09:50 PM (IST) Dec 28

Karnataka News Live 28 December 2025ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿ ಯತ್ನಾಳ್ ತಿರುಗೇಟು

ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿ ಯತ್ನಾಳ್ ತಿರುಗೇಟು ನೀಡಿದ್ದಾರೆ. ಆತ ಮಾಡೋದು ನೋಡಿದ್ರೆ ಮುಸ್ಲಿಂ ಮತಾಂಧ ಇರಬೇಕು, ಸುನ್ನಿ ಏನೋ ಮಾಡಿದ್ದಾನೋ ಏನೋ ಎಂದು ಚೆಕ್ ಮಾಡಿದರೆ ಗೊತ್ತಾಗುತ್ತೆ ಎಂದಿದ್ದಾರೆ.

Read Full Story
09:29 PM (IST) Dec 28

Karnataka News Live 28 December 2025ಕರಾವಳಿಗೆ ಡಿಕೆಶಿ ಮೆಗಾ ಪ್ಲಾನ್ - 300 ಕಿ.ಮೀ ವ್ಯಾಪ್ತಿಯಲ್ಲಿ 'ನ್ಯೂ ಟೂರಿಸಂ ಪಾಲಿಸಿ' ಘೋಷಣೆ!

ಕಾರವಾರದ ಕರಾವಳಿ ಉತ್ಸವದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 300 ಕಿ.ಮೀ ಕರಾವಳಿ ತೀರಕ್ಕೆ 'ಮೆಗಾ ಟೂರಿಸಂ' ಯೋಜನೆ ಘೋಷಿಸಿದ್ದಾರೆ. ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ, ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ಶರಾವತಿ ಯೋಜನೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

Read Full Story
08:59 PM (IST) Dec 28

Karnataka News Live 28 December 2025Tadasana Yoga - ದಿನವಿಡೀ ಆಕ್ಟಿವ್ ಆಗಿರಲು ತಾಡಾಸನ ಯೋಗದ 5 ಅದ್ಭುತ ಪ್ರಯೋಜನಗಳು ತಪ್ಪದೇ ತಿಳ್ಕೊಳ್ಳಿ!

Tadasana Yoga Pose Benefits for Health: ತಾಡಾಸನ ಯೋಗದ ಪ್ರಯೋಜನಗಳು: ಸರಿಯಾಗಿ ನಿಲ್ಲುವುದು ಕೂಡ ಒಂದು ಚಿಕಿತ್ಸೆಯಾಗಬಹುದು ಎಂಬುದನ್ನು ತಾಡಾಸನ ಕಲಿಸುತ್ತದೆ. ಇದನ್ನು ನೀವು ದೈನಂದಿನ ಅಭ್ಯಾಸ ಮಾಡಿಕೊಂಡರೆ, ದೇಹವು ಎತ್ತರವಾಗುವುದಲ್ಲದೆ, ಈ ಅದ್ಭುತ ಪ್ರಯೋಜನಗಳನ್ನು ಸಹ ನೀಡುತ್ತದೆ. 

Read Full Story
08:12 PM (IST) Dec 28

Karnataka News Live 28 December 2025Bigg Boss ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕುತೂಹಲದ ಪೋಸ್ಟ್​ ಹಾಕಿದ ಸೂರಜ್​ ಸಿಂಗ್​

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಬಂದಿದ್ದ ಸೂರಜ್​ ಸಿಂಗ್​ ಎಲಿಮಿನೇಟ್​ ಆಗಿದ್ದಾರೆ. 'ಬಿಗ್​ಬಾಸ್​ ಕ್ರಷ್' ಎಂದೇ ಖ್ಯಾತರಾಗಿದ್ದ ಅವರ ಅನಿರೀಕ್ಷಿತ ನಿರ್ಗಮನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು, ಮನೆಯಿಂದ ಹೊರಬಂದ ನಂತರ ಇನ್​ಸ್ಟಾಗ್ರಾಮ್​ನಲ್ಲಿ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ.
Read Full Story
07:58 PM (IST) Dec 28

Karnataka News Live 28 December 2025ಮುಂಡಗೋಡದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು-ದಲಾಯಿ ಲಾಮಾ ಭೇಟಿ - ವಿಶ್ವಶಾಂತಿಯ ಮಂತ್ರ ಪಠಿಸಿದ ಬೌದ್ಧ ಗುರು!

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಉತ್ತರ ಕನ್ನಡದ ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ಗೆ ಭೇಟಿ ನೀಡಿ, ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರ ಆಶೀರ್ವಾದ ಪಡೆದರು. ದಲಾಯಿ ಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ 'ಪಂಡಿತರ ಸಮಾವೇಶ'ವನ್ನು ಉದ್ಘಾಟಿಸಿದರು. 

Read Full Story
07:42 PM (IST) Dec 28

Karnataka News Live 28 December 2025ಕೋಳಿಗಳಲ್ಲಿ ಹಕ್ಕಿ ಜ್ವರ ಆತಂಕ; ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಚಿಕನ್ ಊಟಕ್ಕೆ FSSAI ನಿಷೇಧ!

ಹೋಟೆಲ್‌ಗಳಲ್ಲಿ ಕೋಳಿ ಖಾದ್ಯಗಳನ್ನು ನೀಡುವುದನ್ನು ತಡೆಯಲಾಗಿದೆ. ಊಟಕ್ಕೆ ಬಂದವರನ್ನು ಅಧಿಕಾರಿಗಳು ಹೊರಗೆ ಕಳುಹಿಸಿದ್ದಾರೆ ಎಂದು ಹೋಟೆಲ್ ಮಾಲೀಕರು ದೂರುತ್ತಿದ್ದಾರೆ. ಇದರ ವಿರುದ್ಧ ಹೋಟೆಲ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.

Read Full Story
07:33 PM (IST) Dec 28

Karnataka News Live 28 December 2025ದೇವಸ್ಥಾನಗಳಲ್ಲಿ ಸರ ಎಗರಿಸುತ್ತಿದ್ದ ತಮಿಳುನಾಡಿನ 'ಕಳ್ಳಿಯರ ಗ್ಯಾಂಗ್' ಅರೆಸ್ಟ್, ಸಿಕ್ಕಿಬಿದ್ದಿದ್ದು ಹೇಗೆ?

ಉಡುಪಿಯ ಹೆಜಮಾಡಿ ದೇವಸ್ಥಾನದಲ್ಲಿ ವೃದ್ಧೆಯ ಸರ ಕದ್ದಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರ ಗ್ಯಾಂಗ್, ಪುತ್ತೂರಿನಲ್ಲಿ ಮತ್ತೊಂದು ಕಳ್ಳತನಕ್ಕೆ ಯತ್ನಿಸುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದೆ. ವೈರಲ್ ಆದ ಸಿಸಿಟಿವಿ ದೃಶ್ಯಗಳಿಂದ ಕಳ್ಳಿಯರನ್ನು ಗುರುತಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story
07:24 PM (IST) Dec 28

Karnataka News Live 28 December 2025₹16 ಸಾವಿರ ಬೆಲೆಗೆ 8000mAh ಬ್ಯಾಟರಿ ಫೋನ್! ಸ್ಮಾರ್ಟ್‌ಫೋನ್ ಲೋಕದಲ್ಲಿ ಟೆಕ್ನೋ ಪೋವಾ ಕರ್ವ್-2 5G ಸಂಚಲನ

ಟೆಕ್ನೋ ಪೋವಾ ಕರ್ವ್ 2 5G ಯ ಡಿಸೈನ್ ರೆಂಡರ್‌ಗಳು ಮತ್ತು ಪ್ರಮುಖ ಫೀಚರ್‌ಗಳು ಲೀಕ್ ಆಗಿವೆ. 8000mAh ದೈತ್ಯ ಬ್ಯಾಟರಿ ಮತ್ತು 144Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಈ ಫೋನಿನ ಪ್ರಮುಖ ಆಕರ್ಷಣೆಗಳಾಗಿವೆ.

Read Full Story
07:01 PM (IST) Dec 28

Karnataka News Live 28 December 2025ಚಿತ್ರದುರ್ಗ ಬಸ್ ದುರಂತ; DNA ಪರೀಕ್ಷೆ ಬಳಿಕ ನವ್ಯಾ, ಮಾನಸಾಳ ಸುಟ್ಟು ಕರಕಲಾದ ದೇಹಗಳ ಹಸ್ತಾಂತರ!

ಚಿತ್ರದುರ್ಗ ಬಳಿಯ ಖಾಸಗಿ ಬಸ್ ದುರಂತದಲ್ಲಿ ಮೃತಪಟ್ಟಿದ್ದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರ ಮೃತದೇಹಗಳನ್ನು DNA ಪರೀಕ್ಷೆ ನಂತರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮತ್ತೊಂದೆಡೆ, ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರದಿಂದ ಯಾವುದೇ ನೆರವು ಸಿಗದ ಕಾರಣ ಸಂತ್ರಸ್ತರ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.

Read Full Story
06:57 PM (IST) Dec 28

Karnataka News Live 28 December 2025ಸಿಎಂ ಕುರ್ಚಿ ಬಗ್ಗೆ ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ; ಡಿಸೆಂಬರ್ ಬಳಿಕ ಭೀಕರ ಸಾವು-ನೋವು?

ಕೋಡಿಮಠದ ಶ್ರೀಗಳು ಹಾವೇರಿಯಲ್ಲಿ ಮತ್ತೊಂದು ಆತಂಕಕಾರಿ ಭವಿಷ್ಯ ನುಡಿದಿದ್ದು, ಬಜೆಟ್ ನಂತರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಏಳುವ ಸೂಚನೆ ನೀಡಿದ್ದಾರೆ. ಇಬ್ಬರು ಪ್ರಭಾವಿ ನಾಯಕರ ಅಂತ್ಯದ ಮುನ್ಸೂಚನೆ ಹಾಗೂ ಯುಗಾದಿ ನಂತರ ಸಾವು-ನೋವು ಹೆಚ್ಚಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.
Read Full Story
06:15 PM (IST) Dec 28

Karnataka News Live 28 December 2025ಮೈಸೂರಲ್ಲಿ ಹೆಚ್ಚಾಯ್ತು ಕ್ರಿಮಿನಲ್‌ಗಳ ಉಪಟಳ - ಹಾಡಹಗಲೇ ಗನ್‌ ತೋರಿಸಿ 4 ಕೆಜಿ ಚಿನ್ನ ಲೂಟಿ!

ಮೈಸೂರಿನ ಹುಣಸೂರು ಪಟ್ಟಣದಲ್ಲಿ, ಹಾಡಹಗಲೇ 5 ಜನರ ಮುಸುಕುಧಾರಿ ಗ್ಯಾಂಗ್ ಗನ್ ತೋರಿಸಿ 'ಸ್ಕೈಗೋಲ್ಡ್ ಅಂಡ್ ಡೈಮಂಡ್ಸ್' ಶೋರೂಂನಿಂದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದೆ. ಸುಮಾರು 4 ಕೆಜಿ ಚಿನ್ನ ಲೂಟಿ ಮಾಡಲಾಗಿದೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ.

Read Full Story
06:10 PM (IST) Dec 28

Karnataka News Live 28 December 2025ಜಲಮಂಡಳಿ ನೀರಿನ ಬಿಲ್ ಬಾಕಿದಾರರಿಗೆ 'ಬಂಪರ್ ಆಫರ್' - ಅಸಲು ಪಾವತಿಸಿದರೆ ಶೇ.100 ರಷ್ಟು ಬಡ್ಡಿ ಮನ್ನಾ!

ಬೆಂಗಳೂರು ಜಲಮಂಡಳಿಯು ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ 'ಒನ್ ಟೈಮ್ ಸೆಟಲ್‌ಮೆಂಟ್' (OTS) ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ, ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.

Read Full Story
05:57 PM (IST) Dec 28

Karnataka News Live 28 December 2025ಮೃತಪಟ್ಟ ಅಜ್ಜಿಯನ್ನೂ ಬಿಡದ Bigg Boss ಗಿಲ್ಲಿ ನಟ - ಶ್ರದ್ಧಾಂಜಲಿ ಬ್ಯಾನರ್​ನಲ್ಲಿ ನಟಿಯ ಕಣ್ಣು-ಬಾಯಿ!

ಬಿಗ್​ಬಾಸ್​ ಸ್ಪರ್ಧಿ ಗಿಲ್ಲಿ ನಟ, ತಮ್ಮ ತರ್ಲೆಗೆ ಹೆಸರುವಾಸಿ. ತಮ್ಮ ಮೃತ ಅಜ್ಜಿಯ ಶ್ರದ್ಧಾಂಜಲಿ ಬ್ಯಾನರ್​ಗೆ ಬಾಲಿವುಡ್ ನಟಿ ಮತ್ತು ತೆಲುಗು ಹೀರೋಯಿನ್​ರ ಕಣ್ಣು, ತುಟಿಗಳನ್ನು ಸೇರಿಸಿ, ತಮ್ಮ ಕುಟುಂಬದವರಿಗೆ ಶಾಕ್ ನೀಡಿದ ಘಟನೆಯನ್ನು ಅವರು ಬಿಗ್​ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ.
Read Full Story
05:51 PM (IST) Dec 28

Karnataka News Live 28 December 2025ಕೇರಳ ನಿಯೋಗ ಕೋಗಿಲು ಬಡಾವಣೆಗೆ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ!

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿದೆ. ಈ ತೆರವುಗೊಂಡ ಸ್ಥಳಕ್ಕೆ ಕೇರಳ ನಿಯೋಗ ಭೇಟಿ ನೀಡಿದ್ದನ್ನು ಖಂಡಿಸಿರುವ ಸಚಿವ ಜಮೀರ್ ಅಹಮದ್ ಖಾನ್, ಬಡವರ ಬಗ್ಗೆ ಕಾಳಜಿ ಇದ್ದರೆ ಕೇರಳ ಸರ್ಕಾರವೇ ಆರ್ಥಿಕ ಸಹಾಯ ನೀಡಲಿ ಎಂದು ಸವಾಲು ಹಾಕಿದ್ದಾರೆ.

Read Full Story
05:45 PM (IST) Dec 28

Karnataka News Live 28 December 2025ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ

ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ, ಸರ್ಕಾರದಿಂದ ಇನ್ಫೋಸಿಸ್ ಕ್ಯಾಂಪಸ್‌ಗೆ ಜಾಗ ಪಡೆದು ಮಾರಾಟ ಮಾಡಿದ್ದಾರೆ ಅನ್ನೋ ಆರೋಪ, ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಿಎಫ್ಒ ಮಾಹಿತಿ ಬಹಿರಂಗಪಡಿಸಿದ್ದಾರೆ.

Read Full Story
05:45 PM (IST) Dec 28

Karnataka News Live 28 December 2025ಹೊಸ ವರ್ಷದ ಕಿಕ್ - ಹಂಪಿ, ಟಿಬಿ ಡ್ಯಾಂಗೆ ಹರಿದು ಬಂದ ಜನಸಾಗರ; ಲಾಡ್ಜ್ ದರ ಕೇಳಿದ್ರೆ ಪ್ರವಾಸಿಗರು ಸುಸ್ತೋ ಸುಸ್ತು!

ಹೊಸ ವರ್ಷದ ರಜೆಗಳ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿ ಮತ್ತು ಹೊಸಪೇಟೆಯ ಪ್ರವಾಸಿ ತಾಣಗಳು ಜನಜಂಗುಳಿಯಿಂದ ತುಂಬಿಹೋಗಿವೆ. ಪ್ರವಾಸಿಗರ ದಟ್ಟಣೆಯಿಂದಾಗಿ ಹೋಟೆಲ್ ದರಗಳು ಗಗನಕ್ಕೇರಿದ್ದು, ವಿರೂಪಾಕ್ಷ ದೇವಾಲಯ, ಟಿಬಿ ಡ್ಯಾಂನಂತಹ ಸ್ಥಳಗಳು ಪ್ರವಾಸಿಗರಿಂದ ಕಂಗೊಳಿಸುತ್ತಿವೆ.
Read Full Story
05:17 PM (IST) Dec 28

Karnataka News Live 28 December 2025Amruthadhaare Serial - ದೇಶಾಂತರ ಹೋಗುತ್ತಿದ್ದ ಭೂಮಿಗೆ ಮಹಾಸತ್ಯ ಗೊತ್ತಾಯ್ತು; ಈಗಿದೆ ರಣರೋಚಕ ಟ್ವಿಸ್ಟ್

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ಕುತಂತ್ರಕ್ಕೆ ಬಲಿಯಾದ ಭೂಮಿಕಾ ದೇಶಾಂತರ ಹೋಗುವ ಆಲೋಚನೆಯಲ್ಲಿದ್ದಾಳೆ. ಹೀಗಿರುವಾಗ ಅವಳಿಗೆ ಮಹಾಸತ್ಯವೊಂದು ಗೊತ್ತಾಗಿದ್ದು, ಸೀರಿಯಲ್‌ ಕಥೆಗೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದೆ.

Read Full Story
04:56 PM (IST) Dec 28

Karnataka News Live 28 December 2025ಶಿವಮೊಗ್ಗ 22 ವರ್ಷದ ಸುಖ ಸಂಸಾರಕ್ಕೆ ಹುಳಿ ಹಿಂಡಿದ ಸ್ನೇಹಿತ; ಆಪ್ತನೆಂದು ಮನೆಗೆ ಕರ್ಕೊಂಡು ಹೋದರೆ...?

ಶಿವಮೊಗ್ಗದಲ್ಲಿ, 22 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು, ತನ್ನ ಪತಿಗೆ ರಹಸ್ಯವಾಗಿ ವಿಚ್ಛೇದನ ನೀಡಿ ಆತನ ಆಪ್ತ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ಈ ವಿಷಯ ತಿಳಿದು ಆಕ್ರೋಶಗೊಂಡ ಮೊದಲ ಪತಿ, ತನ್ನ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story
04:48 PM (IST) Dec 28

Karnataka News Live 28 December 20252 ವರ್ಷದ ಬಳಿಕ ಒಂದೇ ವೇದಿಕೆಯಲ್ಲಿ ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್; ಇಷ್ಟುದಿನ ಮನಸ್ತಾಪವಿತ್ತಾ?

ಬಿಗ್‌ ಬಾಸ್‌ ಕನ್ನಡ 10 ಶೋನಲ್ಲಿ ಕಾರ್ತಿಕ್‌ ಮಹೇಶ್‌, ಸಂಗೀತಾ ಶೃಂಗೇರಿ, ವಿನಯ್‌ ಗೌಡ ಮಧ್ಯೆ ಸಾಕಷ್ಟು ಜಗಳಗಳು ಆಗಿದ್ದವು. ದೊಡ್ಮನೆಯಿಂದ ಹೊರಗಡೆ ಬಂದ್ಮೇಲೆ ಎಲ್ಲರೂ ಎಲ್ಲರ ಜೊತೆ ಮಾತನಾಡುತ್ತಿದ್ದರೂ ಕೂಡ ಸಂಗೀತಾ, ಕಾರ್ತಿಕ್‌ ಮಾತನಾಡಿರೋದನ್ನು ಯಾರೂ ನೋಡಿರಲಿಲ್ಲ, ಒಂದೇ ಕಡೆ ಕಾಣಿಸಿರಲಿಲ್ಲ.

Read Full Story
04:36 PM (IST) Dec 28

Karnataka News Live 28 December 2025ಆಸ್ತಿಗಾಗಿ ಹಡೆದ ತಾಯಿಯನ್ನೇ ರಕ್ತಸಿಕ್ತಗೊಳಿಸಿದ ಮಗ - ಮಗನ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ!

ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ ಆಸ್ತಿ ಮತ್ತು ಹಣದ ವ್ಯಾಮೋಹಕ್ಕೆ ಬಿದ್ದ ಮಗನೊಬ್ಬ, ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಗೆ ಪೀಡಿಸಿ ದೊಣ್ಣೆಯಿಂದ ಭೀಕರವಾಗಿ ಹಲ್ಲೆ. ತಾಯಿಯನ್ನು ರಕ್ಷಿಸಲು ಬಂದ ನಾದಿನಿಯ ಮೇಲೂ ದಾಳಿ ನಡೆಸಿದ್ದು, ಈ ಅಮಾನವೀಯ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read Full Story