಸ್ ಅಥವಾ ಅಲ್ಲು ಅರ್ಜುನ್ ಹೆಸರನ್ನು ಹೇಳುತ್ತಾರೆ. ಆದರೆ ಸಾಯಿ ಪಲ್ಲವಿ ಈ ನಟನ ಹೆಸರನ್ನು ಹೇಳಿ ಶಾಕ್ ಸೃಷ್ಟಿಸಿದ್ದಾರೆ. 

Read Full Story
01:21 PM (IST) Jun 07

Karnataka News Live 7 June 2026Bigg Boss Kannada 13 Contestants - ಈ ಬಾರಿ ಬೇಗ ಶುರುವಾಗ್ತಿರೋ ಬಿಗ್‌ ಬಾಸ್‌; ಊಹಿಸದ ಸ್ಪರ್ಧಿಗಳು ಒಳಕ್ಕೆ; ಯಾರು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮುಗಿದು ಕೆಲವೇ ತಿಂಗಳುಗಳು ಕಳೆದಿವೆ. ವೀಕ್ಷಕರು ಈ ಶೋ ಹ್ಯಾಂಗ್‌ಓವರ್‌ನಲ್ಲಿರುವಾಗ ಈಗ ಸೀಸನ್‌ 13 ಆರಂಭ ಆಗ್ತಿದೆ. ಹೌದು, ಕಲರ್ಸ್‌ ಕನ್ನಡವೇ ಅಧಿಕೃತವಾಗಿ ಹೇಳಿಕೆ ನೀಡಿದೆ. ಹಾಗಾದರೆ ಯಾರು ಯಾರು ಭಾಗವಹಿಸಲಿದ್ದಾರೆ? 

Read Full Story
01:20 PM (IST) Jun 07

Karnataka News Live 7 June 2026ಎಲ್ಲಕ್ಕಿಂತ ಭಿನ್ನ ನೀಲಿ ನಮ್ಮ ಮೆಟ್ರೊ - ಚಾಲಕ ರಹಿತ ಸಾರಿಗೆ ಯಾವಾಗ ಆರಂಭ? ಏನೆಲ್ಲಾ ವಿಶೇಷತೆ

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ರೈಲು ಬೆಂಗಳೂರಿಗೆ ಬಂದಿದೆ. ಚಾಲಕ ರಹಿತ ತಂತ್ರಜ್ಞಾನ ಮತ್ತು ವಿಶೇಷ ಲಗೇಜ್ ಸೌಲಭ್ಯ ಹೊಂದಿರುವ ಈ ಮಾರ್ಗವು ಇದೇ ವರ್ಷದ ಡಿಸೆಂಬರ್ನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

Read Full Story
01:19 PM (IST) Jun 07

Karnataka News Live 7 June 2026ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರಹಸ್ಯ ಬಯಲು; FIR ನಂತ್ರವೂ ಜನರಿಂದ ಹೂಡಿಕೆ

ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯು ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹೆಚ್ಚಿನ ಲಾಭದ ಆಮಿಷವೊಡ್ಡಿ 2,400 ಕೋಟಿ ಸಂಗ್ರಹಿಸಿ, ಹೊಸಬರ ಹಣವನ್ನು ಹಳಬರಿಗೆ ಬಡ್ಡಿಯಾಗಿ ನೀಡುತ್ತಿದ್ದ ವಂಚನೆಯ ಜಾಲವನ್ನು ಸಿಐಡಿ ವಿವರಿಸಿದೆ. 

Read Full Story
12:24 PM (IST) Jun 07

Karnataka News Live 7 June 2026ತೆಲುಗು ಬಿಗ್ ಬಜೆಟ್ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ? ಹೀರೋ ಯಾರು, ಸಿನಿಮಾ ಯಾವುದು ಗೊತ್ತಾ?

ಬಾಬಿ ನಿರ್ದೇಶನದ 'ಮೆಗಾ 158' ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಕನ್ನಡದ ನಟಿ ರಚಿತಾ ರಾಮ್ ನಟಿಸಲಿದ್ದಾರೆ. Kannada actress Rachita Ram will be seen in the Tollywood Megastar Chiranjeevi starrer 'Mega 158', which is being directed by Bobby.

Read Full Story
11:57 AM (IST) Jun 07

Karnataka News Live 7 June 20269 ಕೋಟಿ ರೂ. ವಂಚನೆ ಆರೋಪದ ಕೇಸ್​ - ಕೋರ್ಟ್​ಗೆ ಹಾಜರಾಗದ ನಟ ಸುದೀಪ್​- ಏನಿದು ಪ್ರಕರಣ

ನಟ ಕಿಚ್ಚ ಸುದೀಪ್ ಅವರು ನಿರ್ಮಾಪಕರಾದ ಕುಮಾರ್ ಮತ್ತು ಎಂ.ಎನ್. ಸುರೇಶ್ ವಿರುದ್ಧ ದಾಖಲಿಸಿರುವ 9 ಕೋಟಿ ರೂ. ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದುವರೆದಿದೆ. ಸಿನಿಮಾ ಪ್ರಮೋಷನ್​ನಲ್ಲಿ ನಿರತರಾಗಿದ್ದರಿಂದ ಸುದೀಪ್​ ಅವರು ವಿಚಾರಣೆಗೆ ಗೈರುಹಾಜರಾಗಿದ್ದು, ಪ್ರಕರಣವನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.

Read Full Story
11:37 AM (IST) Jun 07

Karnataka News Live 7 June 2026ಬೆಂಗಳೂರಿನಿಂದ ಆಗುಂಬೆಗೆ ನೇರ ಮೂರು ಬಸ್; ಕಡಿಮೆ ದರದ ಸುಂದರ ಪ್ರವಾಸಕ್ಕೆ KSRTC ಸಾರಿಗೆ

ಬೆಂಗಳೂರಿನಿಂದ ಆಗುಂಬೆಗೆ ಕಡಿಮೆ ದರದಲ್ಲಿ ಪ್ರಯಾಣಿಸಲು ಲಭ್ಯವಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ. ಇದರಲ್ಲಿ ನಾನ್ ಎಸಿ ಸ್ಲೀಪರ್ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳ ಸಮಯ, ಮಾರ್ಗ, ಮತ್ತು ಟಿಕೆಟ್ ದರಗಳ ವಿವರಗಳನ್ನು ಒದಗಿಸಲಾಗಿದೆ.
Read Full Story
10:39 AM (IST) Jun 07

Karnataka News Live 7 June 2026Bhagyalakshmi Serial ಕೊನೇ ದಿನ..‌ಎಲ್ರ ಕಾಲೆಳಿತಿದ್ದ ಸುಷ್ಮಾ ರಾವ್ ಆ ವಿಷ್ಯ ಹೇಳಿ ಬಿಕ್ಕಿ ಬಿಕ್ಕಿ ಅತ್ರು

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್‌ ಆಗಿದೆ. ಕಲಾವಿದರು ಈ ಸೀರಿಯಲ್‌ನ ಕೊನೇ ದಿನದ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಸುಷ್ಮಾ ರಾವ್‌ ಅತ್ತಿರುವ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

Read Full Story
08:43 AM (IST) Jun 07

Karnataka News Live 7 June 2026ಶಿವಮೊಗ್ಗ ನಿಧಿ ರಹಸ್ಯ - ಅರ್ಧ ಕೆಜಿ ಚಿನ್ನದ ನಾಣ್ಯ ಆಸೆ ತೋರಿಸಿ ₹9.60 ಲಕ್ಷ ದೋಚಿದ ಖದೀಮರು..! ಸಿನಿಮೀಯ ರೀತಿಯಲ್ಲಿ ಕೃತ್ಯ

ನಿಧಿ ರೂಪದಲ್ಲಿ ಸಿಕ್ಕ ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ ವಂಚಕರು, ಮೈಸೂರಿನ ವ್ಯಕ್ತಿಯೊಬ್ಬರಿಂದ 9.60 ಲಕ್ಷ ರೂಪಾಯಿ ದೋಚಿದ್ದಾರೆ. ಪೊಲೀಸರ ಸೋಗಿನಲ್ಲಿ ಬಂದ ಸಹಚರರ ಸಹಾಯದಿಂದ ಈ ಕೃತ್ಯ ಎಸಗಲಾಗಿದ್ದು, ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story
08:16 AM (IST) Jun 07

Karnataka News Live 7 June 2026kalaburagi - ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತ

ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Read Full Story
08:07 AM (IST) Jun 07

Karnataka News Live 7 June 2026ಇಂಡಿಗೋ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಸೇವೆ ರದ್ದು..! ಟಿಕೆಟ್ ಬುಕಿಂಗ್ ಕೂಡ ಸ್ಥಗಿತ

ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ಸಂಸ್ಥೆಯು ಚೆನ್ನೈ ಮತ್ತು ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ ನೀಡುತ್ತಿದ್ದ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿದೆ. ಎರಡು ಪ್ರಮುಖ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದ್ದು, ಸದ್ಯ ಸ್ಟಾರ್ ಏರ್‌ಲೈನ್ಸ್ ಮಾತ್ರ ಸೇವೆ ಒದಗಿಸುತ್ತಿದೆ.
Read Full Story