09:11 PM (IST) Apr 19

Karnataka News Live:ಮಹಿಳಾ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ಸನ್ನು ದೇಶದ ಜನ ಕ್ಷಮಿಸಲ್ಲ - ಆರ್‌.ಅಶೋಕ್‌

ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್‌ ಪಕ್ಷವನ್ನು ಈ ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

Read Full Story
08:53 PM (IST) Apr 19

Karnataka News Live:ಮಾಜಿ ಪ್ರಧಾನಿ ದೇವೇಗೌಡರಿಗೆ 1.25 ಕೋಟಿ ರೂ ಕಾರು ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಗೆ

ಮಾಜಿ ಪ್ರಧಾನಿ ದೇವೇಗೌಡರಿಗೆ 1.25 ಕೋಟಿ ರೂ ಕಾರು ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಗೆ, ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ. ದೇವೇಗೌಡರಿಗೆ ಸರ್ಕಾರ ನೀಡುತ್ತಿರುವ ಕಾರು ಯಾವುದು?

Read Full Story
07:41 PM (IST) Apr 19

Karnataka News Live:ಅಕ್ಷಯ ತೃತೀಯಕ್ಕೆ 'ಗೋಲ್ಡನ್ ಗರ್ಲ್' ರಶ್ಮಿಕಾ ಮಂದಣ್ಣ ಮಿಂಚು - ಹಳದಿ-ಚಿನ್ನದ ಲುಕ್ ವೈರಲ್

ಈ ಹಬ್ಬದ ಸೀಸನ್‌ನಲ್ಲಿ ರಶ್ಮಿಕಾ ಮಂದಣ್ಣ ಹಳದಿ ಮತ್ತು ಗೋಲ್ಡನ್ ಬಣ್ಣದ ಉಡುಗೆಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದು ಅವರ 'ಗೋಲ್ಡನ್ ಗರ್ಲ್' ಇಮೇಜ್‌ಗೆ ಮತ್ತಷ್ಟು ಮೆರುಗು ನೀಡಿದೆ. ಸಿನಿರಂಗದಲ್ಲಿ ಅವರ ಯಶಸ್ಸು ಮತ್ತು ಅಭಿಮಾನಿಗಳಲ್ಲಿ ಹೆಚ್ಚುತ್ತಿರುವ ಅವರ ಕ್ರೇಜ್‌ಗೆ ಇದು ಕನ್ನಡಿ ಹಿಡಿದಂತಿದೆ.
Read Full Story
07:19 PM (IST) Apr 19

Karnataka News Live:Toothbrush Hygiene - ಟೂತ್‌ಬ್ರಷ್ ಯಾವಾಗ ಬದಲಿಸಬೇಕು? ಈ ತಪ್ಪು ಮಾಡಿದ್ರೆ ಅಪಾಯ ಗ್ಯಾರಂಟಿ!

ನಾವು ಪ್ರತಿದಿನ ಬಳಸೋ ಟೂತ್‌ಬ್ರಷ್‌ನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಅದರಲ್ಲೂ ಬಾತ್‌ರೂಮ್‌ನಲ್ಲಿ ಬ್ರಷ್ ಇಡುವುದರಿಂದ ಈ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಿದ್ರೆ ಬ್ರಷ್ ಯಾವಾಗ ಬದಲಿಸಬೇಕು?

Read Full Story
06:58 PM (IST) Apr 19

Karnataka News Live:Amruthadhaare Serial - ‌ ಚೆನ್ನಾಗಿ ತಿರುಗಿಸಿ ಕೊಟ್ಟ ಕರ್ಮ; ಎಲ್ಲಿ ಬಿದ್ನೋ ಅಲ್ಲೇ ಎದ್ದ ಗೌತಮ್‌ ದಿವಾನ್!

Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಕಥೆ ಈಗ ನಿಜಕ್ಕೂ ರೋಚಕ ಘಟ್ಟಕ್ಕೆ ಬಂದಿದೆ. ಉದ್ಯಮಿ ಗೌತಮ್ ದಿವಾನ್ ತನ್ನ ಎಲ್ಲ ಆಸ್ತಿಯನ್ನು ಮಲಸಹೋದರ ಜಯದೇವ್‌ ದಿವಾನ್‌ಗೆ ನೀಡಿದ್ದನು. ಈಗ ಅವನು ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾನೆ. ಅವನು ತನ್ನ ಆಸ್ತಿಯನ್ನು ಮರಳಿ ಪಡೆಯುವ ಹಾಗೆ ಕಾಣ್ತಿದೆ.

Read Full Story
06:53 PM (IST) Apr 19

Karnataka News Live:ಬೇಸಿಗೆಯಲ್ಲಿ ಇಡ್ಲಿ-ದೋಸೆ ಹಿಟ್ಟು ಹುಷಾರ್​ - ಬೆಂಗಳೂರಿನ 97 ನೌಕರರು ಅಸ್ವಸ್ಥ- ಆಹಾರ ತಜ್ಞರು ಹೇಳೋದೇನು?

ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿ ಇಡ್ಲಿ, ದೋಸೆ ಸೇವಿಸಿ 97 ಉದ್ಯೋಗಿಗಳು ಅಸ್ವಸ್ಥರಾದ ಘಟನೆಯ ಹಿನ್ನೆಲೆಯಲ್ಲಿ, ಬೇಸಿಗೆಯಲ್ಲಿ ಹುದುಗಿಸಿದ ಆಹಾರಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ತಾಪಮಾನವು ಹುದುಗುವಿಕೆ ಪ್ರಕ್ರಿಯೆಯನ್ನು ವೇಗಗೊಳಿಸಿ, ಬ್ಯಾಕ್ಟೀರಿಯಾ ಮಾಲಿನ್ಯಕ್ಕೆ ಕಾರಣವಾಗಿ ಆಹಾರ ವಿಷವಾಗುವ ಸಾಧ್ಯತೆಗಳಿವೆ ಎಂದು ಅವರು ವಿವರಿಸಿದ್ದಾರೆ.
Read Full Story
06:21 PM (IST) Apr 19

Karnataka News Live:ಫೇಸ್ ಯೋಗಾ ವಿಡಿಯೋಗೆ ಟ್ರೋಲ್ ಆದ ಪಾರ್ವತಿ ಕೃಷ್ಣ ಯಾರು? ಇಲ್ಲಿದೆ ಉತ್ತರ

ಫೇಸ್ ಯೋಗಾದಿಂದ ಮುಖದ ಸ್ವರೂಪ ಬದಲಿಸಬಹುದು ಎಂದು ಹೇಳಿದ್ದಕ್ಕೆ ನಟಿ ಪಾರ್ವತಿ ಕೃಷ್ಣ ಟ್ರೋಲ್ ಆಗಿದ್ದಾರೆ. ಇದಕ್ಕೆ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ಅವರು, ತಮ್ಮ ತರಬೇತಿ ಮತ್ತು ಸರ್ಟಿಫಿಕೇಶನ್ ಬಗ್ಗೆ ಹೇಳಿ ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

Read Full Story
06:17 PM (IST) Apr 19

Karnataka News Live:ಯಶ್‌ TO ದೀಪಿಕಾ ಪಡುಕೋಣೆ; 2 ವರ್ಷದೊಳಗೆ 'ಬ್ಯಾಕ್ ಟು ಬ್ಯಾಕ್' ಮಗು; ಸೆಲೆಬ್ರಿಟಿಗಳ ಅವಸರದ ಹಿಂದಿದೆ ಬಲವಾದ ಕಾರಣ

Why celebrities have babies close together: ನಟ ಯಶ್‌ರಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ಸೆಲೆಬ್ರಿಟಿಗಳು ಮೊದಲ ಮಗು ಹುಟ್ಟಿದ ಎರಡು ವರ್ಷದೊಳಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಕೆಲವರಿಗೆ ಇದೆಲ್ಲ ಟ್ರೆಂಡ್‌ ಎನಿಸಬಹುದು. ಇದರ ಹಿಂದೆ ಬೇರೆ ಕಾರಣ ಇವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Read Full Story
05:31 PM (IST) Apr 19

Karnataka News Live:ಹಗಲಿಗಿಂತ ರಾತ್ರಿಯಲ್ಲಿ ಯಾಕೆ ಟ್ರೇನ್‌ ರಾಕೆಟ್‌ ವೇಗದಲ್ಲಿ ಓಡುತ್ತೆ! ನಿಮಗೆ ಗೊತ್ತೇ ಇಲ್ಲದ ರಹಸ್ಯವಿದು!

Why trains are faster at night: ಹಗಲಿಗಿಂತ ರಾತ್ರಿ ಹೊತ್ತು ರೈಲು ಹೆಚ್ಚು ವೇಗವಾಗಿ ಚಲಿಸಿದಂತೆ ಭಾಸವಾಗಲು ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದು ದೃಷ್ಟಿ ಭ್ರಮೆ, ಎರಡನೆಯದು ಸ್ಪಷ್ಟ ಸಿಗ್ನಲ್‌ಗಳು ಮತ್ತು ಮೂರನೆಯದು ಖಾಲಿ ಟ್ರ್ಯಾಕ್‌ಗಳು. ಈ ಕುತೂಹಲಕಾರಿ ಕಾರಣಗಳು ಏನು? 

Read Full Story
05:19 PM (IST) Apr 19

Karnataka News Live:ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್‌ಪಿ; ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?

ಜವರಪ್ಪ ಎಂಬುವವರ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿತ್ತು. 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು, ಮೃತನ ಪತ್ನಿ ಅಮೃತಾ ಹಾಗೂ ಆಕೆಯ ಪ್ರಿಯಕರ ಸಿದ್ದೇಶ್ ಈ ಕೃತ್ಯದ ಹಿಂದಿದ್ದಾರೆ ಎಂದು ಪತ್ತೆಹಚ್ಚಿದ್ದಾರೆ. ಆರೋಪಿ ಸಿದ್ದೇಶ್‌ನನ್ನು ಬಂಧಿಸಲಾಗಿದೆ.

Read Full Story
05:09 PM (IST) Apr 19

Karnataka News Live:Photos - ಸೀರಿಯಲ್ ಮದುವೆಯಾಯ್ತು, ರಿಯಲ್‌ ಆಗಿ ಹಸೆಮಣೆ ಏರಲು ರೆಡಿಯಾದ ಪ್ರೇಮಕಾವ್ಯ ಧಾರಾವಾಹಿ ನಟಿ!

Actress Shreya Malatesh: ಇತ್ತೀಚೆಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಶ್ರೇಯಾ ಮಾಲತೇಶ್‌ ಅವರು ಸದ್ಯ ಪ್ರೇಮಕಾವ್ಯ ಸೀರಿಯಲ್‌ನಲ್ಲಿ ಪಂಚಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಸೀರಿಯಲ್‌ ಟೀಂ ಜೊತೆಗೆ ಬ್ಯಾಚುಲರ್‌ ಪಾರ್ಟಿ ಮಾಡಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ. 

Read Full Story
04:19 PM (IST) Apr 19

Karnataka News Live:ಮುದ್ದಾದ ಮೂರು ಮಕ್ಕಳ ಜೊತೆಗೆ ವಿದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆದ ಪತ್ನಿ; ಏಕಾಂಗಿಯಾದ ಕಿರುತೆರೆ ನಟ

Actor Karanvir Bohra Wife Teejay Sidhu: ನಟ ಕರಣ್‌ ವೀರ್‌ ಬೊಹ್ರಾ, ಅವರ ಪತ್ನಿ ತೀಜಯ್ ಸಿಧು ಸದ್ಯ ದೂರ ಇರುವುದು‌ ಸಾಕಷ್ಟು ಅನುಮಾನ ಮೂಡಿಸಿದೆ. ಬಾಲಿವುಡ್‌ನಲ್ಲಿ ಧಾರಾವಾಹಿ, ಸಿನಿಮಾ ಮಾಡುತ್ತಿರುವ ಕರಣ್‌ ವೀರ್‌ ಬೊಹ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿಯನ್ನು ಕೂಡ ಫಾಲೋ ಮಾಡ್ತಿಲ್ಲ.

Read Full Story
03:57 PM (IST) Apr 19

Karnataka News Live:ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದ ಸ್ಯಾಂಡಲ್‌ವುಡ್ ಖ್ಯಾತ ಹೀರೋ ಪುತ್ರ ಹರುಷ್

Saregamapa Lil Champs ಖ್ಯಾತ ನಟನ ಪುತ್ರ ಹರುಷ್, ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಮಗನಿಗೆ ತನ್ನಂತೆ 'ನಟನ ಮಗ' ಎಂಬ ಲೇಬಲ್ ಬೇಡ, ಬದಲಿಗೆ ಮಗನಿಂದ ತಾನು ಗುರುತಿಸಿಕೊಳ್ಳಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

Read Full Story
03:35 PM (IST) Apr 19

Karnataka News Live:40ನೇ ವಯಸ್ಸಿಗೆ ರಾಯಲ್‌ ಮದುವೆ ಆಯ್ತು, 2 ವರ್ಷಕ್ಕೆ ಪತ್ನಿಯಿಂದ ದೂರವಾದ್ರಾ ಸ್ಟಾರ್‌ ನಟ? ಛೇ....!

ತೆಲುಗು ನಟ ಶರ್ವಾನಂದ್ (Sharwanand) ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಯಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ಮದುವೆಯ ಫೋಟೋಗಳನ್ನು ಕೂಡ ಅವರು ಡಿಲಿಟ್‌ ಮಾಡಿದ್ದಾರೆ. 

Read Full Story
03:21 PM (IST) Apr 19

Karnataka News Live:ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ

ಗಜೇಂದ್ರಗಡದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಥರ್ಡ್ ಐ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು, ಕೆಲ ವಾಹನ ಸವಾರರು ತಮ್ಮ ನೋಂದಣಿ ಸಂಖ್ಯೆಯನ್ನು ಮರೆಮಾಚುತ್ತಿದ್ದಾರೆ ಅಥವಾ ನಂಬರ್ ಪ್ಲೇಟ್‌ಗಳನ್ನೇ ತೆಗೆದುಹಾಕುತ್ತಿದ್ದಾರೆ.

Read Full Story
03:20 PM (IST) Apr 19

Karnataka News Live:ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು - ಪೋಷಕರಿಂದ ಕೊಲೆ ಆರೋಪ

ದಾವಣಗೆರೆಯಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ಕಾವ್ಯ ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿಯ ಅಕ್ರಮ ಸಂಬಂಧದ ಸಾಕ್ಷ್ಯ ಸಂಗ್ರಹಿಸಿದ್ದ ಆಕೆಯನ್ನು, ಪತಿಯೇ ಹಣಕ್ಕಾಗಿ ಪೀಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತರ ಪೋಷಕರು ಆರೋಪಿಸಿ, ದೂರು ದಾಖಲಿಸಿದ್ದಾರೆ.
Read Full Story
03:00 PM (IST) Apr 19

Karnataka News Live:Mysuru - ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ

ಮೈಸೂರಿನ ಪಬ್‌ನಲ್ಲಿ ವೀಕೆಂಡ್ ಪಾರ್ಟಿ ಮುಗಿಸಿ ಹೊರಬರುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 32 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಪಬ್‌ನ ಎರಡನೇ ಮಹಡಿಯಿಂದ ತಳ್ಳಲ್ಪಟ್ಟ ಪರಿಣಾಮವಾಗಿ, ನಿಶಾಂತ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Read Full Story
01:05 PM (IST) Apr 19

Karnataka News Live:Thalapathy Vijay - ಸ್ಫೋಟಕ ವಿಷಯ ಬಯಲು ಮಾಡಲು ಮುಹೂರ್ತ ಇಟ್ಟ ದಳಪತಿ ವಿಜಯ್‌ ಪತ್ನಿ ಸಂಗೀತಾ!

Thalapathy Vijay Wife Sangeetha Marriage: ನಟ ವಿಜಯ್‌ಗೆ ಇನ್ನೊಬ್ಬ ನಟಿಯೊಂದಿಗೆ ಸಂಬಂಧವಿದೆ ಮತ್ತು ಅವರೊಂದಿಗೆ ವಿದೇಶದಲ್ಲಿ ಸುತ್ತಾಡಿದ್ದಾರೆ ಎಂದು ಆರೋಪಿಸಿ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.

Read Full Story
12:36 PM (IST) Apr 19

Karnataka News Live:ಯಾದಗಿರಿ ಖಾಸಗಿ ಬಸ್ ಅಗ್ನಿ ದುರಂತ - 20 ಜೀವ ಉಳಿಸಿದ ಆಪದ್ಬಾಂಧವ ಉಮೇಶ್ ಬಿರಾದಾರ್ ಕಥೆ

ಯಾದಗಿರಿಯಲ್ಲಿ ನಡೆದ ಖಾಸಗಿ ಬಸ್ ಮತ್ತು ಕಾರ್ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಇದೇ ಬಸ್‌ನಲ್ಲಿದ್ದ ಪ್ರಯಾಣಿಕ ಉಮೇಶ ಬಿರಾದಾರ್, ತಮ್ಮ ಪ್ರಾಣ ಪಣಕ್ಕಿಟ್ಟು ಬಸ್‌ನಲ್ಲಿದ್ದ 20 ಜನರನ್ನು ಹಾಗೂ ಕಾರಿನಲ್ಲಿದ್ದ ಏಕೈಕ ಬಾಲಕನನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
Read Full Story
12:35 PM (IST) Apr 19

Karnataka News Live:IPL 2026 - ಸೋಲಿನ ಬೆನ್ನಲ್ಲೇ CSKಗೆ ಮತ್ತೊಂದು ಶಾಕ್ - ಯುವ ಆಟಗಾರನಿಗೆ ಗಂಭೀರ ಗಾಯ, 19ನೇ ಸೀಸನ್‌ನಿಂದಲೇ ಔಟ್?

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ ಕಾಲಿನ ಸ್ನಾಯು ಸೆಳೆತದಿಂದ ಗಾಯಗೊಂಡಿದ್ದು, ಮುಂದಿನ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸಿಎಸ್‌ಕೆಗೆ ಇದು ದೊಡ್ಡ ನಷ್ಟವಾಗಿದೆ.
Read Full Story