11:08 PM (IST) Aug 17

Karnataka Latest News Live 17 August 2026ಬೆಂಗಳೂರು ಜನರೇ ಅಲರ್ಟ್‌.. ಈ ರಸ್ತೆಗಳಲ್ಲಿ ಬಂದ್ರೆ ಸ್ಟ್ರಕ್ ಆಗೋದು ಗ್ಯಾರಂಟಿ..!

ಬಿಡದಿ ಟೌನ್‌ಶಿಪ್ ವಿರೋಧಿಸಿ ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

Read Full Story
10:45 PM (IST) Aug 17

Karnataka Latest News Live 17 August 2026ಕಮ್ಮಾರಗಟ್ಟೆಯಲ್ಲಿ ಐತಿಹಾಸಿಕ ಕಾರ್ಣಿಕೋತ್ಸವ.. ರೈತರಿಗೆ ಸಿಕ್ಕೇ ಬಿಡ್ತು ಗುಡ್‌ನ್ಯೂಸ್

ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೆ ಏರಿತಲೆ' ಎಂಬ ಭವಿಷ್ಯವಾಣಿ ಕೇಳಿಬಂದಿದೆ. ಇದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸೂಚನೆಯೋ ಅಥವಾ ರೈತರ ಬೆಳೆಗೆ ಸಿಗುವ ಬಂಪರ್ ಬೆಲೆಯ ಮುನ್ಸೂಚನೆಯೋ ಎಂಬ ಚರ್ಚೆ ಭಕ್ತರಲ್ಲಿ ಶುರುವಾಗಿದೆ.

Read Full Story
10:40 PM (IST) Aug 17

Karnataka Latest News Live 17 August 2026ಮೆಲ್ಬೋರ್ನ್ ರೆಡ್ ಕಾರ್ಪೆಟ್‌ನಲ್ಲಿ ಕರ್ನಾಟಕದ ಕಂಪು - ರೇಷ್ಮೆ ಪಂಚೆ, ಗಂಡಭೇರುಂಡ ಕುರ್ತಾದಲ್ಲಿ ರಿಷಬ್ ಶೆಟ್ಟಿ!

Rishab Shetty IFFM: ಮೆಲ್ಬೋರ್ನ್‌ನ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್‌ನಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ತವರು ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ.

Read Full Story
10:35 PM (IST) Aug 17

Karnataka Latest News Live 17 August 2026ಮಿಸ್ ಮಾಡ್ಕೋಬೇಡಿ ಈ ಬಂಪರ್ ಚಾನ್ಸ್! ₹250 ಕಟ್ಟಿದ್ರೆ ಲೈಫ್ ಕಂಪ್ಲೀಟ್ ಸೆಟಲ್, ಸಿಗುತ್ತೆ ₹40 ಲಕ್ಷ ಜಾಕಪಾಟ್!

ಕೇಂದ್ರ ಸರ್ಕಾರದ 'ಸುಕನ್ಯಾ ಸಮೃದ್ಧಿ ಯೋಜನೆ' ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಒಂದು ಸುರಕ್ಷಿತ ಹೂಡಿಕೆಯಾಗಿದೆ. ಈ ಯೋಜನೆಯಲ್ಲಿ ದಿನಕ್ಕೆ ₹250 ಉಳಿತಾಯ ಮಾಡುವ ಮೂಲಕ, 21 ವರ್ಷಗಳ ನಂತರ ಸುಮಾರು ₹40 ಲಕ್ಷದಷ್ಟು ತೆರಿಗೆ-ಮುಕ್ತ ನಿಧಿಯನ್ನು ಹೇಗೆ ಪಡೆಯಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story
10:15 PM (IST) Aug 17

Karnataka Latest News Live 17 August 2026ಪ್ರಜ್ವಲ್ ಕೇಸ್‌ ಬೆನ್ನಲ್ಲೇ ಮತ್ತೊಂದು ಮೊಬೈಲ್ ಪತ್ತೆ.. ದೇವರ ಫೋಟೋ ಹಿಂದೆ ಬಚ್ಚಿಟ್ಟಿದ್ದ ಫೋನ್ ಸೀಜ್

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಸಿಕ್ಕ ಬೆನ್ನಲ್ಲೇ ಪರಪ್ಪನ ಅಗ್ರಹಾರದ 'ಸಿ' ಬ್ಯಾರಕ್‌ನಲ್ಲಿ ದೇವರ ಫೋಟೋ ಹಿಂದೆ ಬಚ್ಚಿಟ್ಟಿದ್ದ ಮತ್ತೊಂದು ಮೊಬೈಲ್ ಪತ್ತೆಯಾಗಿದೆ. ಹಾಗಿದ್ದರೆ ಆ ಮೊಬೈಲ್ ಯಾರದ್ದು?

Read Full Story
10:09 PM (IST) Aug 17

Karnataka Latest News Live 17 August 2026ರೀಲ್ಸ್‌ಗಾಗಿ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಜಡೆ ಹಿಡಿದು ಜಗಳವಾಡಿದ ಯುವತಿಯರು, ವಿಡಿಯೋ ವೈರಲ್‌!

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ವಿಚಾರಕ್ಕೆ ಇಬ್ಬರು ಯುವತಿಯರು ಜಗಳವಾಡಿದ್ದಾರೆ. ನಡುರಸ್ತೆಯಲ್ಲೇ ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡ ಈ ದೃಶ್ಯ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿನ ಇಂತಹ ವರ್ತನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
Read Full Story
09:58 PM (IST) Aug 17

Karnataka Latest News Live 17 August 2026ಮಕ್ಕಳನ್ನಷ್ಟೇ ಕರೆದು ಸೈಲೆಂಟ್ ಮದುವೆ! ಆದ್ರೆ ರೊನಾಲ್ಡೋ ಪತ್ನಿ ಜಾರ್ಜಿನಾ ಕೊರಳಲ್ಲಿದ್ದ 'ಆ' ಒಂದು ವಸ್ತು ಬೆಲೆ ಕೇಳಿ ಫ್ಯಾನ್ಸ್ ಶೇಕ್!

ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಜಾರ್ಜಿನಾ ರೊಡ್ರಿಗಸ್ ತಮ್ಮ ಐದು ಮಕ್ಕಳ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ವಿವಾಹವಾಗಿದ್ದಾರೆ. ಆದರೆ, ಈ ಸರಳ ಸಮಾರಂಭದಲ್ಲಿ ಜಾರ್ಜಿನಾ ಧರಿಸಿದ್ದ ₹95.6 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಎಲ್ಲರ ಗಮನ ಸೆಳೆದಿದ್ದು, ಅವರ ಸರಳತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story
09:29 PM (IST) Aug 17

Karnataka Latest News Live 17 August 202612ನೇ ವಯಸ್ಸಿನಲ್ಲೇ ಮದುವೆ... ಗರ್ಭಿಣಿಯಾಗಿದ್ದಾಗ ಪತಿಯಿಂದ ಹಿಂಸೆ - ನಟಿ ಸರಿತಾ ಬದುಕಿನಲ್ಲಿ ಇಷ್ಟೊಂದು ದುರಂತವೇ?

Veteran Actress Saritha: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇವಲ ಸೌಂದರ್ಯ ಮತ್ತು ಗ್ಲಾಮರ್‌ನಿಂದಲ್ಲದೆ, ಅಸಾಧಾರಣ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಕೆಲವೇ ಕೆಲವು ನಟಿಯರಲ್ಲಿ ಸರಿತಾ ಪ್ರಮುಖರು.

Read Full Story
09:18 PM (IST) Aug 17

Karnataka Latest News Live 17 August 2026ಈಗ ಸೊಳ್ಳೆ ಕಾಟ.. ನಿದ್ದೆ ಇಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರಂತೆ ದರ್ಶನ್..!

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಬಳಿಕ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದ್ದು, ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಸೊಳ್ಳೆ ಪರದೆ ಇಲ್ಲದೆ ಕಳೆದ ಎರಡು ದಿನಗಳಿಂದ ದರ್ಶನ್ ಸರಿಯಾಗಿ ನಿದ್ರೆ ಮಾಡದೆ ಮಾನಸಿಕವಾಗಿ ಕುಗ್ಗಿದ್ದಾರೆ.

Read Full Story
09:13 PM (IST) Aug 17

Karnataka Latest News Live 17 August 2026Bjp - ಮತದಾರರ ಲೆಕ್ಕಾಚಾರ, ಫಲಾನುಭವಿಗಳ ಡೇಟಾ ಗೇಮ್; ದಶಕದ ಮಾಳವೀಯ ಯುಗಕ್ಕೆ ತೆರೆ! ಬಿಜೆಪಿ 'ಹೊಸ ಐಟಿ ಎಂಜಿನ್' ದೀಪಕ್ ಮಾಸ್ಕೆ!

ಅಮಿತ್ ಮಾಳವೀಯ ಅವರ ಜಾಗಕ್ಕೆ ದೀಪಕ್ ಮಾಸ್ಕೆ ಅವರನ್ನು ನೇಮಿಸುವ ಮೂಲಕ ಬಿಜೆಪಿ ತನ್ನ ಐಟಿ ಸೆಲ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಈ ಬದಲಾವಣೆಯು ಆಕ್ರಮಣಕಾರಿ ಪ್ರಚಾರದಿಂದ ವೈಜ್ಞಾನಿಕ ದತ್ತಾಂಶ ವಿಶ್ಲೇಷಣೆ ಮತ್ತು ಫಲಾನುಭವಿಗಳ ಡೇಟಾ ನಿರ್ವಹಣೆಯತ್ತ ಸಾಗುವ ಬಿಜೆಪಿಯ ಹೊಸ ಡಿಜಿಟಲ್ ತಂತ್ರವನ್ನು ಸೂಚಿಸುತ್ತದೆ.

Read Full Story
08:50 PM (IST) Aug 17

Karnataka Latest News Live 17 August 2026ಸೌತ್‌ನ ಎಲ್ಲಾ ಇಂಡಸ್ಟ್ರಿಗಳಲ್ಲೂ ಈ ಮೂವರು ಚೆಲುವೆಯರ ಹವಾ - ರುಕ್ಮಿಣಿ, ಮಮಿತಾ, ಕಯಾದುಗೆ ಎಲ್ಲೆಡೆ ಡಿಮ್ಯಾಂಡ್!

South Indian Actresses: ಕೆಲವು ನಾಯಕಿಯರಿಗೆ ಚಿತ್ರರಂಗದಲ್ಲಿ ‘ಆಲ್ ಆಕ್ಸೆಸ್ ಪಾಸ್’ ಸಿಕ್ಕಂತಿದೆ. ಒಂದೇ ಒಂದು ಇಂಡಸ್ಟ್ರಿಗೆ ಸೀಮಿತವಾಗದೆ, ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಛಾಪು ಮೂಡಿಸುತ್ತಿದ್ದಾರೆ.

Read Full Story
08:43 PM (IST) Aug 17

Karnataka Latest News Live 17 August 2026ಬೆಂಗಳೂರಿಗೆ ಕಾಲಿಡದಂತೆ ಸ್ಪೈಡರ್​ಮ್ಯಾನ್​ಗೆ ಎಚ್ಚರಿಸಿದ ಬಯೋಕಾನ್​ ಮುಖ್ಯಸ್ಥೆ ​ಕಿರಣ್ ಮುಜುಂದಾರ್- ಏನಿದು ವಿಷ್ಯ

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸ್ಪೈಡರ್​ಮ್ಯಾನ್​ ಕೇಬಲ್​ಗಳ ಜಾಲದಲ್ಲಿ ಸಿಲುಕಿರುವ ಫೋಟೋ ಬಳಸಿ, ಬೆಂಗಳೂರಿಗೆ ಬರದಂತೆ ಎಚ್ಚರಿಕೆ ನೀಡಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಈ ಮೂಲಕ ಅವರು ನಗರದ ಕೇಬಲ್ ವೈಯರ್​ಗಳ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆದಿದ್ದಾರೆ.
Read Full Story
08:07 PM (IST) Aug 17

Karnataka Latest News Live 17 August 202620 ವರ್ಷಗಳ ಬಳಿಕ ಮತ್ತೆ ಕಚೇರಿಗೆ ಬಂದ ಅಧಿಕಾರಿ..! ಚಿಂತೆಗೆ ಬಿದ್ದ ಅಂಕೋಲಾ, ಯಲ್ಲಾಪುರ ಜನ

ಕಳೆದ 20 ವರ್ಷಗಳಿಂದ ಖಾಲಿ ಇದ್ದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ ಅವರ ನೇಮಕವಾಗಿದ್ದು, ನೆನೆಗುದಿಗೆ ಬಿದ್ದಿದ್ದ ಈ ರೈಲ್ವೆ ಯೋಜನೆಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.

Read Full Story
07:41 PM (IST) Aug 17

Karnataka Latest News Live 17 August 2026Success Story - ಓದು 5ನೇ ತರಗತಿಗೆ ನಿಂತಿತು, ಕನಸು ಮಾತ್ರ ನಿಲ್ಲಲಿಲ್ಲ! 4 ಚಿನ್ನದ ಬಳೆಗಳಿಂದ ₹11,000 ಕೋಟಿ ಬಿಸಿನೆಸ್ ಕಟ್ಟಿದ ಕಿರಣ್ ಕುಮಾರ್!

5ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ ಕಿರಣ್ ಕುಮಾರ್, ತಾಯಿಯ ನಾಲ್ಕು ಚಿನ್ನದ ಬಳೆಗಳನ್ನು ಬಂಡವಾಳವಾಗಿಟ್ಟುಕೊಂಡು ಆಭರಣ ಉದ್ಯಮಕ್ಕೆ ಕಾಲಿಟ್ಟರು. ಇಂದು ಅವರು ಲಲಿತಾ ಜ್ಯುವೆಲ್ಲರಿ ಮಾರ್ಟ್ ಅನ್ನು ₹11,000 ಕೋಟಿ ಮೌಲ್ಯದ ಬೃಹತ್ ಸಾಮ್ರಾಜ್ಯವಾಗಿ ಬೆಳೆಸಿದ್ದು, ಕಂಪನಿಯು IPOಗೆ ಸಜ್ಜಾಗಿದೆ.
Read Full Story
07:38 PM (IST) Aug 17

Karnataka Latest News Live 17 August 2026ಬೆಂಗಳೂರಲ್ಲಿ ಮನಮಿಡಿದ ಒಂದು ಬೆಕ್ಕಿನ ಅಪರೂಪದ ಕತೆ.. ಪೊಲೀಸರಿಗಾಗಿ 112ಕ್ಕೆ ಕರೆ ಮಾಡಿದಾಗ ಏನಾಯಿತು?

ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿ ಮೂರು ದಿನಗಳಿಂದ ಬೀಗ ಹಾಕಿದ್ದ ಮನೆಯೊಳಗೆ ಸಿಲುಕಿದ್ದ ಬೆಕ್ಕನ್ನು ಭಾರತೀನಗರ ಪೊಲೀಸರು 112 ಗೆ ಕರೆ ಬಂದ 7 ನಿಮಿಷದಲ್ಲಿ ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯವನ್ನು ಕಂಡು ಅಲ್ಲಿದ್ದ ಪುಟ್ಟ ಬಾಲಕನೊಬ್ಬ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.

Read Full Story
06:45 PM (IST) Aug 17

Karnataka Latest News Live 17 August 2026ವೆಬ್‌ಸೀರಿಸ್ ಜಗತ್ತಿಗೆ ಪ್ರಿಯಾಂಕಾ ಉಪೇಂದ್ರ, ನಿಶ್ವಿಕಾ ನಾಯ್ಡು ಎಂಟ್ರಿ - ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕನ್ನಡ ಚಿತ್ರರಂಗದಲ್ಲಿ ವೆಬ್‌ಸೀರಿಸ್‌ಗಳತ್ತ ಮುಖ ಮಾಡುತ್ತಿರುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ವಿಭಿನ್ನ ಫಾರ್ಮ್ಯಾಟ್‌ಗಳು ಹಾಗೂ ಕಥೆಗಳಿಗೆ ಅವಕಾಶ..

Read Full Story
06:25 PM (IST) Aug 17

Karnataka Latest News Live 17 August 20269 ಗಂಟೆ ಕೋರ್ಟ್ ಕೆಲಸ ಕೇಳಿದ್ದಕ್ಕೆ ನೇರ ‘ನೋ’! Gen Z ಇಂಟರ್ನ್‌ನ ಮುಂದಿನ ಮಾತು ಕೇಳಿ ಕಂಗಾಲಾದ ಬಿದ್ದ ಬಾಸ್!

ದೆಹಲಿ ವಕೀಲರೊಬ್ಬರು ತಮ್ಮ Gen Z ಇಂಟರ್ನ್‌ಗೆ 9 ಗಂಟೆಗೆ ಕೋರ್ಟ್‌ಗೆ ಬರಲು ಹೇಳಿದಾಗ, ಜಿಮ್ ಸಮಯಕ್ಕೆ ಅಡ್ಡಿಯಾಗುತ್ತದೆ ಎಂದು ಆತ ನಿರಾಕರಿಸಿದ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೃತ್ತಿಪರ ಜವಾಬ್ದಾರಿ ಮತ್ತು ವರ್ಕ್-ಲೈಫ್ ಬ್ಯಾಲೆನ್ಸ್ ಕುರಿತು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

Read Full Story
06:21 PM (IST) Aug 17

Karnataka Latest News Live 17 August 2026‘ಮುಧೋಳ್’ ಹೆಸರಿನ ಹಿಂದೆ ರವಿಚಂದ್ರನ್ - ವಿಕ್ರಮ್ ಬಿಚ್ಚಿಟ್ಟ ಆ ಕುತೂಹಲಕಾರಿ ಸೀಕ್ರೆಟ್ ಏನು?

Mudhol Movie: ಬಹುಕಾಲದಿಂದ ನಿರೀಕ್ಷೆ ಮೂಡಿಸಿರುವ ನಟ-ನಿರ್ಮಾಪಕ ವಿಕ್ರಮ್ ರವಿಚಂದ್ರನ್ ಅಭಿನಯದ ‘ಮುಧೋಳ್’ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿದೆ.

Read Full Story
06:17 PM (IST) Aug 17

Karnataka Latest News Live 17 August 2026‘ನನ್ನ ಮೂಡ್ ಹಾಳು ಮಾಡಿದೆ’ - ಹನಿಮೂನ್‌ ವೇಳೆ ಪೀರಿಯಡ್ಸ್ ಆಗಿದ್ಕೆ ಪತ್ನಿಗೆ ಥಳಿತ.. 3 ವರ್ಷದ ಬಳಿಕ ಕೇಸ್‌ಗೆ ಟ್ವಿಸ್ಟ್!

ಹನಿಮೂನ್ ವೇಳೆ ಪತ್ನಿಗೆ ಮುಟ್ಟಾಗಿದ್ದಕ್ಕೆ "ಮೂಡ್ ಹಾಳು ಮಾಡಿದೆ" ಎಂದು ಆಕೆಯ ಮೇಲೆ ಪತಿ ಭೀಕರ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಅಂಡಮಾನ್‌ನಲ್ಲಿ ನಡೆದಿದೆ. ಇನ್ನೊಂದು ವಿಚಾರ ಏನೆಂದರೆ ಪ್ರಕರಣ ನಡೆದ ಬರೋಬ್ಬರಿ ಮೂರು ವರ್ಷಗಳ ನಂತರ ಕೇಸ್ ದಾಖಲಾಗಿದೆ..

Read Full Story
06:02 PM (IST) Aug 17

Karnataka Latest News Live 17 August 2026ಫ್ಯಾನ್ಸಿ ನಂಬರ್‌ ಕ್ರೇಜ್‌ನಿಂದ ಸಾರಿಗೆ ಇಲಾಖೆಗೆ ಹರಿದುಬಂತು ಕೋಟಿ ಕೋಟಿ ಹಣ, ಯಾವ ನಂಬರ್‌ಗೆ ಎಷ್ಟು ದುಡ್ಡು? ಇಲ್ಲಿದೆ ಡೀಟೇಲ್ಸ್‌..

ವಾಹನಗಳ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಮೇಲಿನ ವ್ಯಾಮೋಹದಿಂದಾಗಿ ಸಾರಿಗೆ ಇಲಾಖೆಯು 2025-26ನೇ ಸಾಲಿನಲ್ಲಿ ಇ-ಹರಾಜಿನ ಮೂಲಕ ದಾಖಲೆಯ 118.14 ಕೋಟಿ ರೂ. ಆದಾಯ ಗಳಿಸಿದೆ.

Read Full Story