ರಾಜಸ್ಥಾನದ ಜನಪ್ರಿಯ ಪ್ರವಚನಗಾರ್ತಿ ಸಾಧ್ವಿ ಪ್ರೇಮ್ ಬೈಸಾ ಅವರು ಜೋಧ್ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತಂದೆಯೊಂದಿಗಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ವೈರಲ್ ಆದ ನಂತರ ತೀವ್ರ ಸೈಬರ್ ಬುಲ್ಲಿಯಿಂಗ್ಗೆ ಒಳಗಾಗಿದ್ದ ಅವರ ಸಾವು ಅನುಮಾನಗಳನ್ನು ಹುಟ್ಟುಹಾಕಿದೆ.
- Home
- News
- India News
- India News Live: ಸನಾತನ ಸಂಸ್ಕೃತಿಯ ಪ್ರಚಾರಕಿ ನಿಗೂಢ ಸಾವು - ವಿವಾದಾತ್ಮಕ ವಿಡಿಯೋ ಬಲಿ ಪಡೆಯಿತೇ? ಯಾರು ಈ ಸಾಧ್ವಿ ಪ್ರೇಮ್ ಬೈಸಾ?
India News Live: ಸನಾತನ ಸಂಸ್ಕೃತಿಯ ಪ್ರಚಾರಕಿ ನಿಗೂಢ ಸಾವು - ವಿವಾದಾತ್ಮಕ ವಿಡಿಯೋ ಬಲಿ ಪಡೆಯಿತೇ? ಯಾರು ಈ ಸಾಧ್ವಿ ಪ್ರೇಮ್ ಬೈಸಾ?

ನವದೆಹಲಿ (ಜ.29): ಅಜಿತ್ ಪವಾರ್ ಅಗಲಿಕೆ ಯಿಂದ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಆಧಾರಸ್ತಂಭ ಕುಸಿದಂತಾಗಿದ್ದರೆ, ಅತ್ತ ಅವರ ಎನ್ಸಿಪಿ ಅತಂತ್ರ ಸ್ಥಿತಿಗೆ ತಲುಪಿದೆ. ಅದರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳೇಳುತ್ತಿದ್ದು, ಅಜಿತ್ ಇಲ್ಲದೆ ಎನ್ಸಿಪಿ ಶಾಸಕರಿಗೆ ಅನಾಥ ಭಾವ ಕಾಡತೊಡಗಿದೆ. ಈ ನಡುವೆ ಅಜಿತ್ ಅನುಪಸ್ಥಿತಿಯಲ್ಲಿ ಭವಿಷ್ಯದ ದೃಷ್ಟಿಯಿಂದ ಶಾಸಕರು ಅನ್ಯ ಪಕ್ಷದತ್ತ ಹೆಜ್ಜೆ ಇಟ್ಟರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 29th January: ಸನಾತನ ಸಂಸ್ಕೃತಿಯ ಪ್ರಚಾರಕಿ ನಿಗೂಢ ಸಾವು - ವಿವಾದಾತ್ಮಕ ವಿಡಿಯೋ ಬಲಿ ಪಡೆಯಿತೇ? ಯಾರು ಈ ಸಾಧ್ವಿ ಪ್ರೇಮ್ ಬೈಸಾ?
India News Live 29th January: ಏರ್ಟೆಲ್ ಗ್ರಾಹಕರಿಗೆ ಬಂಪರ್ ಗಿಫ್ಟ್, 4000 ರೂ ಮೌಲ್ಯದ ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ ಉಚಿತ
ಏರ್ಟೆಲ್ ಗ್ರಾಹಕರಿಗೆ ಬಂಪರ್ ಗಿಫ್ಟ್, ಜಾಗತಿಕ ಮಟ್ಟದಲ್ಲೇ ಮೊದಲ ಬಾರಿಗೆ 360 ಮಿಲಿಯನ್ ಭಾರತೀಯರಿಗೆ ಉಚಿತವಾಗಿ ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ ಒದಗಿಸಲಾಗಿದೆ. ಇದು ಏರ್ಟೆಲ್ ಗ್ರಾಹಕರಿಗಾಗಿ ಮಾತ್ರ.
India News Live 29th January: ತತ್ಕಾಲ್ ರೈಲು ಟಿಕೆಟ್ ಬುಕಿಂಗ್ನಲ್ಲಿ ಮಹತ್ತರ ಬದಲಾವಣೆ, ಪ್ರಯಾಣಿಕನಿಗೆ ನೆರವಾದ ಸ್ಮಾರ್ಟರ್ ಟಿಕೆಟ್
ತತ್ಕಾಲ್ ರೈಲು ಟಿಕೆಟ್ ಬುಕಿಂಗ್ನಲ್ಲಿ ಮಹತ್ತರ ಬದಲಾವಣೆ, ಮಧ್ಯವರ್ತಿಗಳು, ನಕಲಿ ಖಾತೆಗಳ ಮೂಲಕ ತತ್ಕಾಲ್ ಟಿಕೆಟ್ ಬುಕಿಂಗ್ ಪರಿಣಾಮ ಪ್ರಯಾಣಿಕನಿಗೆ ಸಮಸ್ಯೆಯಾಗುತ್ತಿತ್ತು. ಇದೀಗ ಸಮಸ್ಯೆಗೆ ಸ್ಮಾರ್ಟರ್ ಪರಿಹಾರ ನೀಡಲಾಗಿದೆ.
India News Live 29th January: ಸಹಪಾಠಿಗಳ ನೆರವಿನಿಂದ 55 ದಿನಗಳ ಬಳಿಕ ಕೋಮಾದಿಂದ ಹೊರಬಂದ 8 ವರ್ಷದ ಬಾಲಕ
ಸಹಪಾಠಿಗಳ ನೆರವಿನಿಂದ 55 ದಿನಗಳ ಬಳಿಕ ಕೋಮಾದಿಂದ ಹೊರಬಂದ 8 ವರ್ಷದ ಬಾಲಕ, ಭೀಕರ ಕಾರು ಅಪಘಾತದಿಂದ ಆಸ್ಪತ್ರೆ ದಾಖಲಾಗಿದ್ದ ಬಾಲಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದರು. ಆದರೆ ಅಚ್ಚರಿ ನಡೆದಿದೆ.
India News Live 29th January: ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಕ್ಲಾಸ್ಮೇಟ್ಗೆ ಅವಮಾನಿಸಿದ ಯುವತಿ - ವೀಡಿಯೋಗೆ ತೀವ್ರ ಆಕ್ರೋಶ
ತನ್ನ ಮಾಜಿ ಕ್ಲಾಸ್ಮೇಟ್ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವುದನ್ನು ನೋಡಿದ ಯುವತಿಯೊಬ್ಬಳು, ಆತನನ್ನು ಅವಮಾನಿಸಿ ವಿಡಿಯೋ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
India News Live 29th January: ವಿಮಾನ ಪ್ರಯಾಣದಲ್ಲಿ ಮೊಬೈಲ್ ಏರೋಪ್ಲೇನ್ ಮೂಡ್ಗೆ ಯಾಕೆ ಹಾಕಬೇಕು? ಸೇಫ್ಟಿ ರೂಲ್
ವಿಮಾನ ಪ್ರಯಾಣದಲ್ಲಿ ಮೊಬೈಲ್ ಏರೋಪ್ಲೇನ್ ಮೂಡ್ಗೆ ಯಾಕೆ ಹಾಕಬೇಕು? ಸೇಫ್ಟಿ ರೂಲ್ ಏನು ಹೇಳುತ್ತೆ. ವಿಮಾನ ಸಿಬ್ಬಂದಿಗಳು ನೀಡುವ ಸೂಚನೆಯಲ್ಲಿ ಫ್ಲೈಟ್ ಮೂಡ್ ಅಲರ್ಟ್ ಇದ್ದೆ ಇರುತ್ತೆ. ಯಾಕೆ ಮುಖ್ಯ?
India News Live 29th January: ಸಲ್ಲು ಭಯಕ್ಕೆ ಸಿಂಗರ್ ಅರಿಜಿತ್ ವಿದಾಯ? ಹಾಡು ನಿಲ್ಲಿಸಿದ್ದೇಕೆ ಬಾಲಿವುಡ್ ಗಾನಕೋಗಿಲೆ?
ಬಾಲಿವುಡ್ನ ಖ್ಯಾತ ಗಾಯಕ ಅರಿಜೀತ್ ಸಿಂಗ್ ಅವರು ತಮ್ಮ ಹಿನ್ನೆಲೆ ಗಾಯನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಘೋಷಿಸಿ, ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ಆಘಾತ ನೀಡಿದ್ದಾರೆ. ಈ ಅನಿರೀಕ್ಷಿತ ನಿರ್ಧಾರದ ಹಿಂದಿನ ಸಂಭವನೀಯ ಕಾರಣಗಳನ್ನು ನೋಡೋಣ ಬನ್ನಿ
India News Live 29th January: ಟಾಕ್ಸಿಕ್ ಟೀಸರ್ ಮ್ಯಾಜಿಕ್ - ಯಾರದು ಟಾಕ್ಸಿಕ್ ರಂಭೆ? ಆ ಗುಟ್ಟು ಬಿಚ್ಚಿಟ್ಟ ಫ್ಯಾನ್ಸ್ಗೆ ಹಾಲಿವುಡ್ ಗೊಂಬೆ ನಟಾಲಿಯಾ!
ಟಾಕ್ಸಿಕ್ ಟೀಸರ್ನಲ್ಲಿ ಯಶ್ ಜೊತೆಗಿದ್ದ ನಟಿ ಯಾರೆಂಬ ಗೊಂದಲಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ತೆರೆ ಎಳೆದಿದ್ದಾರೆ. ಅಭಿಮಾನಿಗಳು ಭಾವಿಸಿದ್ದಂತೆ ಆಕೆ ನಟಾಲಿಯಾ ಬರ್ನ್ ಅಲ್ಲ, ಆದರೆ ನಟಾಲಿಯಾ ಚಿತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರದ ಬಗ್ಗೆ ಅಚ್ಚರಿಯ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
India News Live 29th January: ಕೆಳಗಿಳಿದು ಬರಲು ಒಪ್ಪದ ಕಸ್ಟಮರ್ - ಆರ್ಡರ್ ಕ್ಯಾನ್ಸಲ್ ಮಾಡಿ ಗ್ರಾಹಕನ ಆಹಾರ ತಿಂದ ಝೋಮ್ಯಾಟೋ ಡೆಲಿವರಿ ಬಾಯ್
India News Live 29th January: ಶನಿದೇವನ ಕರುಣೆ - 30 ವರ್ಷಗಳ ನಂತರ ನಡೆಯುತ್ತೆ ಅದ್ಭುತ! ಈ ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ!
ಶನಿ ಗೋಚಾರ: ಹೋಳಿ ನಂತರ ಮೀನ ರಾಶಿಯಲ್ಲಿ ಶನಿ ಅಸ್ತಮಿಸಲಿದ್ದಾನೆ. ಸುಮಾರು 30 ವರ್ಷಗಳ ನಂತರ ನಡೆಯುತ್ತಿರುವ ಈ ಬದಲಾವಣೆಯಿಂದಾಗಿ ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಅದೃಷ್ಟ ಮತ್ತು ಹಠಾತ್ ಧನಲಾಭ ಉಂಟಾಗಲಿದೆ. ಪೂರ್ಣ ವಿವರಗಳನ್ನು ಇಲ್ಲಿ ತಿಳಿಯೋಣ.
India News Live 29th January: ಫೆ.1ರಿಂದ ಫಾಸ್ಟಾಗ್ ನಿಯಮದಲ್ಲಿ ಮತ್ತೊಂದು ಬದಲಾವಣೆ, ವಾಹನ ಮಾಲೀಕರು ಫುಲ್ ಖುಷ್
ಫೆ.1ರಿಂದ ಫಾಸ್ಟಾಗ್ ನಿಯಮದಲ್ಲಿ ಮತ್ತೊಂದು ಬದಲಾವಣೆ, ವಾಹನ ಮಾಲೀಕರಿಗೆ ಇನ್ನು ಮುಂದೆ ಫಾಸ್ಟಾಗ್ ಕಿರಿಕಿರಿ ಇರುವುದಿಲ್ಲ. ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಏನಿದು ಈ ನಿಯಮ?
India News Live 29th January: ಡೆಲ್ಲಿ ಮಹಿಳಾ ಪೊಲೀಸ್ ಕಮಾಂಡೋ ಹತ್ಯೆ ಪ್ರಕರಣ ಟ್ವಿಸ್ಟ್, ಕೊನೆ ಕರೆಯಲ್ಲಿ ಪತಿಯ ಕೃತ್ಯ ಬಯಲು
ಡೆಲ್ಲಿ ಮಹಿಳಾ ಪೊಲೀಸ್ ಕಮಾಂಡೋ ಹತ್ಯೆ ಪ್ರಕರಣ ಟ್ವಿಸ್ಟ್, ಹತ್ಯೆ ಮಾಡಿದ್ದು ಬೇರೆ ಯಾರು ಅಲ್ಲ ಸ್ವತಃ ಪತಿ. ಈ ರೋಚಕ ಮಾಹಿತಿ ಕೊನೆಯ ಫೋನ್ ಕಾಲ್ನಲ್ಲಿ ಬಯಲಾಗಿದೆ. ಅಷ್ಟಕ್ಕೂ ಏನಿದು ಘಟನೆ?
India News Live 29th January: ಜನನಾಯಗನ್ ಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ! ದಳಪತಿ ವಿಜಯ್ ನಂಬಿ 400 ಕೋಟಿ ಕಳೆದುಕೊಂಡ KVN?
ವಿಜಯ್ ಅವರ ಕೊನೆಯ ಚಿತ್ರ 'ಜನನಾಯಗನ್' ಸೆನ್ಸಾರ್ ಸಮಸ್ಯೆಯಿಂದಾಗಿ ಬಿಡುಗಡೆಯಾಗದೆ ಸಂಕಷ್ಟಕ್ಕೆ ಸಿಲುಕಿದೆ. ಸೆನ್ಸಾರ್ ಮಂಡಳಿ ಮತ್ತು ನಿರ್ಮಾಪಕರ ನಡುವಿನ ಕಾನೂನು ಹೋರಾಟದಲ್ಲಿ, ಮದ್ರಾಸ್ ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆ ನೀಡಿದೆ. ಇದರಿಂದಾಗಿ ಕೆವಿಎನ್ ಪ್ರೊಡಕ್ಷನ್ಸ್ಗೆ ಹಿನ್ನಡೆಯಾಗಿದೆ.
India News Live 29th January: ಎಂಎಂಎಸ್ ಲೀಕ್ ಆದ ಬೆನ್ನಲ್ಲಿಯೇ ದುಡುಕಿನ ನಿರ್ಧಾರ ತೆಗೆದುಕೊಂಡ್ರಾ ಸಾಧ್ವಿ ಪ್ರೇಮ್ ಬಾಯಿಸಾ!
ಜೋಧ್ಪುರದ ಸಾಧ್ವಿ ಪ್ರೇಮ್ ಬಾಯಿಸಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸಾವಿನ ನಾಲ್ಕು ಗಂಟೆಗಳ ನಂತರ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ ಪೋಸ್ಟ್ ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಿದ್ದು, ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.
India News Live 29th January: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವಿನಲ್ಲೂ ಆಟವಾಡಿದ ನಂಬರ್ 11
Ajit Pawar Death: The Mysterious Connection of Number 11 in Plane Crash ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಸಾವು ಕಂಡಿದ್ದಾರೆ. ಇದು ರಾಜಕೀಯದಲ್ಲಿ ಒಂದು ದೊಡ್ಡ ಶೂನ್ಯ ಸೃಷ್ಟಿಸಿದೆ.
India News Live 29th January: ಇದು ಅಸಲಿ ಡಾಗ್ ಪ್ರೀತಿ, ಕೇವಲ ಸ್ಥಳಾಂತರಕ್ಕೆ 15 ಲಕ್ಷ ರೂ ಖರ್ಚು ಮಾಡಿದ ಭಾರತೀಯ ದಂಪತಿ
ಇದು ಅಸಲಿ ಡಾಗ್ ಪ್ರೀತಿ ಕತೆ, ಕೇವಲ ಸ್ಥಳಾಂತರಕ್ಕೆ 15 ಲಕ್ಷ ರೂ ಖರ್ಚು ಮಾಡಿದ ಭಾರತೀಯ ದಂಪತಿ, ಪ್ರೀತಿಯ ನಾಯಿಗಾಗಿ ದಂಪತಿ ದುಡ್ಡಿನ ಮುಖ ನೋಡಿಲ್ಲ. ಬೇರೆ ನಾಯಿ ಪಡೆಯುವ ಆಲೋಚನೆಯೂ ಮಾಡಿಲ್ಲ
India News Live 29th January: ಮೋದಿ ಸರ್ಕಾರಕ್ಕೆ ಹಿನ್ನಡೆ, ಯುಜಿಸಿ ಹೊಸ ತಾರತಮ್ಯ ವಿರೋಧಿ ನಿಯಮಗಳ ಅನುಷ್ಠಾನಕ್ಕೆ ಸುಪ್ರೀಂ ತಡೆ
SC Stays UGC New Anti-Discrimination Rules; Issues Notice to Centre ಯುಜಿಸಿಯ ಹೊಸ ತಾರತಮ್ಯ ವಿರೋಧಿ ನಿಯಮಗಳನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ರದ್ದುಗೊಳಿಸಿ, ಮಾರ್ಗಸೂಚಿಗಳ ಅಸ್ಪಷ್ಟತೆ ಮತ್ತು ದುರುಪಯೋಗದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
India News Live 29th January: ಅಜಿತ್ ಪವಾರ್ ನಿಧನ - ಸುಪ್ರಿಯಾ ಸುಳೆ ಹಾಗೂ ಸುನೇತ್ರಾ ಅವರನ್ನು ಸಮಾಧಾನಿಸುತ್ತಿರುವ ವೃದ್ಧ ಯಾರು?
ವಿಮಾನ ಅಪಘಾತದಲ್ಲಿ ನಿಧನರಾದ ಅಜಿತ್ ಪವಾರ್ ಅವರ ಅಂತ್ಯಸಂಸ್ಕಾರದ ವೇಳೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದ ವೃದ್ಧರೊಬ್ಬರು ಗಮನ ಸೆಳೆದಿದ್ದು, ಅವರು ಅಜಿತ್ ಪವಾರ್ ಪತ್ನಿ, ಸೋದರಿಗೆ ಸಾಂತ್ವಾನ ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ. ಅವರು ಯಾರು?
India News Live 29th January: ಬರೋಬ್ಬರಿ 11,956 ಕೋಟಿ ರು.ಗೆ ರಾಜಸ್ಥಾನ ರಾಯಲ್ಸ್ ಮಾಲೀಕತ್ವ ಹರಾಜು? ಖರೀದಿಸಲು ಒಲವು ತೋರಿವೆ ಈ ಸಂಸ್ಥೆಗಳು!
ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಕೆಲವು ತಂಡಗಳ ಮಾಲೀಕತ್ವ ಬದಲಾಗುವ ಸಾಧ್ಯತೆಯಿದೆ. ಈ ಪೈಕಿ ರಾಜಸ್ಥಾನ ರಾಯಲ್ಸ್ ಮಾಲೀಕತ್ವ ದಾಖಲೆಯ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ
India News Live 29th January: ಪ್ರಭಾಸ್ ಒಂದು ದಿನದ ಊಟದ ಖರ್ಚು ಎಷ್ಟು ಗೊತ್ತಾ? ಬಾಹುಬಲಿ ಸ್ಟಾರ್ ಲಂಚ್ ಮೆನುವಿನಲ್ಲಿ ಏನಿರುತ್ತೆ?
ಪ್ರಭಾಸ್ ಒಳ್ಳೆಯ ಭೋಜನ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಅವರ ಜೊತೆಗಿದ್ದರೆ ರಾಜಮನೆತನದ ಊಟದ ರುಚಿ ನೋಡಬಹುದು. ಅನೇಕ ಸ್ಟಾರ್ಗಳು ಪ್ರಭಾಸ್ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಪ್ರಭಾಸ್ ಊಟದ ಮೆನುವಿನಲ್ಲಿರುವ ವಿಶೇಷತೆಗಳೇನು? ಒಂದು ದಿನದ ಊಟಕ್ಕೆ ಎಷ್ಟು ಖರ್ಚು ಮಾಡುತ್ತಾರೆ?