09:29 AM (IST) Mar 16

India News Live 16th March: ನಷ್ಟದ ಮಾತೇ ಇಲ್ಲ, ಸದಾ ಬೇಡಿಕೆಯಿರುವ, ಯಾವಾಗಲೂ ಲಾಭ ತರುವ 4 ಬಿಸಿನೆಸ್‌ಗಳು!

ಭಾರತದಲ್ಲಿ ಎಂದಿಗೂ ನಷ್ಟ ಅನುಭವಿಸದ, ಸದಾ ಕಾಲ ಲಾಭ ತಂದುಕೊಡುವ ನಾಲ್ಕು ಪ್ರಮುಖ ಬಿಸಿನೆಸ್‌ಗಳ ಬಗ್ಗೆ ಇಲ್ಲಿ ನೋಡೋಣ. ಇವು ಮನುಷ್ಯನ ಮೂಲಭೂತ ಅವಶ್ಯಕತೆಗಳಿಗೆ ಸಂಬಂಧಿಸಿದ್ದರಿಂದ, ಇವುಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಆ ವಿವರಗಳನ್ನು ನೋಡೋಣ ಬನ್ನು

Read Full Story
09:14 AM (IST) Mar 16

India News Live 16th March: ಚುನಾವಣೆ ಘೋಷಣೆಗೂ ಕೆಲ ನಿಮಿಷಕ್ಕೂ ಮುನ್ನ ಮಮತಾ ಬಂಪರ್‌ ಘೋಷಣೆ; ದೀದಿ ಕೊನೇ ಕ್ಷಣದ ಆಟ?

ಚುನಾವಣಾ ಆಯೋಗವು ಪಂಚ ರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಿಸಿದ್ದು, ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನೀತಿ ಸಂಹಿತೆ ಜಾರಿಗೆ ಕೆಲವೇ ನಿಮಿಷಗಳ ಮುನ್ನ ಮಾಡಿದ ಘೋಷಣೆಗಳು ವಿವಾದಕ್ಕೆ ಕಾರಣವಾಗಿವೆ. 

Read Full Story
08:56 AM (IST) Mar 16

India News Live 16th March: Amala Paul - ಭೇಟಿಯಾದ 2 ತಿಂಗಳಲ್ಲೇ ಗರ್ಭಿಣಿ, ಆಮೇಲೆ ಮದುವೆ; ಸತ್ಯ ಬಿಚ್ಚಿಟ್ಟ ನಟಿ!

ಪತಿ ಜಗತ್‌ ದೇಸಾಯಿ ಅವರನ್ನು ಭೇಟಿಯಾದ ಎರಡೇ ತಿಂಗಳಲ್ಲಿ ತಾನು ಗರ್ಭಿಣಿಯಾಗಿದ್ದೆ, ನಂತರವಷ್ಟೇ ಮದುವೆಯಾಗಿದ್ದು ಎಂದು ನಟಿ ಅಮಲಾ ಪೌಲ್ ಬಹಿರಂಗಪಡಿಸಿದ್ದಾರೆ. ಮಗ ಹುಟ್ಟಿದ ಮೇಲೆ ತಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದೂ ಅವರು ಹೇಳಿದ್ದಾರೆ.

Read Full Story
08:46 AM (IST) Mar 16

India News Live 16th March: ರಾಹುಲ್ ದ್ರಾವಿಡ್‌, ರೋಜರ್‌ ಬಿನ್ನಿ, ಮಿಥಾಲಿಗೆ ಬಿಸಿಸಿಐ ಜೀವಮಾನ ಸಾಧನೆ ಗೌರವ!

ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಮತ್ತು ಮಿಥಾಲಿ ರಾಜ್ ಅವರಿಗೆ ಬಿಸಿಸಿಐ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಶುಭಮನ್ ಗಿಲ್ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರಾದರೆ, ಸ್ಮೃತಿ ಮಂಧಾನ ಶ್ರೇಷ್ಠ ಮಹಿಳಾ ಕ್ರಿಕೆಟರ್ ಗೌರವಕ್ಕೆ ಪಾತ್ರರಾದರು.

Read Full Story
08:42 AM (IST) Mar 16

India News Live 16th March: ದುಬೈ ವಿಮಾನ ನಿಲ್ದಾಣದ ಸಮೀಪ ಇರಾನ್ ಮತ್ತೆ ಡ್ರೋನ್ ದಾಳಿ, ಭಾರಿ ಬೆಂಕಿ - ವಿಮಾನಗಳ ಹಾರಾಟ ಸ್ಥಗಿತ

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನ್ ಮತ್ತೊಮ್ಮೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಿಂದ ಇಂಧನ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Read Full Story
08:37 AM (IST) Mar 16

India News Live 16th March: ಒಡಿಶಾ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ದುರಂತ, 10 ರೋಗಿಗಳು ಸಾವು!

ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸಿಯುನಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ಅವಘಡದಲ್ಲಿ ಹತ್ತು ರೋಗಿಗಳು ಸಾವನ್ನಪ್ಪಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ.

Read Full Story
08:09 AM (IST) Mar 16

India News Live 16th March: ಪಂಚರಾಜ್ಯ ಚುನಾವಣೆ ಘೋ಼ಷಣೆ

ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಏ.9ರಂದು ಮೊದಲ ಹಂತದ ಮತದಾನ ನಡೆಯಲಿದೆ

Read Full Story