Mysuru: ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ
ಮೈಸೂರಿನ ಪಬ್ನಲ್ಲಿ ವೀಕೆಂಡ್ ಪಾರ್ಟಿ ಮುಗಿಸಿ ಹೊರಬರುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 32 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಪಬ್ನ ಎರಡನೇ ಮಹಡಿಯಿಂದ ತಳ್ಳಲ್ಪಟ್ಟ ಪರಿಣಾಮವಾಗಿ, ನಿಶಾಂತ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸಾವಿನಲ್ಲಿ ಅಂತ್ಯವಾದ ಗಲಾಟೆ
ವೀಕೆಂಡ್ ಪಾರ್ಟಿ ಅಂತ ಸ್ನೇಹಿತರ ಜೊತೆ ಪಬ್ಗೆ ಹೋಗಿದ್ದ 32 ವರ್ಷದ ಟೆಕ್ಕಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಕುಡಿದು ಬಿಲ್ ಕಟ್ಟಿ ಹೊರ ಬರುವ ವೇಳೆ ಯುವಕರ ಗುಂಪಿನಲ್ಲಿ ಗಲಾಟೆಯಾಗಿದೆ. ಈ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ.
ಎರಡು ಗುಂಪಿನ ನಡುವೆ ಗಲಾಟೆ
ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪಿನ ನಡುವೆ ನಡೆದ ಗಲಾಟೆ ಯುವಕನ ಸಾವಿನಲ್ಲಿ ಅಂತ್ಯವಾದ ಘಟನೆ ಮೈಸೂರಿನ ವಿಜಯನಗರ ಎರಡನೇ ಹಂತದ ಪರ್ಪಲ್ ಹೆಜ್ ರೆಸ್ಟೋರೆಂಟ್ನಲ್ಲಿ ನಡೆದಿದೆ. ಗೋಕುಲಂ ನಿವಾಸಿ ನಿಶಾಂತ್ (32) ಕೊಲೆಯಾದ ದುರ್ದೈವಿ. ವಿಜಯ ನಗರ ನಿವಾಸಿ ಟ್ಯಾಂಕ್ ರಾಕಿ ಸಹಚರರಿಂದ ನಿಶಾಂತ್ ಕೊ*ಲೆ ಆಗಿರುವ ಆರೋಪ ಕೇಳಿ ಬಂದಿದೆ.
ಕ್ಷುಲ್ಲಕ ವಿಚಾರಕ್ಕೆ ಗಲಾಟೆ
ಪಬ್ ನಲ್ಲಿ ಪಾರ್ಟಿ ಮುಗಿಸಿ ಹೊರಬರುವಾಗ ಕೈ ತಾಕಿದ ವಿಚಾರಕ್ಕೆ ಗಲಾಟೆ ನಡೆದಿದೆ. ಮೃತ ನಿಶಾಂತ್, ಸಂದೀಪ್, ದೀಕ್ಷಿತ್ ಮೂವರು ಸ್ನೇಹಿತರಿಂದ ಪಬ್ ನಲ್ಲಿ ಪಾರ್ಟಿ ಮಾಡಿ ಹೊರ ಬರುವ ವೇಳೆ ಟ್ಯಾಂಕ್ ರಾಕಿ ಸಹಚರರು ಎದುರಾಗಿದ್ದರು. ಆಗ ಕ್ಷುಲ್ಲಕ ವಿಚಾರಕ್ಕೆ ನಿಶಾಂತ್ ಸ್ನೇಹಿತರು ಟ್ಯಾಂಕ್ ರಾಕಿ ಸಹಚರರ ನಡುವೆ ಗಲಾಟೆಯಾಗಿದೆ. ಈ ವೇಳೆ ಪಬ್ ನ ಎರಡನೇ ಮಹಡಿಯಿಂದ ನಿಶಾಂತ್ ತಳ್ಳಿದ್ದಾರೆ. ಕೆಳಗೆ ಬಿದ್ದ ನಿಶಾಂತ್ ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ ನಿಶಾಂತ್
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನೀಯರ್ ಆಗಿದ್ದ ಮೃತ ನಿಶಾಂತ್, ಮೈಸೂರಿನ ಗೋಕುಲಂನಲ್ಲಿ ವಾಸವಿದ್ದು, ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ. ರಾತ್ರಿ 9.30ರ ಸುಮಾರಿಗೆ ಊಟ ಮಾಡಿ, ಹೊರ ಬಂದ ನೀಶಾಂತ್ ಸ್ನೇಹಿತರ ಕರೆ ಬಂತು ಅಂತ ಪಬ್ಗೆ ಹೋಗಿದ್ದ. ತಡ ರಾತ್ರಿ ಮನೆಯವರಿವೆ ವಿಷಯ ತಿಳಿದಿದ್ದು, ಬರುವಷ್ಟರಲ್ಲಿ ಮಗನ ಪ್ರಾಣ ಹಾರಿ ಹೋಗಿದೆ.
ಇದನ್ನೂ ಓದಿ: 6 ನಿಮಿಷದ ಸೀನ್ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ
ಆರೋಪಿಗಳಿಗಾಗಿ ಹುಡುಕಾಟ
ಕೈ ತುಂಬಾ ಸಂಬಳ ಬರುವ ಒಳ್ಳೆ ಉದ್ಯೋಗ, ಸುಖ ಸಂಸಾರ ಎಲ್ಲವೂ ಇದ್ದ ಯುವಕ ಪಾರ್ಟಿ ಗುಂಗಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಎಸ್ಕೇಪ್ ಆಗಿರೋ ಆರೋಪಿಗಳಿಗಾಗಿ ವಿಜಯನಗರ ಪೊಲೀಸರಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜಪ್ತಿ ಮಾಡಿದ್ದ ಟ್ರಕ್ ರಿಲೀಸ್ಗೆ 55 ಲಕ್ಷಕ್ಕೆ ಬೇಡಿಕೆ : 10 ಲಕ್ಷ ಲಂಚ ಸ್ವೀಕರಿಸುತ್ತಿದ್ದ GST ಅಧಿಕಾರಿಗಳು ಎಸಿಬಿ ಬಲೆಗೆ

