ಬೆಂಗಳೂರಿನ ಬನಶಂಕರಿ 6ನೇ ಹಂತದ ಜನನಿಬಿಡ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಚಿರತೆಯ ಓಡಾಟದ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆಯು ಪಟಾಕಿ ಸಿಡಿಸಿ ಅದನ್ನು ಓಡಿಸಲು ಯತ್ನಿಸಿದೆ.
- Home
- News
- State
- Karnataka Latest News Live: ಬನಶಂಕರಿ ಬಳಿ ಪ್ರತ್ಯಕ್ಷವಾಯ್ತು ಚಿರತೆ - ವೀಕೆಂಡ್ ಎಂಜಾಯ್ ಮಾಡ್ಬೇಕಾದ್ರೆ ಹುಷಾರು!
Karnataka Latest News Live: ಬನಶಂಕರಿ ಬಳಿ ಪ್ರತ್ಯಕ್ಷವಾಯ್ತು ಚಿರತೆ - ವೀಕೆಂಡ್ ಎಂಜಾಯ್ ಮಾಡ್ಬೇಕಾದ್ರೆ ಹುಷಾರು!

ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ (ಪಿಯುಸಿವರೆಗೆ) ಶನಿವಾರ ರಜೆ ಘೋಷಿಸಲಾಗಿದೆ.
ಶೃಂಗೇರಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ, ನಂದಿನಿ, ನಳಿನಿ ನದಿಗಳು ತುಂಬಿ ಹರಿಯುತ್ತಿವೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಶನಿವಾರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳ ಭಾಗದ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹಾರಂಗಿ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
Karnataka Latest News Live 25 July 2026ಬನಶಂಕರಿ ಬಳಿ ಪ್ರತ್ಯಕ್ಷವಾಯ್ತು ಚಿರತೆ - ವೀಕೆಂಡ್ ಎಂಜಾಯ್ ಮಾಡ್ಬೇಕಾದ್ರೆ ಹುಷಾರು!
Karnataka Latest News Live 25 July 2026ಡ್ಯಾಡಿಸ್ ಹೋಮ್.. ಯಶ್ ಅವರ ಬೆಂಗಳೂರಿನ ಕನಸಿನ ಮನೆ ಹೇಗಿದೆ? - ಒಳಾಂಗಣ ನೋಡಿದ್ರೆ ನೀವು ಬೆರಗಾಗ್ತೀರಾ!
Yash Prestige Golfshire Home: ನಗರದ ಗದ್ದಲದಿಂದ ದೂರವಾಗಿ, ಉತ್ತರ ಬೆಂಗಳೂರಿನಲ್ಲಿ ನಟ ಯಶ್ ಅವರು ತಮ್ಮ ಕುಟುಂಬಕ್ಕಾಗಿ ಸುಂದರ ಹಾಗೂ ಶಾಂತಿಯುತವಾದ ಐಷಾರಾಮಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ.
Karnataka Latest News Live 25 July 2026Chamarajanagar - ರೈತರ ಬೆಳೆ ಒಣಗುತ್ತಿದೆ, ವನ್ಯಜೀವಿಗಳಿಗೆ ನೀರಿಲ್ಲ - ಇಲ್ಲಿದೆ ಉಡುತೊರೆಹಳ್ಳದ ನೋವಿನ ಕಥೆ
Chamarajanagar: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಅಂತಾರಲ್ಲ,ಆಗಾಗಿದೆ ಈ ಭಾಗದ ರೈತರು ಹಾಗೂ ಕಾಡುಪ್ರಾಣಿಗಳ ಬದುಕು. ಈ ಜಲಾಶಯದ ನೀರು ಯಾವಾಗಲೂ ಖಾಲಿಯಾದ ನಿದರ್ಶನ ಕೂಡ ಇಲ್ಲ.
Karnataka Latest News Live 25 July 2026ರಾವಣನ ಪಾತ್ರಕ್ಕೆ ಯಶ್ ಅವರಂತಹ ಔರಾ ಬೇಕಿತ್ತು - ರಣಬೀರ್ ಕಪೂರ್ ಬಿಚ್ಚಿಟ್ಟ ರಹಸ್ಯವೇನು?
ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ನಟ ಯಶ್, ಇದೀಗ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ 'ರಾಮಾಯಣ'ದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Karnataka Latest News Live 25 July 2026'ಕಂಗ್ರಾಟ್ಸ್ ಮೈ ಡಿಯರ್ ಕಾಕ್ರೋಚ್ಸ್..' ಧಮೇಂದ್ರ ಪ್ರಧಾನ್ ರಾಜಿನಾಮೆ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಹೇಳಿದ್ದೇನು?
ನೀಟ್ ಹಗರಣದ ಈ ಹೈ-ವೋಲ್ಟೇಜ್ ಡ್ರಾಮಾ ಈಗ ಸಚಿವರ ರಾಜೀನಾಮೆ ಮೂಲಕ ಒಂದು ಹಂತಕ್ಕೆ ಬಂದು ತಲುಪಿದ್ದು, ಮುಂದಿನ ಬೆಳವಣಿಗೆಗಳು ಯಾವ ಕಡೆ ಸಾಗುತ್ತವೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಕಾಶ್ ರಾಜ್ ಅವರ ಈ 'ವಿಕ್ಟರಿ ಪೋಸ್ಟ್' ಸದ್ಯ ಸಂಚಲನ ಸೃಷ್ಟಿಸಿದೆ.
Karnataka Latest News Live 25 July 2026ರಾಜ್ ಬಿ ಶೆಟ್ಟಿ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ - ಆ ಸತ್ಯ ಬಿಚ್ಚಿಟ್ಟ ಪ್ರಜ್ವಲ್ ದೇವರಾಜ್
Karavali Kannada Movie: ನಟ ಪ್ರಜ್ವಲ್ ದೇವರಾಜ್ ಅವರ ಪಾಲಿಗೆ 40ನೇ ಸಿನಿಮಾ 'ಕರಾವಳಿ' ಕೂಡ ಅಂತಹದ್ದೇ ಒಂದು ಮಹತ್ವದ ಚಿತ್ರ. ಸುಮಾರು ಮೂರು ವರ್ಷಗಳ ಕಾಲ ಈ ಸಿನಿಮಾ ಅವರ ಜೀವನದ ಭಾಗವಾಗಿತ್ತು.
Karnataka Latest News Live 25 July 2026ಸಿ ಅಶ್ವಥ್ ಜೋಡಿ, ನಾಗಮಂಡಲದ ಮ್ಯಾಂಡೋಲಿನ್ ಮಾಂತ್ರಿಕ ಎನ್ಎಸ್ ಪ್ರಸಾದ್ ಇನ್ನಿಲ್ಲ!
'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ (66) ಹೃದಯಾಘಾತದಿಂದ ನಿಧನರಾದರು. ಕನ್ನಡ ಸುಗಮ ಸಂಗೀತ ಮತ್ತು ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು, ಸಿ. ಅಶ್ವಥ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದರು.
Karnataka Latest News Live 25 July 2026ಆಷಾಢ ಏಕಾದಶಿ - ಬೆಂಗಳೂರಿನಲ್ಲಿ ಮಂತ್ರಾಲಯ ಶ್ರೀಗಳಿಂದ ಭಕ್ತರಿಗೆ ತಪ್ತ ಮುದ್ರಧಾರಣೆ, ವಿಶೇಷ ಪೂಜೆ
Ashada Ekadashi: ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
Karnataka Latest News Live 25 July 2026'ಎಸ್. ಜಾನಕಿ ಅಂತ್ಯಸಂಸ್ಕಾರಕ್ಕೆ ಹೋಗಿಲ್ಲ'.. ಟ್ರೋಲ್ ವಿರುದ್ಧ ಗಾಯಕಿ ಅನುರಾಧಾ ಭಟ್ ಹೇಳಿದ್ದೇನು?
“ತಮ್ಮನ್ನು ತಾವು ಜಾನಕಿ ಅಮ್ಮನವರ “ಅಭಿಮಾನಿಗಳು” ಎಂದು ಕರೆದುಕೊಳ್ಳುವವರು, ಅವರ ಹೆಸರಿನಲ್ಲಿ ಮತ್ತೊಬ್ಬರನ್ನು ಅವಮಾನಿಸುವ ಮೊದಲು ಜಾನಕಿ ಅಮ್ಮನವರ ಸರಳತೆ, ವಿನಯ ಮತ್ತು ಮಾನವೀಯತೆಯನ್ನು ಅನುಸರಿಸಲು ಪ್ರಯತ್ನಿಸಿದ್ದರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತಿತ್ತು..”
Karnataka Latest News Live 25 July 2026ವಿಜಯನಗರ ಅರಸರ ಕಾಲದ ಅಣೆಕಟ್ಟಿಗೆ ಮತ್ತೆ ರೈತರ ಮೊರೆ - ಅಷ್ಟಕ್ಕೂ ಆಗಿದ್ದೇನು?
Gangavathi: ವಿಜಯನಗರ ಕಾಲುವೆಗೆ ತುಂಗಭದ್ರಾ ನದಿಯಿಂದ ಸಮರ್ಪಕವಾಗಿ ನೀರು ಹರಿಯದ ಕಾರಣ ರೈತರು ಅಣೆಕಟ್ಟಿನ ಕೆಳ ಭಾಗದ ಮೋರೆ (ತಡೆಗೋಡೆ)ಗಳನ್ನು ಮುಚ್ಚಿ ನೀರು ಹರಿಸುವ ಪ್ರಯತ್ನ ನಡೆಸುತ್ತಿದ್ದಾರೆ.
Karnataka Latest News Live 25 July 2026Property Rights - ತಂದೆ-ತಾಯಿ ತಮ್ಮ ಆಸ್ತಿಯನ್ನು ಒಬ್ಬನೇ ಮಗ ಅಥವಾ ಮಗಳಿಗೆ ಬರೆದುಕೊಡಬಹುದೇ? ಏನು ಹೇಳುತ್ತದೆ ಕಾನೂನು?
ತಂದೆ-ತಾಯಿ ತಮ್ಮ ಆಸ್ತಿಯನ್ನು ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ನೀಡಬಹುದೇ ಎಂಬ ಪ್ರಶ್ನೆಗೆ ಈ ಸ್ಟೋರಿ ಕಾನೂನಾತ್ಮಕ ಉತ್ತರ ನೀಡುತ್ತದೆ. ಸ್ವಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಡಿಯಲ್ಲಿ ಮಕ್ಕಳ, ವಿಶೇಷವಾಗಿ ಹೆಣ್ಣುಮಕ್ಕಳ ಹಕ್ಕುಗಳನ್ನು ಇದು ಸ್ಪಷ್ಟಪಡಿಸುತ್ತದೆ.
Karnataka Latest News Live 25 July 2026ಬಾಡಿಗೆ ಕಟ್ಟಡದಲ್ಲೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ - ಸಾರ್ವಜನಿಕರ ಪರದಾಟ ಹೆಚ್ಚಳ
Gangavathi: ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈಗ ಗ್ರಾಮೀಣ ಭಾಗದಿಂದ ದೂರು ಕೊಡಲು ಬರುವ ಜನರು 3 ಕಿ ಮೀ ದೂರು ಹೋಗಿ ಪರದಾಡುವ ಪ್ರಸಂಗ ಒದಗಿದೆ.
Karnataka Latest News Live 25 July 2026'ಕರಾವಳಿ' ಕಂಬಳದ ಓಟದ ಕಥೆಯಲ್ಲ, ಅದರ ಹಿಂದೆ ಕಾಣದ ಜಗತ್ತಿನ ಕಥೆ - ನಿರ್ದೇಶಕ ಗುರುದತ್ ಗಾಣಿಗ
'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಗುರುದತ್ ಗಾಣಿಗ ಈಗ ಸುಮಾರು ಆರು ವರ್ಷಗಳ ಬಳಿಕ ತಮ್ಮ ಹೊಸ ಚಿತ್ರ 'ಕರಾವಳಿ'ಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
Karnataka Latest News Live 25 July 2026ಕೆಆರ್ಎಸ್ನಲ್ಲಿ ತುಂಬಿರುವ ಹೂಳಿನ ಪ್ರಮಾಣವೆಷ್ಟು? ನಮಗೆ ಗೊತ್ತೇ ಇಲ್ಲ ಎಂದ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ!
ಆರ್ಟಿಐ ಅರ್ಜಿಯೊಂದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆಘಾತಕಾರಿ ನಿರ್ಲಕ್ಷ್ಯ ಬಯಲಾಗಿದೆ. ಕೆಆರ್ಎಸ್ ಹೂಳಿನ ಪ್ರಮಾಣದ ಬಗ್ಗೆ ಯಾವುದೇ ದತ್ತಾಂಶವಿಲ್ಲದಿದ್ದರೂ, ಹಳೆಯ ಲೆಕ್ಕಾಚಾರದ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
Karnataka Latest News Live 25 July 2026BJP - ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ಮೋದಿ ಸರ್ಕಾರದ 2ನೇ ಸಚಿವರ ವಿಕೆಟ್ ಪತನ, ಹಾಗಾದ್ರೆ ಕುರ್ಚಿ ಕಳೆದುಕೊಂಡ ಮೊದಲ ವಿಕೆಟ್ ಯಾರದ್ದು?
ನೀಟ್ ಪರೀಕ್ಷಾ ಹಗರಣದ ಹಿನ್ನೆಲೆಯಲ್ಲಿ ನಡೆದ ತೀವ್ರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕ ಚಳವಳಿಯ ಒತ್ತಡಕ್ಕೆ ಸಿಲುಕಿ ಮೋದಿ ಸರ್ಕಾರದಲ್ಲಿ ರಾಜೀನಾಮೆ ನೀಡಿದ ಎರಡನೇ ಸಚಿವರಾಗಿದ್ದು, ಈ ಹಿಂದೆ ಇದೇ ರೀತಿ ಹುದ್ದೆ ತೊರೆದ ನಾಯಕ ಯಾರು ಗೊತ್ತಾ?
Karnataka Latest News Live 25 July 2026'ದಿ ಒಡಿಸ್ಸಿ' ಸಿನಿಮಾ ನನಗೆ ಮಹಾಭಾರತವನ್ನು ನೆನಪಿಸಿತು - ಮಿಲ್ಕಿ ಬ್ಯೂಟಿ ಆಶಿಕಾ ಹೇಳಿದ್ದೇನು?
Ashika Ranganath: ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' (The Odyssey) ಸಿನಿಮಾ ಕಳೆದ ವಾರ ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ.
Karnataka Latest News Live 25 July 2026ಪ್ರಧಾನ್ ರಾಜೀನಾಮೆ ಕೈ ಗೆಲುವಲ್ಲ! ಅವನ್ಯಾರ್ರೀ ಪ್ರಿಯಾಂಕ್ ಖರ್ಗೆ? ಉಗ್ರರಿಗಷ್ಟೇ ಇವನು ಮಂತ್ರಿಯೇ? - ವಿಜಯೇಂದ್ರ ಕಿಡಿ
Karnataka Latest News Live 25 July 2026ನಟಿ ಸುಮನ್ ರಂಗನಾಥನ್ ಮೇಲೆ ಗಂಭೀರ ಆರೋಪ, ಫಿಲಂ ಚೆಂಬರ್ಗೆ ದೂರು ನೀಡಲು ಅಗಮಿಸಿದ್ದ ಚಿತ್ರತಂಡ; ಮುಂದೇನಾಯ್ತು..?
"ತದ್ವಿರುದ್ಧ ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಲು ನಿಗದಿಯಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಪ್ರಚಾರಕ್ಕೆ ಪ್ರಮುಖ ನಟಿ ಸುಮನ್ ರಂಗನಾಥ್ ಲಭ್ಯವಿಲ್ಲದಿರುವುದು ಚಿತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ತರುವ ಸಾಧ್ಯತೆಯಿದೆ. ಇದೀಗ ನಟಿ ಮೇಲೆ ದೂರು ದಾಖಲಾಗುವಸುದ್ದಿ ಬಂದಿದೆ.
Karnataka Latest News Live 25 July 2026ನನ್ನ ಬಾಯ್ಫ್ರೆಂಡ್, ಗಂಡನ ಬಗ್ಗೆ ನನಗಿಂತಲೂ ಮೊದಲು ಜನರಿಗೆ ಗೊತ್ತಾಗುತ್ತೆ - ರಾಗಿಣಿ ದ್ವಿವೇದಿ
Ragini Dwivedi: ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ರಾಗಿಣಿ ಮತ್ತು ಕುಮಾರ್ ಬಂಗಾರಪ್ಪ ಫೋಟೋ ನೋಡಿ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
Karnataka Latest News Live 25 July 2026ಕನ್ನಡ ಚಿತ್ರರಂಗದಲ್ಲಿ ಯಾರು ತಪ್ಪಿತಸ್ಥರು? ನಿರ್ಮಾಪಕರೋ, ಸ್ಟಾರ್ಗಳೋ?
Save Sandalwood: ಹೆಸರು ಹೇಳದೆ, ಹೆಸರು ತಿಳಿಸದೆ ಗಾಳಿಯಲ್ಲಿ ಗುಂಡು ಹಾರಿಸುವವರು ಸಾಕಷ್ಟಿದ್ದಾರೆ. ಯಾವುದೋ ಒಂದು ಸಮಸ್ಯೆ ಕೇಳಿದರೆ, ಅದು ಈಗ ಬೇಡ ಆಮೇಲೆ ಮಾತಾಡೋಣ ಎಂದು ಹೇಳುವರೂ ಇದ್ದಾರೆ.