MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದ ಸ್ಯಾಂಡಲ್‌ವುಡ್ ಖ್ಯಾತ ಹೀರೋ ಪುತ್ರ ಹರುಷ್

ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದ ಸ್ಯಾಂಡಲ್‌ವುಡ್ ಖ್ಯಾತ ಹೀರೋ ಪುತ್ರ ಹರುಷ್

Saregamapa Lil Champs ಖ್ಯಾತ ನಟನ ಪುತ್ರ ಹರುಷ್, ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಮಗನಿಗೆ ತನ್ನಂತೆ 'ನಟನ ಮಗ' ಎಂಬ ಲೇಬಲ್ ಬೇಡ, ಬದಲಿಗೆ ಮಗನಿಂದ ತಾನು ಗುರುತಿಸಿಕೊಳ್ಳಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

2 Min read
Author : Mahmad Rafik
Published : Apr 19 2026, 03:57 PM IST
Share this Photo Gallery
  • FB
  • TW
  • Linkdin
  • Whatsapp
15
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ
Image Credit : Zee Kannada FB

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪಕ್ಕೆ ಚಂದನವನದ ನಟನ ಪುತ್ರ ಹರುಷ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹರುಷ್ ಅವರ ತಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಖ್ಯಾತ ಧಾರವಾಹಿಯ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದರು. ವಿಷ್ಣುವರ್ಧನ್ ಸೇರಿದಂತೆ ಸ್ಟಾರ್ ನಟರೊಂದಿಗೆ ನಟಿಸಿದ್ದು, ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.

25
ಯಾರು ಆ ನಟ?
Image Credit : Zee Kannada FB

ಯಾರು ಆ ನಟ?

ನವಿಲೇ ಹೇ ನವಿಲೇ ಹಾಡು ಹೇಳಿ ಹರುಷ್ ಎಂಬ ಸ್ಪರ್ಧಿ ಆಯ್ಕೆಯಾಗುತ್ತಾರೆ. ತೀರ್ಪುಗಾರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಾಡುಗಳನ್ನು ಕೇಳಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿಯಲ್ಲಿಯೇ ಹರುಷ್ ಸಹ ಆಯ್ಕೆಯಾಗಿದ್ದರು. ಸ್ಪರ್ಧಿ ಆಯ್ಕೆ ಬಳಿಕ ಪೋಷಕರು ವೇದಿಕೆಗೆ ಬಂದಾಗ ತೀರ್ಪುಗಾರರು ಸಂತೋಷದಿಂದ ಶಾಕ್ ಆದರು.

Related Articles

Related image1
ಸರಿಗಮಪ ಫೈನಲಿಸ್ಟ್ ಇವರೇ… ಲಹರಿಗೆ ಸ್ಥಾನ ನೀಡದ ಶೋ ವಿರುದ್ಧ ವೀಕ್ಷಕರು ಗರಂ
Related image2
ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್
35
ನಿರ್ದೇಶಕ, ಗಾಯಕ, ಕಲಾವಿದ
Image Credit : Zee Kannada FB

ನಿರ್ದೇಶಕ, ಗಾಯಕ, ಕಲಾವಿದ

ಚಂದನವನದ ಕಲಾವಿದ ನವೀನ್ ಕೃಷ್ಣ ಅವರ ಪುತ್ರ ಹರುಷ್ ಇಂದು ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ. ಹರುಷ್ ಎಲ್ಲಾ ಸ್ಪರ್ಧಿಗಳಂತೆಯೇ ಮೊದಲಿನಿಂದಲೇ ಆಡಿಷನ್ ಕೊಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ನಿರೂಪಕಿ ಅನುಶ್ರೀ ಅವರು ಹೇಳುತ್ತಾರೆ. ನವೀನ್ ಕೃಷ್ಣ ಅವರ ನಿರ್ದೇಶನದ ಶ್ರೀ ರಾಘವೇಂದ್ರ ಮಹಾತ್ಮೆ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

45
ಹರುಷ್ ಸ್ಪರ್ಧೆಗೆ ನವೀನ್ ಕೃಷ್ಣ ಹೇಳಿದ್ದೇನು?
Image Credit : Zee Kannada FB

ಹರುಷ್ ಸ್ಪರ್ಧೆಗೆ ನವೀನ್ ಕೃಷ್ಣ ಹೇಳಿದ್ದೇನು?

ಮಗ ಹರುಷ್ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದಂತೆ ಮಾತನಾಡಿದ ನವೀನ್ ಕೃಷ್ಣ, ಈ ಹಿಂದೆ ಇಬ್ಬರು ಮಕ್ಕಳು ಸಹ ಆಡಿಷನ್ ಕೊಟ್ಟಿದ್ದರು. ಆದ್ರೆ ಇಬ್ಬರು ಆಯ್ಕೆಯಾಗಿರಲಿಲ್ಲ. ಇಂದು ಮಗ ಹರುಷ್ ಎಲ್ಲಾ ಸ್ಪರ್ಧಿಗಳಂತೆ ಇಲ್ಲಿಗೆ ಬಂದು ನಿಂತಿದ್ದಾನೆ. ಈ ವೇದಿಕೆಗೆ ಬರಬೇಕು ಅಂದ್ರೆ ತುಂಬಾ ಕಲಿಕೆ ಮತ್ತು ಶ್ರದ್ಧೆ ಬೇಕಾಗುತ್ತದೆ. ತಪಸ್ಸು ಮಾಡಿದ್ರೆ ಮಾತ್ರ ಈ ವೇದಿಕೆ ಸಿಗುತ್ತದೆ. ಮಗ ಆಯ್ಕೆಯಾಗಿರೋದಕ್ಕೆ ಖುಷಿಯಾಗ್ತಿದೆ ಎಂದು ನವೀನ್ ಕೃಷ್ಣ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ

55
ಮಗನಿಗೆ ನನ್ನಂತೆ ಆ ಲೇಬಲ್ ಬೇಡ
Image Credit : Zee Kannada FB

ಮಗನಿಗೆ ನನ್ನಂತೆ ಆ ಲೇಬಲ್ ಬೇಡ

ನಿರಂತರ ಅಭ್ಯಾಸದಿಂದ ಈಗ ಒಂದು ಹಂತಕ್ಕೆ ಹಾಡುತ್ತಿದ್ದಾನೆ. ಇಂದು ಸರಿಗಮಪ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾನೆ. ಆರು ವರ್ಷದ ಹಿಂದೆ ಇಬ್ಬರು ಅಡಿಷನ್‌ಗೆ ಹೋಗಿದ್ರು. ಆದ್ರೆ ಸೆಲೆಕ್ಟ್ ಆಗಿರಲಿಲ್ಲ. ನನಗೆ ಶ್ರೀನಿವಾಸ್ ಮೂರ್ತಿ ಅವರ ಮಗ ಎಂಬ ಲೇಬಲ್ ನನಗಿದೆ. ಆದ್ರೆ ಇವನಿಗೆ ನವೀನ್ ಕೃಷ್ಣ ಮಗ ಎಂಬ ಲೇಬಲ್ ಬರಬಾರದು. ಹರುಷ್ ತಂದೆ ನವೀನ್ ಕೃಷ್ಣ ಎಂದು ಜನರು ನನ್ನನ್ನು ಗುರುತಿಸಬೇಕು ಎಂದು ಹೇಳಿದರು.

ಇದನ್ನೂ ಓದಿ : ಮೈದುನನ ಜೊತೆ 14 ಸಿನಿಮಾ ನಟಿಸಿ ಹಿಟ್ ಆದ ನಟಿ; ಗಂಡನೊಂದಿಗೆ ಒಂದು ಮೂವಿ ಸಹ ಮಾಡಲಿಲ್ಲ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜೀ ಕನ್ನಡ
ರಿಯಾಲಿಟಿ ಶೋ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ನಿಧಾನ ಕೈ ಹಾಕಿದ, ಸುಮ್ನೆ ಬಿಡ್ತಿನಾ? ಬಸ್​ನಲ್ಲಿ ನಡೆದ ಕರಾಳ ಘಟನೆ ನೆನೆದ Bigg Boss ರಿಷಾ ಗೌಡ
Recommended image2
ಆದಿ ಬ್ರೋ, ವೇಟ್​ ವೇಟ್​​... ಶ್ರೀರಸ್ತು ಶುಭಮಸ್ತುವಿನಲ್ಲೂ ಹೀಗೇ ಹೇಳಿ ಕೊನೆಗೆ ಮಗು ಹುಟ್ಟಿಸಿದ್ರು ಎಂದ ನೆಟ್ಟಿಗರು
Recommended image3
Muddu Sose Serial: ಅಯ್ಯಯ್ಯೋ..ಅತಿ ಮುಖ್ಯವಾದ ಪಾತ್ರವನ್ನೇ ಮುಗಿಸಿಬಿಟ್ರಾ? ಏನ್ರೀ ಹಿಂಗಾಯ್ತೋ!
Related Stories
Recommended image1
ಸರಿಗಮಪ ಫೈನಲಿಸ್ಟ್ ಇವರೇ… ಲಹರಿಗೆ ಸ್ಥಾನ ನೀಡದ ಶೋ ವಿರುದ್ಧ ವೀಕ್ಷಕರು ಗರಂ
Recommended image2
ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved