11:04 PM (IST) Jan 30

Karnataka News Live 30th January:ಆಗಾಗ ಪಾರ್ಟಿ ಮಾಡ್ತೇನೆ, ಲಿಂಗ ಹಾಕಿ ಊಟ ಮಾಡಲ್ಲ, ಮಾಂಸಾಹಾರ ಸೇವನೆಗೆ ಡಾಲಿ ಧನಂಜಯ್ ಸ್ಪಷ್ಟನೆ

ಆಗಾಗ ಪಾರ್ಟಿ ಮಾಡ್ತೇನೆ, ಲಿಂಗ ಹಾಕಿ ಊಟ ಮಾಡಲ್ಲ ಎಂದು ನಟ ಡಾಲಿ ಧನಂಜಯ್ ಸ್ಪಷ್ಟನೆ ಕೊಟ್ಟಿದ್ದಾರೆ. ನಾನ್ ವೆಜ್ ಬಿರಿಯಾಣಿ ತಿನ್ನೋ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದಾರೆ.

Read Full Story
10:43 PM (IST) Jan 30

Karnataka News Live 30th January:ಮಾರಿಕಾಂಬಾ ಜಾತ್ರೆಗೆ ವಿಶೇಷ ರೈಲು - ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ತಾಳಗುಪ್ಪವರೆಗೆ ವಿಸ್ತರಣೆ

ಸಾಗರದ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ, ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು ಫೆಬ್ರವರಿ 3 ರಿಂದ 11 ರವರೆಗೆ ತಾಳಗುಪ್ಪ ನಿಲ್ದಾಣದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

Read Full Story
10:30 PM (IST) Jan 30

Karnataka News Live 30th January:ಶಿವರಾತ್ರಿ ಪ್ರಯುಕ್ತ, ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ರೈಲು ಯಾವೆಲ್ಲ ಸ್ಟೇಷನ್‌ನಲ್ಲಿ ನಿಲುಗಡೆ ಇರಲಿದೆ

ಶಿವರಾತ್ರಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಫೆಬ್ರವರಿ 13 ಮತ್ತು 16 ರಂದು ಸಂಚರಿಸಲಿದ್ದು, ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Read Full Story
10:18 PM (IST) Jan 30

Karnataka News Live 30th January:ಬೆಂಗಳೂರು - ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸೋ ಮೆಮೋ ರೈಲು ಸಮಯ ಪರಿಷ್ಕರಣೆ

ಪ್ರಯಾಣಿಕರ ಬಹುದಿನಗಳ ಬೇಡಿಕೆ ಮತ್ತು ಸಂಸದ ಎಂ. ಮಲ್ಲೇಶಬಾಬು ಅವರ ಪ್ರಯತ್ನದ ಫಲವಾಗಿ, ಬೆಂಗಳೂರು ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸುವ ಮೆಮೋ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಫೆಬ್ರವರಿ 2ರಿಂದ ಜಾರಿಗೆ ಬರುವ ಈ ಹೊಸ ವೇಳಾಪಟ್ಟಿ .

Read Full Story
10:10 PM (IST) Jan 30

Karnataka News Live 30th January:ಬಿಜೆಪಿ-ಜೆಡಿಎಸ್ ಮೈತ್ರಿ ಇದ್ರೂ ಪಕ್ಷದಿಂದ ನನಗೇ ಟಿಕೆಟ್ - ಮಾಜಿ ಶಾಸಕ ಪ್ರೀತಂ ಗೌಡ ವಿಶ್ವಾಸ

ಬಿಜೆಪಿ-ಜೆಡಿಎಸ್ ಮೈತ್ರಿಯಿದ್ದರೂ ತಮಗೆ ಹಾಸನ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವನ್ನು ಮಾಜಿ ಶಾಸಕ ಪ್ರೀತಮ್ ಗೌಡ ವ್ಯಕ್ತಪಡಿಸಿದ್ದಾರೆ. ಕೊಡಗಿನಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ನೋವಾಗದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. 

Read Full Story
09:58 PM (IST) Jan 30

Karnataka News Live 30th January:ಸಿಜೆ ರಾಯ್ ಸಾವಿಗೂ ಕೆಲವೇ ಕ್ಷಣ ಮುನ್ನ ನಡೆದಿತ್ತು 3 ಅನುಮಾನಸ್ಪದ ಘಟನೆ, ದೂರು ದಾಖಲು

ಸಿಜೆ ರಾಯ್ ಸಾವಿಗೂ ಕೆಲವೇ ಕ್ಷಣ ಮುನ್ನ ನಡೆದಿತ್ತು 3 ಅನುಮಾನಸ್ಪದ ಘಟನೆ, ಈ ಕುರಿತು ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಈ ಸ್ಫೋಟಕ ಮಾಹಿತಿ ಉಲ್ಲೇಖಿಸಿದ್ದಾರೆ.

Read Full Story
09:45 PM (IST) Jan 30

Karnataka News Live 30th January:ರಾಯಚೂರು - ಮರಳು ದಂಧೆಕೋರರಿಗೆ ಡಿಸಿ ನಿತೀಶ್‌ ಕೆ ಖಡಕ್ ವಾರ್ನ್; ವಾಹನ ಸೀಜ್, ಬೀಳುತ್ತೆ ದಂಡ!

ರಾಯಚೂರು ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ನಿತೀಶ್ ಕೆ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ.

Read Full Story
09:19 PM (IST) Jan 30

Karnataka News Live 30th January:CJ Roy Death - ಈಗ ನಾನು ಮಾತಾಡಿದ್ರೆ ರಾಜಕೀಯ ಆಗುತ್ತೆ - ಐಟಿ ಕಿರುಕುಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಗರಂ!

CJ Roy Death ಐಟಿ ದಾಳಿಯ ಸಂದರ್ಭದಲ್ಲಿ ಉದ್ಯಮಿ ಸಿ.ಜೆ. ರಾಯ್ ಆತ್ಮ೧ಹತ್ಯೆ ಮಾಡಿಕೊಂಡ ಘಟನೆಗೆ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಐದು ನಿಮಿಷ ಸಮಯ ಕೇಳಿ ರಾಯ್ ಪ್ರಾಣ ಬಿಟ್ಟಿದ್ದು, ಅಧಿಕಾರಿಗಳ ಕಿರುಕುಳವನ್ನು ಡಿಕೆಶಿ ಖಂಡಿಸಿದ್ದಾರೆ. 

Read Full Story
09:02 PM (IST) Jan 30

Karnataka News Live 30th January:ತಮ್ಮ ನಾಳೆ ಸಿಗುತ್ತೇನೆ ಅಂದಿದ್ದ ಇಂದು ಹೀಗಾಯ್ತ, ಸಿಜೆ ರಾಯ್ ಸಾವಿಗೆ ಸಹೋದರ ವೈಟ್‌ಗೋಲ್ಡ್ ಎಂಡಿ ಸಿಜೆ ಬಾಬು ಕಂಬನಿ

ಕಾನ್ಫಿಡೆಂಟ್ ಗ್ರೂಪ್‌ನ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಅನಿರೀಕ್ಷಿತ ನಿಧನದ ನಂತರ, ಅವರ ಸಹೋದರ ಸಿ.ಜೆ. ಬಾಬು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನೀಡಿದ ನಿರಂತರ ಮಾನಸಿಕ ಹಿಂಸೆ ಮತ್ತು ಒತ್ತಡವೇ ತಮ್ಮನ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಿದ್ದಾರೆ.

Read Full Story
08:53 PM (IST) Jan 30

Karnataka News Live 30th January:ಚಿಕ್ಕಮಗಳೂರಿನ ಅಂತರಘಟ್ಟೆ ಜಾತ್ರೆಯಲ್ಲಿ ದುರಂತ - ಸಿಪಿಐ ಮೈಮೇಲೆ ಹರಿದ ಎತ್ತಿನಗಾಡಿ, ಪ್ರಾಣಾಪಾಯದಿಂದ ಪಾರು!

ಚಿಕ್ಕಮಗಳೂರಿನ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಎತ್ತಿನಗಾಡಿ ಹರಿದು ಅವಘಡ ಸಂಭವಿಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story
08:49 PM (IST) Jan 30

Karnataka News Live 30th January:ಬಿಗ್ ಬಾಸ್ ವಿನ್ನರ್‌ಗೆ ₹50 ಲಕ್ಷ ನೀಡಿ 201 ವಿದ್ಯಾರ್ಥಿಗಳ ಶಿಕ್ಷಣಕ್ಕೆ ₹1 ಕೋಟಿ ಘೋಷಿಸಿದ್ದ ಸಿಜೆ ರಾಯ್

ಸಿಜೆ ರಾಯ್ ಅವರದ್ದು ಅತ್ಯಂತ ಐಷಾರಾಮಿ ಬದುಕಾಗಿತ್ತು. ಸಾಮಾಜಿಕ ಕಾರ್ಯಗಳಿಗೆ ಹಿಂದೇಟು ಹಾಕುತ್ತಿರಲಿಲ್ಲ. ಬಿಗ್ ಬಾಸ್ ವಿನ್ನರ್‌ಗೆ ₹50 ಲಕ್ಷ ನೀಡಿ 201 ವಿದ್ಯಾರ್ಥಿಗಳ ಶಿಕ್ಷಣಕ್ಕೆ ₹1 ಕೋಟಿ ಘೋಷಿಸಿದ್ದ ಸಿಜೆ ರಾಯ್.

Read Full Story
08:47 PM (IST) Jan 30

Karnataka News Live 30th January:CJ Roy Death - ಕೋಟಿ ಇದ್ದರೂ ನೆಮ್ಮದಿಯಿಲ್ಲ; ಶ್ರೀಮಂತ ಉದ್ಯಮಿಗಳ ಆತ್ಮ*ಹತ್ಯೆಯ ಹಿಂದಿನ ಕಹಿ ಸತ್ಯ ಏನು?

CJ Roy Death Reason: ಐಟಿ ದಾಳಿಗೆ ಹೆದರಿ, ಕಾನ್ಫಿಡೆಂಟ್‌ ಗ್ರುಪ್‌ ಮಾಲೀಕ ಸಿಜೆ ರಾಯ್‌ ಅವರು ಗನ್‌ನಿಂದ ಶೂಟ್‌ ಮಾಡಿಕೊಂಡು ನಿಧನರಾಗಿದ್ದಾರೆ. ಶ್ರೀಮಂತರು ಈ ರೀತಿ ಮಾಡುವುದು ಯಾಕೆ? ಇದಕ್ಕೆ ಕಾರಣ ಏನಿರಬಹುದು?

Read Full Story
08:31 PM (IST) Jan 30

Karnataka News Live 30th January:ಮಂಡ್ಯ - ಕಸಾಯಿಖಾನೆಗೆ ಸಾಗಿಸುತ್ತಿದ್ದ ಕಾರು ಪಲ್ಟಿ; ಹತ್ತು ಕರುಗಳ ದಾರುಣ ಸಾವು, ಬಾಯಿಗೆ ಬಟ್ಟೆ ಕಟ್ಟಿ ಸಾಗಿಸುತ್ತಿದ್ದ ಕಟುಕರು!

ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿ ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿದ್ದ ಸ್ಕಾರ್ಪಿಯೋ ಕಾರು ಪಲ್ಟಿಯಾಗಿ 10ಕ್ಕೂ ಹೆಚ್ಚು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದು ಕಾರಿನಲ್ಲಿ 35 ಕರುಗಳನ್ನು ಬಾಯಿಗೆ ಬಟ್ಟೆ ಕಟ್ಟಿ ಅಮಾನವೀಯವಾಗಿ ಸಾಗಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Read Full Story
08:27 PM (IST) Jan 30

Karnataka News Live 30th January:ಬಳುಕುವ ಬಳ್ಳಿಯಂತಿರೋ CJ Roy ಮಗಳು ಯಾರು? ಅಷ್ಟೆಲ್ಲ ಫಾಲೋವರ್ಸ್‌ ಇರೋದ್ಯಾಕೆ?

Who is CJ Roy Daughter Ria: ಐಟಿ ದಾಳಿಗೆ ಬೇಸತ್ತು, ದುರಂತ ಅಂತ್ಯ ಕಂಡ ಕಾನ್ಫಿಡೆಂಟ್‌ ಗ್ರುಪ್‌ ಮಾಲೀಕ ಸಿಜೆ ರಾಯ್‌ ಅವರಿಗೆ ಓರ್ವ ಮಗಳು, ಮಗ ಇದ್ದಾರೆ. ಅನೇಕರು ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕುತೂಹಲ ಹೊಂದಿದ್ದಾರೆ. 

Read Full Story
08:05 PM (IST) Jan 30

Karnataka News Live 30th January:ಲಕ್ಕುಂಡಿ ಉತ್ಖನನ ನೇತೃತ್ವ ವಹಿಸಿದ್ದ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಟಿ.ಎಂ. ಕೇಶವ್ ನಿಧನ

ಗದಗ ತಾಲೂಕಿನ ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ, ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಟಿ.ಎಂ. ಕೇಶವ್ (74) ಅವರು ನಿಧನರಾಗಿದ್ದಾರೆ. ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ತಮ್ಮ ನಿವಾಸದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Read Full Story
08:05 PM (IST) Jan 30

Karnataka News Live 30th January:CJ Roy Death - ತಿಂಗಳುಗಳ ಹಿಂದೆ, ವಿಶ್ವದಲ್ಲೇ ಅಪರೂಪದ ರೋಲ್ಸ್‌ ರಾಯ್ಸ್‌ ಖರೀದಿಸಿದ್ದ ರಾಯ್;‌ ಅಷ್ಟು ಹುಚ್ಚು ಯಾಕೆ?

CJ Roy Death Reason: ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ, ಅಧ್ಯಕ್ಷ ಸಿ.ಜೆ. ರಾಯ್ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದವರು. ಒಂದು ಕಾಲದಲ್ಲಿ ಅವರ ಮನೆಯಲ್ಲಿ ಕಾರ್‌ ಕೂಡ ಇರಲಿಲ್ಲ.

Read Full Story
08:02 PM (IST) Jan 30

Karnataka News Live 30th January:ತಲೆಯಲ್ಲಿ ಹುಳು ಆಗುತ್ತಾ? ಎಡಗಾಲು ಎಡಗೈಗೆ ಹಠಾತ್ ಪಿಟ್ಸ್ - ಸಿಟಿಸ್ಕ್ಯಾನ್ ರಿಪೋರ್ಟ್ ನೋಡಿ ರೈತನಿಗೆ ಆಘಾತ

ನಮ್ಮಲ್ಲಿ ಬಹುತೇಕರು ದೈನಂದಿನ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ವಿಶೇಷವಾಗಿ ಕೃಷಿ ಕಾರ್ಯಗಳಲ್ಲಿ ತೊಡಗಿರುವವರು ಆರೋಗ್ಯವನ್ನು ನಿರ್ಲಕ್ಷಿಸುವುದೇ ಹೆಚ್ಚು ಆದರೆ ಹೀಗೆ ಮಾಡುವುದರಿಂದ ಎಷ್ಟು ದೊಡ್ಡ ಹಾನಿ ಸಂಭವಿಸಬಹುದು ಎಂಬ ಬಗ್ಗೆ ವೈದ್ಯರೊಬ್ಬರು ವೀಡಿಯೋ ಮಾಡಿ ಹೇಳಿಕೊಂಡಿದ್ದಾರೆ.

Read Full Story
07:39 PM (IST) Jan 30

Karnataka News Live 30th January:ಅಲ್ಲಿ ಲವರ್‌ ಅಕ್ಕ, ಇಲ್ಲಿ ತಮ್ಮನ ಲವರ್ - ಒಂದೇ ಹಾದಿಯಲ್ಲಿ ಎದುರಾಳಿ ಚಾನೆಲ್‌ಗಳ ಸೀರಿಯಲ್‌ಗಳು

ಕಲರ್ಸ್ ಕನ್ನಡದ 'ಪವಿತ್ರ ಬಂಧನ' ಮತ್ತು ಝೀ ಕನ್ನಡದ 'ಕರ್ಣ' ಧಾರಾವಾಹಿಗಳು ತ್ರಿಕೋನ ಪ್ರೇಮಕಥೆಯ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿವೆ. ಎರಡೂ ಸೀರಿಯಲ್‌ಗಳಲ್ಲಿ ನಾಯಕ ತಾನು ಪ್ರೀತಿಸಿದ ಯುವತಿಯ ಬದಲಾಗಿ ಬೇರೊಬ್ಬರನ್ನು ಮದುವೆಯಾಗುವ ಸನ್ನಿವೇಶವಿದ್ದು, ಮುಂದಿನ ಕಥಾಹಂದರ ಕುತೂಹಲ ಕೆರಳಿಸಿದೆ.
Read Full Story
07:33 PM (IST) Jan 30

Karnataka News Live 30th January:CJ Roy Death - ಲಾಭ ಮಾಡದೆ, ಮಗಳಿಗೋಸ್ಕರ ತಗೊಂಡ ಜಾಗವನ್ನು ಪುನೀತ್‌ ರಾಜ್‌ಕುಮಾರ್‌ಗೆ ಕೊಟ್ಟಿದ್ದ ಸಿಜೆ ರಾಯ್!

Cj Roy Death: ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕ, ರಿಯಲ್‌ ಎಸ್ಟೇಟ್‌ ಉದ್ಯಮಿ ಸಿಜೆ ರಾಯ್‌ ಅವರು ಶೂಟ್‌ ಮಾಡಿಕೊಂಡು ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಇವರು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸೈಟ್‌ ನೀಡಿದ್ದರಂತೆ.

Read Full Story
07:31 PM (IST) Jan 30

Karnataka News Live 30th January:ಉದ್ಯಮಿ ಸಿ.ಜೆ. ರಾಯ್ ಸಾವು ಬಗ್ಗೆ ಹಲವು ಅನುಮಾನ - ಆ ಒಂದು ರೂಂ ಓಪನ್ ಮಾಡುವಂತೆ ಐಟಿ ಅಧಿಕಾರಿಗಳ ಒತ್ತಾಯ

ಉದ್ಯಮಿ ಸಿ.ಜೆ. ರಾಯ್ ಅವರು ಐಟಿ ದಾಳಿಯ ವೇಳೆ ತಮ್ಮ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಭಾವಿ ರಾಜಕಾರಣಿಗೆ ಸೇರಿದ ಮಹತ್ವದ ದಾಖಲೆಗಳಿದ್ದ ಕೊಠಡಿಯನ್ನು ತೆರೆಯಲು ನಿರಾಕರಿಸಿದ್ದರಿಂದ ಉಂಟಾದ ಒತ್ತಡವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. 

Read Full Story