07:11 AM (IST) Jul 14

Karnataka News Live 14 July 2026ವಸತಿ ಉದ್ದೇಶಕ್ಕಾಗಿ ಮನೆ ಪರವಾನಗಿ ಪಡೆದು ಮಸೀದಿ ನಿರ್ಮಾಣದ ಆರೋಪ; ಸ್ಥಳೀಯರಿಂದ ದೂರು

ವಸತಿ ಉದ್ದೇಶಕ್ಕಾಗಿ ಪಡೆದ ಪರವಾನಗಿಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪುರಸಭೆಗೆ ದೂರು ನೀಡಿದ್ದಾರೆ. ಈ ಅಕ್ರಮ ನಿರ್ಮಾಣದಿಂದಾಗಿ ಬಡಾವಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

Read Full Story
06:13 AM (IST) Jul 14

Karnataka News Live 14 July 2026ಅಂಜನಾದ್ರಿ, ಗೋಕಾಕ್, ಮಧುಗಿರಿ ಸೇರಿದಂತೆ ರಾಜ್ಯದ 13 ಕಡೆಯಲ್ಲಿ ರೋಪ್‌ವೇ - ಜಾರ್ಜ್

ರಾಜ್ಯದ 13 ಪ್ರಮುಖ ಪ್ರವಾಸಿ ತಾಣಗಳಲ್ಲಿ ಉದ್ದೇಶಿತ ರೋಪ್‌ವೇ ಯೋಜನೆಗಳ ವಿಳಂಬಕ್ಕೆ ಸಚಿವ ಕೆ.ಜೆ.ಜಾರ್ಜ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಪ್ರಸ್ತಾಪದ ಹಂತದಲ್ಲೇ ಇರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌, ತ್ವರಿತ ಅನುಷ್ಠಾನಕ್ಕೆ ಸೂಚನೆ ನೀಡಿದ್ದಾರೆ.

Read Full Story
06:04 AM (IST) Jul 14

Karnataka News Live 14 July 2026Bengaluru - ಹೆಬ್ಬಾಳ ಫ್ಲೈಓವರ್‌ ಕೆಳಗೆ ಅಕ್ರಮ ಪಾರ್ಕಿಂಗ್‌, ಓಣಿಯಂತಿರುವ ಸರ್ವೀಸ್‌ ರಸ್ತೆ

ಸಂಚಾರ ದಟ್ಟಣೆ ನಿವಾರಣೆಗೆ ನಿರ್ಮಿಸಿದ ಹೆಬ್ಬಾಳ ಮೇಲ್ಸೇತುವೆಯೇ ಈಗ ಅಕ್ರಮ ಪಾರ್ಕಿಂಗ್ ಮತ್ತು ಅವೈಜ್ಞಾನಿಕ ಬಸ್ ನಿಲ್ದಾಣದಿಂದಾಗಿ ಸಂಚಾರ ದಟ್ಟಣೆಯ ಕೇಂದ್ರವಾಗಿದೆ. ಇಕ್ಕಟ್ಟಾದ ಸರ್ವೀಸ್ ರಸ್ತೆ ಮತ್ತು ಸಂಚಾರಿ ಪೊಲೀಸರ ಗೈರುಹಾಜರಿಯಿಂದಾಗಿ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Read Full Story
05:30 AM (IST) Jul 14

Karnataka News Live 14 July 2026ಫುಟ್ಪಾತ್‌, ಒತ್ತುವರಿ ತೆರವು ಬಳಿಕ ರಾಜಕಾಲುವೆ ಒತ್ತುವರಿ ತೆರವು; ಎಲ್ಲಿಂದ ಆರಂಭ?

ಫುಟ್‌ಪಾತ್ ಮತ್ತು ಅನಾಥ ವಾಹನಗಳ ತೆರವು ಕಾರ್ಯಾಚರಣೆಯ ಯಶಸ್ಸಿನ ನಂತರ, ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜಕಾಲುವೆ ಒತ್ತುವರಿ ತೆರವಿಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕಾರ್ಯಾಚರಣೆಯು ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ಪರಿಣಾಮ ಬೀರುವುದರಿಂದ, ರಾಜಕೀಯ ಒತ್ತಡ ಹಾಗೂ ಸಾರ್ವಜನಿಕ ವಿರೋಧ ಎದುರಾಗುವ ಸಾಧ್ಯತೆಯಿದೆ.
Read Full Story
05:23 AM (IST) Jul 14

Karnataka News Live 14 July 2026ಬೆಂಗ್ಳೂರಿನ 12 ವರ್ಷದ ಪೋಕ್ಸೋ ಕೇಸ್‌ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಿ - ಹೈಕೋರ್ಟ್‌

2014ರಲ್ಲಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ 6 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಳ್ಳದ ಬಗ್ಗೆ ಹೈಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ. 12 ವರ್ಷಗಳಿಂದ ವಿಚಾರಣೆ ವಿಳಂಬವಾಗಿರುವುದನ್ನು ಖಂಡಿಸಿ, ಪ್ರಕರಣದ ವಿಚಾರಣೆಯನ್ನು 8 ವಾರಗಳಲ್ಲಿ ಪೂರ್ಣಗೊಳಿಸುವಂತೆ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
Read Full Story