11:23 PM (IST) Aug 14

Karnataka News Live 14th August: breaking news - ನಾಳೆ ಸ್ವಾತಂತ್ರ್ಯ ದಿನಾಚರಣೆ.. ಬೆಂಗಳೂರಲ್ಲಿ ಶಂಕಿತ ವ್ಯಕ್ತಿ ಅರೆಸ್ಟ್..!

ಇಡೀ ದೇಶ ನಾಳೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿದ್ದ ಶಂಕಿತ ವ್ಯಕ್ತಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸೆರೆಹಿಡಿದಿದ್ದಾರೆ.

Read Full Story
11:04 PM (IST) Aug 14

Karnataka News Live 14th August: Viral News - ಭಾರತದಲ್ಲಿ ದುಡಿದು ವಿದೇಶಕ್ಕೆ ಹಾರಿದ ವ್ಯಕ್ತಿ; ಮುಂದಿನ 3 ವರ್ಷಗಳಲ್ಲಿ ನಡೆದ ಪವಾಡ ಕೇಳಿದ್ರೆ ಶಾಕ್ ಆಗ್ತೀರಾ!

ಭಾರತದ 37 ವರ್ಷದ ಉದ್ಯಮಿಯೊಬ್ಬರು, 34ನೇ ವಯಸ್ಸಿನಲ್ಲಿ ₹1 ಕೋಟಿ ಆಸ್ತಿಯಿಂದ, ಮಧ್ಯಪ್ರಾಚ್ಯದಲ್ಲಿ ತೆರಿಗೆ ರಹಿತ ಉದ್ಯೋಗ ಪಡೆದು ಕೇವಲ 3 ವರ್ಷಗಳಲ್ಲಿ ತಮ್ಮ ಸಂಪತ್ತನ್ನು ₹7.5 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಈ ಯಶಸ್ಸಿನ ಪಯಣ, ಹೂಡಿಕೆಯ ವಿವರಗಳು ಮತ್ತು ಸಂಪತ್ತು ಗಳಿಕೆಯ ರಹಸ್ಯವನ್ನು ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
Read Full Story
10:23 PM (IST) Aug 14

Karnataka News Live 14th August: 20 ವರ್ಷ ಕಾಲ ಕೆಲಸ ಮಾಡಿದ ಮೇಲೆ ತಿಂಗಳ ಪಿಂಚಣಿ ಎಷ್ಟಾಗುತ್ತೆ? ಇಪಿಎಫ್‌ಒ ಇಪಿಎಸ್ ಸೂತ್ರದ ಮೂಲಕ ನಿಮ್ಮ ಪಿಂಚಣಿ ನೀವೇ ಲೆಕ್ಕ ಹಾಕಿ!

ಖಾಸಗಿ ವಲಯದಲ್ಲಿ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ನೌಕರರಿಗೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಹೆಚ್ಚುವರಿಯಾಗಿ 2 ವರ್ಷಗಳ 'ವೇಟೇಜ್ ಬೋನಸ್' ನೀಡುತ್ತದೆ. ಈ ನಿಯಮದ ಅಡಿಯಲ್ಲಿ, 20 ವರ್ಷಗಳ ಸೇವೆಯನ್ನು 22 ವರ್ಷಗಳೆಂದು ಪರಿಗಣಿಸಿ ಪಿಂಚಣಿ ಲೆಕ್ಕ ಹಾಕಲಾಗುತ್ತದೆ, ಇದರಿಂದಾಗಿ ನಿವೃತ್ತಿಯ ನಂತರ ಸಿಗುವ ಮಾಸಿಕ ಪಿಂಚಣಿಯಲ್ಲಿ ಗಣನೀಯ ಏರಿಕೆಯಾಗುತ್ತದೆ.
Read Full Story
09:38 PM (IST) Aug 14

Karnataka News Live 14th August: FDA - ಆಹಾರ ಸುರಕ್ಷತೆಗೆ ಮಹಾರಾಷ್ಟ್ರಕ್ಕೂ ಮುನ್ನವೇ ದಾರಿ ತೋರಿಸಿದ್ದು ಕರ್ನಾಟಕ; ನಾವೇ ಟ್ರೆಂಡ್‌ ಸೆಟರ್‌ ಎಂದ ಕನ್ನಡದ ಖಡಕ್‌ ಆಫೀಸರ್!

ಕರ್ನಾಟಕದಲ್ಲಿ ಆಹಾರ ಸುರಕ್ಷತಾ ಇಲಾಖೆಯು ಸರ್ಕಾರಿ ಕ್ಯಾಂಟೀನ್‌ಗಳಿಂದ ಹಿಡಿದು 5-ಸ್ಟಾರ್ ಹೋಟೆಲ್‌ಗಳವರೆಗೆ ಸರಣಿ ದಾಳಿಗಳನ್ನು ನಡೆಸುತ್ತಿದೆ. ಮಹಾರಾಷ್ಟ್ರವನ್ನು ಅನುಸರಿಸುತ್ತಿಲ್ಲ, ಬದಲಾಗಿ ಕಬಾಬ್ ಬಣ್ಣ ನಿಷೇಧದಂತಹ ಕ್ರಮಗಳಿಂದ ದೇಶಕ್ಕೇ ನಾವೇ ಟ್ರೆಂಡ್‌ಸೆಟರ್ ಎಂದು ಎಫ್‌ಡಿಎ ಜಂಟಿ ಆಯುಕ್ತ ಶ್ರೀನಿವಾಸ್ ಕೆ ಹೇಳಿದ್ದಾರೆ.

Read Full Story
09:09 PM (IST) Aug 14

Karnataka News Live 14th August: ‘ಯೂ ಟರ್ನ್‌’ ಮೂಲಕ ಸದ್ದು ಮಾಡಿದ್ದ ಶ್ರದ್ಧಾ ಶ್ರೀನಾಥ್‌ಗೆ ಈಗ ಅವಕಾಶಗಳ ಕೊರತೆ - ಕಾರಣವೇನು?

ನಟಿಯಾಗಿ ಒಳ್ಳೆಯ ಹೆಸರು, ಮೂರು ಭಾಷೆಗಳಲ್ಲಿ ಗಮನಾರ್ಹ ಸಿನಿಮಾಗಳು, ಟಾಪ್‌ ಹೀರೋಗಳ ಜೊತೆ ತೆರೆ ಹಂಚಿಕೊಂಡ ಅನುಭವ... ಇಷ್ಟೆಲ್ಲ ಇದ್ದರೂ ಶ್ರದ್ಧಾ ಶ್ರೀನಾಥ್‌ ಅವರ ಕರಿಯರ್‌ ಮಾತ್ರ ನಿರೀಕ್ಷಿಸಿದ ವೇಗದಲ್ಲಿ ಸಾಗುತ್ತಿಲ್ಲ.

Read Full Story
08:38 PM (IST) Aug 14

Karnataka News Live 14th August: ಬೆಂಗಳೂರಲ್ಲಿ ರಕ್ಕಸನಾದ ಪತಿ; ಪ್ರೀತಿಸಿ ಮದ್ವೆಯಾದ ಪತ್ನಿಯನ್ನ ಬರ್ಬರವಾಗಿ ಮುಗಿಸಿ ತಾನೂ ಪ್ರಾಣಬಿಟ್ಟ..

ಆತ ಪ್ರೀತಿಸಿ ಅವಳೇ ನನಗೆ ಬೇಕು ಎಂದು ಮದುವೆ ಆಗಿದ್ದ. ಮದುವೆ ಬಳಿಕ ಕೌಟುಂಬಿಕ ಕಲಹ. ಸಿಟ್ಟಿಗೆದ್ದ ಪತಿ ಆಕೆಯನ್ನ ಮುಗಿಸಿ ತಾನೂ ಕೂಡ ಬದುಕಿನ ಪಯಣ ಮುಗಿಸಿದ್ದಾನೆ. ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಸ್ಟೋರಿ ಇಲ್ಲಿದೆ.

Read Full Story
08:21 PM (IST) Aug 14

Karnataka News Live 14th August: ಒಂದೇ ಹುಡುಗನ ಮೇಲೆ ಇಬ್ಬರಿಗೂ ಲವ್‌ - ಏನಿದು ಜಾನ್ವಿ-ಶ್ರೀಲೀಲಾ ಹೊಸ ವಿಷ್ಯ?

ಅವಕಾಶಗಳು ಸಿಗದ ಜಾಗದಲ್ಲಿ ಸುಮ್ಮನೆ ಸಮಯ ಕಳೆಯುವುದಕ್ಕಿಂತ, ಆಫರ್‌ಗಳಿರುವ ಕಡೆ ಹೆಜ್ಜೆ ಇಡುವುದೇ ಬೆಸ್ಟ್‌ ಅಲ್ಲವೇ? ಸದ್ಯ ನಟಿ ಶ್ರೀಲೀಲಾ ಅವರ ಸಿನಿ ಜರ್ನಿ ನೋಡಿದರೆ ಇದೇ ರೀತಿ ಅನಿಸುತ್ತಿದೆ.

Read Full Story
08:16 PM (IST) Aug 14

Karnataka News Live 14th August: Cricketer - ದಶಕಗಳ ಕಾಯುವಿಕೆ, ಕೈಗೆ ಸಿಗದ ಗೌರವ; ‘ಪದ್ಮಶ್ರೀ’ಪ್ರಶಸ್ತಿಗಾಗಿ ಕಣ್ಣೀರಿಟ್ಟ ಭಾರತೀಯ ಕ್ರಿಕೆಟ್ ದಿಗ್ಗಜ!

1973ರಲ್ಲಿ 'ಪದ್ಮಶ್ರೀ' ಪ್ರಶಸ್ತಿಗೆ ಆಯ್ಕೆಯಾದ ಭಾರತದ ಮಾಜಿ ಕ್ರಿಕೆಟಿಗ 53 ವರ್ಷಗಳಾದರೂ ಆ ಗೌರವ ಇನ್ನೂ ಕೈಸೇರಿಲ್ಲ. ಇಂಗ್ಲೆಂಡ್‌ನಲ್ಲಿದ್ದಾಗ ಅಧಿಕೃತ ಪತ್ರ ತಲುಪದ ಕಾರಣದಿಂದ ವಂಚಿತರಾದ ಅವರು, ತಮ್ಮ 88ನೇ ವಯಸ್ಸಿನಲ್ಲಿಯಾದರೂ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.

Read Full Story
07:50 PM (IST) Aug 14

Karnataka News Live 14th August: Independence Day Wishes in Kannada - ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು - ಪ್ರೀತಿಪಾತ್ರರಿಗೆ ಕಳುಹಿಸಲು ಇಲ್ಲಿವೆ ಬೆಸ್ಟ್ ಮೆಸೇಜ್‌ಗಳು

ಭಾರತದ ಸ್ವಾತಂತ್ರ್ಯ ದಿನವು ದೇಶದ ಸ್ವಾತಂತ್ರ್ಯ ಹೋರಾಟ, ತ್ಯಾಗ ಮತ್ತು ಏಕತೆಯನ್ನು ಸ್ಮರಿಸುವ ವಿಶೇಷ ದಿನ. ಕುಟುಂಬ, ಸ್ನೇಹಿತರು ಹಾಗೂ ಆತ್ಮೀಯರಿಗೆ ಕಳುಹಿಸಲು ಹೃದಯಸ್ಪರ್ಶಿ ಶುಭಾಶಯಗಳು, ಪ್ರೇರಣಾದಾಯಕ ಸಂದೇಶಗಳು, ದೇಶಭಕ್ತಿ ಉಲ್ಲೇಖಗಳು ಮತ್ತು ವಾಟ್ಸ್ಆ್ಯಪ್ ಸ್ಟೇಟಸ್‌ಗಳನ್ನು ಆಯ್ಕೆ ಮಾಡಬಹುದು. ತ್ರಿವರ್ಣ ಧ್ವಜದ ಹೆಮ್ಮೆ ಹಾಗೂ ಸ್ವಾತಂತ್ರ್ಯದ ಮೌಲ್ಯವನ್ನು ನೆನಪಿಸುವ ಸಂದೇಶಗಳು ದಿನವನ್ನು ಅರ್ಥಪೂರ್ಣವಾಗಿಸುತ್ತವೆ.

Read Full Story
07:06 PM (IST) Aug 14

Karnataka News Live 14th August: Yash - ಬಸ್ ಚಾಲಕನ ಮಗ ಇಂದು ಭಾರತದ ರಾಕಿ ಭಾಯ್; ಮೋದಿ-ಯಶ್ ಜೀವನಕ್ಕಿದೆ ಆ ಒಂದು ಕನೆಕ್ಷನ್!

ಬಸ್ ಚಾಲಕನ ಮಗನಾಗಿ ಬೆಳೆದು ಇಂದು 'ರಾಕಿ ಭಾಯ್' ಆದ ನಟ ಯಶ್ ಮತ್ತು ಪ್ರಧಾನಿಯಾದ ನರೇಂದ್ರ ಮೋದಿಯವರ ಜೀವನದಲ್ಲಿ ಒಂದು ರೋಚಕ ಸಾಮ್ಯತೆಯಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Read Full Story
06:50 PM (IST) Aug 14

Karnataka News Live 14th August: ‘ರಾಕಿ ಭಾಯ್‌’ ಬಾಡಿಯ ಹಿಂದೆ ಮ್ಯಾಜಿಕ್‌ ಇಲ್ಲ - ಯಶ್‌ ಫಾಲೋ ಮಾಡುವ ಫಿಟ್‌ನೆಸ್‌ ಮಂತ್ರ ಇದು!

ರಾಕಿ ಭಾಯ್‌ ಅಂದ್ರೆ ಸ್ಟೈಲ್‌, ಆ್ಯಕ್ಷನ್‌ ಮತ್ತು ಧಮ್‌! ಆದರೆ ಯಶ್‌ ಅವರ ಮತ್ತೊಂದು ದೊಡ್ಡ ಗುರುತು ಅಂದರೆ ಅವರ ಫಿಟ್‌ ಬಾಡಿ. ‘ಕೆಜಿಎಫ್‌’ನಿಂದ ‘ಟಾಕ್ಸಿಕ್‌’ವರೆಗೆ ಯಶ್‌ ಅವರ ದೇಹದ ಫಿಟ್‌ನೆಸ್‌ ನೋಡಿ ಅಭಿಮಾನಿಗಳು..

Read Full Story
06:21 PM (IST) Aug 14

Karnataka News Live 14th August: ನಮ್ಮನ್ನ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ - ದಿಢೀರ್ ಸುದ್ದಿಗೋಷ್ಠಿ ನಡೆಸಿ ಪ್ರಕಾಶ್ ರಾಜ್ ಆಕ್ರೋಶ!

ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಅರ್ಹರ ಹೆಸರುಗಳನ್ನು ಕೈಬಿಡುತ್ತಿರುವ ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿ, ಇದನ್ನು 'ಜನರನ್ನು ಹೊರಗಿಡುವ ಷಡ್ಯಂತ್ರ' ಎಂದು ಕರೆದರು. ಮತದಾನದ ಹಕ್ಕಿಗಾಗಿ ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

Read Full Story
06:21 PM (IST) Aug 14

Karnataka News Live 14th August: ಅಯ್ಯಯ್ಯೋ.. ಕೊಡಗಿನಲ್ಲಿ ಆಘಾತಕಾರಿ ಘಟನೆ - ತಾಯಿಯ ಅಕ್ರಮ ಸಂಬಂಧಕ್ಕೆ ಮಗು ಬಲಿ

ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ.

Read Full Story
06:17 PM (IST) Aug 14

Karnataka News Live 14th August: AUS Vs BAN - ಸ್ಟಾರ್ಕ್, ಮೆಹದಿ ನಡುವೆ ನಿಲ್ಲದ ಜಗಳ; ಬಾಂಗ್ಲಾ ಪಂಚ್ ಗೆ ತತ್ತರಿಸಿದ ಆಸ್ಟ್ರೇಲಿಯಾ! ರಣಾಂಗಣವಾದ ಕ್ರೀಡಾಂಗಣ

ಆಸ್ಟ್ರೇಲಿಯಾ-ಬಾಂಗ್ಲಾದೇಶ ಟೆಸ್ಟ್ ಪಂದ್ಯದಲ್ಲಿ, ತಾಂಜಿದ್ ಹಸನ್ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಆದರೆ, ಪಿಚ್ ಮೇಲೆ ಓಡಿದ ಮೆಹಿದಿ ಹಸನ್ ಮಿರಾಜ್‌ಗೆ ಮಿಚೆಲ್ ಸ್ಟಾರ್ಕ್ ತೀವ್ರ ಎಚ್ಚರಿಕೆ ನೀಡಿದ್ದು, ಮೈದಾನದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story
05:42 PM (IST) Aug 14

Karnataka News Live 14th August: ‘Believer’ ಹಾಡು ಬದಲಿಸಿದ ಬದುಕು - ಹೇಮಲತಾ ಈಗ ಕನ್ನಡದ ಬಿಗ್‌ ಬಾಸ್‌ ಮನೆಗೆ ಹೋಗ್ತಾರಾ?

Hemalatha Jayanna Bigg Boss: ಸೋಷಿಯಲ್‌ ಮೀಡಿಯಾದಲ್ಲಿ ಸಿಂಗರ್‌ ಆಗಿ ಗುರುತಿಸಿಕೊಂಡಿರುವ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

Read Full Story
05:28 PM (IST) Aug 14

Karnataka News Live 14th August: breaking news - ರೇಷನ್ ಕಾರ್ಡ್‌ ರದ್ದಾಗುವ ಆತಂಕದಲ್ಲಿದ್ದ ಜನರಿಗೆ ರಿಲೀಫ್ ಕೊಟ್ಟ ಸರ್ಕಾರ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಪಿಎಲ್ (BPL) ಕಾರ್ಡ್‌ಗಳು ರದ್ದಾಗುತ್ತವೆ ಎಂಬ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊಂಚ ನಿರಾಳತೆ ನೀಡಿದೆ. ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

Read Full Story
05:17 PM (IST) Aug 14

Karnataka News Live 14th August: ಸಾವಿರಾರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿದ್ದೇಕೆ? ಗಂಗಾವತಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾಡಿದ್ದೇನು?

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ "ಬೃಹತ್ ತಿರಂಗ ಯಾತ್ರೆ"ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು.

Read Full Story
05:02 PM (IST) Aug 14

Karnataka News Live 14th August: 26 ಮನೆಗಳ ನೆಲಸಮಕ್ಕೆ ಆದೇಶ.. ಹೊನ್ನಾವರ ಅರಣ್ಯ ಇಲಾಖೆಯ ನೋಟಿಸ್‌ಗೆ ಬೆಚ್ಚಿಬಿದ್ದ ಜನ..!

ಅರಣ್ಯವನ್ನೇ ನಂಬಿ ಬದುಕು ಕಟ್ಟಿಕೊಂಡ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಅರಣ್ಯ ಇಲಾಖೆಯ ತೊಂದರೆ ನಿನ್ನೆ ಮೊನ್ನೆಯದಲ್ಲ. ಇದೀಗ ಹೊನ್ನಾವರ ತಾಲೂಕಿನ 26 ಮನೆಗಳನ್ನ ನೆಲಸಮಗೊಳಿಸವಂತೆ ಆದೇಶ ನೀಡಲಾಗಿದೆ. ಅರಣ್ಯಾ ಇಲಾಖೆಯ ಏಕಾಏಕಿ ಈ ಕ್ರಮವು ಅಲ್ಲಿನ ನಿವಾಸಿಗಳನ್ನ ಕಂಗಾಲಾಗುವಂತೆ ಮಾಡಿದೆ..

Read Full Story
04:53 PM (IST) Aug 14

Karnataka News Live 14th August: Khadi and Village Industries - ನಲುಗಿದ ಖಾದಿ ಗ್ರಾಮೋದ್ಯೋಗ, ಬೀದಿಗೆ ಬಿದ್ದ ಕಾರ್ಮಿಕರು - ₹150 ಕೋಟಿ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವ ಸರ್ಕಾರ!

ಹುಬ್ಬಳ್ಳಿಯ ರಾಷ್ಟ್ರಧ್ವಜ ತಯಾರಿಕಾ ಘಟಕವು ಸರ್ಕಾರದ ಧ್ವಜ ಸಂಹಿತೆ ತಿದ್ದುಪಡಿ ಮತ್ತು ₹150 ಕೋಟಿ ಪ್ರೋತ್ಸಾಹಧನ ವಿಳಂಬದಿಂದ ತೀವ್ರ ಸಂಕಷ್ಟದಲ್ಲಿದೆ. ಇದರಿಂದಾಗಿ ಖಾದಿ ಧ್ವಜಗಳ ಮಾರಾಟ ಕುಸಿದು, ಅಲ್ಲಿನ ನೇಕಾರರು ಮತ್ತು ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ.
Read Full Story
04:47 PM (IST) Aug 14

Karnataka News Live 14th August: ಸಂತೋಷ್‌ ಬಾಲರಾಜ್‌ ಕೊನೆಯ ಸಿನಿಮಾ ‘ಬೆಂಟ್ಲಿ’ - ಗೆಳೆಯನ ಪಾತ್ರಕ್ಕೆ ಧ್ವನಿ ನೀಡಿದ ಯೋಗೀಶ್‌

ಅದು ಪುಣ್ಯ ಸ್ಮರಣೆಯ ಶೋಕ ಮತ್ತು ಸಿನಿಮಾವೊಂದರ ಟ್ರೇಲರ್‌ ಬಿಡುಗಡೆ ಸಂಭ್ರಮ. ಈ ಎರಡಕ್ಕೂ ಒಂದೇ ವೇದಿಕೆ ಸಾಕ್ಷಿಯಾಗಿತ್ತು. ‘ನನ್ನ ಗೆಳೆಯನ ಪಾತ್ರಕ್ಕೆ ನನ್ನ ಧ್ವನಿ ಕೊಡುವ ಸಂದರ್ಭ ಬರುತ್ತದೆ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ.

Read Full Story