10:05 PM (IST) Jul 14

Karnataka News Live 14 July 2026ನಮ್ಮ ಮೆಟ್ರೋ ಸುರಕ್ಷತೆಗೆ ಬಿಗ್‌ ಪುಶ್ - ₹1,274 ಕೋಟಿ ವೆಚ್ಚದಲ್ಲಿ ಎಲ್ಲಾ ನಿಲ್ದಾಣಗಳಿಗೂ ಬರಲಿವೆ ‘ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್’!

ಬೆಂಗಳೂರು ಮೆಟ್ರೋದಲ್ಲಿ ಹೆಚ್ಚುತ್ತಿರುವ ಹಳಿ ದುರಂತ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು, ಬಿಎಂಆರ್‌ಸಿಎಲ್ ತನ್ನ 177 ನಿಲ್ದಾಣಗಳಲ್ಲಿ ₹1,274 ಕೋಟಿ ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ (PSD) ಅಳವಡಿಸಲು ಬೃಹತ್ ಯೋಜನೆ ರೂಪಿಸಿದೆ.

Read Full Story
09:50 PM (IST) Jul 14

Karnataka News Live 14 July 2026ಕರ್ನಾಟಕಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ - ಪ್ರಧಾನಿ ಮೋದಿಗೆ ಪತ್ರದ ಮೂಲಕ ಸಿಎಂ ಡಿಕೆಶಿ ಮನವಿ

Karnataka Drought: ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಂಡ ನಿಯೋಜಿಸಬೇಕು" ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

Read Full Story
09:32 PM (IST) Jul 14

Karnataka News Live 14 July 2026'ನೀನು ವಿಲನ್ ಅಲ್ಲ, ಆ್ಯಂಟಿ ಹೀರೋ' - 'ಲೆನಿನ್' ಪಾತ್ರದ ಹಿಂದಿನ ಕಥೆ ಹೇಳಿದ ನಟ ಪ್ರಮೋದ್

ಭರ್ಜರಿ ಪ್ರದರ್ಶನ ಕಾಣುತ್ತಿರುವ ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಚಿತ್ರದೊಂದಿಗೆ ಕನ್ನಡದ ನಟ ಪ್ರಮೋದ್ ಕೂಡ ಗಮನ ಸೆಳೆದಿದ್ದಾರೆ.

Read Full Story
08:55 PM (IST) Jul 14

Karnataka News Live 14 July 2026ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಖರ್ಚಾಗಿರುವ ಹಣವೆಷ್ಟು?

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಈವರೆಗೆ ಒಟ್ಟು 15,470 ಕೋಟಿ ರೂಪಾಯಿ ವೆಚ್ಚವಾಗಿದೆ. ಗ್ರೀನ್‌ಫೀಲ್ಡ್‌ ಯೋಜನೆಯಾಗಿ ಆರಂಭವಾದ ಈ ವಿಮಾನ ನಿಲ್ದಾಣ, ಟರ್ಮಿನಲ್-1ರ ವಿಸ್ತರಣೆ ಹಾಗೂ ಪರಿಸರಸ್ನೇಹಿ ಟರ್ಮಿನಲ್-2 ನಿರ್ಮಾಣದ ಮೂಲಕ ಅಭಿವೃದ್ಧಿ ಹೊಂದಿದೆ.

Read Full Story
08:51 PM (IST) Jul 14

Karnataka News Live 14 July 2026ಮಲೆನಾಡಿನಲ್ಲೇ ಮಳೆ ಕೊರತೆ - ಕೊಡಗಿನ ರೈತರ ಆತಂಕ ಹೆಚ್ಚಿಸಿದ ಹವಾಮಾನ ವರದಿ

ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಎತ್ತೇಚ್ಚ ಮಳೆ ಸುರಿಯುವುದು ಗೊತ್ತೇ ಇದೆ. ವಾರ್ಷಿಕ 2700 ಮಿಲಿ ಮೀಟರ್ ಮಳೆಯಾಗುವ ಕೊಡಗಿನಲ್ಲಿ ಈ ಬಾರಿ ಇದುವರೆಗೆ ಕೇವಲ 700 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ.

Read Full Story
08:10 PM (IST) Jul 14

Karnataka News Live 14 July 2026ದರ್ಶನ್ ಹಾಡು ಹಾಡಿದ ಅಪರೂಪದ ವಿಡಿಯೋ ಹಂಚಿಕೊಂಡ ವಿಜಯಲಕ್ಷ್ಮಿ - ಫ್ಯಾನ್ಸ್ ಫುಲ್ ಖುಷ್

ದರ್ಶನ್ ಅವರ ಅಪರೂಪದ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

Read Full Story
07:46 PM (IST) Jul 14

Karnataka News Live 14 July 2026ಬೆಂಗಳೂರು TO ತುಮಕೂರು - ಐಟಿ ಉದ್ಯೋಗಿಗಳಿಗೆ BMTC ಭರ್ಜರಿ ಗಿಫ್ಟ್​; 101 ಕಿ.ಮೀ ಬಸ್​ ಸೇವೆ ಹೀಗಿದೆ

ತುಮಕೂರಿನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಐಟಿ ಉದ್ಯೋಗಿಗಳಿಗಾಗಿ ಬಿಎಂಟಿಸಿ ಹೊಸ ವಿಸ್ತಾರ ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ 101 ಕಿ.ಮೀ ಸಂಚರಿಸುವ ಈ ನೇರ ಸೇವೆಯಿಂದಾಗಿ ಪ್ರಯಾಣಿಕರ ಸುಮಾರು ಒಂದು ಗಂಟೆ ಸಮಯ ಉಳಿತಾಯವಾಗಲಿದ್ದು, ಇದು ಬಿಎಂಟಿಸಿಯ ಅತಿ ಉದ್ದದ ಮಾರ್ಗವಾಗಿದೆ.
Read Full Story
07:43 PM (IST) Jul 14

Karnataka News Live 14 July 2026'ಅಪ್ಪನ ಹಣವಲ್ಲ, ನನ್ನ ಪರಿಶ್ರಮ'... ಪ್ಯಾರಿಸ್‌ನಲ್ಲಿ ಮನೆ ಖರೀದಿಸಿದ ಭಾರತೀಯ ಯುವತಿಯ ಯಶೋಗಾಥೆ

ತ್ರಿಪುರಾ ಮೂಲದ 28 ವರ್ಷದ ಬೋರ್ನಿ ಬಾನಿಕ್ ಪ್ಯಾರಿಸ್ ಬಳಿ ಸ್ವಂತ ಮನೆ ಖರೀದಿಸಿದ ನಂತರ ಎದುರಾಗುವ ಗುಪ್ತ ವೆಚ್ಚಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಿಂಗಳಿಗೆ ₹1.4 ಲಕ್ಷ ಇಎಂಐ ಹೊರತಾಗಿಯೂ ಹಲವು ನಿರ್ವಹಣಾ ಶುಲ್ಕಗಳು ಇರುತ್ತವೆ ಎಂದು ಅವರು ವಿವರಿಸಿದ್ದಾರೆ. ಮನೆ ಖರೀದಿಯ ಆರ್ಥಿಕ ಸತ್ಯವನ್ನು ಮುಕ್ತವಾಗಿ ಹಂಚಿಕೊಂಡ ಇವರ ಪಾರದರ್ಶಕತೆಗೆ ನೆಟಿಜನ್‌ಗಳು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read Full Story
06:50 PM (IST) Jul 14

Karnataka News Live 14 July 2026'ರಿಚರ್ಡ್ ಆ್ಯಂಟನಿ' ಸಿನಿಮಾ ಅಲ್ಲ, ನ್ಯೂಕ್ಲಿಯರ್ ಬಾಂಬ್ - ರಕ್ಷಿತ್‌ ಶೆಟ್ಟಿ ಬಗ್ಗೆ ಅಜನೀಶ್ ಏನಂದ್ರು?

ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ 'ರಿಚರ್ಡ್ ಆ್ಯಂಟನಿ' ಚಿತ್ರದ ಬಗ್ಗೆ ಇದೀಗ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ನೀಡಿರುವ ಹೇಳಿಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story
06:48 PM (IST) Jul 14

Karnataka News Live 14 July 2026S Janaki - ಹೆತ್ತಮ್ಮನ ಚಿನ್ನ ಅಡವಿಟ್ಟು ಜಾನಕಮ್ಮನ ಮನೆಗೆ ಹೋದ ಬಾಲಕ; ಕೊನೆಗಾಲದಲ್ಲಿ ಅಮ್ಮನೇ ಆದ ಎಸ್ ಜಾನಕಿ!

ಇದೀಗ, ಎಸ್ ಜಾನಕಿ-ನವೀನ್ ಮೈಸೂರು ಸಂಬಂಧ ಹಲವರ ಕಣ್ಣನ್ನು ತೇವಗೊಳಿಸಿದೆ. ಆ ಪುಟ್ಟ ಬಾಲಕನ ಅಪರೊಮಿತ ಅಭಿಮಾನವೇ ಎಸ್ ಜಾನಕಿಯವರ ಕೊನೆಗಾಲದಲ್ಲಿ ತಾಯಿ-ಮಗ ಅನ್ನುವಂತಹ ಬಾಂಧವ್ಯಕ್ಕೆ ಕಾರಣವಾಯ್ತು. ಜೀವನದ ಕೊನೆಯ ಕ್ಷಣಗಳಲ್ಲಿ ಹೇಗಿದ್ದರು, ಏನೆಲ್ಲಾ ಆಯ್ತು? ಈ ಸ್ಟೋರಿ ನೋಡಿ..

Read Full Story
06:34 PM (IST) Jul 14

Karnataka News Live 14 July 2026Mangaluru - ಸೇಂಟ್ ಅಲೋಶಿಯಸ್ ಶಾಲೆಗೆ 1983ರ ಬ್ಯಾಚ್‌ನಿಂದ ರೂ. 65 ಲಕ್ಷದ ವಿದ್ಯಾರ್ಥಿವೇತನ ದತ್ತಿ ಕೊಡುಗೆ!

ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ 1983ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು 43 ವರ್ಷಗಳ ನಂತರ ಒಂದೆಡೆ ಸೇರಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 65 ಲಕ್ಷ ರೂಪಾಯಿಗಳ ಬೃಹತ್ ವಿದ್ಯಾರ್ಥಿವೇತನ ದತ್ತಿ ನಿಧಿಯನ್ನು ಸ್ಥಾಪಿಸಿದ್ದಾರೆ.

Read Full Story
06:27 PM (IST) Jul 14

Karnataka News Live 14 July 2026ತಿರುಪತಿ ಮೊದಲ ಆರತಿ ಗೌರವಕ್ಕೆ ಹೊಸ ಶಿಷ್ಟಾಚಾರ - ಡಿಕೆಶಿ ಪ್ರಸ್ತಾಪಕ್ಕೆ ಟಿಟಿಡಿ ಸದಸ್ಯ ನರೇಶ್ ಬೆಂಬಲ

ತಿರುಮಲದಲ್ಲಿ ಉಪಸ್ಥಿತರಿರುವ ಕರ್ನಾಟಕದ ಪ್ರಮುಖ ಗಣ್ಯರೊಬ್ಬರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಶಿಷ್ಟಾಚಾರ ರೂಪಿಸುವುದು ಸೂಕ್ತ ಎಂದು ಟಿಟಿಡಿ ಆಡಳಿತ ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ.

Read Full Story
06:02 PM (IST) Jul 14

Karnataka News Live 14 July 2026ಬಿಡದಿ ಟೌನ್‌ಶಿಪ್ ಕೈಬಿಡದಿದ್ದರೆ ವಿಧಾನ ಸೌಧದ ಮುಂದೆ ಧರಣಿ ಕೂರುವೆ - ಮಾಜಿ ಪ್ರಧಾನಿ ಗೌಡರಿಂದ ಸರ್ಕಾರಕ್ಕೆ ಎಚ್ಚರಿಕೆ

ಬಿಡದಿ ಉಪನಗರ ಯೋಜನೆಯ ಭೂಸ್ವಾಧೀನವನ್ನು ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಯೋಜನೆ ಕೈಬಿಡದಿದ್ದರೆ ವಿಧಾನಸೌಧದ ಬಳಿ ಧರಣಿ ಕೂರುವುದಾಗಿ ಎಚ್ಚರಿಸಿರುವ ಅವರು, ಇದು ₹20,000 ಕೋಟಿಯ ಯೋಜನೆಯಾಗಿದ್ದು, ಬಡ ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Read Full Story
05:14 PM (IST) Jul 14

Karnataka News Live 14 July 2026'ನನ್ನ ಮುದ್ದಿನ ಚಂಪಿ ಕೊನೆಗೂ ಮದುವೆಯಾದಳು'... ಶರ್ಮಿಳಾಗೆ ರಮ್ಯಾ ಹೃದಯಸ್ಪರ್ಶಿ ಶುಭಾಶಯ

ಶರ್ಮಿಳಾ ಮಾಂಡ್ರೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದ ನಟಿ ರಮ್ಯಾ, ತಮ್ಮ ಆತ್ಮೀಯ ಗೆಳತಿ ಶರ್ಮಿಳಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

Read Full Story
05:13 PM (IST) Jul 14

Karnataka News Live 14 July 2026ಕಳಪೆ ಕಾಮಗಾರಿ, ಬರದ ನಡುವೆ ಎತ್ತಿನಹೊಳೆ ಪೈಪ್‌ಲೈನ್‌ ಒಡೆದು 8 ಕೋಟಿ ಲೀಟರ್‌ ನೀರು ಪೋಲು!

ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Read Full Story
05:02 PM (IST) Jul 14

Karnataka News Live 14 July 2026₹120 ಕೋಟಿ ಮೌಲ್ಯದ ಆದಿಚುಂಚನಗಿರಿ ಮಠದ ಜಮೀನು ಕಬಳಿಕೆ - ಸ್ಮಶಾನದ ಸಮಾಧಿ ಹುಡುಕಿ ಸ್ಕೆಚ್ ಹಾಕಿದ್ದ11 ಮಂದಿ ಅರೆಸ್ಟ್!

ಆದಿಚುಂಚನಗಿರಿ ಮಠಕ್ಕೆ ಸೇರಿದ ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಸ್ಮಶಾನದಲ್ಲಿ ಸಮಾಧಿ ಹುಡುಕಿ ನಕಲಿ ವಂಶವೃಕ್ಷ ತಯಾರಿಸಿ, ಸರ್ಕಾರಿ ಅಧಿಕಾರಿಗಳ ನೆರವಿನಿಂದ ಈ ವಂಚನೆ ಎಸಗಲಾಗಿದ್ದು, 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ.
Read Full Story
04:49 PM (IST) Jul 14

Karnataka News Live 14 July 2026ಗಂಗಾವತಿಯಲ್ಲಿ ಮಿನಿ ವಿಧಾನಸೌಧ ಸ್ಥಳಾಂತರಕ್ಕೆ ಎಚ್.ಆರ್. ಶ್ರೀನಾಥ್ ಬಿಗ್ ಡಿಮ್ಯಾಂಡ್

ನಗರದ ಆನೆಗೊಂದಿ ರಸ್ತೆಯ ಮಾರ್ಗದಲ್ಲಿರುವ ಮಿನಿ ವಿಧಾನಸೌಧವನ್ನು ರದ್ದು ಪಡಿಸಿ ನಗರದ ಹಳೇ ಪ್ರವಾಸಿ ಮಂದಿರದ ಸ್ಥಳದಲ್ಲಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರು ಶಾಸಕರಿಗೆ ಒತ್ತಾಯಿಸಿದ್ದಾರೆ.

Read Full Story
04:37 PM (IST) Jul 14

Karnataka News Live 14 July 2026ಆ್ಯಕ್ಷನ್, ಅಟಿಟ್ಯೂಡ್, ರಗಡ್ ಲುಕ್... 'ಪರಾಕ್' ಟೀಸರ್‌ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹವಾ

Paraak Kannada Movie: ಸ್ಯಾಂಡಲ್​ವುಡ್‌ನ ಬಹುಬೇಡಿಕೆಯ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪರಾಕ್' ಇದೀಗ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ.

Read Full Story
04:07 PM (IST) Jul 14

Karnataka News Live 14 July 2026ಗರ್ಭಿಣಿಯಾಗಿದ್ದಾಗ ಫಿಂಗರ್​ಚಿಪ್ಸ್​ ತಿನ್ನಬೇಡ ಎಂದ ಪತಿ - ಹೈಕೋರ್ಟ್​ ಮೆಟ್ಟಿಲೇರಿದ ದೌರ್ಜನ್ಯ ಕೇಸ್​

ಗರ್ಭಿಣಿಯಾಗಿದ್ದಾಗ ಫಿಂಗರ್ ಚಿಪ್ಸ್ ತಿನ್ನಬೇಡ ಎಂದ ಪತಿಯ ವಿರುದ್ಧ ಪತ್ನಿ ಗೃಹಹಿಂಸೆ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಪತ್ನಿಯ ದೂರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿ, ಪತಿಯ ಮೇಲಿನ ತನಿಖೆಗೆ ತಡೆ ನೀಡಿದೆ. ಈ ಘಟನೆಯು ಕೌಟುಂಬಿಕ ದೌರ್ಜನ್ಯ ಕಾನೂನಿನ ದುರುಪಯೋಗದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
04:02 PM (IST) Jul 14

Karnataka News Live 14 July 2026Udupi Mutt - ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಶ್ರೀ ಶಂಕಾರಾಚಾರ್ಯರ ನಿಂದನೆ; ಕ್ಷಮೆ ಕೇಳಿದ ಮಹಿಳೆ

Shankaracharya controversy In Udupi Mutt: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಚಾರ್ಯ ಶಂಕರರ ನಿಂದನೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಬಗ್ಗೆ ಹರಿಕಥೆ ನಡೆಸಿದ ಮಹಿಳೆ ಕ್ಷಮೆ ಕೇಳಿದ್ದು, ಮಠವೂ ಕೂಡ ಸ್ಪಷ್ಟನೆ ನೀಡಿದೆ.

Read Full Story