ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೊರಬಿಡುತ್ತಿರುವ ನೀರು ಜಲಾನಯನ ಪ್ರದೇಶದಲ್ಲಿನ ಮಳೆಯ ಕಾರಣ ಮಂಗಳವಾರ ಮತ್ತಷ್ಟು ನೀರು ಹಿಪ್ಪರಗಿ ಜಲಾಶಯಕ್ಕೆ ಹರಿದು ಬರುತ್ತಿದೆ. ಅಣೆಕಟ್ಟೆಗೆ ಅಂಟಿಕೊಂಡೇ ಇರುವ ಕುಲಹಳ್ಳಿ ಗ್ರಾಮದೊಳಗೆ ನೀರು ನುಗ್ಗುತ್ತಿದ್ದು, ನದಿ ಸಮೀಪವಿರುವ ಕುಟುಂಬಗಳನ್ನು ಸರ್ಕಾರಿ ಶಾಲೆಗಳಲ್ಲಿ ಹಾಗೂ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ ಸ್ಥಳಾಂತರಿಸುವಲ್ಲಿ ತಾಲೂಕಾಡಳಿತ ಕ್ರಮ ಕೈಗೊಂಡಿದೆ.
Karnataka Districts Jul 28, 2021, 12:50 PM IST
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನೆರೆ ಪರಿಹಾರ ವಿಷಯದಲ್ಲಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೇ ದೊಡ್ಡ ಪ್ರಮಾಣದ ಪ್ರವಾಹ ಬಂದರೂ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಕಡೆ ಕಣ್ಣು ಹಾಯಿಸಿಲ್ಲ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Karnataka Districts Jul 28, 2021, 11:23 AM IST
ಜಿಲ್ಲೆಯಾದ್ಯಂತ ಮಳೆ ಕಡಿಮೆಯಾಗಿ 3 ದಿನಗಳೇ ಕಳೆದಿದ್ದರೂ ಪ್ರವಾಹದ ಸಂಕಷ್ಟ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಸಾಗಿದ್ದು, ನರಗುಂದ ತಾಲೂಕಿನ ಲಖಮಾಪುರ, ಕೊಣ್ಣೂರು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದ್ದು, ಕೊಣ್ಣೂರು ಸಮೀಪದಲ್ಲಿ ಹೆದ್ದಾರಿ ಮೇಲೆ ಸೋಮವಾರದಿಂದ ಹರಿಯುತ್ತಿರುವ ಮಲಪ್ರಭಾ ನದಿ ಮಂಗಳವಾರವೂ ಯಥಾಸ್ಥಿತಿ ಮುಂದುವರಿದ್ದು, ಹೆದ್ದಾರಿ ಸಂಚಾರ ಕೂಡಾ ಬಂದ್ ಆಗಿದೆ.
Karnataka Districts Jul 28, 2021, 10:33 AM IST
ಅಧಿಕಾರಿಗಳು ಅರ್ಧ ಗಂಟೆಯ ಮೊದಲು ನೀರು ಬರುತ್ತೆ ಬೇರೆಡೆ ಹೋಗಿ ಅಂತಾರೆ. ಸರಕಾರ ನಮಗೆ ಬೇರೆ ಕಡೆ ಮನೆ ಕಟ್ಟಲು ಜಾಗ ಕೊಟ್ಟಿಲ್ಲ, ಪರಿಹಾರನೂ ನೀಡಿಲ್ಲ. ನಮ್ಮ ಮನೆ ಅತಿಕ್ರಮಣ ಜಾಗದಲ್ಲಿರೋದು ನಾವೆಲ್ಲಿ ಬೇರೆಡೆ ಹೋಗೋದು? ಅಂತ ನೆರೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Karnataka Districts Jul 28, 2021, 10:00 AM IST
ಅಧಿಕಾರಿಗಳು ನೀರು ಬಿಡುವ ಮೊದಲು ಸರಿಯಾದ ಮಾಹಿತಿ ನೀಡಿಲ್ಲ. ನೀರು ಬಿಡೋ ಹತ್ತು- ಹದಿನೈದು ನಿಮಿಷ ಮೊದಲು ಹೇಳಿದ್ರೆ ನಾವೇನು ಮಾಡೋದು?.ಕಳೆದ ವರ್ಷವೂ ನೆರೆ ಬಂದಾಗ ಸರಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ.
Karnataka Districts Jul 28, 2021, 8:42 AM IST
ಕೊರೋನಾ, ನೆರೆಹಾವಳಿ ಸ್ವಲ್ಪ ತಣ್ಣಗಾಗುತ್ತಿದ್ದಂತೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಪ್ರವಾಹದ ಅಲೆಗಳು ದೂರದ ಉತ್ತರ ಕನ್ನಡಕ್ಕೂ ಅಪ್ಪಳಿಸುತ್ತಿವೆ.
Karnataka Districts Jul 28, 2021, 7:49 AM IST
* ಮಹಾರಾಷ್ಟ್ರ ಪ್ರವಾಹದ ವೇಳೆ ಡಿಪೋ ಮ್ಯಾನೇಜರ್
* 9 ಲಕ್ಷ ರು. ನೊಂದಿಗೆ ಬಸ್ ಟಾಪ್ ಮೇಲೆ ‘ಜೀವನ’
* ಎನ್ಡಿಆರ್ಎಫ್ ಸಿಬ್ಬಂದಿಯಿಂದ ಕೊನೆಗೆ ರಕ್ಷಣೆ
India Jul 28, 2021, 7:22 AM IST
ಕದ್ರಾ ಒಳಭಾಗದ ಗಾಂಧೀನಗರ, ರಾಜೀವ ನಗರದಲ್ಲಿ 25ಕ್ಕೂ ಮಿಕ್ಕಿ ಮನೆಗಳು ಪುಡಿ-ಪುಡಿಯಾಗಿವೆ. ಪ್ರವಾಹದಿಂದಾಗಿ ಗಟ್ಟಿಮುಟ್ಟಾಗಿದ್ದ ಮನೆಗಳೇ ನೆಲಸಮವಾಗಿವೆ. ನಮಗೆ ಪರಿಹಾರದ ಬದಲು ಬೇರೆಡೆ ಜಾಗ ತೋರಿಸಿದರೆ ಅಲ್ಲೇ ಮನೆ ಮಾಡಿ ಕುಳಿತುಕೊಳ್ತೇವೆ. 'ಅಧಿಕಾರಿಗಳು ಯಾರೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ನಮ್ಮ ನೋವು ಕೇಳಬೇಕಿದೆ'ಮತ್ತೆ ಜೀವನ ಕಟ್ಟಿಕೊಳ್ಳಲು ಸಹಾಯ ಬೇಕಿದೆ ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.
Karnataka Districts Jul 28, 2021, 12:33 AM IST
ಕಾಳಿ ನದಿಯಿಂದ ಉಂಟಾದ ಪ್ರವಾಹದಿಂದ ನೂರಾರು ಜನರ ಬದುಕು ಬೀದಿಗೆ ಬಂದಿದೆ. ಕದ್ರಾ ಸರಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಮಕ್ಕಳು, ಮರಿಮಕ್ಕಳ ಜತೆ ಕಾಳಜಿ ವೃದ್ಧೆಯರು ಆಶ್ರಯ ಪಡೆದಿದ್ದಾರೆ ಸ್ಥಳೀಯ ಯುವಕರೇ ನಮ್ಮನ್ನು ಹೊತ್ತುಕೊಂಡು ಬಂದು ರಕ್ಷಿಸಿದ್ದಾರೆ' 'ಪ್ರತೀ ವರ್ಷ ಯುವಕರು ನಮ್ಮನ್ನು ಹೊತ್ತುಕೊಂಡೇ ಬರುತ್ತಾ ಇರಬೇಕಾ?' 'ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಇಲ್ಲವೇ?' ಸಂತ್ರಸ್ತರು ಪ್ರಶ್ನೆ ಮಾಡಿದ್ದಾರೆ.
Karnataka Districts Jul 27, 2021, 7:07 PM IST
* ಹೊಸ ಸಿಎಂ ಆಯ್ಕೆ ಬೆಳವಣಿಗೆ ಮಧ್ಯೆ ಕರ್ನಾಟಕಕ್ಕೆ ಗುಡ್ನ್ಯೂಸ್ ನೀಡಿದ ಕೇಂದ್ರ ಸರ್ಕಾರ
* ಇದರ ಮಧ್ಯೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದೆ
* ಈ ಬಗ್ಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ
state Jul 27, 2021, 5:23 PM IST
ಅಥಣಿ ತಾಲೂಕಿನ ಸತ್ತಿ ಗ್ರಾಮಕ್ಕೂ ಜಲಕಂಟಕ ಎದುರಾಗಿದೆ. ಸತ್ತಿ ಗ್ರಾಮ ಭಾಗಶಃ ಜಲಾವೃತವಾಗಿದೆ. 100ಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದು, ದೇಗುಲ, ದರ್ಗಾ, ಶಾಲೆಗಳು ಮುಳುಗಿವೆ. ಗ್ರಾಮದ ಚಾಮುಂಡೇಶ್ವರಿ ದೇಗುಲ ಬುಡಾನ್ಸಾಬ್ ದರ್ಗಾ ಜಲಾವೃತವಾಗಿದೆ.
ಮನೆ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಸಂತ್ರಸ್ತರು ತೆರಳಿದ್ದಾರೆ. ಗ್ರಾಮದ ಉಳಿದ ಜನರಲ್ಲೂ ತೀವ್ರ ಆತಂಕ ಮನೆ ಮಾಡಿದೆ.
Karnataka Districts Jul 27, 2021, 2:45 PM IST
ಅಥಣಿ ತಾಲೂಕಿನ ಸತ್ತಿ ಗ್ರಾಮದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ಸತ್ತಿ ಗ್ರಾಮದ ಅಥಣಿ ರಸ್ತೆಯಲ್ಲಿರೋ ಇನ್ಪೋಸಿಸ್ ಪ್ರತಿಷ್ಠಾನದ ಪಿ.ಯು. ಕಾಲೇಜು ಜಲಾವೃತವಾಗಿದ್ದು, ಇಡೀ ಕಾಲೇಜನ್ನ ನೀರು ಸುತ್ತುವರೆದಿದೆ.
Karnataka Districts Jul 27, 2021, 2:01 PM IST
ಜೀವ ಉಳಿಸಿಕೊಳ್ಳಲು ಕೃಷ್ಣಾನದಿ ತೀರದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಈ ದೃಶ್ಯಗಳನ್ನ ನೋಡಿದರೆ ಮನ ಕಲುಕುತ್ತದೆ. ಪ್ರವಾಹ ಪೀಡಿತ ಅಥಣಿ ತಾಲೂಕಿನ ಗ್ರಾಮಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಡಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
Karnataka Districts Jul 27, 2021, 1:43 PM IST
ಅಥಣಿ ತಾಲೂಕಿನ ಪ್ರವಾಹ ಸಂತ್ರಸ್ತರ ಬದುಕೇ ಬರ್ಬಾದ್ ಆಗಿದೆ. ಪ್ರವಾಹದ ಹೊಡೆತಕ್ಕೆ ಬದುಕು ಬೀದಿಗೆ ಬಿದ್ದಿದೆ. ಮನೆ-ಮಠ ಬಿಟ್ಟು ಜನ ರಸ್ತೆ ಬದಿಗೆ ಬಂದು ನಿಂತಿದ್ದಾರೆ.
ಟ್ರಾಕ್ಟರ್ಗಳಲ್ಲಿ ತಿಜೋರಿ, ಗ್ಯಾಸ್, ಸೇರಿ ಮನೆಯ ಸಾಮಾನು ಹೇರಿಕೊಂಡು ಮನೆ ಬಿಟ್ಟು ಬಂದಿದ್ದಾರೆ. ಬಾಣಂತಿ, ವಯಸ್ಸಾದವರು, ಪ್ರಾಣಿಪಕ್ಷಗಳನ್ನೆಲ್ಲಾ ಕರೆದುಕೊಂಡು ಬಂದು ನೆಲೆ ಇಲ್ಲದೆ ಪರದಾಡುತ್ತಿದ್ದಾರೆ.
Karnataka Districts Jul 27, 2021, 1:29 PM IST
ಅಥಣಿ ಹುಲಗಬಾಳ ಗ್ರಾಮವನ್ನು ಪ್ರವಾಹ ಸಂಪೂರ್ಣವಾಗಿ ಸುತ್ತುವರೆದಿದ್ದು, ಸತತ ಮೂರನೇ ಬಾರಿ ಹುಲಗಬಾಳ ಗ್ರಾಮ ಜಲಾವೃತವಾಗಿದೆ. ಗ್ರಾಮದ ದಲಿತ ಕಾಲೋನಿಯ ಮನೆಗಳು ಸಂಪೂರ್ಣ ಮುಳುಗಡೆಯಾಗಿದೆ.
ಏಕಾಏಕಿ ಪ್ರವಾಹದ ನೀರು ಬರುತ್ತಿದ್ದಂತೆ ರಾತ್ರೋರಾತ್ರಿ ಮನೆಗಳನ್ನ ಜನ ಬಿಟ್ಟು ಹೋಗಿದ್ದಾರೆ. ದಲಿತ ಕಾಲೋನಿಯ 60ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿವೆ. ಮನೆಗೆ ಬೀಗ ಹಾಕಿ ಜನರು ತೆರಳಿದ್ದಾರೆ.
Karnataka Districts Jul 27, 2021, 1:17 PM IST