10:40 PM (IST) Jun 29

Karnataka News Live 29 June 2026Instagram Reels Vs Posts - ಇನ್‌ಸ್ಟಾಗ್ರಾಂನಲ್ಲಿ ಯಾವುದು ಹೆಚ್ಚು ರೀಚ್, ಎಂಗೇಜ್‌ಮೆಂಟ್ ತಂದುಕೊಡುತ್ತೆ?

Instagram Reels Vs Posts: ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮತ್ತು ಪೋಸ್ಟ್‌ಗಳ ಪೈಕಿ ಯಾವುದಕ್ಕೆ ಹೆಚ್ಚು ರೀಚ್ ಸಿಗುತ್ತೆ ಗೊತ್ತಾ? 2026ರ ಇನ್‌ಸ್ಟಾಗ್ರಾಂ ಲೇಟೆಸ್ಟ್ ಡೇಟಾ ಪ್ರಕಾರ ಯಾವುದು ಬೆಸ್ಟ್ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Read Full Story
09:41 PM (IST) Jun 29

Karnataka News Live 29 June 2026ರಸ್ತೆ ಅಪಘಾತ ಅತೀ ಹೆಚ್ಚು ಸಂಭವಿಸುತ್ತಿರುವುದರಲ್ಲಿ ಬೆಂಗಳೂರಿಗೆ ದೇಶದಲ್ಲೇ 2ನೇ ಸ್ಥಾನ!

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ 'ಭಾರತದಲ್ಲಿ ರಸ್ತೆ ಅಪಘಾತಗಳು 2024' ವರದಿಯ ಪ್ರಕಾರ, ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಅತಿ ವೇಗದ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.
Read Full Story
09:35 PM (IST) Jun 29

Karnataka News Live 29 June 2026Garden Safety - ಮಳೆಗಾಲದಲ್ಲಿ ಹಾವುಗಳ ಕಾಟವೇ? ಈ ಗಿಡಗಳು ಮತ್ತು ಪರಿಸ್ಥಿತಿಗಳೇ ಕಾರಣ!

Snake Around Plants: ಮಳೆಗಾಲದಲ್ಲಿ ಮನೆ, ಬಾಲ್ಕನಿ ಅಥವಾ ಗಾರ್ಡನ್‌ನಲ್ಲಿ ಹಾವುಗಳು ಕಾಣಿಸುತ್ತಿವೆಯೇ? ಯಾವ ಗಿಡಗಳು ಮತ್ತು ಪರಿಸ್ಥಿತಿಗಳಿಂದ ಹಾವುಗಳು ಬರುತ್ತವೆ, ಹಾವುಗಳನ್ನು ದೂರವಿಡಲು ಏನು ಮಾಡಬೇಕು.

Read Full Story
08:42 PM (IST) Jun 29

Karnataka News Live 29 June 2026Trisha Krishnan Honey - ತ್ರಿಷಾಗೆ 'ಹನಿ' ಎಂದು ಕರೆಯೋದು ಯಾರು? ಅವರಾ or ಇವರಾ? ನಿಮ್ಮ ಊಹೆ ಸರಿನಾ, ತಪ್ಪಾ?

ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಂದ ಕರೆಯುತ್ತಾರೆ.

Read Full Story
07:11 PM (IST) Jun 29

Karnataka News Live 29 June 2026ಬರೋಬ್ಬರಿ ₹45 ಲಕ್ಷ ವೇತನ, ತಿಂಗಳ ಕೊನೆಗೆ ದಿವಾಳಿ! ಬೆಂಗಳೂರು ಟೆಕ್ಕಿಯ ವೈರಲ್ ಸ್ಟೋರಿ! ಜೀವನ ವೆಚ್ಚವೋ? ಹಣ ನಿರ್ವಹಣೆ ಲೋಪವೋ?

ವಾರ್ಷಿಕ ₹45 ಲಕ್ಷ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಮೆಟ್ರೋ ನಗರಗಳಲ್ಲಿನ 'ಜೀವನಶೈಲಿ ಹಣದುಬ್ಬರ' ಮತ್ತು ಕಳಪೆ ಹಣಕಾಸು ಯೋಜನೆಯ ಕುರಿತು ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
06:45 PM (IST) Jun 29

Karnataka News Live 29 June 2026'ಹೇಗಾದರೂ ಮಾತಾಡು ನೀ' - Darshan ನೆನಪಿನಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?

Darshan ಪತ್ನಿ ವಿಜಯಲಕ್ಷ್ಮಿ, ಪತಿಯೊಂದಿಗೆ ಇರುವ ಹಳೆಯ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. 'ತಾರಕ್' ಚಿತ್ರದ 'ಹೇಗಾದರೂ ಮಾತಾಡು ನೀ' ಹಾಡಿನೊಂದಿಗೆ ಹಂಚಿಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
06:03 PM (IST) Jun 29

Karnataka News Live 29 June 2026ಸಿಎಂ‌ ಡಿಕೆಶಿಯಿಂದ ಗುಡ್ ನ್ಯೂಸ್, ಬೆಂಗಳೂರು ರಸ್ತೆ ಅಭಿವೃದ್ಧಿಗೆ 2000 ಕೋಟಿ ಬಿಡುಗಡೆ, ಯಾವ ಕ್ಷೇತ್ರಕ್ಕೆ ಎಷ್ಟು?

ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ₹2,000 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಬೃಹತ್ ಯೋಜನೆಯಡಿ, ವಿಧಾನಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಆಡಳಿತ ಪಕ್ಷದ ಕ್ಷೇತ್ರಗಳಿಗೆ ಹೆಚ್ಚಿನ ಪಾಲು ದೊರೆತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
Read Full Story
05:38 PM (IST) Jun 29

Karnataka News Live 29 June 2026Sharmiela Mandre - 'ಇದು ನನ್ನ ಜೀವನದ ವಿಶೇಷ ಕ್ಷಣ' - ನಿಶ್ಚಿತಾರ್ಥದ ಬಳಿಕ ಶರ್ಮಿಳಾ ಮಾಂಡ್ರೆ ಹೇಳಿದ್ದೇನು?

Sharmiela Mandre ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಪ್ತರ ಸಮ್ಮುಖದಲ್ಲಿ ನಡೆದ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Read Full Story
05:03 PM (IST) Jun 29

Karnataka News Live 29 June 2026NS Shankar - ಒಂದು ಸಿನಿಮಾ, ಸಾವಿರ ನೆನಪು... ತೆರೆಗೆ ಸರಿದ ನಗಿಸಿದ ನಿರ್ದೇಶಕ ಎನ್‌.ಎಸ್‌.ಶಂಕರ್‌

NS Shankar: 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎನ್‌.ಎಸ್‌. ಶಂಕರ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

Read Full Story
04:50 PM (IST) Jun 29

Karnataka News Live 29 June 2026Priya Sudeep Viral - ಅದ್ಭುತ ಕಥೆ ನಿಮ್ಮಲ್ಲಿ ಇದೆಯೇ? ಕಿಚ್ಚ ಸುದೀಪ್‌ ಪತ್ನಿ ಪ್ರಿಯಾ ಸಂಸ್ಥೆಯಲ್ಲಿ ಚಾನ್ಸ್ ಇದೆ ನೋಡಿ!

ಗಾಂಧಿನಗರದ ಗಲ್ಲಿಗಳಲ್ಲಿ ಅಲೆಯುವ ಬದಲು, ನಿಮ್ಮ ಪ್ರತಿಭೆಯನ್ನು ನೇರವಾಗಿ ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶ. ನಿಮ್ಮ ಲೇಖನಿ ಬೆಳ್ಳಿತೆರೆಯ ಮೇಲೆ ಮಿನುಗುವ ಕಾಲ ಹತ್ತಿರ ಬಂದಿದೆ. ನಿಮ್ಮಲ್ಲಿ ಗಟ್ಟಿಯಾದ ಕಥೆ ಇದ್ದರೆ ತಡಮಾಡಬೇಡಿ, ಕೂಡಲೇ ಈ ನಂಬರ್‌ಗೆ ಕರೆ ಮಾಡಿ, ಚಾನ್ಸ್ ನಿಮ್ಮದಾಗಿಸಿಕೊಳ್ಳಿ!

Read Full Story
04:46 PM (IST) Jun 29

Karnataka News Live 29 June 2026Nabha Natesh - 'ವಜ್ರಕಾಯ' ಬಳಿಕ ಕನ್ನಡಕ್ಕೆ ಯಾಕೆ ಬರಲಿಲ್ಲ? ನಟಿ ನಭಾ ಕೊಟ್ಟ ಉತ್ತರ ಏನು?

Vajrakaya ಖ್ಯಾತಿಯ ನಭಾ ನಟೇಶ್ ಕೋವಿಡ್ ಬಳಿಕದ ಜೀವನ, ಕನ್ನಡ ಸಿನಿಮಾಗಳಿಗೆ ಕಮ್‌ಬ್ಯಾಕ್, ನಾಗಬಂಧಂ, ಸ್ವಯಂಭೂ ಹಾಗೂ ಶೃಂಗೇರಿಯೊಂದಿಗಿನ ನಂಟಿನ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.

Read Full Story
04:42 PM (IST) Jun 29

Karnataka News Live 29 June 2026ಬರೋಬ್ಬರಿ 4 ದಶಕಗಳ ಬೆಂಗಳೂರು ಉಪನಗರ ರೈಲು ಕನಸು ನನಸಾಗೋ ಕಾಲ ಸನ್ನಿಹಿತ, 2028ಕ್ಕೆ ಮೊದಲ ಸೇವೆ ಆರಂಭ!

ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿದೆ. ಮೆಟ್ರೋಗಿಂತ ಹೆಚ್ಚು ಸವಾಲಿನದಾದ ಈ ಯೋಜನೆಯ ಕಾರಿಡಾರ್ 2 ಮತ್ತು 4ರ ಕೆಲಸಗಳು ಭರದಿಂದ ಸಾಗುತ್ತಿದ್ದು, ಡಿಸೆಂಬರ್ 2028ರ ವೇಳೆಗೆ ಮೊದಲ ರೈಲು ಸಂಚಾರ ಆರಂಭಿಸುವ ಗುರಿಯನ್ನು ಕೆ-ರೈಡ್ ಹೊಂದಿದೆ. ಈ ಯೋಜನೆಯು ನಗರದ ಅಭಿವೃದ್ಧಿಯನ್ನು ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ.
Read Full Story
04:21 PM (IST) Jun 29

Karnataka News Live 29 June 2026Shivarajkumar ಮಾನವೀಯತೆ ಬಿಚ್ಚಿಟ್ಟ ಸುನೀಲ್‌ ಕುಮಾರ್‌ ದೇಸಾಯಿ - ಜೇನು ದಾಳಿಯ ಕಥೆ ವೈರಲ್

Shivanna: 'ನಮ್ಮೂರ ಮಂದಾರ ಹೂವೆ' ಶೂಟಿಂಗ್ ವೇಳೆ ಸಾತೊಡ್ಡಿ ಜಲಪಾತದಲ್ಲಿ ನಡೆದ ಜೇನು ದಾಳಿಯ ವೇಳೆ ಶಿವರಾಜ್‌ಕುಮಾರ್‌ ಮಕ್ಕಳನ್ನು ರಕ್ಷಿಸಿದ ಘಟನೆಯನ್ನು ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಹಂಚಿಕೊಂಡಿದ್ದಾರೆ.

Read Full Story
04:08 PM (IST) Jun 29

Karnataka News Live 29 June 2026Bigg Boss ಖ್ಯಾತಿಯ ದಿವ್ಯಾ ಸುರೇಶ್‌ಗೆ ಬೆಚ್ಚಿಬೀಳಿಸುವ ಅನುಭವ - ವಿಡಿಯೋ ಹಂಚಿಕೊಂಡು ಪೊಲೀಸರಿಗೆ ಮನವಿ

Divya Suresh: ಬೆಂಗಳೂರಿನಲ್ಲಿ ರಾತ್ರಿ ನಟಿ ಹಾಗೂ ಬಿಗ್‌ಬಾಸ್ ಕನ್ನಡ ಖ್ಯಾತಿಯ ದಿವ್ಯಾ ಸುರೇಶ್‌ಗೆ ಯುವಕನಿಂದ ಕಿರುಕುಳ ಆರೋಪ. ಘಟನೆದ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರ ಕ್ರಮಕ್ಕೆ ಮನವಿ ಮಾಡಿದ್ದಾರೆ.

Read Full Story
03:49 PM (IST) Jun 29

Karnataka News Live 29 June 2026ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಚಾರ ಮುಕ್ತ, ಆಂಧ್ರದವರೆಗೆ 100 ಕಿ.ಮೀ ತಡೆರಹಿತ ಸಂಚಾರ!

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಬೇತಮಂಗಲ-ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗೆ ಒಟ್ಟು 100 ಕಿ.ಮೀ ನಿರಂತರ ಸಂಚಾರ ಸಾಧ್ಯವಾಗಿದ್ದು, ಚೆನ್ನೈ, ತಿರುಪತಿ ಕಡೆಗಿನ ಪ್ರಯಾಣದ ಸಮಯ ಉಳಿತಾಯವಾಗಲಿದೆ.
Read Full Story
02:30 PM (IST) Jun 29

Karnataka News Live 29 June 2026Graamaayana Movie Trailer - ಮೇಘಾ ಶೆಟ್ಟಿ, ವಿನಯ್‌ ರಾಜ್‌ಕುಮಾರ್‌ 'ಗ್ರಾಮಾಯಣ'ಕ್ಕೆ‌ ದುನಿಯಾ ವಿಜಯ್ ಸಾಥ್

Graamaayana Movie: ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ, ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ ‘ಗ್ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. 

Read Full Story
02:26 PM (IST) Jun 29

Karnataka News Live 29 June 2026ಚಿಂತಾಜನಕ ಸ್ಥಿತಿಯಲ್ಲಿರೋ ಸರ್ಕಾರಿ ಶಾಲೆಗಳ ಕಪ್ಪು ಬೋರ್ಡ್‌ಗಳಿಗೆ ಬಣ್ಣ ಬಳಿಯುವ ಅಭಿಯಾನ

ಸರ್ಕಾರಿ ಶಾಲೆಗಳಲ್ಲಿ ಹಾಳಾಗಿದ್ದ ಕಪ್ಪು ಬೋರ್ಡ್‌ಗಳಿಗೆ ಶಿಕ್ಷಣ ಇಲಾಖೆಯು 'ನಾವು ಬಣ್ಣ ಬಳಿಯುವ ಅಭಿಯಾನ'ದ ಮೂಲಕ ಹೊಸ ಜೀವ ನೀಡುತ್ತಿದೆ. ಶಾಲಾ ಅನುದಾನ ಬಳಸಿ ಶಿಕ್ಷಕರು ಈ ನವೀಕರಣ ಕಾರ್ಯ ಕೈಗೊಂಡಿದ್ದು, ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಕಾಯಕಲ್ಪ ನೀಡಲಾಗುತ್ತಿದೆ.

Read Full Story
02:20 PM (IST) Jun 29

Karnataka News Live 29 June 2026"ವಿಜಯೇಂದ್ರನನ್ನು ಒದ್ದು ಬಿಸಾಕಿ" ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಲೀಕ್, ನೋ ಕಮೆಂಟ್ಸ್ ಎಂದ ಡಿವಿಎಸ್!!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಉಚ್ಚಾಟನೆ ಕುರಿತು ಮಾಜಿ ಸಿಎಂ ಸದಾನಂದಗೌಡರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ವಿವಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸದಾನಂದಗೌಡರು, ಇದು ತಮ್ಮ ವಿರುದ್ಧದ ಪಿತೂರಿ ಎಂದು ಆರೋಪಿಸಿದ್ದು, ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ತಾರಕಕ್ಕೇರಿದೆ.
Read Full Story
01:37 PM (IST) Jun 29

Karnataka News Live 29 June 2026ಬೆಂಗಳೂರಿನ ಈ ವೈದ್ಯರ ಮಾತ್ರೆ ಚೀಟಿ ಸಿಕ್ಕಾಪಟ್ಟೆ ವೈರಲ್​ - ಕೊನೆಗೂ ಆಸೆ ನೆರವೇರಿತು ಅಂತಿದ್ದಾರೆ ನೆಟ್ಟಿಗರು

ಸಾಮಾನ್ಯವಾಗಿ ವೈದ್ಯರ ಅಸ್ಪಷ್ಟ ಕೈಬರಹದ ಬಗ್ಗೆ ಇರುವ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಡಾ. ಲೋಕೇಶ್ ಎಂಬುವವರು ಬರೆದ ಸುಂದರ ಅಕ್ಷರಗಳ ಪ್ರಿಸ್ಕ್ರಿಪ್ಷನ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸ್ಪಷ್ಟವಾದ ಕೈಬರಹಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ವೈದ್ಯರ ವೃತ್ತಿಪರತೆಯನ್ನು ಶ್ಲಾಘಿಸಲಾಗುತ್ತಿದೆ.
Read Full Story
12:45 PM (IST) Jun 29

Karnataka News Live 29 June 2026ಜನರ ಕಾರು ಓಡಲು ಪ್ರಕೃತಿಯ ಒಡಲು ಹರಿದರು..ಶಿವಮೊಗ್ಗದಲ್ಲಿ ‘ಟ್ರಾಫಿಕ್’ ನೆಪದಲ್ಲಿ ಮರಗಳ ಮಾರಣಹೋಮ!

ಶಿವಮೊಗ್ಗ-ಸವಳಂಗ ರಾಜ್ಯ ಹೆದ್ದಾರಿಯಲ್ಲಿ ಮಳೆ-ಗಾಳಿಯ ಮುನ್ನೆಚ್ಚರಿಕೆ ನೆಪದಲ್ಲಿ ಅರಣ್ಯ ಇಲಾಖೆಯು 139 ಮರಗಳನ್ನು ಕಡಿಯಲು ಆರಂಭಿಸಿದೆ. ಇಲಾಖೆಯು ಇದು ಸುರಕ್ಷತಾ ಕ್ರಮವೆಂದು ಹೇಳಿದರೆ, ಇದು ಅನಗತ್ಯ ಮತ್ತು ನಿಯಮಬಾಹಿರ ಕ್ರಮ ಎಂದು ಪರಿಸರ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story