
ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
ತಮಿಳುನಾಡು ಕಬ್ಜ. ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ಜಿಬಿಎ ಚುನಾವಣೆಯಲ್ಲಿ ಧೂಳೆಬ್ಬಿಸಲು ದಾಳ ಉರುಳಿಸ್ತಾರಾ ದಳಪತಿ? ಸೈನಿಕರು ಸಜ್ಜು. ಜನನಾಯಗನ್ ಹುಕುಂಗೆ ಕೌಂಟ್ಡೌನ್! ಕೇರಳಂ. ಕರುನಾಡು. ವಾಟ್ ನೆಕ್ಸ್ಟ್ ಮಾಸ್ಟರ್ ಟಾರ್ಗೆಟ್?
ತಮಿಳುನಾಡು ಕಬ್ಜ. ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ಜಿಬಿಎ ಚುನಾವಣೆಯಲ್ಲಿ ಧೂಳೆಬ್ಬಿಸಲು ದಾಳ ಉರುಳಿಸ್ತಾರಾ ದಳಪತಿ? ಸೈನಿಕರು ಸಜ್ಜು. ಜನನಾಯಗನ್ ಹುಕುಂಗೆ ಕೌಂಟ್ಡೌನ್! ಕೇರಳಂ. ಕರುನಾಡು. ವಾಟ್ ನೆಕ್ಸ್ಟ್ ಮಾಸ್ಟರ್ ಟಾರ್ಗೆಟ್? ಇದೇ ಇವತ್ತಿನ ಸುವರ್ಣ ಸ್ಪೆಷಲ್. ದಳಪತಿ ಬೆಂಗಳೂರು ದಂಡಯಾತ್ರೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಮಿಳುನಾಡಿನಲ್ಲಿ ವಿಜಯ ಪರ್ವ ಶುರುವಾಗಿದೆ. ಅಲ್ಲಿನ ಸಿಎಂ ಸಿಂಹಾಸನವನ್ನ ಅಲಂಕರಿಸೋ ದಳಪತಿ ವಿಜಯ್ ತಮ್ಮ ರಾಜ್ಯಭಾರವನ್ನ ಆರಂಭಿಸಿದ್ದಾರೆ. ಈ ಮಧ್ಯೆ ದೊಡ್ಡ ಸುದ್ದಿಯೊಂದು ಬಿರುಗಾಳಿಯಂತೆ ಹಬ್ಬುತ್ತಿದೆ. ಸದ್ಯದಲ್ಲಿಯೇ ನಡೆಯಲಿರೋ ಜಿಬಿಎ ಚುನಾವಣಾ ಅಖಾಡಕ್ಕೆ ಟಿವಿಕೆ ಸ್ಪರ್ಧೆ ಮಾಡುತ್ತೆ ಅನ್ನೋ ಸುಂಟರಗಾಳಿ ಸುದ್ದಿಯದು. ಹಾಗಿದ್ರೆ ನಿಜಕ್ಕೂ ಬೆಂಗಳೂರು ರಾಜಕೀಯ ರಣರಂಗಕ್ಕೆ ವಿಜಯ್ ಎಂಟ್ರಿ ಕೊಡ್ತಾರಾ? ಆ ನಿಟ್ಟಿನಲ್ಲಿ ತೆರೆಮರೆಯ ತಯಾರಿಗಳು ನಡೆಯುತ್ತಿವೆಯಾ? ಒಂದು ವೇಳೆ ಅಖಾಡ ಪ್ರವೇಶ ಮಾಡಿದ್ದೇ ಆದಲ್ಲಿ ಅವರಿಗೆ ಎದುರಾಗೋ ಬೆಟ್ಟದಷ್ಟು ಸವಾಲುಗಳೇನು? ಇಲ್ಲಿದೆ ನೋಡಿ ಡೀಟೈಲ್ಸ್