ಮದ್ವೆಗೆ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಒಂದು ತಿಂಗಳ ಮೊದಲೇ ಎಲ್ಲರಿಗೂ ಖುದ್ದು ಆಮಂತ್ರ ನೀಡಿದ್ದ ಮಹಿಳಾ ಉದ್ಯೋಗಿ, ಮದುವೆ ದಿನ 6 ಟೇಬಲ್ ರಿಸರ್ವ್ ಮಾಡಿದ್ದಳು. ಆದರೆ ಬಂದಿದ್ದು ಒಬ್ಬ ಸಹೋದ್ಯೋಗಿ ಮಾತ್ರ.
- Home
- News
- India News
- India News Live: ಮದ್ವೆಗೆ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಅವಮಾನ ಸಹಿಸಲಾಗದೆ ಕೆಲಸಕ್ಕೆ ರಾಜೀನಾಮೆ
India News Live: ಮದ್ವೆಗೆ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಅವಮಾನ ಸಹಿಸಲಾಗದೆ ಕೆಲಸಕ್ಕೆ ರಾಜೀನಾಮೆ

ನವದೆಹಲಿ (ಜ.27): ಇಂದು ಭಾರತ ಹಾಗೂ ಯುರೋಪ್ ನಡುವೆ ಮದರ್ ಆಫ್ ಆಲ್ ಡೀಲ್ಸ್ ನಡೆಯುವ ಸಾಧ್ಯತೆ ಇದೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಇಂದು ಅಧಿಕೃತ ಘೋಷಣೆಯಾಗಬಹುದು. ವ್ಯಾಪಾರ ಒಪ್ಪಂದಕ್ಕೆ ಕ್ಯಾತೆ ತೆಗೆದ ಟ್ರಂಪ್ಗೆ ಮೋದಿ ದೊಡ್ಡ ಶಾಕ್ ನೀಡಿದ್ದಾರೆ. ಈ ಒಪ್ಪಂದದಿಂದ ಭಾರತ ಹಾಗೂ ಯುರೋಪ್ ನಡುವೆ ವ್ಯಾಪಾರ, ವಹಿವಾಟು ಇನ್ನಷ್ಟು ಸುಗಮವಾಗಲಿದೆ. ಡೀಲ್ ಮೊತ್ತ ವಿಶ್ವದ ಜಿಡಿಪಿಯ ಶೇ. 25ರಷ್ಟಿದೆ. ಇದು 200 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 27th January: ಮದ್ವೆಗೆ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಅವಮಾನ ಸಹಿಸಲಾಗದೆ ಕೆಲಸಕ್ಕೆ ರಾಜೀನಾಮೆ
India News Live 27th January: ಬುರ್ಖಾ ಹಾಕಿಸಿ ಸ್ನೇಹಿತೆಯ ಮತಾಂತರಕ್ಕೆ ಬಾಲಕಿಯರ ಯತ್ನ? ಶಾಕಿಂಗ್ ವಿಡಿಯೋ ವೈರಲ್- FIR ದಾಖಲು
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ, ಹಿಂದೂ ಯುವತಿಗೆ ಆಕೆಯ ಮುಸ್ಲಿಂ ಸ್ನೇಹಿತೆಯರು ಬುರ್ಖಾ ಧರಿಸಲು ಒತ್ತಾಯಿಸಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಸಂಬಂಧ ಐವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
India News Live 27th January: ಅಭಿಮಾನಿಗಳಿಗೆ ಆಘಾತ, ಖ್ಯಾತ ಗಾಯಕ ಅರಿಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಣೆ
ಅಭಿಮಾನಿಗಳಿಗೆ ಆಘಾತ, ಖ್ಯಾತ ಗಾಯಕ ಅರಿಜಿತ್ ಸಿಂಗ್ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಿನ್ನಲೆಯ ಗಾಯನದಿಂದ ಅರ್ಜಿತ್ ಸಿಂಗ್ ನಿವೃತ್ತಿ ಹೇಳುತ್ತಿದ್ದಾರೆ. ಇದೇ ವೇಳೆ ಸಣ್ಣ ಆಶಾವಾದ ವ್ಯಕ್ತಪಡಿಸಿದ್ದಾರೆ.
India News Live 27th January: ಅಂಬಾನಿ ಆಡಿದ ಆ ಒಂದು ಮಾತಿಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ - ಹಳೇ ವೀಡಿಯೋ ವೈರಲ್
ಶ್ರೀಮಂತರಾಗಿದ್ದರೂ ಸರಳವಾಗಿ ಇರುವವರು ಬಹಳ ಕಡಿಮೆ ಆದರೆ ಮುಕೇಶ್ ಅಂಬಾನಿ ಹಾಗಲ್ಲ, ವ್ಯಕ್ತಿತ್ವದ ವಿಚಾರ ಬಂದಾಗ ಅವರಷ್ಟು ಸಿಂಪಲ್ ವ್ಯಕ್ತಿ ಬೇರಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವೀಡಿಯೋವೊಂದು ವೈರಲ್ ಆಗ್ತಿದ್ದು, ಅನೇಕರು ಮುಕೇಶ್ ಅಂಬಾನಿ ವ್ಯಕ್ತಿತ್ವಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
India News Live 27th January: ಒಂದು ತಿಂಗಳು ಮೊದಲೇ ಗುಟ್ಟಾಗಿ ರಶ್ಮಿಕಾ ಮಂದಣ್ಣ- ವಿಜಯ್ ಮದುವೆ? ಫೋಟೋ ನೋಡಿ ಶಾಕ್
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ನಡುವೆಯೇ, ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ. ಆದರೆ, ಈ ವೈರಲ್ ಫೋಟೋಗಳ ಹಿಂದಿನ ಅಸಲಿಯತ್ತೇನು?
India News Live 27th January: ಇಂಪೋರ್ಟೆಡ್ ಬಿಯರ್, ವೋಡ್ಕಾ ವಿಸ್ಕಿ ಬೆಲೆ ಬಾರಿ ಇಳಿಕೆ, 50% ಸುಂಕ ಇಳಿಕೆಯಿಂದ ಎಷ್ಟಾಗಲಿದೆ ದರ?
ಇಂಪೋರ್ಟೆಡ್ ಬಿಯರ್, ವೋಡ್ಕಾ ವಿಸ್ಕಿ ಬೆಲೆ ಬಾರಿ ಇಳಿಕೆ, ಹೈನೆಕೆನ್, ಆ್ಯಬ್ಸಲ್ಯೂಟ್ ವೋಡ್ಕಾ, ಶಾಂಪೇನ್, ರಿಯೊಜಾ ವೈನ್, ಬಿಯರ್ ಸೇರಿದಂತೆ ಹಲವು ಮದ್ಯಗಳ ಬೆಲೆ ಭಾರಿ ಇಳಿಕೆಯಾಗುತ್ತಿದೆ.
India News Live 27th January: ಅಕ್ರಮ ಮದ್ಯ ತಯಾರಿ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 3 ತಿಂಗಳಮಗುವನ್ನು ನೋಡಿಕೊಳ್ಳುವ ಶಿಕ್ಷೆ..!
ಮಧ್ಯಪ್ರದೇಶದ ಧಾಟಿಯಾದಲ್ಲಿ ಅಕ್ರಮ ಮದ್ಯ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಕುಟುಂಬಸ್ಥರು 3 ತಿಂಗಳ ಮಗು ಸೇರಿದಂತೆ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಹಸಿವಿನಿಂದ ಅಳುತ್ತಿದ್ದ ಮಗುವನ್ನು ಪೊಲೀಸರು ನೋಡಿಕೊಳ್ಳುವಂತಾಗಿದೆ.
India News Live 27th January: ನಿಫಾ ವೈರಸ್ಗೆ ಭಾರತದಲ್ಲಿ 110 ಮಂದಿ ಕ್ವಾರಂಟೈನ್, 2 ರಾಜ್ಯಗಳಲ್ಲಿ ಎಂಡೆಮಿಕ್ ಘೋಷಣೆ
ನಿಫಾ ವೈರಸ್ಗೆ ಭಾರತದಲ್ಲಿ 110 ಮಂದಿ ಕ್ವಾರಂಟೈನ್, ಏಷ್ಯಾದಲ್ಲೂ ತೀವ್ರವಾಗಿ ವೈರಸ್ ಹರಡುತ್ತಿದ್ದು, ಕ್ವಾರಂಟೈನ್ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಭಾರತದ 2 ರಾಜ್ಯಗಳನ್ನು ಎಂಡೆಮಿಕ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
India News Live 27th January: ನಿಜವಾಯ್ತು ವಂಗಾ ಬಾಬಾ ಬಂಗಾರ ಭವಿಷ್ಯ..! ಬಜೆಟ್ ಬಳಿಕ ಚಿನ್ನದ ಬೆಲೆ ಏನಾಗುತ್ತದೆ ?
ಹಳದಿ ಲೋಹದ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ಚಿನ್ನ ಖರೀದಿ ಕಷ್ಟಸಾಧ್ಯವಾಗಿದೆ. ಬಲ್ಗೇರಿಯಾದ ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿಯಂತೆ ಜಾಗತಿಕ ಆರ್ಥಿಕತೆಯ ಒತ್ತಡದಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ 3 ವರ್ಷಗಳಲ್ಲಿ ಚಿನ್ನದ ದರ 3 ಪಟ್ಟು ಹೆಚ್ಚಾಗಿದೆ.
India News Live 27th January: ಲಕ್ಕುಂಡಿಗೂ ಮೊದಲು ಶುರುವಾಗಿತ್ತು ನಿಧಿ ಶೋಧ, 5 ವರ್ಷ ಬಳಿಕ ಸೌದಿಗೆ ಸಿಕ್ತು $2.5 ಟ್ರಿಲಿಯನ್ ಸಂಪತ್ತು
ಲಕ್ಕುಂಡಿಗೂ ಮೊದಲು ಶುರುವಾಗಿತ್ತು ನಿಧಿ ಶೋಧ, ಕಳೆದ ಐದು ವರ್ಷಗಳ ಸತತ ನಿಧಿ ಶೋಧದಲ್ಲಿ ಸೌದಿ ಅರೇಬಿಯಾ ಇದೀಗ ಅಮೆರಿಕ, ಚೀನಾಗೆ ಠಕ್ಕರ್ ನೀಡಲು ಮುಂದಾಗಿದೆ. ಕಾರಣ ಬರೋಬ್ಬರಿ 2.5 ಟ್ರಿಯನ್ ಅಮೆರಿಕನ್ ಡಾಲರ್ ಸಂಪತ್ತು ಪತ್ತೆಯಾಗಿದೆ.
India News Live 27th January: ಧರೆಗಿಳಿದ ದೇವಲೋಕ - ಮೈನಸ್ 20 ಡಿಗ್ರಿಯಿಂದಾಗಿ ಹೆಪ್ಪುಗಟ್ಟಿದ ನಯಾಗಾರ ಫಾಲ್ಸ್ನ ಮನಮೋಹಕ ದೃಶ್ಯ
ತೀವ್ರ ಚಳಿಯಿಂದಾಗಿ ಜಗತ್ಪ್ರಸಿದ್ಧ ನಯಾಗಾರ ಜಲಪಾತವು ಭಾಗಶಃ ಹೆಪ್ಪುಗಟ್ಟಿದೆ. ಧ್ರುವೀಯ ಸುಳಿಗಾಳಿಯ ಪರಿಣಾಮವಾಗಿ, ಜಲಪಾತದ ಸುತ್ತಮುತ್ತಲಿನ ಪ್ರದೇಶಗಳು ಮಂಜುಗಡ್ಡೆಯಿಂದ ಆವೃತವಾಗಿ, ಒಂದು ಅದ್ಭುತ ದೃಶ್ಯಲೋಕವನ್ನೇ ಸೃಷ್ಟಿಸಿವೆ. ಈ ಅಪರೂಪದ ದೃಶ್ಯಗಲ ಹಲವು ವೀಡಿಯೋ ಇಲ್ಲಿದೆ ನೋಡಿ…
India News Live 27th January: ಈ ಕಂಪನಿಯಲ್ಲಿ ಮದುವೆಯಾಗೋ ಉದ್ಯೋಗಿಗೆ 12 ಲಕ್ಷ, ಮಕ್ಕಳಾದರೆ 24 ಲಕ್ಷ ರೂ ಘೋಷಣೆ
ಈ ಕಂಪನಿಯಲ್ಲಿ ಮದುವೆಯಾಗೋ ಉದ್ಯೋಗಿಗೆ 12 ಲಕ್ಷ, ಕಂಪನಿ ಬಾಸ್ ಈ ಘೋಷಣೆ ಹೊರಡಿಸುತ್ತಿದ್ದಂತೆ ಇದೀಗ ಕಂಪನಿ ಉದ್ಯೋಗಿಗಳು ಮದುವಗೆ ಮುಂದಾಗಿದ್ದರೆ. ಹಲವು ಬ್ಯಾಚುಲರ್ಸ್ ಈ ಕಂಪನಿ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
India News Live 27th January: ಗೆಳತಿ ಮದುವೆಗಾಗಿ 'ಡೆವಿಲ್ ಡಯಟ್' ಮಾಡಿದ ಯುವತಿ; 15 ಕೆಜಿ ತೂಕ ಇಳಿಸಿಕೊಂಡು, ಮೈತುಂಬಾ ಶುಗರ್ ತಂದುಕೊಂಡಳು!
India News Live 27th January: ಗಣರಾಜ್ಯೋತ್ಸವಕ್ಕೆ ಅಳವಡಿಸಿದ ಧ್ವನಿವರ್ಧಕ ಬಿದ್ದು 3 ವರ್ಷದ ಮಗು ಸಾವು - ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮುಂಬೈನ ವಿಕ್ರೋಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಅಳವಡಿಸಿದ್ದ ಲೌಡ್ಸ್ಪೀಕರ್ ಬಿದ್ದು 3 ವರ್ಷದ ಮಗು ಸಾವನ್ನಪ್ಪಿದೆ. ಕಂಬಳಿ ಮಾರುತ್ತಿದ್ದ ಬೀದಿ ವ್ಯಾಪಾರಿಯೊಬ್ಬರ ತಲೆಯ ಮೇಲಿದ್ದ ಮೂಟೆ ಸ್ಪೀಕರ್ ವೈರ್ಗೆ ತಾಗಿ ಈ ದುರಂತ ಸಂಭವಿಸಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
India News Live 27th January: ಕೇವಲ 48 ಗಂಟೆಯಲ್ಲಿ ಬೆಳ್ಳಿ ಬೆಲೆ 35000 ರೂಪಾಯಿ ಏರಿಕೆ, ಚಿನ್ನಕ್ಕಿಂತ ಸಿಲ್ವರ್ನಲ್ಲಿ ದುಪ್ಪಟ್ಟು ರಿಟರ್ನ್ಸ್
ಕೇವಲ 48 ಗಂಟೆಯಲ್ಲಿ ಬೆಳ್ಳಿ ಬೆಲೆ 35000 ರೂಪಾಯಿ ಏರಿಕೆ, ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗಿಂತ ಬೆಳ್ಳಿ ಮೇಲೆ ಹೂಡಿಕೆ ಮಾಡವರಿಗೆ ದುಪ್ಪಟ್ಟು ರಿಟರ್ನ್ಸ್ ಬರುತ್ತಿದೆ. ದಾಖಲೆ ಏರಿಕೆ ಬಳಿಕ ಬೆಳ್ಳಿ ಬೆಲೆ ಎಷ್ಟಾಗಿದೆ.
India News Live 27th January: EU ಟ್ರೇಡ್ ಡೀಲ್ನಿಂದ ಶೇ. 40 ರಷ್ಟು ತೆರಿಗೆ ಕಡಿತ, ಭಾರತದಲ್ಲಿ ಈ ಕಾರುಗಳ ಬೆಲೆ ಭಾರಿ ಇಳಿಕೆ
EU ಟ್ರೇಡ್ ಡೀಲ್ನಿಂದ ಶೇ. 40 ರಷ್ಟು ತೆರಿಗೆ ಕಡಿತ, ಗಣರಾಜ್ಯೋತ್ಸವ ದಿನ ನಡೆದ ಮಹತ್ವದ ಒಪ್ಪಂದ ಮಾತುಕತೆ ಯಶಸ್ವಿಯಾಗಿದ್ದು, ಯೂರೋಪಿಯನ್ ಯೂನಿಯನ್ ಮೇಲಿನ ತರಿಗೆ ಕಡಿತಗೊಳ್ಳುತ್ತಿದೆ. ಇದರ ಪರಿಣಾಮ ಭಾರತದಲ್ಲಿ ಈ ಕಾರುಗಳ ಬೆಲೆ ಭಾರಿ ಇಳಿಕೆ.
India News Live 27th January: ಮುದ್ದಿನ ಗಂಡನಿಗಾಗಿ ಇಬ್ಬರು ಹೆಂಡಿರ ಗಲಾಟೆ - ಗಂಡನನ್ನು 2 ಪಾಲು ಮಾಡಿ ಭಾನುವಾರ ವೀಕಾಫ್ ಕೊಟ್ಟ ಗ್ರಾಮದ ಮುಖಂಡರು
ಉತ್ತರ ಪ್ರದೇಶದ ರಾಂಪುರದಲ್ಲಿ, ಇಬ್ಬರು ಹೆಂಡತಿಯರ ನಿತ್ಯದ ಜಗಳಕ್ಕೆ ಅಂತ್ಯ ಹಾಡಲು ಗ್ರಾಮ ಪಂಚಾಯ್ತಿಯು ವಿಚಿತ್ರ ತೀರ್ಪೊಂದನ್ನು ನೀಡಿದೆ. ಗಂಡನ ಸಮಯವನ್ನು ಇಬ್ಬರು ಪತ್ನಿಯರ ನಡುವೆ ಸಮನಾಗಿ ಹಂಚಿ, ಭಾನುವಾರ ಗಂಡನಿಗೆ ಸ್ವಾತಂತ್ರ ನೀಡಲಾಗಿದೆ...
India News Live 27th January: ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಸೆ*ಕ್ಸ್ ವರ್ಕರ್ಗಳಿಗೆ ಡಿಮಾಂಡ್, 5 ಮಹಿಳೆಯರ ನಾಲ್ಕು ದಿನದ ಡ್ಯೂಟಿಗೆ 1 ಕೋಟಿ ವೆಚ್ಚ!
ಪ್ರತಿವರ್ಷ ದಾವೋಸ್ನಲ್ಲಿ ನಡೆಯುವ ವಿಶ್ವ ಆರ್ಥಿಕ ಸಮ್ಮೇಳನದ ಸಮಯದಲ್ಲಿ ಸೆ*ಕ್ಸ್ ವರ್ಕ್ಗೆ ಬೇಡಿಕೆ ಗಗನಕ್ಕೇರುತ್ತದೆ. ಪ್ರಖ್ಯಾತ ವ್ಯಕ್ತಿಗಳು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ, ಲೈಂಗಿಕ ಪಾರ್ಟಿಗಳು ಮತ್ತು ವಿಚಿತ್ರ ರೋಲ್-ಪ್ಲೇಗಳಿಗಾಗಿ ಎಸ್ಕಾರ್ಟ್ಗಳನ್ನು ಬುಕ್ ಮಾಡುತ್ತಾರೆ.
India News Live 27th January: ಏರುತ್ತಲೇ ಇದೆ ಚಿನ್ನದ ದರ - ಏಮ್ಸ್ ಆಸ್ಪತ್ರೆಯ ಲಿಫ್ಟ್ನಲ್ಲೇ ಮಹಿಳೆಯ ಚಿನ್ನದ ಕರಿಮಣಿ ಕಸಿದ ಕಳ್ಳ - ವೀಡಿಯೋ
India News Live 27th January: ಶಿವ ಪಾರ್ವತಿ ಮದುವೆಯಾದ ತ್ರಿಯುಗಿನಾರಾಯಣ ದೇಗುಲದಲ್ಲಿ ಹಿಮಪಾತದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
ಶಿವ ಪಾರ್ವತಿಯ ವಿವಾಹ ನಡೆದ ಸ್ಥಳವೆಂದು ನಂಬಲಾದ ಉತ್ತರಾಖಂಡ್ನ ತ್ರಿಯುಗಿನಾರಾಯಣ ದೇಗುಲದಲ್ಲಿ, ಜೋಡಿಯೊಂದು ತೀವ್ರ ಹಿಮಪಾತದ ನಡುವೆ ವಿವಾಹವಾಗಿದ್ದಾರೆ. ಹಿಮದ ಮಳೆಯ ನಡುವೆ ಈ ಜೋಡಿ ನಡೆದು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.