08:49 PM (IST) Jun 30

Karnataka News Live 30 June 2026Kayadu Lohar - 'ಕೋಪದಲ್ಲಿ ಕಲ್ಲು ಎಸೆದಿದ್ದೆ' - ಶಾಲಾ ದಿನಗಳ ಕಿರುಕುಳ ನೆನೆದು ಭಾವುಕರಾದ ಮುಗಿಲ್‌ ಪೇಟೆ ಬ್ಯೂಟಿ!

Mugilpete Actress: ಕಯಾದು ಲೋಹರ್ ತಮ್ಮ ಶಾಲಾ ದಿನಗಳಲ್ಲಿ ಎದುರಿಸಿದ್ದ ಕಹಿ ಅನುಭವವೊಂದನ್ನು ಬಹಿರಂಗಪಡಿಸಿದ್ದು, ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Read Full Story
08:19 PM (IST) Jun 30

Karnataka News Live 30 June 2026Bengaluru Racecourse ಕುಣಿಗಲ್ ಸ್ಟಡ್ ಫಾರ್ಮ್‌ಗೆ ಶಿಫ್ಟ್ ಮಾಡಲು ಹೈಕೋರ್ಟ್ ಬ್ರೇಕ್?; ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್!

ಬೆಂಗಳೂರು ರೇಸ್‌ಕೋರ್ಸ್ ಅನ್ನು ಕುಣಿಗಲ್ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

Read Full Story
07:25 PM (IST) Jun 30

Karnataka News Live 30 June 2026Monsoon Failure - ಚಾಮರಾಜನಗರದಲ್ಲಿ ಏನಾಗುತ್ತಿದೆ? 70 ಸಾವಿರ ಹೆಕ್ಟೇರ್ ಭೂಮಿ ಇನ್ನೂ ಖಾಲಿ!

Monsoon Failure: ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಹಸಿರಿನಿಂದ ಕಂಗೊಳಿಸಬೇಕಿದ್ದ ಚಾಮರಾಜನಗರ ಜಿಲ್ಲೆಯ ಕೃಷಿ ಭೂಮಿ ಈ ಬಾರಿ ಬಿಸಿಲಿನ ಝಳಕ್ಕೆ ಒಣಗಿ ಬಿರುಕು ಬಿಡುತ್ತಿದೆ.

Read Full Story
06:29 PM (IST) Jun 30

Karnataka News Live 30 June 2026Hampi ಸೊಬಗು ಈಗ ಗಂಗಾವತಿಗೆ - ಶಾಸಕ ಜನಾರ್ದನ ರೆಡ್ಡಿ ಘೋಷಿಸಿದ ಹೊಸ ಯೋಜನೆ ಏನು?

Gangavathi: ಕನಕಗಿರಿ ರಸ್ತೆಯ ಮಾರ್ಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಮುಂಭಾಗದಲ್ಲಿ ಐತಿಹಾಸಿಕ ಹಂಪೆಯ ಸ್ಮಾರಕಗಳ ಮಾದರಿಯಲ್ಲಿ ಬಸ್ ನಿಲ್ದಾಣ ಚಿತ್ರಣಗೊಳ್ಳಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Read Full Story
06:19 PM (IST) Jun 30

Karnataka News Live 30 June 2026ಬೆಂಗಳೂರಿಗೆ ಶಾಕ್, ನಮ್ಮ ಮೆಟ್ರೋ 3ನೇ ಹಂತದ ಡಬಲ್ ಡೆಕ್ಕರ್ ಅಪಾಯಕಾರಿ - ಐಐಎಸ್‌ಸಿ ವರದಿ

ಬೆಂಗಳೂರಿನ ನಮ್ಮ ಮೆಟ್ರೋ 3ನೇ ಹಂತದ ಜೊತೆಗಿನ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಯು ಆರ್ಥಿಕ ನಷ್ಟ, ಪರಿಸರ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಅಧ್ಯಯನ ವರದಿ ಎಚ್ಚರಿಸಿದೆ. ಈ ಯೋಜನೆಯು ಸಾರ್ವಜನಿಕ ಸಾರಿಗೆ ಬಳಕೆಯನ್ನು ಕಡಿಮೆ ಮಾಡಿ, ಖಾಸಗಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಿದೆ.
Read Full Story
06:12 PM (IST) Jun 30

Karnataka News Live 30 June 2026VTU Results 2026 - ಪರೀಕ್ಷೆ ಮುಗಿದ ಐದೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ಇತಿಹಾಸ ಸೃಷ್ಟಿಸಿದ ವಿಟಿಯು!

VTU Results 2026: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 6ನೇ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 5 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

Read Full Story
05:55 PM (IST) Jun 30

Karnataka News Live 30 June 2026Kodagu - ಮಗು, ವಿವಾಹಿತೆ ಮತಾಂತರ ಆರೋಪ - ಕುಶಾಲನಗರ ಬಂದ್, ಸಾವಿರಾರು ಕಾರ್ಯಕರ್ತರ ಪ್ರತಿಭಟನೆ

Kodagu: ಟೂರಿಸಂ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ರಾಜೀವ್ ಎಂಬುವರ ಪತ್ನಿಯನ್ನು ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದ ಕೇರಳಂ ಮೂಲದ ಸಲೀಂ ಎಂಬಾತ ಮೇ ತಿಂಗಳ ಆರಂಭದಲ್ಲಿಯೇ ಕರೆದೊಯ್ದು ವಿವಾಹವಾಗಿದ್ದಾನೆ.

Read Full Story
05:39 PM (IST) Jun 30

Karnataka News Live 30 June 2026Karna ನಟಿ ಭವ್ಯಾ ಗೌಡ ಬಾಲ್ಯದ ಅಪರೂಪದ ಫೋಟೋ ವೈರಲ್ - ಮುಗ್ಧ ನಗುವಿಗೆ ಫ್ಯಾನ್ಸ್ ಫಿದಾ

Bhavya Gowda: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು ಸಾಮಾನ್ಯವಾಗಿದೆ. ತಮ್ಮ ನೆಚ್ಚಿನ ನಟ-ನಟಿಯರ ಬಾಲ್ಯದ ನೆನಪುಗಳನ್ನು ನೋಡಲು ಅಭಿಮಾನಿಗಳು ಯಾವಾಗಲೂ ಕಾತರರಾಗಿರುತ್ತಾರೆ.

Read Full Story
05:38 PM (IST) Jun 30

Karnataka News Live 30 June 2026LPG - ಹಾರ್ಮುಜ್ ಸಂಕಟಕ್ಕೆ ಫುಲ್‌ಸ್ಟಾಫ್‌ ಇಡಲು ಮುಂದಾದ ಭಾರತದ! ಮೋದಿ ಸರ್ಕಾರದಿಂದ ಮಹಾಪ್ಲಾನ್‌! ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಇರಾನ್‌-ಅಮೆರಿಕ ಯುದ್ಧದಂತಹ ಬಿಕ್ಕಟ್ಟುಗಳಿಂದಾಗುವ ಇಂಧನ ಕೊರತೆ ತಡೆಯಲು ಭಾರತ ಮಹಾ ಯೋಜನೆಯೊಂದನ್ನು ರೂಪಿಸಿದೆ. ಇದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿದ್ದು, ಸಂಗ್ರಹಣೆಯ ಸವಾಲುಗಳನ್ನು ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ.

Read Full Story
05:12 PM (IST) Jun 30

Karnataka News Live 30 June 2026Mahaan - ಹಿರಿಯ ವಕೀಲರಾಗಿ ಚಿನ್ನಾರಿ ಮುತ್ತನ ಸಿನಿಮಾಗೆ ಎಂಟ್ರಿ ಕೊಟ್ಟ ಶಿವಣ್ಣ - ಅಭಿಮಾನಿಗಳಿಗೆ ಸರ್ಪ್ರೈಸ್

Mahaan: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಹಾನ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿಭಿನ್ನ ಕಥಾಹಂದರ ಮತ್ತು ಬಲಿಷ್ಠ..

Read Full Story
04:44 PM (IST) Jun 30

Karnataka News Live 30 June 2026Floor Cleaning - ಟೈಲ್ಸ್‌ ನೆಲವಿರಲೀ, ಸಿಮೆಂಟ್‌ ನೆಲವಾಗಲೀ ಹೀಗೆ ಮಾಡಿದ್ರೆ ಪಳ ಪಳ ಹೊಳೆಯುತ್ತೆ!

How to clean tiles at home easily: ಮನೆಯನ್ನು ಕ್ಲೀನ್‌ ಮಾಡೋದು ದೊಡ್ಡ ಟಾಸ್ಕ್‌ ಆಗಿದೆ. ಒಮ್ಮೊಮ್ಮೆ ಅಡುಗೆ ಮನೆ ಆಹಾರ ಪದಾರ್ಥಗಳು, ಎಣ್ಣೆ ಅಥವಾ ಇನ್ನಿತರ ದ್ರವದಿಂದ ಮನೆ ಗಲೀಜು ಆಗುವುದು. ಟೈಲ್ಸ್‌ ನೆಲವನ್ನು ಕ್ಲೀನ್‌ ಮಾಡೋದು ಹೇಗೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
04:13 PM (IST) Jun 30

Karnataka News Live 30 June 2026Toxic ಅಪ್‌ಡೇಟ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್ - ನಾಳೆ ಬೆಳಗ್ಗೆ 11 - 33ಕ್ಕೆ ಏನಾಗಲಿದೆ?

Toxic: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

Read Full Story
04:13 PM (IST) Jun 30

Karnataka News Live 30 June 2026Pradeep Eswar - ಪ್ರದೀಪ್‌ ಮೇಲೆ ಚಪ್ಪಲಿ ಎಸೆದ ಪ್ರಕರಣ ಬಿಗ್‌ ಟ್ವಿಸ್ಟ್‌; ಅಚ್ಚರಿ ಮೂಡಿಸಿದ ಮಾಜಿ ಸಿಎಂ ಸಿದ್ದು ನಡೆ!

ಪ್ರದೀಪ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಹೊಸ ಹಾದಿ ಹಿಡಿದಿದೆ. ಜೆಡಿಎಸ್‌ ಶಾಸಕರ ಸುದ್ದಿಗೋಷ್ಠಿ ನಂತರ ಸಿಎಂ ನಡೆ ಕೂತುಹಲ ಸೃಷ್ಟಸಿದೆ. ಶಾಸಕ ಪ್ರದೀಪ್‌ ಈಶ್ವರ ಅವರನ್ನು ಮನೆಗೆ ಕರೆಸಿದ ಸಿದ್ದು, ಕೇಳಿದ್ದೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

Read Full Story
03:53 PM (IST) Jun 30

Karnataka News Live 30 June 2026ಅಡ್ಡಮತದಾನದ ಆರೋಪ - ಬೇಲೂರು ಚನ್ನಕೇಶವ , ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಶಾಸಕ ಸುರೇಶ್ ಆಣೆ ಪ್ರಮಾಣ!

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ನಿಷ್ಠೆಯನ್ನು ಸಾಬೀತುಪಡಿಸಲು, ಅವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಿ, ತನಿಖೆಗಾಗಿ ಮಂಪರು ಪರೀಕ್ಷೆಗೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.
Read Full Story
01:32 PM (IST) Jun 30

Karnataka News Live 30 June 2026ದಾವಣಗೆರೆ ಜಿಲ್ಲಾಸ್ಪತ್ರೆ OTಯಲ್ಲಿ ಭಾರೀ ಸ್ಫೋಟ, ರೋಗಿಗಳನ್ನು ಸ್ಟ್ರೆಚರ್ ನಲ್ಲಿ ಹೊರತಂದು ಪ್ರಾಣ ಉಳಿಸಿದ ಸಿಬ್ಬಂದಿ!

ದಾವಣಗೆರೆಯ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಅನೆಸ್ತೇಶಿಯಾ ಸಿಲಿಂಡರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ನಾಶವಾಗಿದ್ದರೂ, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Read Full Story
01:19 PM (IST) Jun 30

Karnataka News Live 30 June 2026ಸಭೆಗೆ ಬರಿಗೈಲಿ ಬಂದ ಅಧಿಕಾರಿಗೆ ಸಚಿವ ಕೃಷ್ಣ ಬೈರೇಗೌಡ ಕ್ಲಾಸ್; GBA ಕರ್ತವ್ಯದಿಂದ ಬಿಡುವಂತೆ ಖಡಕ್ ಸೂಚನೆ

ಇಲಾಖಾ ಪರಿಶೀಲನೆ ಸಭೆ ವೇಳೆ ಯಾವುದೇ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಬಂದ ಅಧಿಕಾರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಲ್ಲದೇ ಸರಿಯಾದ ಉತ್ತರ ನೀಡಲು ವಿಫಲರಾದ ಅಧಿಕಾರಿಯನ್ನ ಜಿಬಿಎಂ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿದರು.

Read Full Story
12:40 PM (IST) Jun 30

Karnataka News Live 30 June 2026ಯೋಗೀಶ್ ಗೌಡ ಕೊಲೆ ಪ್ರಕರಣ - ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ವೇಳೆ ಕರ್ನಾಟಕ ರಾಜಕಾರಣಿಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ವೇಳೆ, ಕರ್ನಾಟಕದಲ್ಲಿ ರಾಜಕಾರಣಿಗಳು ಹೀನಾಯ ಅಪರಾಧಗಳಲ್ಲಿ ಭಾಗಿಯಾಗುವುದು ವಿರಳ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಸಿಬಿಐ ವಾದವನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿದೆ.
Read Full Story
12:03 PM (IST) Jun 30

Karnataka News Live 30 June 2026TikTok ನಿಷೇಧಕ್ಕೆ ಇಂದಿಗೆ 6 ವರ್ಷ - 40M ಫಾಲೋವರ್ಸ್‌, ಟಾಪ್-5 ಟಿಕ್‌ಟಾಕ್ ಸ್ಟಾರ್‌ಗಳು ಈಗ ಏನು ಮಾಡುತ್ತಿದ್ದಾರೆ?

ಜೂನ್ 30, 2020 ರಂದು, ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಈ ನಿರ್ಧಾರದಿಂದ Tiktok ಟಾಪ್-5 ಸ್ಟಾರ್‌ ಗಳ ಬದುಕು ಬದಲಾಯಿತು. ಈಗ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ನೋಡಿ!

Read Full Story
10:47 AM (IST) Jun 30

Karnataka News Live 30 June 2026ಭ್ರಷ್ಟಾಚಾರ-ಲಂಚಕ್ಕೆ ಬೇಡಿಕೆ ಪ್ರಕರಣ - ಹಣ ಸಿಕ್ಕರೂ ಸರ್ಕಾರಿ ನೌಕರ ಖುಲಾಸೆ! ಹೈಕೋರ್ಟ್ ಹೇಳಿದ್ದೇನು?

ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಪಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಬಗ್ಗೆ ಸಾಕ್ಷ್ಯ ಇರುವುದು ಕಡ್ಡಾಯ ಎಂದಿದೆ. ರೈತನಿಗೆ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸರ್ಕಾರಿ ನೌಕರ ಖುಲಾಸೆ ಪ್ರಕರಣದ ಬಗ್ಗೆ ತಿಳಿಯಿರಿ.

Read Full Story
10:08 AM (IST) Jun 30

Karnataka News Live 30 June 2026ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯ ಕಾರು ತಡೆದು ಪತ್ನಿ-ಮಗನ ಅಪಹರಣ, ಚಿನ್ನ ದರೋಡೆ!

ಮಂಗಳೂರಿನ ಬೈಕಂಪಾಡಿ ಬಳಿ, ಮಹಾರಾಷ್ಟ್ರದಿಂದ ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯ ಕುಟುಂಬವನ್ನು ಅಡ್ಡಗಟ್ಟಿದ ದರೋಡೆಕೋರರು, ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ, ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿ, 180 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯ ಹಿಂದೆ ಆಪ್ತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
Read Full Story