11:56 PM (IST) Jan 07

Karnataka News Live 7 January 2026ಕೋಲಾರ - ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸೆಕ್ಯೂರಿಟಿ ಕ್ಯಾಬಿನ್‌ಗೆ ಬೆಂಕಿ ತಗುಲಿದ ಪರಿಣಾಮ, ನಿದ್ರೆಯಲ್ಲಿದ್ದ ತಂದೆ ಮತ್ತು ಎರಡು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story
11:38 PM (IST) Jan 07

Karnataka News Live 7 January 2026ಚಿಟ್ಸ್ ಫಂಡ್ ಹೆಸರಲ್ಲಿ ಹತ್ತು ಕೋಟಿ ವಂಚಿಸಿದವ ಕೋರ್ಟ್‌ಗೆ ಬಂದಾಗ ಹಿಡಿದ ಗ್ರಾಹಕರು! ರಸ್ತೆಯಲ್ಲಿ ಮೆರವಣಿಗೆ ಶಿಕ್ಷೆ!

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ 'ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ ಫಂಡ್' ಮಾಲೀಕ ಈಶ್ವರ ಚಿನ್ನಿಕಟ್ಟಿ, ಸಾರ್ವಜನಿಕರಿಗೆ ಸುಮಾರು 10 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಆತನನ್ನು, ಆಕ್ರೋಶಿತ ಗ್ರಾಹಕರು ಪೊಲೀಸ್ ವಾಹನದಿಂದಿಳಿಸಿ ಬೀದಿ ಮೆರವಣಿಗೆ ಮಾಡಿದರು.

Read Full Story
11:11 PM (IST) Jan 07

Karnataka News Live 7 January 2026ಉತ್ತರಕನ್ನಡ ಜಿಲ್ಲೆಯಲ್ಲಿ ವರ್ಷದ ಮೊದಲ 'ಮಂಗನ ಕಾಯಿಲೆ' ಪತ್ತೆ; ಸಿದ್ದಾಪುರದಲ್ಲಿ ಹೈ ಅಲರ್ಟ್!

ಎರಡು ವರ್ಷಗಳ ನಂತರ ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ (KFD) ಪ್ರಕರಣ ಕಾಣಿಸಿಕೊಂಡಿದೆ. ಸಿದ್ದಾಪುರ ತಾಲೂಕಿನ 80 ವರ್ಷದ ವೃದ್ಧೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Read Full Story
10:47 PM (IST) Jan 07

Karnataka News Live 7 January 2026ಅಧಿಕಾರ ಬಂದರೂ ಬದಲಾಗದ ಬದುಕು - ಇವರು ಶಾಸಕರು, ಪತ್ನಿ ಅಂಗನವಾಡಿ ಟೀಚರ್, ತಮ್ಮಂದಿರು ಗಾರೆ ಕೆಲಸಗಾರರು!

ಖಾನಾಪುರದ ಶಾಸಕ ವಿಠ್ಠಲ ಹಲಗೆಕರ್, ಗಣಿತ ಮೇಷ್ಟ್ರಾಗಿ ಒಂದು ರೂಪಾಯಿ ಶುಲ್ಕದಿಂದ ಸಾವಿರಾರು ಕೋಟಿಯ ಸ್ವಸಹಾಯ ಸಂಘ ಕಟ್ಟಿದವರು. ಅಧಿಕಾರವಿದ್ದರೂ ಅವರ ಪತ್ನಿ ಅಂಗನವಾಡಿ ಶಿಕ್ಷಕಿಯಾಗಿ, ಸಹೋದರರು ಗಾರೆ ಕೆಲಸಗಾರರಾಗಿ ಸ್ವತಃ ಇವರು ರೈತರಾಗಿ ಮುಂದುವರಿದಿದ್ದು, ಇವರ ಸರಳ ಜೀವನ ಸಮಾಜಕ್ಕೆ ಪ್ರೇರಣೆಯಾಗಿದೆ.

Read Full Story
10:29 PM (IST) Jan 07

Karnataka News Live 7 January 2026'ನಿಮ್ಮ ಪ್ರೀತಿ ಸದಾ ಸ್ಮರಿಸುತ್ತೇನೆ..' ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಿಗೆ ಸಂದೇಶ ಕಳಿಸಿದ ರಾಕಿಂಗ್‌ ಸ್ಟಾರ್‌ ಯಶ್‌!

ನಟ ಯಶ್ ತಮ್ಮ ಮುಂಬರುವ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ, ಈ ವರ್ಷದ ಜನ್ಮದಿನದಂದು ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 

Read Full Story
09:17 PM (IST) Jan 07

Karnataka News Live 7 January 2026ಡಿಕೆಶಿಗೆ ಎಐಸಿಸಿ ಬಿಗ್ ಶಾಕ್ - ಮುಗಿಯಿತು ಸಿಎಂ ಕುರ್ಚಿ ಚರ್ಚೆ, ಅಸ್ಸಾಂ 'ವೀಕ್ಷಕ ಹುದ್ದೆ' ವರವೋ? ಶಾಪವೋ?

ಎಐಸಿಸಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಹಿರಿಯ ವೀಕ್ಷಕರ ಜವಾಬ್ದಾರಿ ನೀಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟದ ಚರ್ಚೆ ನಡೆಯುತ್ತಿರುವಾಗಲೇ ಈ ನೇಮಕಾತಿ ನಡೆದಿದ್ದು, ಸಿಎಂ ಚರ್ಚೆಗೆ ಹೈಕಮಾಂಡ್ ಹಾಕಿದ ಪೂರ್ಣವಿರಾಮವೇ ?

Read Full Story
08:46 PM (IST) Jan 07

Karnataka News Live 7 January 2026ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೀಕರ ಅಗ್ನಿ ಅವಘಡ; ಲಾಂಡ್ರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!

ಎಲೆಕ್ಟ್ರಾನಿಕ್ ಸಿಟಿಯ ಶಾಂತಿಪುರದಲ್ಲಿನ ಲಾಂಡ್ರಿ ಅಂಗಡಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಘಟನೆ ಅಂಗಡಿ ಮತ್ತು ವಾಹನಗಳಿಗೆ ಹಾನಿಯಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯ.. ಅಗ್ನಿಶಾಮಕ ದಳವು ಬೆಂಕಿ ನಂದಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story
08:46 PM (IST) Jan 07

Karnataka News Live 7 January 2026ಚೇಸ್‌ ಮಾಡಿ ರಷ್ಯಾ ಧ್ವಜ ಹೊಂದಿದ್ದ ಹಡಗು ಸೀಜ್‌ ಮಾಡಿದ ಅಮೆರಿಕ!

ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ ನಡೆದ ನಾಟಕೀಯ ಚೇಸಿಂಗ್ ನಂತರ, ಅಮೆರಿಕದ ಪಡೆಗಳು ವೆನೆಜುವೆಲಾ ಸಂಬಂಧಿತ ರಷ್ಯಾ ಧ್ವಜ ಹೊತ್ತ ಹಡಗನ್ನು ವಶಪಡಿಸಿಕೊಂಡಿವೆ. ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಕೆರಿಬಿಯನ್ ಸಮುದ್ರದಿಂದ ಈ ಹಡಗನ್ನು ಬೆನ್ನಟ್ಟಲಾಗಿತ್ತು.
Read Full Story
07:52 PM (IST) Jan 07

Karnataka News Live 7 January 2026ಬೆಂಗಳೂರು ಮೆಟ್ರೋದಲ್ಲಿ 2 ಲಕ್ಷ ವೇತನದ ಉದ್ಯೋಗ! ಯಾರು ಅರ್ಜಿ ಸಲ್ಲಿಸಬಹುದು? ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕಂಪನಿ ಕಾರ್ಯದರ್ಶಿ ಮತ್ತು ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಅಥವಾ ಸಿಎ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Read Full Story
07:26 PM (IST) Jan 07

Karnataka News Live 7 January 2026Bengaluru Airport ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರ ಆರಂಭಿಸಿದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ!

 ಬೆಂಗಳೂರು ವಿಮಾನ ನಿಲ್ದಾಣ ತನ್ನದೇ ಆದ ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಆರಂಭಿಸಿದೆ. ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಜೈವಿಕ ಅನಿಲ, ಗೊಬ್ಬರ ಉತ್ಪಾದನೆ ಮತ್ತು ಮರುಬಳಕೆಯ ಮೂಲಕ ಸುಸ್ಥಿರತೆ ಹಾಗೂ ವೃತ್ತಾಕಾರದ ಆರ್ಥಿಕತೆಯನ್ನು ಬಲಪಡಿಸುತ್ತಿದೆ.

Read Full Story
06:47 PM (IST) Jan 07

Karnataka News Live 7 January 2026'ಗಂಡಸರ ಮನಸ್ಥತಿ ಕೂಡ ಅರ್ಥವಾಗಲ್ಲ, ಯಾವಾಗ ರೇ*ಪ್‌/ಕೊ*ಲೆ ಮಾಡ್ತಾನೋ ಗೊತ್ತಿಲ್ಲ..' ರಮ್ಯಾ ಹೀಗಂದಿದ್ಯಾಕೆ?

ಬೀದಿನಾಯಿಗಳ ಅನಿರೀಕ್ಷಿತ ಮನಸ್ಥಿತಿಯ ಕುರಿತ ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ನಟಿ ರಮ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪುರುಷರ ಮನಸ್ಥಿತಿಯೂ ಅನಿರೀಕ್ಷಿತ, ಹಾಗಂತ ಎಲ್ಲರನ್ನೂ ಜೈಲಿಗೆ ಹಾಕುತ್ತೀರಾ ಎಂದು ಪ್ರಶ್ನಿಸುವ ಮೂಲಕ ಅವರು ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
Read Full Story
06:39 PM (IST) Jan 07

Karnataka News Live 7 January 2026ಅಬ್ಬಬ್ಬಾ! Bigg Boss ಗಿಲ್ಲಿ ಮೇಲೆ ಇದೆಂಥ ಆರೋಪ? ಇದೆಂಥ ಸಾಕ್ಷಿ? ಬಡವ ಎಂದು ಈ ಪರಿ ಹಣ ಸುರೀತಿರೋದು ನಿಜನಾ?

ಬಿಗ್​ಬಾಸ್​ 12ರ ಫೈನಲಿಸ್ಟ್ ಗಿಲ್ಲಿ ನಟನೇ ವಿನ್ನರ್ ಎನ್ನುವ ಮಾತುಗಳು ಕೇಳಿಬರುತ್ತಿರುವಾಗಲೇ, ಅವರು ದುಬಾರಿ ಪಿಆರ್ ಏಜೆನ್ಸಿಯನ್ನು ನೇಮಿಸಿಕೊಂಡಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ. ತಮ್ಮನ್ನು ಬಡವ ಎಂದು ಬಿಂಬಿಸಿಕೊಂಡಿದ್ದ ನಟನ ಈ ನಡೆಯ ಬಗ್ಗೆ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.ಇದು ನಿಜನಾ?

Read Full Story
06:37 PM (IST) Jan 07

Karnataka News Live 7 January 2026ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣ - ಕಮಿಷನರ್ ಎನ್‌ ಶಶಿಕುಮಾರ್ ಮಹತ್ವದ ಹೇಳಿಕೆ

ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಆರೋಪದ ಮೇಲೆ ತೀವ್ರ ವಿವಾದ ಸೃಷ್ಟಿಯಾಗಿದೆ. ಈ ಘಟನೆಗೆ ಸಂಬಂಧ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಡಿಸಿಪಿ ನೇತೃತ್ವದಲ್ಲಿ ಪಾರದರ್ಶಕ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ

Read Full Story
06:26 PM (IST) Jan 07

Karnataka News Live 7 January 2026Bengaluru - 16ನೇ ಮಹಡಿಯಿಂದ ಬಿದ್ದು ಟೆಕ್ಕಿ ನಿಕ್ಷೇಪ್‌ ಬಂಗೇರಾ ಆ*ತ್ಮಹ*ತ್ಯೆ

ಬೆಂಗಳೂರಿನ ಬಾಗಲಗುಂಟೆಯಲ್ಲಿ 26 ವರ್ಷದ ಟೆಕ್ಕಿ ನಿಕ್ಷೇಪ್ ಬಂಗೇರಾ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದವರಾದ ಇವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ. 

Read Full Story
06:15 PM (IST) Jan 07

Karnataka News Live 7 January 2026ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರು ಬಲಿ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಭೀಕರ ದುರಂತ ಸಂಭವಿಸಿದೆ. ರಿಪೇರಿ ಕಾರ್ಯದ ವೇಳೆ ನಡೆದ ಈ ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story
06:05 PM (IST) Jan 07

Karnataka News Live 7 January 2026Shivaleela Movie - ಸದನದಲ್ಲಿ ಚರ್ಚೆಯಾದ್ರೂ ಸಿಗ್ತಿಲ್ಲ ಚಿತ್ರಮಂದಿರ! ಚಪ್ಪಾಳೆ ತಟ್ಟಿದ್ರೆ ಮಾತ್ರ ನಿಮ್ಗೆ ಖುಷಿನಾ?

ಸಮಾಜದಿಂದ ತಿರಸ್ಕೃತರಾಗಿ ಕಷ್ಟದ ಜೀವನ ನಡೆಸುತ್ತಿರುವ ಮಂಗಳಮುಖಿಯರ ನೋವಿನ ಕಥೆಯನ್ನು ಸಿನಿಮಾ ರೂಪದಲ್ಲಿ ತರಲಾಗಿದೆ. ಆದರೆ, ಪದ್ಮಶ್ರೀ ಮಂಜಮ್ಮ ಜೋಗತಿ ನಟಿಸಿರುವ ಈ ಚಿತ್ರವನ್ನು ಯಾರೂ ವೀಕ್ಷಿಸುತ್ತಿಲ್ಲ ಎಂಬುದು ಅವರ ನೋವಿಗೆ ಕಾರಣವಾಗಿದೆ.
Read Full Story
06:00 PM (IST) Jan 07

Karnataka News Live 7 January 2026'ದಿನಗಳು ಎಷ್ಟು ಬೇಗನೇ ಹೋಗುತ್ತಿದೆ..' ಕ್ಯೂಟಿ ಅಮ್ಮ ಪವಿತ್ರಾ ಗೌಡಗೆ ಬರ್ತ್‌ಡೇ ವಿಶ್‌ ಮಾಡಿದ ಮಗಳು ಖುಷಿ!

Pavithra Gowda Birthday: Daughter Khushi Shares Emotional Post from Jail ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮಗಳು ಖುಷಿ ಗೌಡ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. 

Read Full Story
05:42 PM (IST) Jan 07

Karnataka News Live 7 January 2026ಚಿಕ್ಕೋಡಿ - ತಂದೆಯಿಂದಲೇ ಮಗನ ಹತ್ಯೆ! ಭೀಕರ ಕೊಲೆ ರಹಸ್ಯ ಬಯಲಿಗೆಳೆದ ಸ್ನೇಹಿತರು, ಅಪ್ಪನ ಶವಸಂಸ್ಕಾರದಿಂದ ಹುಟ್ಟಿತು ಅನುಮಾನ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ, ತಂದೆಯೊಬ್ಬ ಮಗನನ್ನು ಕೊಂದು ಹೃದಯಾಘಾತವೆಂದು ನಾಟಕವಾಡಿದ್ದಾನೆ. ಮಗನ ಸ್ನೇಹಿತರಿಗೆ ಅಂತ್ಯಸಂಸ್ಕಾರದ ವೇಳೆ ಅನುಮಾನ ಮೂಡಿ ತನಿಖೆ ನಡೆಸಿದಾಗ, ಈ ಭೀಕರ ಕೊಲೆ ರಹಸ್ಯ ಬಯಲಾಗಿದ್ದು, ಪೊಲೀಸರು ತಂದೆ ಹಾಗೂ ಆತನ ಸಹಚರನನ್ನು ಬಂಧಿಸಿದ್ದಾರೆ.
Read Full Story
05:18 PM (IST) Jan 07

Karnataka News Live 7 January 2026ಸಿಎಂ ಸಿದ್ದರಾಮಯ್ಯ ಅರಸು ದಾಖಲೆ ಮುರಿದಿದ್ದಕ್ಕೆ ನಮಗೆಲ್ಲ ಹೆಮ್ಮೆ - ಸತೀಶ್ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣಾವಧಿ ಪೂರೈಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು ಎಂದ ಅವರು, ಅರಸು ದಾಖಲೆ ಮುರಿದ ಸಿದ್ದರಾಮಯ್ಯರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Read Full Story
05:03 PM (IST) Jan 07

Karnataka News Live 7 January 2026ಜೆಡಿಎಸ್ ಕೋಟೆಯಲ್ಲಿ ದಳಪತಿಗಳ ದಂಡಯಾತ್ರೆ - ಹಾಸನ ವಶಕ್ಕೆ ದೇವೇಗೌಡರ ಸಮಾವೇಶ, ಅರಸೀಕೆರೆಗೆ ರೇವಣ್ಣ ಜಿಗಿತ!

2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎಚ್.ಡಿ. ರೇವಣ್ಣ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ಸೋಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

Read Full Story