Silli Lalli Kannada Serial Artist Real Story: ʼಸಿಲ್ಲಿ ಲಲ್ಲಿʼ ಧಾರಾವಾಹಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈ ಸೀರಿಯಲ್ ತೆರೆಕಂಡು ಎಷ್ಟೋ ವರ್ಷಗಳು ಉರುಳಿವೆ. ಇನ್ನೂ ಈ ಧಾರಾವಾಹಿಯ ಪಾತ್ರಗಳು ಜನರಿಗೆ ನೆನಪಿವೆ. ಈ ಸೀರಿಯಲ್ನಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ ಜೋಡಿಯಿಂದ ರಿಯಲ್ ಲೈಫ್ನಲ್ಲಿ ಸತಿ-ಪತಿಯಾಗಿ ಜೀವನ ಮಾಡುತ್ತಿದೆ.
ಪೂರ್ತಿ ಓದಿ- Home
- News
- India News
- Karnataka News Live: ಲಂಡನ್ನಲ್ಲಿ ಭಾರಿ ಭದ್ರತಾ ಲೋಪ: ಜೈಶಂಕರ್ ಮೇಲೆ ಖಲಿಸ್ತಾನಿಗಳಿಂದ ದಾಳಿ ಯತ್ನ
Karnataka News Live: ಲಂಡನ್ನಲ್ಲಿ ಭಾರಿ ಭದ್ರತಾ ಲೋಪ: ಜೈಶಂಕರ್ ಮೇಲೆ ಖಲಿಸ್ತಾನಿಗಳಿಂದ ದಾಳಿ ಯತ್ನ

ಬ್ರಿಟನ್ ರಾಜಧಾನಿ ಲಂಡನ್ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಲು ಯತ್ನಿಸಿದ ಘಟನೆ ಘಟನೆ ಸಂಭವಿಸಿದೆ. ಲಂಡನ್ನ ಚಾಥಂ ಹೌಸ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಜೈಶಂಕರ್ ವಾಪಸ್ ಹೋಗುತ್ತಿದ್ದಾಗ ಅವರ ಬೆಂಗಾವಲು ಪಡೆ ವಾಹನದತ್ತ ನುಗ್ಗಿದ ಖಲಿಸ್ತಾನಿ ಪರ ಪ್ರತಿಭಟನಾಕಾರನೊಬ್ಬ ಭಾರತದ ಧ್ವಜ ಹರಿದು ಧಾರ್ಷ್ಟ್ಯ ಮೆರೆದಿದ್ದಾನೆ. ಈ ಭದ್ರತಾ ವೈಫಲ್ಯದ ಕುರಿತು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಭದ್ರತಾ ವೈಫಲ್ಯ ಕುರಿತು ಖಂಡನೆ ವ್ಯಕ್ತಪಡಿಸಿದೆ. ನಾವು ಭದ್ರತೆ ಉಲ್ಲಂಘನೆಯ ವಿಡಿಯೋ ನೋಡಿದ್ದೇವೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಸಣ್ಣ ಗುಂಪೊಂದರ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬ್ರಿಟನ್ ಸರ್ಕಾರ ಈ ಕುರಿತು ಕ್ರಮ ಕೈಕೊಂಡು ರಾಜತಾಂತ್ರಿಕ ಬಾಧ್ಯತೆ ಪಾಲಿಸುವ ವಿಶ್ವಾಸವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಅಣ್ಣ-ತಂಗಿ, ರಿಯಲ್ ಲೈಫ್ನಲ್ಲಿ ಗಂಡ-ಹೆಂಡ್ತಿ! ಯಾರದು?
ಮಾರ್ಚ್ 11ಕ್ಕೆ ಬರ್ತಿದೆ iQOO Neo 10R! ಏನೇನು ಫೀಚರ್ಸ್, ಬೆಲೆ ಎಷ್ಟು ಅಂತಾ ನೋಡಿ..
iQOO Neo 10R ಮಾರ್ಚ್ 11ಕ್ಕೆ ಲಾಂಚ್ ಆಗ್ತಿದೆ. Snapdragon 8s Gen 3 ಚಿಪ್ಸೆಟ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಇರತ್ತೆ. 144Hz AMOLED ಡಿಸ್ಪ್ಲೇ ಇರಬಹುದು, ಬೆಲೆ 30,000 ರೂ.ಗಿಂತ ಕಮ್ಮಿ ಇರಬಹುದು.
ಪೂರ್ತಿ ಓದಿಮುಕೇಶ್ ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ, ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಮುಕೇಶ್-ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ. ಮುಕೇಶ್ ಮತ್ತು ನೀತಾ ಅಂಬಾನಿ ಅವರ ವಿವಾಹವಾಗಿ 40 ವರ್ಷಗಳಾಗಿವೆ. ವಿಶೇಷ ಅಂದರೆ ಮೊದಲ ನೋಟದಲ್ಲಿ ನೀತಾಗೆ ಮುಕೇಶ್ ಅಂಬಾನಿ ಕ್ಲೀನ್ ಬೋಲ್ಡ್ ಆಗಿದ್ದರು. ಇವರ ಲವ್ ಸ್ಟೋರಿ ಇಲ್ಲಿದೆ.
ಪೂರ್ತಿ ಓದಿನಿನಗಾಗಿ ಎಸಿ ಕಾರು ಖರೀದಿಸಿಲ್ಲ, ಮತ್ತೆ ಮದ್ವೆನೂ ಆಗಿಲ್ಲ…. ಅಪ್ಪನ ಹುಟ್ಟುಹಬ್ಬಕ್ಕೆ ಕಿಶನ್ ಬಿಳಗಲಿ ಸ್ಪೆಷಲ್ ವಿಶ್
ಡ್ಯಾನ್ಸರ್ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಕಿಶನ್ ಬಿಳಗಲಿ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಒಂದು ವಿಶೇಷ ವಿಡೀಯೋ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.
'ರಾಜ್ಯದ ಜನರೇ ಜಟ್ಕಾ ಕಟ್ ಮಾಡಿ ಬಿಸಾಡಿದ್ದಾರೆ..' ಬಿಜೆಪಿ ಹಲಾಲ್ ಬಜೆಟ್ ಟೀಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಬಿಜೆಪಿ ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕಿಸಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯ ಟೀಕೆಯನ್ನು ಅವರು ಬೌದ್ಧಿಕ ದಿವಾಳಿತನ ಎಂದು ಲೇವಡಿ ಮಾಡಿದ್ದಾರೆ.
ಪೂರ್ತಿ ಓದಿಟೋಪಿ ತೊಟ್ಟು, ನಮಾಜ್ ಮಾಡಿ ಇಫ್ತಾರ್ ಪಾರ್ಟಿಯಲ್ಲಿ ಭಾಗಿಯಾದ ನಟ ದಳಪತಿ ವಿಜಯ್!
ನಟ ವಿಜಯ್ ಚೆನ್ನೈನಲ್ಲಿ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಆಯೋಜಿಸಿದ್ದರು. ಮುಸ್ಲಿಂ ಟೋಪಿ ಧರಿಸಿ ನಮಾಜ್ನಲ್ಲಿ ಭಾಗಿಯಾದ ವಿಜಯ್ ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪೂರ್ತಿ ಓದಿಅದು ಕೇವಲ ಒನ್ ಸೈಡೆಡ್, ಬ್ರೇಕ್ ಅಪ್ ಸುದ್ದಿ ಬೆನ್ನಲ್ಲೇ ನೋವು ಹೊರಹಾಕಿದ್ರಾ ತಮನ್ನಾ
ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಪ್ರೀತಿ ಬ್ರೇಕ್ ಅಪ್ ಆಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ತಮನ್ನಾ ಮೊದಲ ಬಾರಿ ಪ್ರೀತಿ ಕುರಿತು ಮಾತನಾಡಿದ್ದಾರೆ. ಮಾತುಗಳನ್ನೇ ನೋವು ಹೊರಹಾಕಿದ್ರಾ ತಮನ್ನಾ?
Bengaluru Metro Alert: ಈ ನಿಲ್ದಾಣಗಳ ನಡುವೆ ಭಾನುವಾರ ಸೇವೆ ಸ್ಥಗಿತ!
ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಭಾನುವಾರ ಮಾಗಡಿ ರಸ್ತೆ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಇರುವುದಿಲ್ಲ.
ಪೂರ್ತಿ ಓದಿಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ ಆರಾಧನಾ ರಾಮ್… ಕನ್ನಡ ಹಾಡು ಸಿಗ್ಲಿಲ್ವಾ ಕೇಳ್ತಿದ್ದಾರೆ ನೆಟ್ಟಿಗರು
ಕಾಟೇರ ಬೆಡಗಿ ಹಾಗೂ ನಟಿ ಮಾಲಾಶ್ರೀಯ ಪುತ್ರಿ ಆರಾಧನಾ ರಾಮ್ ಬಾಲಿವುಡ್ ಹಾಡಿಗೆ ಸೊಂಟ ಬಳುಕಿಸಿದ್ದು, ಇದನ್ನು ನೋಡಿ ಅಭಿಮಾನಿಗಳು, ನೆಟ್ಟಿಗರು ಯಾಕೆ ಕನ್ನಡ ಹಾಡು ಸಿಕ್ಲಿಲ್ವಾ ಅಂತ ಕೇಳ್ತಿದ್ದಾರೆ.
ಪೂರ್ತಿ ಓದಿಕುಂಭಮೇಳದ ಕಾಲ್ತುಳಿತದಲ್ಲಿ 'ಮೃತಪಟ್ಟ' ವ್ಯಕ್ತಿ ತಿಥಿ ದಿನವೇ ವಾಪಸ್! ಅಷ್ಟಕ್ಕೂ ಆಗಿದ್ದೇನು?
ಕುಂಭಮೇಳದ ಮೌನಿ ಅಮವಾಸ್ಯೆಯ ದಿನ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟಿರುವುದಾಗಿ ಭಾವಿಸಿದ ವೃದ್ಧನೊಬ್ಬ, ತನ್ನ ತಿಥಿಯ ದಿನವೇ ವಾಪಸಾಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು?
Bengaluru: ಆಪಲ್ ಸಪ್ಲೈಯರ್ ಫಾಕ್ಸ್ಕಾನ್ಗೆ 6970 ಕೋಟಿ ರೂಪಾಯಿ ಗಿಫ್ಟ್ ಘೋಷಿಸಿದ ಸಿದ್ದರಾಮಯ್ಯ
ಕರ್ನಾಟಕ ಸರ್ಕಾರವು ಫಾಕ್ಸ್ಕಾನ್ಗೆ ₹6,970 ಕೋಟಿ ಪ್ರೋತ್ಸಾಹಧನವನ್ನು ಘೋಷಿಸಿದೆ. ದೇವನಹಳ್ಳಿಯಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕ ಸ್ಥಾಪನೆಗೆ ಈ ಪ್ರೋತ್ಸಾಹ ನೀಡಲಾಗುತ್ತಿದೆ.
ಪೂರ್ತಿ ಓದಿಹಣಕ್ಕಾಗಿ ಜಗಳ ನಿಂತ 6 ಮಕ್ಕಳು- ಬಿಸಿಲಿನಲ್ಲಿ ಬೀದಿಯಲ್ಲಿ ಬಿದ್ದ ತಾಯಿಯ ಶವ!
ಗೌರಿಬಿದನೂರಿನಲ್ಲಿ ಆಸ್ತಿಗಾಗಿ ತಾಯಿಯ ಶವವನ್ನೇ ಬೀದಿಯಲ್ಲಿಟ್ಟು ಮಕ್ಕಳು ಜಗಳವಾಡಿದ್ದಾರೆ. ಪರಿಹಾರದ ಹಣಕ್ಕಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ತಾಯಿಯ ಅಂತ್ಯಕ್ರಿಯೆ ನಡೆಸಲು ಬಿಡದೆ ವಿವಾದ ಸೃಷ್ಟಿಸಿದ್ದಾರೆ.
ಪೂರ್ತಿ ಓದಿಐಟಿ ಉದ್ಯೋಗಿಗಳ ಕುರಿತ ಅಧ್ಯಯನದಲ್ಲಿ ಬೆಚ್ಚಿ ಬೀಳುವ ಸುದ್ದಿ, 80% ಜನರಲ್ಲಿ ಫ್ಯಾಟಿ ಲಿವರ್ ಕಾಯಿಲೆ!
ಈಗೆಲ್ಲಾ ವಯಸ್ಸಿನ ಭೇದವಿಲ್ಲದೆ ತುಂಬಾ ಜನರಿಗೆ ಒಂದಲ್ಲ ಒಂದು ಕಾಯಿಲೆ ಇದ್ದೇ ಇದೆ. ಇದಕ್ಕೆಲ್ಲಾ ಲೈಫ್ ಸ್ಟೈಲ್, ತಿಂಡಿ ಅಭ್ಯಾಸಗಳು ಒಂದು ಕಾರಣವಾದರೆ, ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವ ಉದ್ಯೋಗಗಳು ಇನ್ನೊಂದು ಕಾರಣ. ಇತ್ತೀಚೆಗೆ ನಡೆದ ಒಂದು ಸಂಶೋಧನೆಯಲ್ಲಿ ಐಟಿ ಉದ್ಯೋಗಿಗಳಲ್ಲಿ 80% ಜನರನ್ನು ಒಂದು ಕಾಯಿಲೆ ಕಾಡುತ್ತಿದೆ. ಅದು ಏನು ಅಂತ ಇಲ್ಲಿ ತಿಳಿದುಕೊಳ್ಳೋಣ.
ಪೂರ್ತಿ ಓದಿಲವ್ ಪ್ರಪೋಸ್ನಿಂದಲೇ ಗಳಿಸ್ತಾಳೆ ತಿಂಗಳಿಗೆ 27 ಲಕ್ಷ ರೂ! ಊಟ, ನಿದ್ದೆ ಮಾಡದ ಚೆಲುವೆ ಸ್ಟೋರಿ ಕೇಳಿ...
ನೀಲಿ ಕಂಗಳ ಈ ಚೆಲುವೆಗೆ ಮೆಸೇಜ್ ಮಾಡಿ ಮನಸಿನ ಮಾತು ಹೇಳಿಕೊಳ್ಳಬಹುದು, ಒಂಟಿತನಕ್ಕೆ ಸಮಾಧಾನ ಹೇಳ್ತಾಳೆ ಈಕೆ. ಬರೀ ಮಾತು, ಮೆಸೇಜ್ ಮೂಲಕ ತಿಂಗಳಿಗೆ 27 ಲಕ್ಷ ಗಳಿಸೋ ಈಕೆ ಬಗ್ಗೆ ಇಂಟರೆಸ್ಟಿಂಗ್ ವಿಷ್ಯ...
ಕೇಂದ್ರ ಸರ್ಕಾರದ ಸ್ವಯಂ ಆನ್ಲೈನ್ ಉಚಿತ ಕೋರ್ಸ್; ಅರ್ಜಿ ಹಾಕುವುದು ಹೇಗೆ, ನಿಯಮಗಳೇನು?
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಪ್ರಾರಂಭಿಸಲಾದ ಉಚಿತ ಆನ್ಲೈನ್ ಕಲಿಕಾ ವೇದಿಕೆ ಸ್ವಯಂ. ಇದರಲ್ಲಿ 9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿವಿಧ ಕೋರ್ಸ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ ಅತ್ಯುತ್ತಮ ಶಿಕ್ಷಕರಿಂದ ಈ ಕೋರ್ಸ್ಗಳನ್ನು ಬೋಧಿಸಲಾಗುತ್ತದೆ.
ಪೂರ್ತಿ ಓದಿಕೃಷಿ ಬಗ್ಗೆ ಒಲವು, 4000 ಕೋಟಿ ರೂ ಮೌಲ್ಯದ ಅರಮನೆಯಲ್ಲಿರುವ ಯುವರಾಜ ಮಹಾನಾರ್ಯಮನ್ ಯಾರು?
ಸಿಂಧಿಯಾ ರಾಜವಂಶದ ಮಹಾನಾರ್ಯಮನ್ ರಾಜಕೀಯವನ್ನು ಮೀರಿ ಕೃಷಿ ಮತ್ತು ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮೈಮಂಡಿ ಕೃಷಿ ಉದ್ಯಮದ ಮೂಲಕ ಯುವ ಸಬಲೀಕರಣ ಮತ್ತು ಸುಸ್ಥಿರತೆಗೆ ಒತ್ತು ನೀಡುತ್ತಿದ್ದಾರೆ.
ಪೂರ್ತಿ ಓದಿಜಗತ್ತಿಗೆ ಗಣಿತವನ್ನು ನೀಡಿದ್ದು ಇಸ್ಲಾಂ ಎಂದ ಕಾಂಗ್ರೆಸ್ ವಕ್ತಾರೆ!
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಗಣಿತವನ್ನು ಇಸ್ಲಾಂ ಜಗತ್ತಿಗೆ ಪರಿಚಯಿಸಿತು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಟೀಕಿಸಿದ್ದು, ಇದು ಅಸಂಬದ್ಧ ಎಂದಿದೆ. ಈ ಹಿಂದೆ ರೋಹಿತ್ ಶರ್ಮಾ ಬಗ್ಗೆ ನೀಡಿದ್ದ ಹೇಳಿಕೆಗೂ ವಿರೋಧ ವ್ಯಕ್ತವಾಗಿತ್ತು.
ಪೂರ್ತಿ ಓದಿಮಗನ ಮದುವೆಗೆ ಸ್ವರ್ಗದಿಂದ ಬಂದು ಆಶೀರ್ವದಿಸಿದ ಅಪ್ಪ- ಹೀಗೊಂದು ಕೌತುಕ, ಭಾವುಕ ವಿವಾಹ!
ಅಪ್ಪ ನಿಧನರಾಗಿ ವರ್ಷಗಳಾದರೂ ಮಗನ ಮದುವೆಗೆ ಬಂದು ಆಶೀರ್ವದಿಸಿ ಹೋಗಿದ್ದಾರೆ. ಮದುವೆಯ ಮನೆಯಲ್ಲಿ ಕಣ್ಣೀರಿನ ಧಾರೆಯೇ ಹರಿದಿದೆ. ಹೇಗಿದು ಸಾಧ್ಯವಾಯಿತು? ಇಲ್ಲಿದೆ ನೋಡಿ ಡಿಟೇಲ್ಸ್.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ಯಾರ ಪಾಲಾಗುತ್ತೆ ಕಪ್?
25 ವರ್ಷಗಳ ಬಳಿಕ ಭಾರತ ಹಾಗೂ ನ್ಯೂಜಿಲೆಂಡ್ ಸೀಮಿತ ಓವರ್ಗಳ ಐಸಿಸಿ ಟೂರ್ನಿಯ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿವೆ. ದುಬೈನಲ್ಲಿ ನಡೆಯುವ ಈ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಹೊಂದಿರುವ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಪೂರ್ತಿ ಓದಿವಿಮಾನ ಟೇಕ್ ಆಫ್ ಮುಂಚೆ ಯುವತಿಯ XX ಟೇಕ್ ಆಫ್, 30 ನಿಮಿಷ ಹೈಡ್ರಾಮ ವಿಡಿಯೋ
ಬರೋಬ್ಬರಿ 30 ನಿಮಿಷ ಯುವತಿ ಒಂದೆ ಒಂದು ಬಟ್ಟೆ ಇಲ್ಲದೆ ವಿಮಾನದಲ್ಲಿ ರಂಪಾಟ ಮಾಡಿದ್ದಾಳೆ. ಸಹ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ. ಹಲವರು ಒಳಗೊಳಗೆ ಖುಷಿ ಪಟ್ಟ ಘಟನೆ ನಡೆದಿದೆ.
ಪೂರ್ತಿ ಓದಿ