11:54 PM (IST) Jan 14

Karnataka News Live 14 January 2026Karunya Ram Sister Case - ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್

Actress Karunya Ram Sister Controversy: ಕನ್ನಡದಲ್ಲಿ ಕೆಲ ಸಿನಿಮಾ, ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿರುವ ಕಾರುಣ್ಯಾ ರಾಮ್‌ ಅವರು ಒಡಹುಟ್ಟಿದ ತಂಗಿ ಸಮೃದ್ಧಿ ರಾಮ್‌ ವಿರುದ್ಧವೇ ದೂರು ನೀಡಿದ್ದಾರೆ. ಅಷ್ಟಕ್ಕೂ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ಯಾಕೆ?

Read Full Story
11:11 PM (IST) Jan 14

Karnataka News Live 14 January 2026ಇಡೀ ಸೀಸನ್‌ಗೆ ಕಿಚ್ಚನ ಚಪ್ಪಾಳೆ ಪಡೆದು BBK 12 ಶೋಗೆ ಗುಡ್‌ಬೈ ಹೇಳಿದ Dhruvanth;‌ ವೀಕ್ಷಕರಿಗೆ ಅದೇ ಡೌಟ್!

Bigg Boss Kannada 12 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಟಾಪ್‌ 6 ಸ್ಪರ್ಧಿಗಳ ಆಯ್ಕೆ ಆಗಬೇಕು. ಹೀಗಿರುವಾಗ ಮಿಡ್‌ ವೀಕ್‌ ಎಲಿಮಿನೇಶನ್‌ ಆಗಿದೆ. ಧ್ರುವಂತ್‌ ಮನೆಯಿಂದ ಹೊರಬಂದಿದ್ದಾರೆ. ಹಾಗಾದರೆ ಯಾರದು?

Read Full Story
10:23 PM (IST) Jan 14

Karnataka News Live 14 January 2026ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಚಿತೆಯಿಂದ ಎದ್ದು ಬಂದು ಬರ್ತ್‌ಡೇ ಆಚರಿಸಿದ 103ರ ಹರೆಯದ ಅಜ್ಜಿ

ಅಂತ್ಯಸಂಸ್ಕಾರದ ವೇಳೆ ಅಚ್ಚರಿ, ಪ್ರೀತಿಯ ಅಜ್ಜಿ ನಿಧನಕ್ಕೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ನಡೆದಿದೆ. ಅಚ್ಚರಿ ಎಂಬಂತೆ ಚಿತೆಯಿಂದ ಎದ್ದು ಬಂದ ಅಜ್ಜಿ ತಮ್ಮ 103ನೇ ವರ್ಷದ ಬರ್ತ್‌ಡೇ ಆಚರಿಸಿದ ಘಟನೆ ನಡೆದಿದೆ.

Read Full Story
09:42 PM (IST) Jan 14

Karnataka News Live 14 January 2026ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ

ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ, ಈ ಕಾರ್ಯಕ್ರಮ ನಮಗೆ ಪುಟುಗೋಸಿ ಅಂದರೆ ಪುಟುಗೋಸಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಕರವೇ ಅಧ್ಯಕ್ಷನ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.

Read Full Story
08:51 PM (IST) Jan 14

Karnataka News Live 14 January 2026ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್

ಬೆಂಗಳೂರಿಗೆ ಬಂತು ಅಮೆರಿಕ ಟೆಸ್ಲಾ ಇವಿ ಕಾರು, ಮೊದಲ ಪಾಪ್ ಅಪ್ ಎಕ್ಸ್‌ಪೀರಿಯೆನ್ಸ್ ಆರಂಭಿಸಿದೆ. ಗ್ರಾಹಕರು ಟೆಸ್ಲಾ ಕಾರು ಡ್ರೈವ್ ಮಾಡುವ ಅವಕಾಶ ನೀಡಲಾಗಿದೆ. ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಟೆಸ್ಲಾ ಕಾರಿನ ಬೆಲೆ ಎಷ್ಟು, ಮೈಲೇಜ್ ಎಷ್ಟಿದೆ?

Read Full Story
08:22 PM (IST) Jan 14

Karnataka News Live 14 January 2026ಮುಂದಿನ ಚುನಾವಣೆಗೆ ನಾನು ನಿಲ್ಲದಿದ್ದರೂ ಸರಿ, ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸಿಯೇ ಸಿದ್ಧ!

ಮದ್ದೂರು ಶಾಸಕ ಕೆ.ಎಂ. ಉದಯ್, ಮುಂದಿನ ಚುನಾವಣೆಯಲ್ಲಿ ಪದ್ಮನಾಭನಗರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಸೋಲಿಸಲು ವೈಯಕ್ತಿಕವಾಗಿ ಶ್ರಮಿಸುವುದಾಗಿ ಸವಾಲು ಹಾಕಿದ್ದಾರೆ. ಮದ್ದೂರು ನಗರಸಭೆ ರಚನೆ ವಿಚಾರದಲ್ಲಿ ಅಶೋಕ್ ಅವರ ನಿಲುವನ್ನು ಟೀಕಿಸಿದ್ದಾರೆ.

Read Full Story
07:51 PM (IST) Jan 14

Karnataka News Live 14 January 2026BBK 12 - ಆ ವಿಷ್ಯ Suraj Singh ಮುಚ್ಚಿಟ್ಟಿದ್ದ- ಸೂರಜ್​ ಎಂಗೇಜ್​ಮೆಂಟ್​ ಕುರಿತು ರಾಶಿಕಾ ಹೇಳಿದ್ದೇನು?

ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ರಾಶಿಕಾ ಶೆಟ್ಟಿ, ಸೂರಜ್​ ಸಿಂಗ್​ ಜೊತೆಗಿನ ಪ್ರೇಮ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಾವಿಬ್ಬರೂ ಕೇವಲ ಸ್ನೇಹಿತರು ಎಂದಿರುವ ಅವರು, ಸೂರಜ್​ ಸೀರಿಯಲ್​ನಲ್ಲಿ ನಟಿಸುತ್ತಿರುವ ವಿಷಯ ತನಗೆ ಮನೆಯಲ್ಲಿ ತಿಳಿದಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read Full Story
07:43 PM (IST) Jan 14

Karnataka News Live 14 January 2026ವಾಲ್ಮೀಕಿ ನಿಗಮ ಹಗರಣ - ಮಾಜಿ ಸಚಿವ ಬಿ. ನಾಗೇಂದ್ರಗೆ ಬಿಗ್ ರಿಲೀಫ್; ಸಿಬಿಐ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು

ಬಹುಕೋಟಿ ರೂಪಾಯಿಗಳ ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಹಕರಿಸುವುದು ಸೇರಿದಂತೆ ನ್ಯಾಯಾಲಯವು ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.
Read Full Story
07:05 PM (IST) Jan 14

Karnataka News Live 14 January 202625 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ - ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಯೋಜನೆಯು ದಶಕಗಳಿಂದ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಯೋಜನೆ ರದ್ದುಗೊಳಿಸಿ, ಬೆಂಗಳೂರಿನ ಪ್ರಸ್ತುತ ಅಗತ್ಯಗಳಿಗೆ ತಕ್ಕಂತೆ ಹೊಸ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Read Full Story
06:50 PM (IST) Jan 14

Karnataka News Live 14 January 2026ಬೆಂಗಳೂರಿಗೆ ವಿದಾಯ ಹೇಳಿದ ಆರ್‌ಸಿಬಿ, ತವರಿನ ಪಂದ್ಯಗಳಿಗೆ ಛತ್ತೀಸ್‌ಗಢದ ರಾಯ್ಪುರ ಆತಿಥ್ಯ ಖಚಿತಪಡಿಸಿದ ಫ್ರಾಂಚೈಸಿ!

RCB Bids Goodbye to Bengaluru: Raipur to Host Home Matches in IPL 2026 ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಐಪಿಎಲ್ 2026 ಪಂದ್ಯಗಳನ್ನು ಆಯೋಜಿಸಲಿದೆ.

Read Full Story
06:45 PM (IST) Jan 14

Karnataka News Live 14 January 2026ಗಗನಸಖಿಯಾಗುವ ಕನಸು ಕಂಡಿದ್ದ ಯುವತಿಗೆ ಜೆಡಿಎಸ್ ನಾಯಕಿಯ ಪುತ್ರನಿಂದ ಕಿರುಕುಳ, ಸಾವಿಗೆ ಶರಣಾದ ಯುವತಿ

ಕಾರವಾರದ ಕದ್ರಾದಲ್ಲಿ ರಿಶೇಲ್ ಡಿಸೋಜಾ ಎಂಬ ಯುವತಿ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಜೆಡಿಎಸ್ ನಾಯಕಿ ಪುತ್ರ ಚಿರಾಗ್ ಕೊಠಾರಕರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರೀತಿ ನಿರಾಕರಿಸಿದ್ದಕ್ಕೆ ಚಿರಾಗ್ ಮಾನಸಿಕ ಹಿಂಸೆ ನೀಡಿದ್ದಾಗಿ ದೂರು ನೀಡಲಾಗಿದೆ

Read Full Story
06:35 PM (IST) Jan 14

Karnataka News Live 14 January 2026ಶಿಡ್ಲಘಟ್ಟ ಪೌರಾಯುಕ್ತೆಗೆ ರೌಡಿ ದರ್ಪ ತೋರಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನಿಂದ ಕ್ಷಮೆ ಕೇಳಿಸಿದ ಸುವರ್ಣ ನ್ಯೂಸ್!

ಸಚಿವ ಜಮೀರ್ ಅಹಮದ್ ಖಾನ್ ಪುತ್ರನ ಸಿನಿಮಾ ಪೋಸ್ಟರ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಾಜೀವ್ ಗೌಡನಿಂದ ಕ್ಷಮೆ ಕೇಳಿಸಿದೆ.

Read Full Story
05:45 PM (IST) Jan 14

Karnataka News Live 14 January 2026Karna Serial - ರಮೇಶ್‌ ಹೂಡಿದ ಬ್ರಹ್ಮಾಸ್ತ್ರದಿಂದಲೇ ತೇಜಸ್‌, ನಿತ್ಯಾ ಮದುವೆ ಮುರಿದೋಯ್ತು - ಅಂಥದ್ದೇನು ಮಾಡಿದ?

Karna Serial Episode Update: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ತೇಜಸ್‌ ಮದುವೆಗೆ ಸಕಲ ತಯಾರಿಯೂ ನಡೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ ತೇಜಸ್‌ ಮದುವೆ ಆಗೋದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಕಾರಣ ರಮೇಶ್.‌ ಹಾಗಾದರೆ ಏನಾಯ್ತು?

Read Full Story
05:06 PM (IST) Jan 14

Karnataka News Live 14 January 2026ದರ್ಶನ್ ಅಯ್ಯಪ್ಪ ಸ್ವಾಮಿ ಪರಮಭಕ್ತ , ಆದ್ರೆ ದಾಸನಿಗೆ ಈ ಸಲ ಜೈಲಲ್ಲೇ ಸಂಕ್ರಾಂತಿ! ಯಾವಾಗ ಮುಕ್ತಿ?

ನಟ ದರ್ಶನ್ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದು, ಪ್ರತಿವರ್ಷ ಸಂಕ್ರಾಂತಿಯಂದು ವಿಶೇಷ ಪೂಜೆ ಸಲ್ಲಿಸಿ ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಈ ಬಾರಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವುದರಿಂದ, ದರ್ಶನ್‌ಗೆ ಜೈಲಿನಲ್ಲೇ ಸಂಕ್ರಾಂತಿ ಆಚರಿಸುವ ಸ್ಥಿತಿ ಬಂದಿದೆ.
Read Full Story
04:48 PM (IST) Jan 14

Karnataka News Live 14 January 2026ಲಕ್ಕುಂಡಿ ನಿಧಿಗೆ ಉಂಟು ವಿಜಯನಗರ ಸಾಮ್ರಾಜ್ಯದ ನಂಟು; ಚಿನ್ನಾಭರಣಕ್ಕಿರುವ 300 ವರ್ಷ ಇತಿಹಾಸ ಬಿಚ್ಚಿಟ್ಟ ಡಿಸಿ!

ಗದಗಿನ ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯು ಸುಮಾರು 300 ವರ್ಷಗಳಷ್ಟು ಹಳೆಯದಾದ ವಿಜಯನಗರ ಕಾಲದ ಬಂಗಾರದ ಒಡವೆಗಳೆಂದು ತಿಳಿದುಬಂದಿದೆ. ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬಕ್ಕೆ ನಿವೇಶನ, ಮನೆ ಹಾಗೂ ಉದ್ಯೋಗ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ಕೊಟ್ಟ ಮಾಹಿತಿ ಇಲ್ಲಿದೆ ನೋಡಿ.

Read Full Story
04:47 PM (IST) Jan 14

Karnataka News Live 14 January 2026ನಿಧಿ ಸಿಕ್ಕ ಕುಟುಂಬ ಸರ್ವನಾಶ; ಅರ್ಧಾಯುಷ್ಯಕ್ಕೆ ಪತನ? ಪುರಾಣ, ಮನುಸ್ಮೃತಿಯಂತೆ ಏನು ಮಾಡಬೇಕು?

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬಳಿಕ ಏನು ಮಾಡಬೇಕು ಎಂದು ನೋಡಬೇಕು. ಇದ್ದಕ್ಕಿದ್ದಂತೆ ಕೆಲವರು ಶ್ರೀಮಂತರಾಗುವುದುಂಟು. ಆದರೆ ಒಂದಲ್ಲ ಒಂದು ರೀತಿಯ ಸಂಕಷ್ಟಗಳು ಬರುತ್ತವೆ, ಅರ್ಧಾಯುಷ್ಯಕ್ಕೆ ಸಾಯುತ್ತಾರೆ, ಒಂದೊಂದು ದಿಕ್ಕಿನಿಂದ ಸಮಸ್ಯೆ ಬರುವುದು. 

Read Full Story
04:31 PM (IST) Jan 14

Karnataka News Live 14 January 2026ಅರ್ಧ ಕೆಜಿ ಲಕ್ಕುಂಡಿ ನಿಧಿ, ಆದ್ರೆ ಇದೆಂಥಾ ವಿಧಿ? ಸರ್ಕಾರಕ್ಕೆ ನಿಧಿ ಕೊಟ್ಟು ಬೀದಿಗೆ ಬಿತ್ತಾ ಕುಟುಂಬ?

ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೋಡುವಾಗ ಗಂಗವ್ವ, ಪ್ರಜ್ವಲ್ ಎಂಬ ತಾಯಿ-ಮಗನಿಗೆ ಚಿನ್ನಾಭರಣಗಳಿದ್ದ ಮಡಿಕೆಯೊಂದು ಸಿಕ್ಕಿದೆ. ಕೆಜಿಎಫ್ ಕಥೆಯಂತೆ ಆಸೆಪಡದೆ, ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿದ ಈ ಘಟನೆಯು, ಸಿಕ್ಕಿದ್ದು ನಿಧಿಯೋ ಅಥವಾ ಪೂರ್ವಜರ ಆಸ್ತಿಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story
03:55 PM (IST) Jan 14

Karnataka News Live 14 January 2026BBK 12 ಮಿಡ್‌ ವೀಕ್‌ ಎಲಿಮಿನೇಶನ್‌ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty

Bigg Boss Kannada Season 12 Episode: ಬಿಗ್‌ ಬಾಸ್‌ ಮನೆಯಲ್ಲಿ ಮಿಡ್‌ ವೀಕ್‌ ಎಲಿಮಿನೇಶನ್‌ ಶುರುವಾಗಿದೆ. ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಮನೆಯಿಂದ ಯಾರು ಎಲಿಮಿನೇಟ್‌ ಆಗ್ತಾರೆ ಎಂದು ಸೂಚನೆ ನೀಡಿದೆ. ಹಾಗಾದರೆ ಯಾರು ಔಟ್‌ ಆದರು?

Read Full Story
03:47 PM (IST) Jan 14

Karnataka News Live 14 January 2026ಸಿದ್ದರಾಮಯ್ಯ ಮುಡಾ ಪ್ರಕರಣಕ್ಕೆ ಮಹತ್ವದ ತಿರುವು, ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧ ತನಿಖೆಗೆ ಸರ್ಕಾರ ಅಸ್ತು!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ಗೆ ತೀರ್ಪನ್ನು ಕಾಯ್ದಿರಿಸಿದೆ.

Read Full Story
02:40 PM (IST) Jan 14

Karnataka News Live 14 January 2026ಕಬ್ಬು ಕಟಾವು ಕಾರ್ಮಿಕರ ಟ್ರ್ಯಾಕ್ಟರ್ ಅಪಘಾತ; ಇಂದು ಅಕ್ಕ-ತಮ್ಮ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ!

ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಅಕ್ಕ-ತಮ್ಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ, ವಿಜಯನಗರ ಜಿಲ್ಲೆಯ ತಾಂಡಾಗಳಿಗೆ ಮರಳುತ್ತಿದ್ದ ಕಬ್ಬು ಕಟಾವು ಕಾರ್ಮಿಕರ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

Read Full Story