MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕಬ್ಬು ಕಟಾವು ಕಾರ್ಮಿಕರ ಟ್ರ್ಯಾಕ್ಟರ್ ಅಪಘಾತ; ಇಂದು ಅಕ್ಕ-ತಮ್ಮ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ!

ಕಬ್ಬು ಕಟಾವು ಕಾರ್ಮಿಕರ ಟ್ರ್ಯಾಕ್ಟರ್ ಅಪಘಾತ; ಇಂದು ಅಕ್ಕ-ತಮ್ಮ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ!

ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಅಕ್ಕ-ತಮ್ಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ, ವಿಜಯನಗರ ಜಿಲ್ಲೆಯ ತಾಂಡಾಗಳಿಗೆ ಮರಳುತ್ತಿದ್ದ ಕಬ್ಬು ಕಟಾವು ಕಾರ್ಮಿಕರ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

2 Min read
Author : Sathish Kumar KH
Published : Jan 14 2026, 02:40 PM IST
Share this Photo Gallery
  • FB
  • TW
  • Linkdin
  • Whatsapp
15
ಭೀಕರ ಟ್ರ್ಯಾಕ್ಟರ್ ಅಪಘಾತ
Image Credit : Asianet News

ಭೀಕರ ಟ್ರ್ಯಾಕ್ಟರ್ ಅಪಘಾತ

ಬಾಗಲಕೋಟೆ/ವಿಜಯನಗರ (ಜ.14): ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಬಳಿ ಕಳೆದ ಜನವರಿ 10ರಂದು ಸಂಭವಿಸಿದ ಭೀಕರ ಟ್ರ್ಯಾಕ್ಟರ್ ಅಪಘಾತದ ಗಾಯಾಳುಗಳ ಪೈಕಿ ಇಂದು ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಕಾರ್ಮಿಕ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.

25
ಘಟನೆಯ ಹಿನ್ನೆಲೆ
Image Credit : Asianet News

ಘಟನೆಯ ಹಿನ್ನೆಲೆ

ಕಳೆದ ಜನವರಿ 10ರಂದು ಕಬ್ಬು ಕಟಾವು ಕಾರ್ಮಿಕರು ಕೆಲಸ ಮುಗಿಸಿಕೊಂಡು ತಮ್ಮದೇ ಆದ ಟ್ರ್ಯಾಕ್ಟರ್‌ನಲ್ಲಿ ವಿಜಯನಗರ ಜಿಲ್ಲೆಯ (ಹೊಸಪೇಟೆ) ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ ತಾಂಡಾ ಹಾಗೂ ತಾಳೆಬಸಾಪುರ ತಾಂಡಾ ಕಡೆಗೆ ಮರಳುತ್ತಿದ್ದರು. ಈ ವೇಳೆ ಕಮತಗಿ ಪಟ್ಟಣದ ಬಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಟ್ರ್ಯಾಕ್ಟರ್ ಎಂಜಿನ್‌ನ ಬಂಪರ್ ಹಠಾತ್ ಕಟ್ ಆಗಿ ಕೆಳಗೆ ಬಿದ್ದಿದೆ. ಇದರ ಪರಿಣಾಮವಾಗಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಅದರ ಮೇಲೆಯೇ ಏರಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು.

Related Articles

Related image1
ಟ್ರ್ಯಾಕ್ಟರ್ ಮೇಲೆ ನಡುಗುವ ಏಣಿ ಹತ್ತಿ ಎಸ್‌ಬಿಐ ಬ್ಯಾಂಕ್ ತಲುಪಿದ ಸಿಬ್ಬಂದಿ ಗ್ರಾಹಕರು..!
Related image2
ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ; ಹಳಿಯಾಳ ಯುವಕ ಸ್ಥಳದಲ್ಲೇ ಸಾವು
35
ಮತ್ತಿಬ್ಬರು ಬಲಿ
Image Credit : Asianet News

ಮತ್ತಿಬ್ಬರು ಬಲಿ

ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪಾರ್ವತಿಬಾಯಿ (30) ಹಾಗೂ ಆಕೆಯ ತಮ್ಮ ಪಾಂಡು ನಾಯಕ್ (26) ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಇಂದು ಅಕ್ಕ-ತಮ್ಮ ಇಬ್ಬರೂ ಸಾವನ್ನಪ್ಪಿರುವುದು ಆ ತಾಂಡಾಗಳಲ್ಲಿ ನೀರವ ಮೌನಕ್ಕೆ ಕಾರಣವಾಗಿದೆ.

45
ಮುಂದುವರೆದ ಸಾವಿನ ಸರಣಿ
Image Credit : Asianet News

ಮುಂದುವರೆದ ಸಾವಿನ ಸರಣಿ

ಅಪಘಾತ ಸಂಭವಿಸಿದ ದಿನದಂದು ಸ್ಥಳದಲ್ಲೇ ರುಕ್ಮಿಣಿಬಾಯಿ ನಾಯಕ್ (36), ಆಕೆಯ ಪುತ್ರಿ ಶಿವಾನಿ ನಾಯಕ್ (6) ಹಾಗೂ ಪಾರ್ವತಿಬಾಯಿ ಅವರ ಪುತ್ರ ರೋಷನ್ ನಾಯಕ್ (4) ಮೃತಪಟ್ಟಿದ್ದರು. ಒಂದೇ ಕುಟುಂಬದ ತಾಯಿ-ಮಗಳು ಹಾಗೂ ಮತ್ತೊಂದು ಮಗು ಅಂದು ಬಲಿಯಾಗಿದ್ದರು. ಇಂದು ಪಾರ್ವತಿಬಾಯಿ ಮತ್ತು ಪಾಂಡು ಅವರ ಸಾವಿನೊಂದಿಗೆ ಎರಡು ಕುಟುಂಬಗಳ ಒಟ್ಟು ಐವರು ಸದಸ್ಯರು ಈ ದುರ್ಘಟನೆಯಲ್ಲಿ ಮಣ್ಣಾಗಿದ್ದಾರೆ.

55
ಸ್ಥಳೀಯರಲ್ಲಿ ಆತಂಕ
Image Credit : Asianet News

ಸ್ಥಳೀಯರಲ್ಲಿ ಆತಂಕ

ದುಡಿಯಲು ಹೋಗಿ ಹಸನ್ಮುಖಿಯಾಗಿ ಊರಿಗೆ ಮರಳುತ್ತಿದ್ದ ಬಡ ಕಾರ್ಮಿಕರು ಅರ್ಧದಾರಿಯಲ್ಲೇ ಹೆಣವಾಗಿರುವುದು ಅತೀವ ನೋವು ತಂದಿದೆ. ಘಟನಾ ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತೀ ವೇಗ ಅಥವಾ ಯಾಂತ್ರಿಕ ದೋಷ ಈ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಬಡ ಕಬ್ಬು ಕಾರ್ಮಿಕರ ಸಾವಿಗೆ ಜಿಲ್ಲೆಯಾದ್ಯಂತ ಸಂತಾಪ ವ್ಯಕ್ತವಾಗುತ್ತಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬಾಗಲಕೋಟೆ
ಸಕ್ಕರೆ
ಅಪಘಾತ

Latest Videos
Recommended Stories
Recommended image1
ತೀರ್ಥಹಳ್ಳಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಡಿಕ್ಕಿ; ಶೃಂಗೇರಿಯ ಒಂದೇ ಕುಟುಂಬದ ನಾಲ್ವರ ಸಾವು!
Recommended image2
ಶಾಲೆಯಲ್ಲೇ ಅತಿಥಿ ಶಿಕ್ಷಕ-SDMC ಅಧ್ಯಕ್ಷರ ಬಡಿದಾಟ; ಮಾದರಿ ಶಾಲೆಯಲ್ಲಿ 'ಪುಂಡರ' ವರ್ತನೆ, ವಿಡಿಯೋ ವೈರಲ್!
Recommended image3
2 ವರ್ಷಕ್ಕೂ ಮೊದಲೇ ರಂಗೇರಿದ ಅರಸೀಕೆರೆ ಅಖಾಡ; ಶಿವಲಿಂಗೇಗೌಡರನ್ನ ಸೋಲಿಸಲು ಸಿದ್ಧವಾದ ಜೆಡಿಎಸ್?
Related Stories
Recommended image1
ಟ್ರ್ಯಾಕ್ಟರ್ ಮೇಲೆ ನಡುಗುವ ಏಣಿ ಹತ್ತಿ ಎಸ್‌ಬಿಐ ಬ್ಯಾಂಕ್ ತಲುಪಿದ ಸಿಬ್ಬಂದಿ ಗ್ರಾಹಕರು..!
Recommended image2
ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ; ಹಳಿಯಾಳ ಯುವಕ ಸ್ಥಳದಲ್ಲೇ ಸಾವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved