10:23 PM (IST) Nov 18

Karnataka News Live 18 November 2025 ಅಯ್ಯೋ ದುರ್ವಿಧಿಯೇ, ಇದೇನಾಗೋಯ್ತು Bigg Bossನಲ್ಲಿ? ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ! ಹೊರಗೆ ಹೋಗ್ತಾರಾ?

ಬಿಗ್​ಬಾಸ್​ ಮನೆಯಲ್ಲಿ ಟಾಸ್ಕ್​ವೊಂದರ ವೇಳೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವೆ ತೀವ್ರ ಜಗಳ ನಡೆದಿದೆ. ಗಿಲ್ಲಿ ನಟನ ಮಾತುಗಳಿಂದ ನೊಂದ ಅಶ್ವಿನಿ, ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story
10:23 PM (IST) Nov 18

Karnataka News Live 18 November 2025 ಸುಳ್ವಾಡಿ ವಿಷ ಪ್ರಸಾದ ದುರಂತ - ಜೈಲಿನಿಂದ ಹೊರಬಂದು ಕಾವಿ ಧರಿಸದೇ ಶ್ವೇತ ವಸ್ತ್ರಧಾರಿಯಾದ ಆರೋಪಿ!

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದ ಆತ ಮೈಸೂರು ಜೈಲಿನಿಂದ ಬಿಡುಗಡೆಯಾಗಿದ್ದು, ಸಂತ್ರಸ್ತರು ಈ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
Read Full Story
10:04 PM (IST) Nov 18

Karnataka News Live 18 November 2025 ರಾಯಚೂರು ಮದುವೆ ಸಂಭ್ರಮ ಕಸಿದ ಡಿಜೆ, ಮೆರವಣಿಗೆ ವೇಳೆ ಸದ್ದಿನ ಗದ್ದಲ, ಎರಡು ಕುಟುಂಬದ ನಡುವೆ ಮಾರಾಮಾರಿ

ರಾಯಚೂರಿನ ಮಾನ್ವಿಯಲ್ಲಿ ಮದುವೆ ಮೆರವಣಿಗೆಯ ಡಿಜೆ ಸದ್ದಿನ ವಿವಾದವು ಎರಡು ಕುಟುಂಬಗಳ ನಡುವೆ ತೀವ್ರ ಗಲಭೆಗೆ ಕಾರಣವಾಯಿತು. ಈ ಮಾರಾಮಾರಿಯಲ್ಲಿ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಎರಡೂ ಕುಟುಂಬಗಳು ಇನ್ನೂ ಪೊಲೀಸ್ ದೂರು ನೀಡಿಲ್ಲ.
Read Full Story
09:49 PM (IST) Nov 18

Karnataka News Live 18 November 2025 Karna and Annayya - ಪಾರುಗೆ ಗೊತ್ತಾಯ್ತು ನಿಧಿಯ ಸತ್ಯ! ಅಕ್ಕ ಗರ್ಭಿಣಿ ಎಂದು ತಿಳಿಯುತ್ತಲೇ ನಿಧಿ ಬರಸಿಡಿಲು

ಅಣ್ಣಯ್ಯ ಮತ್ತು ಕರ್ಣ ಧಾರಾವಾಹಿಗಳ ಮಹಾಸಂಗಮದಲ್ಲಿ, ಸೀನನ ತಮಾಷೆಯಿಂದ ನಿತ್ಯಾ ಗರ್ಭಿಣಿ ಎಂಬ ವಿಷಯ ಚರ್ಚೆಗೆ ಬಂದರೂ, ವೈದ್ಯೆಯಾದ ಪಾರುಗೆ ನಾಡಿಮಿಡಿತದಿಂದ ಸತ್ಯದ ಅರಿವಾಗುತ್ತದೆ. ನಂತರ ಕರ್ಣನನ್ನು ಪ್ರಶ್ನಿಸಿದಾಗ, ತನಗೂ ನಿತ್ಯಾಳಿಗೂ ಮದುವೆಯಾಗಿಲ್ಲ ಎಂಬ ಸತ್ಯವನ್ನು ಆತ ಬಾಯಿಬಿಡುತ್ತಾನೆ.
Read Full Story
09:29 PM (IST) Nov 18

Karnataka News Live 18 November 2025 ಕೇರಳದಿಂದ ಕೊಡಗಿಗೆ ಬರುವ ಪ್ರವಾಸಿ ಬಸ್ಸುಗಳಿಂದ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ

ಕೇರಳದಿಂದ ಕೊಡಗಿಗೆ ಬರುವ ಖಾಸಗಿ ಬಸ್ಸುಗಳು ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿವೆ. ಇದರ ಜೊತೆಗೆ, ಪ್ರವಾಸಿಗರು ಬಸ್ಸುಗಳಲ್ಲಿ ಡಿಜೆ ಹಾಕಿ, ಹೆದ್ದಾರಿಗಳಲ್ಲಿ ಪಾರ್ಟಿ ಮಾಡಿ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ.
Read Full Story
09:29 PM (IST) Nov 18

Karnataka News Live 18 November 2025 ಬಿಗ್ ಬಾಸ್‌ನಲ್ಲಿ ಗಿಲ್ಲಿ ಮಹಿಳೆಯೆರಿಗೆ ಮಾಡಿದ್ರೂ ಕಿಚ್ಚ ಪ್ರಶ್ನೆ ಮಾಡಿಲ್ಲ, ಎಚ್ಚರಿಕೆ ಕೊಟ್ಟ ದೂರುದಾರೆ

ಬಿಗ್ ಬಾಸ್‌ನಲ್ಲಿ ಗಿಲ್ಲಿ ಮಹಿಳೆಯೆರಿಗೆ ಮಾಡಿದ್ರೂ ಕಿಚ್ಚ ಪ್ರಶ್ನೆ ಮಾಡಿಲ್ಲ, ಎಚ್ಚರಿಕೆ ಕೊಟ್ಟ ದೂರುದಾರೆ , ಗಿಲ್ಲಿ ತಮಾಷೆಗಳು ನಗು ಬರುತ್ತಿಲ್ಲ, ಅಗೌರವಗಳನ್ನು ಸಹಿಸಲು ಸಾಧ್ಯವಿಲ್ಲ. ಆಗಲ್ಲ ಅಂದರೆ ಶೋ ಬಂದ್ ಮಾಡಿ ಎಂದು ಕಲಾವಿದೆ ಕುಶಲ ಹೇಳಿದ್ದಾರೆ.

Read Full Story
09:16 PM (IST) Nov 18

Karnataka News Live 18 November 2025 Bigg Boss - ಗಿಲ್ಲಿ ನಟ- ಕಾವ್ಯಾ ಶೈವ ಮದ್ವೆಗೆ ತುಕಾಲಿ ಸಂತೋಷ್‌ ಗ್ರೀನ್​ ಸಿಗ್ನಲ್​! ಮಾಜಿ ಸ್ಪರ್ಧಿ ಏನ್‌ ಹೇಳಿದ್ರು ಕೇಳಿ!

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ತಮಾಷೆಯ ಲವ್‌ ಸ್ಟೋರಿ ಸದ್ದು ಮಾಡುತ್ತಿದೆ. ಈ ಪ್ರೇಮಕಥೆಯನ್ನು ಆಟದ ಭಾಗ ಎಂದಿರುವ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್, ಅವರು ನಿಜವಾಗಿಯೂ ಇಷ್ಟಪಟ್ಟರೆ ತಾವೇ ಮುಂದೆ ನಿಂತು ಮದುವೆ ಮಾಡಿಸುವುದಾಗಿ ಹೇಳಿದ್ದಾರೆ.
Read Full Story
09:03 PM (IST) Nov 18

Karnataka News Live 18 November 2025 ಲವ್​ನೂ ಮಾಡ್ತಾರೆ, ಅಣ್ಣನೂ ಅಂತಾರೆ! ನಮ್ಗೆ ಬೆಲೆನೇ ಇಲ್ವಾ? Bigg Boss ಹೆಣ್ಮಕ್ಕಳ ವಿರುದ್ಧ ದೂರು

ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ಸೂರಜ್-ರಾಶಿಕಾ ಮತ್ತು ಗಿಲ್ಲಿ ನಟ-ಕಾವ್ಯಾ ನಡುವೆ ಪ್ರೀತಿ ಮೊಳಕೆಯೊಡೆದಿದೆ. ಆದರೆ, ಹುಡುಗಿಯರು ಕೆಲವೊಮ್ಮೆ ಪ್ರೇಮಿಗಳಂತೆ ಮತ್ತು ಕೆಲವೊಮ್ಮೆ 'ಅಣ್ಣ' ಎಂದು ಕರೆಯುತ್ತಿರುವುದು ವೀಕ್ಷಕರನ್ನು ಗೊಂದಲಕ್ಕೀಡುಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

Read Full Story
08:47 PM (IST) Nov 18

Karnataka News Live 18 November 2025 ಕೋಣೆಯಲ್ಲಿ ಮಲಗಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ

ಕೋಣೆಯಲ್ಲಿ ಮಲಗಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ, ಚಳಿ ಕಾರಣ ಕಿಟಕಿ, ಬಾಗಿಲು ಎಲ್ಲಾ ಮುಚ್ಚಿ ಮಲಗಿದ್ದಾರೆ. ಬೆಚ್ಚಗಿರಲು ಇದ್ದಿಲು ಬೆಂಕಿ ಇಟ್ಟು ಮಲಗಿದ್ದಾರೆ. ಪರಿಣಾಮ ಘೋರ ದುರಂತವೇ ನಡೆದುಹೋಗಿದೆ.

Read Full Story
07:27 PM (IST) Nov 18

Karnataka News Live 18 November 2025 ಮಹಿಳೆಯರ ರಕ್ಷಣೆಗೆ 'ಅಕ್ಕ ಪಡೆ', ಗೃಹಲಕ್ಷ್ಮಿ ಹಣ ಸದ್ಯದಲ್ಲೇ ಬಿಡುಗಡೆ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ತುಮಕೂರು ಪ್ರವಾಸದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಯರ ರಕ್ಷಣೆಗಾಗಿ 'ಅಕ್ಕ ಪಡೆ' ಎಂಬ ಹೊಸ ಪಡೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ಅಂಗನವಾಡಿಗಳ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಣೆ ಮತ್ತು ಬಾಕಿ ಇರುವ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಭರವಸೆ.

Read Full Story
07:05 PM (IST) Nov 18

Karnataka News Live 18 November 2025 'ನನ್ನ ಬೆನ್ನ ಮೇಲೆ ಕೈಯಾಡಿಸಿ, ಖಾಸಗಿ ಭಾಗ ಮುಟ್ಟಿ ಓಡಿಹೋಗಿದ್ದ..' ರೈಲಿನಲ್ಲಾದ ಕೆಟ್ಟ ಘಟನೆ ತಿಳಿಸಿದ ನಟಿ ಗಿರಿಜಾ ಓಕ್‌!

'ಜವಾನ್' ಖ್ಯಾತಿಯ ನಟಿ ಗಿರಿಜಾ ಓಕ್‌, ಪಾಡ್‌ಕಾಸ್ಟ್‌ವೊಂದರಲ್ಲಿ ಕಾಣಿಸಿಕೊಂಡ ಬಳಿಕ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ್ದಾರೆ. ಇದೇ ಸಂದರ್ಶನದಲ್ಲಿ, ಅವರು ತಮ್ಮ ಬಾಲ್ಯದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ಅಪರಿಚಿತನೊಬ್ಬ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿ ಪರಾರಿಯಾದ ಘಟನೆಯನ್ನು ಹಂಚಿಕೊಂಡಿದ್ದಾರೆ.

Read Full Story
05:53 PM (IST) Nov 18

Karnataka News Live 18 November 2025 ಸೌದಿ ಬಸ್‌ - ಟ್ಯಾಂಕರ್ ದುರಂತದಲ್ಲಿ ಮತ್ತೊಬ್ಬ ಕನ್ನಡತಿ ಸಾವು, ಸ್ಪಷ್ಟ ಮಾಹಿತಿ ಸಿಗದೆ ಕಣ್ಣೀರಿಡುತ್ತಿರುವ ಕುಟುಂಬ

ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬೀದರ್ ಮೂಲದ 80 ವರ್ಷದ ರಹಮತ್ ಬಿ ಮೃತಪಟ್ಟಿದ್ದಾರೆ. ಮೆಕ್ಕಾ-ಮದೀನಾ ಯಾತ್ರೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದ್ದು, ಮೃತದೇಹವನ್ನು ಗುರುತಿಸಲು ಮತ್ತು ತಾಯ್ನಾಡಿಗೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.

Read Full Story
05:43 PM (IST) Nov 18

Karnataka News Live 18 November 2025 ಪೋಕ್ಸೋ ಕೇಸ್‌, ಕೋರ್ಟ್‌ಗೆ ಹಾಜರಾಗುವಂತೆ ಮಾಜಿ ಸಿಎಂ ಬಿಎಸ್‌ವೈಗೆ ಸಮನ್ಸ್‌ ಜಾರಿ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯವು ಅವರಿಗೆ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 2 ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

Read Full Story
05:35 PM (IST) Nov 18

Karnataka News Live 18 November 2025 ಸಾಮಾನ್ಯಕ್ಕಿಂತ ಕೆಳಗೆ ಕುಸಿದ ತಾಪಮಾನ - ಬೆಂಗಳೂರು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೋಮ್ಯಾಂಟಿಕ್ ವೆದರ್

Karnataka weather update today: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾತ್ರಿಯ ತಾಪಮಾನ ಸಾಮಾನ್ಯಕ್ಕಿಂತ ಕುಸಿದಿದ್ದು, ಶೀತಗಾಳಿ ಬೀಸುತ್ತಿದೆ. ತಾಪಮಾನವೂ ರೋಮ್ಯಾಂಟಿಕ್ ಚಿಲ್ಲಿಂಗ್ ವಾತಾವರಣವನ್ನು ಸೃಷ್ಟಿಸಿದ್ದು, ಜನ ಮನೆಯಿಂದ ಹೊರಬರಲು ಯೋಚಿಸ್ತಿದ್ದಾರೆ..

Read Full Story
04:01 PM (IST) Nov 18

Karnataka News Live 18 November 2025 ಎಐ ಆಧಾರಿತ, ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ KEO ರಿಲೀಸ್‌ ಮಾಡಿದ ಕರ್ನಾಟಕ

ಕರ್ನಾಟಕ ಸರ್ಕಾರವು ರಾಜ್ಯದ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು, ಸಂಪೂರ್ಣವಾಗಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಕೈಗೆಟುಕುವ, AI-ಸಿದ್ಧ ವೈಯಕ್ತಿಕ ಕಂಪ್ಯೂಟರ್ 'KEO' ಅನ್ನು ಅನಾವರಣಗೊಳಿಸಿದೆ.

Read Full Story
03:45 PM (IST) Nov 18

Karnataka News Live 18 November 2025 ಬೆಳಗಾವಿ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಸಿಕ್ಕಿತು ಬಿಗ್‌ಟ್ವಿಸ್ಟ್! ದುರಂತಕ್ಕೆ ಅಧಿಕಾರಿಗಳೇ ಕಾರಣರಾದ್ರಾ?

ಬೆಳಗಾವಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವು ಮುಂದುವರಿದಿದ್ದು, ಮೃತರ ಸಂಖ್ಯೆ 31ಕ್ಕೆ ಏರಿದೆ. ರಾಷ್ಟ್ರೀಯ ಸಂಸ್ಥೆಯೊಂದು ಮೂರು ತಿಂಗಳ ಹಿಂದೆಯೇ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

Read Full Story
03:27 PM (IST) Nov 18

Karnataka News Live 18 November 2025 Viral Video - ಕಳೆದ ನಾಲ್ಕು ದಿನಗಳಿಂದ ನಾಲೆಯಲ್ಲಿದ್ದ ಮರಿಯಾನೆಯನ್ನು ಯಶಸ್ವಿಯಾಗಿ ರಕ್ಷಿಸಿದ ಸಿಬ್ಬಂದಿ

ಮಂಡ್ಯ ಜಿಲ್ಲೆಯ ಶಿವಸಮುದ್ರ ಬಳಿ ನಾಲ್ಕು ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಿಸಿದೆ. ಹೈಡ್ರಾಲಿಕ್‌ ಕ್ರೇನ್‌ ಮತ್ತು ಅರವಳಿಕೆ ಮದ್ದು ಬಳಸಿ, ದೊಡ್ಡ ಕಾರ್ಯಾಚರಣೆಯ ಮೂಲಕ ಆನೆಯನ್ನು ಮೇಲೆತ್ತಿ ಚಿಕಿತ್ಸೆ ನೀಡಲಾಗುತ್ತಿದೆ.
Read Full Story
02:50 PM (IST) Nov 18

Karnataka News Live 18 November 2025 ಪಾಕಿಸ್ತಾನದ ಜಿಡಿಪಿ ಬೆಂಗಳೂರು ರಸ್ತೆಯಲ್ಲಿ, 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ

ಪಾಕಿಸ್ತಾನದ ಜಿಡಿಪಿ ಬೆಂಗಳೂರು ರಸ್ತೆಯಲ್ಲಿ, 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಭಾರತದ ರಸ್ತೆಯಲ್ಲಿ ನೋಡಿದ ಅತ್ಯಂತ ರಾಯಲ್ ಸಂಚಾರ ಇದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read Full Story
02:41 PM (IST) Nov 18

Karnataka News Live 18 November 2025 ಈ ಜನ್ಮದಲ್ಲಿ ಆರೆಸ್ಸೆಸ್‌ ನಿಷೇಧಿಸಲು ಆಗೋಲ್ಲ - ಪ್ರಿಯಾಂಕ್ ಖರ್ಗೆ ವಿರುದ್ಧ ಚಲವಾದಿ ವಾಗ್ದಾಳಿ

ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿಯವರು, ಪ್ರಿಯಾಂಕ್ ಖರ್ಗೆಯವರು ಈ ಜನ್ಮದಲ್ಲಿ ಆರೆಸ್ಸೆಸ್ ನಿಷೇಧಿಸಲು ಸಾಧ್ಯವಿಲ್ಲ ಎಂದರು. ಭಯೋತ್ಪಾದಕರನ್ನು ಹುತಾತ್ಮರು ಎನ್ನುವುದನ್ನು ಖಂಡಿಸಿದ ಅವರು, ಬೆಂಗಳೂರು ಮೆಟ್ರೋ ಬಾಂಬ್ ಬೆದರಿಕೆಗೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದರು.

Read Full Story
02:01 PM (IST) Nov 18

Karnataka News Live 18 November 2025 ನಂದಿನಿ ತುಪ್ಪಕ್ಕೆ ದೇಶದೆಲ್ಲೆಡೆ ಭಾರೀ ಡಿಮ್ಯಾಂಡ್ - ಸಚಿವ ವೆಂಕಟೇಶ್

ದೇಶದೆಲ್ಲೆಡೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ಟಿಟಿಡಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಕೇಳಿದೆ ಎಂದು ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತುಪ್ಪದ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

Read Full Story