ಆ್ಯಪಲ್ ಮ್ಯಾಕ್ಬುಕ್ ಬೆಲೆ 1 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.ಆದರೆ ಇನ್ಮುಂದೆ ಕೇವಲ 52,000 ರೂಪಾಯಿಗೆ ಆ್ಯಪಲ್ ಮ್ಯಾಕ್ಬಕ್ ಲಭ್ಯವಾಗಲಿದೆ.
- Home
- News
- State
- Karnatata Latest News Live: 1 ಲಕ್ಷ ರೂ ಮ್ಯಾಕ್ಬುಕ್ ಇನ್ನು ಕೇವಲ 52,000 ರೂ, ಆ್ಯಪಲ್ ಲ್ಯಾಪ್ಟಾಪ್ ಲಾಂಚ್ಗೆ ತಯಾರಿ
Karnatata Latest News Live: 1 ಲಕ್ಷ ರೂ ಮ್ಯಾಕ್ಬುಕ್ ಇನ್ನು ಕೇವಲ 52,000 ರೂ, ಆ್ಯಪಲ್ ಲ್ಯಾಪ್ಟಾಪ್ ಲಾಂಚ್ಗೆ ತಯಾರಿ

ಬೆಂಗಳೂರು (ಆ.12): ರಾಜ್ಯ ರಾಜಕಾರಣದಲ್ಲಿ ಅಪರೂಪದ ಬೆಳವಣಿಗೆ ಎನ್ನವಂತೆ, ಹಾಲಿ ಮಂತ್ರಿಯೇ ವಜಾ ಆಗಿದ್ದಾರೆ. ಸೆಪ್ಟೆಂಬರ್ಗೆ ರಾಜ್ಯದಲ್ಲಿ ಕ್ರಾಂತಿ ಎನ್ನುತ್ತಿದ್ದ ಸಹಕಾರ ಸಚಿವ ಆಗಸ್ಟ್ನಲ್ಲೇ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಸಹಕಾರ ಸಚಿವ ಕೆಎನ್ ರಾಜಣ್ಣ ಅವರವನ್ನು ಸಂಪುಟದಿಂದ ವಜಾ ಮಾಡಲಾಗಿದೆ.'ಮತಗಳ್ಳತನ ಆರೋಪ ಮಾಡಲು ನಾಚಿಕೆಯಾಗಬೇಕು' ಎಂದಿದ್ದಕ್ಕೆ ಮಂತ್ರಿ ತಲೆದಂಡವಾಗಿದೆ. ರಾಜೀನಾಮೆ ಕೊಡಲು ಮುಂದಾದರೂ ಅದನ್ನು ತಿರಸ್ಕರಿಸಿ ಕಾಂಗ್ರೆಸ್ ವರಿಷ್ಠರು ವಜಾ ಮಾಡಿದ್ದಾರೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್.
Karnataka News Live 12th August:1 ಲಕ್ಷ ರೂ ಮ್ಯಾಕ್ಬುಕ್ ಇನ್ನು ಕೇವಲ 52,000 ರೂ, ಆ್ಯಪಲ್ ಲ್ಯಾಪ್ಟಾಪ್ ಲಾಂಚ್ಗೆ ತಯಾರಿ
Karnataka News Live 12th August:ಧರ್ಮಸ್ಥಳದಲ್ಲಿ ಪತ್ತೆಯಾಗದ ಕಳೇಬರ, SIT ಶವ ಶೋಧನೆ ಸ್ಥಗಿತ ಚರ್ಚಿಸಿ ನಿರ್ಧಾರ ಎಂದ ಸಿಎಂ
ಧರ್ಮಸ್ಥಳದ ಶವಗಳ ಶೋಧನೆ ಬಗ್ಗೆ ಶಾಸಕಾಂಗ ಸಭೆಯಲ್ಲಿ ತೀವ್ರ ಚರ್ಚೆಯಾಗಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ 13ನೇ ಸ್ಥಳದಲ್ಲೂ ಶವ ಸಿಗದಿದ್ದರೆ ಎಸ್ಐಟಿ ಶವ ಶೋಧನೆ ಸ್ಥಗಿತದ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Karnataka News Live 12th August:ಸಿದ್ದರಾಮಯ್ಯ- ಡಿಕೆಶಿಗೆ ಹೋಗಿ ಕಂಪ್ಲೇಂಟ್ ಕೊಡ್ತೇನೆ! 'ಕೊತ್ತಲವಾಡಿ' ಕುರಿತು ಯಶ್ ಅಮ್ಮ ಪ್ರತಿಕ್ರಿಯೆ...
'ಕೊತ್ತಲವಾಡಿ' ಸಿನಿಮಾದ ಬಗ್ಗೆ ಮಾತನಾಡಿದವರ ಕುರಿತಂತೆ ಗರಂ ಆಗಿರೋ ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್ ಅವರು ಸಿದ್ದರಾಮಯ್ಯ-ಡಿಕೆಶಿಗೆ ಹೋಗಿ ಕಂಪ್ಲೇಂಟ್ ಕೊಡ್ತೇನೆ ಎಂದಿದ್ದಾರೆ. ಅವರು ಹೇಳಿದ್ದೇನು?
Karnataka News Live 12th August:ಪತಿಗೆ ವೀರ್ಯಾಣು ಕಡಿಮೆ, ಸೊಸೆ ಗರ್ಭಿಣಿಯಾಗಲು ಮಾವ,ಸಂಬಂಧಿ ನಿರಂತರ ಅತ್ಯಾ*ರ
ಪತಿಗೆ ವೀರ್ಯಾಣು ಕಡಿಮೆ, ಪತಿಯಿಂದ ಗರ್ಭಿಣಿಯಾಗಲ್ಲ ಎಂದು ಮಾವ ಹಾಗೂ ಸಂಬಂಧಿಯೊಬ್ಬರು ಸೊಸೆ ಮೇಲೆ ನಿರಂತರ ಅತ್ಯಾ*ರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
Karnataka News Live 12th August:Dharmasthala Case - ಸತ್ಯ ಹೊರಕ್ಕೆ ಬಂದ್ರೆ ಆತ... ಧರ್ಮಸ್ಥಳದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯವೇನು?
ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಕೋಡಿಮಠದ ಸ್ವಾಮೀಜಿ ಹೇಳಿದ್ದೇನು? ಇವರು ಹೇಳಿರುವ ಹಿಂದಿನ ನಿಗೂಢ ಅರ್ಥವೇನು? ಇಲ್ಲಿದೆ ಡಿಟೇಲ್ಸ್...
Karnataka News Live 12th August:ಗತವೈಭವ ಮರುಕಳಿಸುವ ಜಾವಾ ಯೆಜ್ಡಿ ರೋಡ್ಸ್ಟರ್ ಬೈಕ್ ಲಾಂಚ್, ಬೆಲೆ ಎಷ್ಟು?
ಹೊಚ್ಚ ಹೊಸ ಜಾವಾ ಯೆಜ್ಡೆ ರೋಡ್ಸ್ಟರ್ ಬೈಕ್ ಬಿಡುಗಡೆಯಾಗಿದೆ. ರೆಟ್ರೋ ಶೈಲಿಯ ಈ ಬೈಕ್ ಮೊದಲ ನೋಟಕ್ಕೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಹೊಸ ಬೈಕ್ ವಿಶೇಷತೆ ಬೆಲೆ ಕುರಿತು ಫುಲ್ ವಿವರ ಇಲ್ಲಿದೆ.
Karnataka News Live 12th August:ಹಳದಿ ಬೆನ್ನಲ್ಲೇ ಸದ್ದು ಮಾಡ್ತಿದೆ ನಮ್ಮ ಮೆಟ್ರೋ ರೈಡ್ ಲೈನ್, ಹೆಬ್ಬಾಳ-ಸರ್ಜಾಪುರ ನಿಲ್ದಾಣದ ಲಿಸ್ಟ್
ಹಳದಿ ಮೆಟ್ರೋ ಉದ್ಘಾಟನೆ ಆಯ್ತು. ಇದೀಗ ಕೆಂಪು ಮೆಟ್ರೋ. ಬೆಂಗಳೂರಿನ ಭಾರಿ ಟ್ರಾಫಿಕ್ ವಲಯ ಎಂದೇ ಗುರುತಿಸಿಕೊಂಡ ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಕೆಂಪು ಮೆಟ್ರೋ ಸಂಚಾರ ಆರಂಭಿಸಲಿದೆ. ಯಾವೆಲ್ಲಾ ಪ್ರದೇಶ ಮೆಟ್ರೋ ಕವರ್ ಮಾಡಲಿದೆ.
Karnataka News Live 12th August:ರಾಜಭವನ ವೀಕ್ಷಣೆಗೆ ಆ.16ರಿಂದ 3 ದಿನ ಸಾರ್ವಜನಿಕರಿಗೆ ಮುಕ್ತ ಪ್ರವೇಶ, ನಿಯಮಗಳೇನು?
Karnataka News Live 12th August:ಸರ್ವೇಪಲ್ಲಿ ರಾಧಾಕೃಷ್ಣನ್ ಜೊತೆಗಿರೋ ಪುಟ್ಟ ಹುಡುಗ, ಕನ್ನಡ ಭಾಷೆಗೆ ಅವಮಾನಿಸಿದ್ದು ನೆನಪಿದೆಯಾ? ಯಾರಿವರು ಗೆಸ್ ಮಾಡಿ!
ಈ ಫೋಟೋದಲ್ಲಿರೋ ಪುಟ್ಟ ಹುಡುಗ ಯಾರು ಗೊತ್ತಾ? ಮಾಜಿ ಉಪರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಈ ಹುಡುಗ ಈಗ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ. ಯಾರಿದು? ಕನ್ನಡ ಭಾಷೆಗೆ ಅವಮಾನಿಸಿ ಪೇಚಿಗೆ ಸಿಲುಕಿದ್ದ.!
Karnataka News Live 12th August:ಪುತ್ರಿಯ ಚಿನ್ನ ಕಳ್ಳಸಾಗಣೆ ಪ್ರಕರಣದ ನಂತರ, ಡಿಜಿಪಿ ರಾವ್ ಮತ್ತೆ ಹೊಸ ಇಲಾಖೆಗೆ ನಿಯೋಜನೆ
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಬಂಧನದ ನಂತರ ಕಡ್ಡಾಯ ರಜೆಯಲ್ಲಿದ್ದ ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಿಸಲಾಗಿದೆ. ರನ್ಯಾ ರಾವ್ ಅವರನ್ನು 14.2 ಕೆಜಿ ಚಿನ್ನದೊಂದಿಗೆ ಬಂಧಿಸಲಾಗಿತ್ತು.
Karnataka News Live 12th August:ಹಳದಿ ಮೆಟ್ರೋ ನಿಲ್ದಾಣಗಳ ಹೆಸರು ಅದಲು-ಬದಲು; ಗೀತಾ-ಸೀತಾ ಕಥೆಗೆ ಪ್ರಯಾಣಿಕರು ಕನ್ಫ್ಯೂಸ್
Bengaluru Yellow Line Metro Station Name: ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗದಲ್ಲಿ ಎರಡು ನಿಲ್ದಾಣಗಳ ಹೆಸರು ಅದಲು-ಬದಲು ಆಗಿರುವುದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ.
Karnataka News Live 12th August:ಚಾಟಿಂಗ್ ಮಾಡುತ್ತಾ ಎಐ ಚಾಟ್ಬಾಟ್ ಜೊತೆ ಲವ್, ನಿಶ್ಚಿತಾರ್ಥ ಮಾಡಿಕೊಂಡ ಯುವತಿ
ಎಐ ಇದೀಗ ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಈ ಪೈಕಿ ಎಐ ಚಾಟ್ಬಾಟ್ ಜೊತೆ ಚಾಟಿಂಗ್ ಮಾಡುತ್ತಿದ್ದ ಯುವತಿಗೆ ಲವ್ ಶುರುವಾಗಿದೆ. ಇದೀಗ ಎಐ ಚಾಟ್ಬಾಟ್ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾಳೆ.
Karnataka News Live 12th August:ದತ್ತಪೀಠ ಘೋರಿಗಳ ಉತ್ಖನನಕ್ಕೆ ವಿಹಿಂಪ ಆಗ್ರಹ; ಧರ್ಮಸ್ಥಳ ಮಾದರಿಯಲ್ಲಿ ಜಿಪಿಆರ್ ಯಂತ್ರ ಬಳಕೆಗೆ ಮನವಿ!
ಚಿಕ್ಕಮಗಳೂರಿನ ದತ್ತಪೀಠದ ಆವರಣದಲ್ಲಿರುವ ಘೋರಿಗಳ ಉತ್ಖನನಕ್ಕೆ ಹಿಂದೂ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ. ಧರ್ಮಸ್ಥಳದ ಉತ್ಖನನದ ಮಾದರಿಯಲ್ಲೇ ಇಲ್ಲಿಯೂ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಘೋರಿಗಳಲ್ಲಿ ಯಾರನ್ನು ಹೂಳಲಾಗಿದೆ ಎಂಬುದರ ಸತ್ಯಾಸತ್ಯತೆ ಹೊರತೆಗೆಯಲು ಆಗ್ರಹಿಸಲಾಗಿದೆ.
Karnataka News Live 12th August:ಟ್ರಾಫಿಕ್ ತಪ್ಪಿಸಿ ಹಳದಿ ಮೆಟ್ರೋ ಬಳಸಿ, ಉದ್ಯೋಗಿಗಳಿಗೆ ಇನ್ಫೋಸಿಸ್ ಸೂಚನೆ
ಬೆಂಗಳೂರಿನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಹಳದಿ ಮೆಟ್ರೋ ಮಾರ್ಗವನ್ನು ಬಳಸಲು ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ಪ್ರೋತ್ಸಾಹಿಸುತ್ತಿದೆ. ELCITA ಫೀಡರ್ ಶಟಲ್ಗಳು ಮೆಟ್ರೋ ನಿಲ್ದಾಣದಿಂದ ಇನ್ಫೋಸಿಸ್ ಕಚೇರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.
Karnataka News Live 12th August:ಇಲ್ಲಾಂದ್ರೆ ಹಿಂಗ್ ಆಗುತ್ತೆ - ರಾಜುಗೌಡ ಸ್ಫೋಟಕ ಹೇಳಿಕೆಗೆ ಸತೀಶ್ ಜಾರಕಿಹೊಳಿ ಫಸ್ಟ್ ರಿಯಾಕ್ಷನ್
KN Rajanna: ಮಾಜಿ ಸಚಿವ ರಾಜುಗೌಡ ಅವರ ಸ್ಫೋಟಕ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
Karnataka News Live 12th August:ದೇಶದ ಅತೀ ಕಡಿಮೆ ಬೆಲೆಯ SUV ಸಿಟ್ರೊಯೆನ್ C3 & C3X ಕಾರು ಲಾಂಚ್, ಬೆಲೆ ಕೇವಲ 5.25 ಲಕ್ಷ ರೂ
ಭಾರತದಲ್ಲಿ ಅತೀ ಕಡಿಮೆ ಬೆಲೆಯ ಎಸ್ಯುವಿ ಕಾರು ಬಿಡುಗಡೆಯಾಗಿದೆ. ಸಿಟ್ರೊಯೆನ್ C3 & C3X ವೇರಿಯೆಂಟ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಶೇಷ ಅಂದರೆ ಇದರ ಆರಂಭಿಕ ಬೆಲೆ ಕೇವಲ 5.25 ಲಕ್ಷ ರೂ.
Karnataka News Live 12th August:ಧರ್ಮಸ್ಥಳದ 13ನೇ ಪಾಯಿಂಟ್ನಲ್ಲಿ 14 ಅಡಿ ಅಗೆದರೂ ಕಳೇಬರ ಸಿಗಲಿಲ್ಲ; ಸಿಕ್ಕಿದ್ದು ಬರೀ ನೀರು!
ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ 13ನೇ ಪಾಯಿಂಟ್ನಲ್ಲಿ 14 ಅಡಿ ಅಗೆದರೂ ಅಸ್ತಿಪಂಜರ ಸಿಗದೆ ನೀರು ಉಕ್ಕಿ, ಶೋಧ ಕಾರ್ಯಕ್ಕೆ ತಡೆ ಉಂಟಾಗಿದೆ. ನೀರನ್ನು ಹೊರಹಾಕಲು ಮೋಟರ್ ಅಳವಡಿಸಲಾಗಿದ್ದು, ಹಿಟಾಚಿ ಯಂತ್ರಗಳ ಕೆಲಸ ತಾತ್ಕಾಲಿಕ ಸ್ಥಗಿತಗೊಂಡಿದೆ. ಅನಾಮಿಕನ ಸುಳಿವುಗಳ ಮೇಲೆ ಎಸ್ಐಟಿ ಶೋಧ ಮುಂದುವರೆಸಿದೆ.
Karnataka News Live 12th August:ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ; ಡಿಸಿಎಂ ಡಿಕೆ ಶಿವಕುಮಾರ್
ಪ್ರಧಾನಿ ಮೋದಿಗೆ ನೀಡಿದ ಬೆಳ್ಳಿ ಗಣೇಶ ವಿಗ್ರಹ ಉಡುಗೊರೆ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಶಾಸಕರಿಂದ ಪಡೆದ ಉಡುಗೊರೆಯಲ್ಲ, ಸ್ವಂತ ಹಣದಿಂದ ಖರೀದಿಸಿದ್ದು ಎಂದು ತಿಳಿಸಿದ್ದಾರೆ.