ಚೌಡೇಶ್ವರಿ ದೇವಿ ಪೂಜೆಯ ನೆಪದಲ್ಲಿ ನಕಲಿ ಜ್ಯೋತಿಷಿಯೊಬ್ಬ ವೃದ್ಧೆಯಿಂದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾನೆ. ಆಭರಣ ವಾಪಸ್ ಕೇಳಿದಾಗ ತನಗೆ ಅಪಘಾತವಾಗಿದೆ ಎಂದು ಎಐ ಫೋಟೋ ಕಳುಹಿಸಿ ಪರಾರಿಯಾಗಿದ್ದಾನೆ.
- Home
- News
- State
- Karnataka News Live 17 September 2026: Bengaluru - 40 ಲಕ್ಷದ ಚಿನ್ನ ದೋಚಿ, AI ಫೋಟೋ ಕಳುಹಿಸಿದ ನಕಲಿ ಜ್ಯೋತಿಷಿ ವೆಂಕಟೇಶ್
Karnataka News Live 17 September 2026: Bengaluru - 40 ಲಕ್ಷದ ಚಿನ್ನ ದೋಚಿ, AI ಫೋಟೋ ಕಳುಹಿಸಿದ ನಕಲಿ ಜ್ಯೋತಿಷಿ ವೆಂಕಟೇಶ್

ಮಡಿಕೇರಿ: ತಲಕಾವೇರಿಯಲ್ಲಿ ಈ ಬಾರಿಯ ಪವಿತ್ರ ಕಾವೇರಿ ತೀರ್ಥೋದ್ಭವ ಅ.17ರಂದು ರಾತ್ರಿ 7.50ಕ್ಕೆ ನಡೆಯಲಿದೆ. ಭಾಗಮಂಡಲದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ತುಲಾ ಸಂಕ್ರಮಣ-2026ರ ಜಾತ್ರೆಯ ಪ್ರಯುಕ್ತ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಟಿಸಲಾಯಿತು.
ಕಾರ್ಯಕ್ರಮಗಳ ವಿವರ: ಸೆ.27ರಂದು ಬೆಳಗ್ಗೆ 8.45ಕ್ಕೆ ಭಗಂಡೇಶ್ವರ ದೇವಾಲಯದಲ್ಲಿ ತುಲಾ ಲಗ್ನದಲ್ಲಿ ಪ್ರತ್ಯೇಕ ಅಕ್ಷಿ ಕಾರ್ಯಕ್ರಮ. ಅ.5ರಂದು ಬೆಳಗ್ಗೆ 10.35ಕ್ಕೆ ವೃಷಭ ಲಗ್ನದಲ್ಲಿ ಆಜ್ಞಾ ಮುಹೂರ್ತ. ಅ.15ರಂದು ಮಧ್ಯಾಹ್ನ 12.35ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಕಾರ್ಯಕ್ರಮ, ಅದೇ ದಿನ ಸಂಜೆ 6.03ಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳಿಗೆ ಪೂಜೆ. ಅ.17ರಂದು ರಾತ್ರಿ 7.50ಕ್ಕೆ ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ.
Karnataka News Live 17 September 2026 Bengaluru - 40 ಲಕ್ಷದ ಚಿನ್ನ ದೋಚಿ, AI ಫೋಟೋ ಕಳುಹಿಸಿದ ನಕಲಿ ಜ್ಯೋತಿಷಿ ವೆಂಕಟೇಶ್
Karnataka News Live 17 September 2026 ಬೆಂಗಳೂರಿನ ಪ್ರತಿಷ್ಠಿತ ಮಾಲ್ ಮತ್ತು ಸಿನಿಮಾ ಮಂದಿರಕ್ಕೆ ಬಿಗ್ ಶಾಕ್! 75 ಸಾವಿರ ದಂಡ
ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಬಳಸಿದ್ದಕ್ಕಾಗಿ ಪಿವಿಆರ್ ಸಿನಿಮಾಸ್ಗೆ ಪಾಲಿಕೆ ಅಧಿಕಾರಿಗಳು 75,000 ರೂ. ದಂಡ ವಿಧಿಸಿದ್ದಾರೆ. ಹಾಗೆಯೇ, ಒಳಚರಂಡಿ ತ್ಯಾಜ್ಯ ಸುರಿದಿದ್ದಕ್ಕಾಗಿ ಫೋರಂ ಮಾಲ್ ಸಿಬ್ಬಂದಿಗೆ 50,839 ರೂ. ದಂಡ ಹಾಕಲಾಗಿದೆ.