MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಶಿವಮೊಗ್ಗ: 22 ವರ್ಷದ ಸುಖ ಸಂಸಾರಕ್ಕೆ ಹುಳಿ ಹಿಂಡಿದ ಸ್ನೇಹಿತ; ಆಪ್ತನೆಂದು ಮನೆಗೆ ಕರ್ಕೊಂಡು ಹೋದರೆ...?

ಶಿವಮೊಗ್ಗ: 22 ವರ್ಷದ ಸುಖ ಸಂಸಾರಕ್ಕೆ ಹುಳಿ ಹಿಂಡಿದ ಸ್ನೇಹಿತ; ಆಪ್ತನೆಂದು ಮನೆಗೆ ಕರ್ಕೊಂಡು ಹೋದರೆ...?

ಶಿವಮೊಗ್ಗದಲ್ಲಿ, 22 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು, ತನ್ನ ಪತಿಗೆ ರಹಸ್ಯವಾಗಿ ವಿಚ್ಛೇದನ ನೀಡಿ ಆತನ ಆಪ್ತ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ಈ ವಿಷಯ ತಿಳಿದು ಆಕ್ರೋಶಗೊಂಡ ಮೊದಲ ಪತಿ, ತನ್ನ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

1 Min read
Sathish Kumar KH
Published : Dec 28 2025, 04:56 PM IST
Share this Photo Gallery
  • FB
  • TW
  • Linkdin
  • Whatsapp
16
ಹೊಸ ಗಂಡ, ಹಳೆ ಹೆಂಡ್ತಿ
Image Credit : Asianet News

ಹೊಸ ಗಂಡ, ಹಳೆ ಹೆಂಡ್ತಿ

ಶಿವಮೊಗ್ಗ (ಡಿ.28): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಿನಿಮಾ ಕಥೆಯನ್ನೂ ಮೀರಿಸುವಂತಹ ವಿಚಿತ್ರ ಘಟನೆಯೊಂದು ಜರುಗಿದೆ. ತನ್ನ ಪತ್ನಿ ತನಗೆ ತಿಳಿಯದಂತೆ ವಿಚ್ಛೇದನ ಪಡೆದು, ತನ್ನದೇ ಆಪ್ತ ಸ್ನೇಹಿತನನ್ನು ಮದುವೆಯಾದ ವಿಷಯ ತಿಳಿದ ಪತಿ, ಆಕ್ರೋಶಗೊಂಡು ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

26
ವಿಕ್ರಂ ಮತ್ತು ಆತನ ಪತ್ನಿ
Image Credit : Asianet News

ವಿಕ್ರಂ ಮತ್ತು ಆತನ ಪತ್ನಿ

ನಗರದ ಮಿಳ್ಳಘಟ್ಟ ಬಡಾವಣೆಯ ನಿವಾಸಿ ವಿಕ್ರಂ ಮತ್ತು ವಿನೋದ್ ಖಾಸಗಿ ಲಾರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಪ್ತ ಸ್ನೇಹಿತರು. ವಿಕ್ರಂಗೆ ಛಾಯಾ ಎಂಬಾಕೆಯೊಂದಿಗೆ 22 ವರ್ಷಗಳ ದಾಂಪತ್ಯ ಜೀವನವಿತ್ತು. ಇವರಿಗೆ 18 ವರ್ಷದ ಮಗ ಹಾಗೂ 14 ವರ್ಷದ ಮಗಳಿದ್ದಾರೆ. ವಿನೋದ್ ಒಳ್ಳೆಯ ಸ್ನೇಹಿತನಾಗಿದ್ದ ಕಾರಣ ಆಗಾಗ್ಗೆ ವಿಕ್ರಂ ಮನೆಗೆ ಬಂದು ಹೋಗುತ್ತಿದ್ದನು.

Related Articles

Related image1
Bengaluru: ಹೆಂಡ್ತಿ ಮಸಾಜ್ ಕೆಲಸಕ್ಕೆ ಮಸಣ ಸೇರಿಸಿದ ಮೂರನೇ ಗಂಡ! ಡೆಡ್ಲಿ ಮರ್ಡರ್ ಗೆ ಬೆಚ್ಚಿಬಿದ್ದ ರಾಜಧಾನಿ
Related image2
ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; 'ಯಾರಿಗೆ ಬೇಕು ಈ ಲೋಕ'ವೆಂದು ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ!
36
ವಿಕ್ರಂನಿಂದ ಡಿವೋರ್ಸ್
Image Credit : Asianet News

ವಿಕ್ರಂನಿಂದ ಡಿವೋರ್ಸ್

ಈ ವೇಳೆ ವಿನೋದ್ ಮತ್ತು ಛಾಯಾ ನಡುವೆ ಪ್ರೇಮಾಂಕುರವಾಗಿತ್ತು. ಇದು ವಿಕ್ರಂ ಗಮನಕ್ಕೆ ಬರುವ ಮೊದಲೇ ಛಾಯಾ ಎರಡು ತಿಂಗಳ ಹಿಂದೆ ರಹಸ್ಯವಾಗಿ ಗಂಡನಿಂದ ವಿಚ್ಛೇದನ ಪಡೆದಿದ್ದಳು. ಕಳೆದೆರಡು ವಾರಗಳ ಹಿಂದೆಯಷ್ಟೇ ಆಕೆ ತನ್ನ ಮೊದಲ ಪತಿಯ ಸ್ನೇಹಿತ ವಿನೋದ್‌ನನ್ನು ಮದುವೆಯಾಗಿದ್ದಳು.

46
ಆರೋಪಿ ವಿಕ್ರಂ
Image Credit : Asianet News

ಆರೋಪಿ ವಿಕ್ರಂ

ತನ್ನ ಪತ್ನಿ ತನಗೆ ಮೋಸ ಮಾಡಿ ಸ್ನೇಹಿತನನ್ನು ಮದುವೆಯಾಗಿದ್ದಾಳೆ ಎಂಬ ವಿಷಯ ತಿಳಿದ ವಿಕ್ರಂ ರೊಚ್ಚಿಗೆದ್ದಿದ್ದನು. ನಿನ್ನೆ ಸಂಜೆ ವಿನೋದ್ ಮನೆಗೆ ಹೋದಾಗ ಅಲ್ಲಿ ಪತ್ನಿ ಛಾಯಾ ಕಾಣಿಸಿದ್ದಾಳೆ. ಬಳಿಕ ವಿನೋದ್‌ಗೆ ಕರೆ ಮಾಡಿದಾಗ ಎಲ್ಲಿದ್ದಾನೆಂದು ತಿಳಿಸದುಕೊಂಡಿದ್ದಾನೆ. 

ನಂತರ ವಿನೋದ್ ಮಲವಗೊಪ್ಪದ ಪೆಟ್ರೋಲ್ ಬಂಕ್ ಬಳಿ ಇರುವುದನ್ನು ತಿಳಿದ ವಿಕ್ರಂ, ಅಲ್ಲಿಗೆ ತೆರಳಿ ಜಗಳ ತೆಗೆದಿದ್ದಾನೆ. ಈ ವೇಳೆ ತೀವ್ರ ಕೋಪಗೊಂಡಿದ್ದ ವಿಕ್ರಂ, ವಿನೋದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

56
ಗಾಯಾಳು ವಿನೋದ್‌ಗೆ ಚಿಕಿತ್ಸೆ
Image Credit : Asianet News

ಗಾಯಾಳು ವಿನೋದ್‌ಗೆ ಚಿಕಿತ್ಸೆ

ತೀವ್ರವಾಗಿ ಗಾಯಗೊಂಡ ವಿನೋದ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯ MICU ವಿಭಾಗದಲ್ಲಿರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

66
ವಿಕ್ರಂಗೆ ಸಹಕರಿಸಿದ ಜಗನ್ನಾಥ್
Image Credit : Asianet News

ವಿಕ್ರಂಗೆ ಸಹಕರಿಸಿದ ಜಗನ್ನಾಥ್

ಪ್ರಕರಣದ ಮುಖ್ಯ ಆರೋಪಿ ವಿಕ್ರಂ ಮತ್ತು ಆತನಿಗೆ ಸಹಕರಿಸಿದ ಜಗನ್ನಾಥ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. 22 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅನೈತಿಕ ಸಂಬಂಧದಿಂದ ಬೆಂಕಿ ಬಿದ್ದಿರುವುದು ಮಲೆನಾಡಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಶಿವಮೊಗ್ಗ
ಕರ್ನಾಟಕ ಸುದ್ದಿ
ಪತ್ನಿ
ಗಂಡ

Latest Videos
Recommended Stories
Recommended image1
ಬೆಂಗಳೂರಿನಲ್ಲಿ ₹500 ಬರೀ 50 ರೂಪಾಯಿ ಇದ್ದಂಗೆ, ಈ ಸಿಟಿ ಯಾಕಿಷ್ಟು ಕಾಸ್ಟ್ಲಿ?; ಯುವತಿಯ ವಿಡಿಯೋ ವೈರಲ್!
Recommended image2
ಆಸ್ತಿಗಾಗಿ ಹಡೆದ ತಾಯಿಯನ್ನೇ ರಕ್ತಸಿಕ್ತಗೊಳಿಸಿದ ಮಗ: ಮಗನ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ!
Recommended image3
ಶಾಸಕ ರಾಜು ಕಾಗೆ ಕಾರು, ಪುತ್ರಿಯದ್ದೇ ಕಾರುಬಾರು; ಜನಸೇವೆಗೆ ಕೊಟ್ಟ ಸರ್ಕಾರದ ಕಾರಿನಲ್ಲಿ ಖಾಸಗಿ ಸಂಚಾರ
Related Stories
Recommended image1
Bengaluru: ಹೆಂಡ್ತಿ ಮಸಾಜ್ ಕೆಲಸಕ್ಕೆ ಮಸಣ ಸೇರಿಸಿದ ಮೂರನೇ ಗಂಡ! ಡೆಡ್ಲಿ ಮರ್ಡರ್ ಗೆ ಬೆಚ್ಚಿಬಿದ್ದ ರಾಜಧಾನಿ
Recommended image2
ಗಂಡ ಇಷ್ಟ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; 'ಯಾರಿಗೆ ಬೇಕು ಈ ಲೋಕ'ವೆಂದು ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved