08:10 PM (IST) May 07

India Latest News Live 7 May 2026ಸಿಎಂ ಆಗಲು ಯಡಿಯೂರಪ್ಪ ಫಾರ್ಮುಲಾ ಬಳಸ್ತಾರಾ ವಿಜಯ್? ಏನಿದು ಕರ್ನಾಟಕದ 2018ರ ಲೆಕ್ಕಾಚಾರ!

ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತದ ಕೊರತೆ ಇದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಇಲ್ಲದೆ ವಿಜಯ್ ಹೇಗೆ ಸಿಎಂ ಆಗ್ತಾರೆ ಎಂಬ ಚರ್ಚೆ ಜೋರಾಗಿದೆ.

Read Full Story
07:45 PM (IST) May 07

India Latest News Live 7 May 2026ವಿಜಯ್‌ ಗೆಲುವಿನ ಬಳಿಕ ತ್ರಿಷಾ ರಾಜಕೀಯಕ್ಕೆ ಎಂಟ್ರಿ? ತಲೈವಾ ಪಾಲಿಟಿಕ್ಸ್‌ನಲ್ಲಿ ಹೊಸ ಟ್ವಿಸ್ಟ್!

ದಳಪತಿ ವಿಜಯ್ ಅವರ ರಾಜಕೀಯದ ಮೊದಲ ಹೆಜ್ಜೆ ಭರ್ಜರಿ ಯಶಸ್ಸು ಕಂಡಿದೆ. ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

Read Full Story
07:33 PM (IST) May 07

India Latest News Live 7 May 2026ಈ ಜನ್ಮದಲ್ಲಿ ಮತ್ತೆ ನಾನು 'ಬಿಗ್ ಬಾಸ್'ಗೆ ಹೋಗುವುದಿಲ್ಲ - ಸ್ಟಾರ್ ಆಂಕರ್ ಹೇಳಿಕೆ ಸೀಕ್ರೆಟ್ ಹೊರಬಿತ್ತು!

ರಿಯಾಲಿಟಿ ಶೋಗಳ ಲೋಕದಲ್ಲಿ 'ಬಿಗ್ ಬಾಸ್' ಅಂದ್ರೆ ಅದೊಂದು ಬಣ್ಣದ ಪ್ರಪಂಚ. ಇಲ್ಲಿ ಹೋದವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ, ಕಳೆದುಹೋದ ಜನಪ್ರಿಯತೆಯನ್ನು ಮತ್ತೆ ಗಳಿಸುತ್ತಾರೆ ಎಂಬುದು ಜನರ ನಂಬಿಕೆ. ಆದರೆ, ಎಲ್ಲರಿಗೂ ಈ 'ಮನೆ' ಹೂವಿನ ಹಾಸಿಗೆಯಾಗಿರುವುದಿಲ್ಲ…

Read Full Story
07:25 PM (IST) May 07

India Latest News Live 7 May 2026'ದೃಶ್ಯಂ 3' ಚಿತ್ರದಲ್ಲಿ ನಟ ಅಜಿತ್? ಸುಳ್ಳು ಸುದ್ದಿಗೆ ನೆಟ್ಟಿಗರ ತರ್ಲೆ ಕಾಮೆಂಟ್‌ಗಳು ವೈರಲ್!

'ದೃಶ್ಯಂ 3' ಸಿನಿಮಾದಲ್ಲಿ ತಮಿಳು ನಟ ಅಜಿತ್ ಕುಮಾರ್ ಗೆಸ್ಟ್ ರೋಲ್ ಮಾಡ್ತಾರೆ ಅನ್ನೋ ಸುಳ್ಳು ಸುದ್ದಿಯೊಂದು ಹಬ್ಬಿದೆ. ಇದಕ್ಕೆ ನೆಟ್ಟಿಗರು ಕೊಟ್ಟಿರುವ ತಮಾಷೆಯ ಕಾಮೆಂಟ್‌ಗಳು ವೈರಲ್ ಆಗಿವೆ. ಮೇ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

Read Full Story
07:15 PM (IST) May 07

India Latest News Live 7 May 2026ಹೊಸ ಲುಕ್‌ನಲ್ಲಿ TVS iQube S ಲಾಂಚ್ - ಒಂದು ಬಾರಿ ಚಾರ್ಜ್ ಮಾಡಿದರೆ 175 ಕಿ.ಮೀ ಮೈಲೇಜ್! ಬೆಲೆ ಮತ್ತು ಫೀಚರ್ಸ್ ಇಲ್ಲಿದೆ..

ಟಿವಿಎಸ್ ಕಂಪನಿಯು ಹೊಸ 'ಆಯ್ಕ್ಯೂಬ್ ಎಸ್‌' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು 4.7 kWh ಸಾಮರ್ಥ್ಯದ ಬೃಹತ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 175 ಕಿ.ಮೀ ವರೆಗೆ ಸಂಚರಿಸುತ್ತದೆ. 

Read Full Story
06:57 PM (IST) May 07

India Latest News Live 7 May 2026ಫುಡ್​ ಡಿಲೆವರಿ ಬಾಯ್ಸ್​ ಕೆಲ್ಸಕ್ಕೂ ಬಂತಾ ಕುತ್ತು? ಮನೆ ಬಾಗಿಲಿಗೆ ಬಂದ ರೋಬೋಟ್​ -ಅನುಭವ ಹೇಳಿದ ಯುವತಿ

ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳು ಉದ್ಯೋಗಗಳನ್ನು ಕಸಿಯುತ್ತಿರುವ ಆತಂಕದ ನಡುವೆ, ಚೀನಾದಲ್ಲಿ ಯುವತಿಯೊಬ್ಬಳಿಗೆ ರೋಬೋಟ್ ಫುಡ್ ಡೆಲಿವರಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ತಂತ್ರಜ್ಞಾನ ಭಾರತಕ್ಕೂ ಬಂದರೆ ಫುಡ್ ಡೆಲಿವರಿ ಉದ್ಯೋಗಗಳಿಗೆ ಕುತ್ತು ಬರುವ ಸಾಧ್ಯತೆಯನ್ನು ಈ ಲೇಖನ ವಿವರಿಸುತ್ತದೆ.
Read Full Story
06:41 PM (IST) May 07

India Latest News Live 7 May 2026'ಸೆರಗ ಸರ್ಸಿ'ದ್ದಕ್ಕೆ ಕ್ಷಮೆ ಕೇಳಿದ ನೋರಾ ಫತೇಹಿ - ಜೊತೆಗೊಂದು ಮಹತ್ವದ ಜವಾಬ್ದಾರಿ ಹೊತ್ತ ನಟಿ!

ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರು 'ಕೆಡಿ' ಸಿನಿಮಾದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿದ್ದಾರೆ.

Read Full Story
06:36 PM (IST) May 07

India Latest News Live 7 May 2026ವಿದೇಶ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌, ಬೆಲಾರಸ್ ವೀಸಾ ಸೇವೆ ಆರಂಭಿಸಿದ ಬಿಎಲ್ಎಸ್ ಇಂಟರ್‌ನ್ಯಾಷನಲ್‌

ಬಿಎಲ್ಎಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ಮುಂಬೈನಲ್ಲಿ ಬೆಲಾರಸ್ ವೀಸಾ ಸೇವೆಗಳನ್ನು ಆರಂಭಿಸಿದೆ. ಈ ಹೊಸ ವೀಸಾ ಅರ್ಜಿ ಸಲ್ಲಿಕೆ ಕೇಂದ್ರದ ಮೂಲಕ, ಭಾರತೀಯ ಪ್ರಯಾಣಿಕರು ಪ್ರವಾಸೋದ್ಯಮ, ವ್ಯವಹಾರ, ಮತ್ತು ಅಧ್ಯಯನ ಸೇರಿದಂತೆ ಎಲ್ಲಾ ರೀತಿಯ ವೀಸಾಗಳನ್ನು ಸುಲಭವಾಗಿ ಮತ್ತು ಪಾರದರ್ಶಕವಾಗಿ ಪಡೆಯಬಹುದು. ಇದು ಬೆಲಾರಸ್‌ಗೆ ಪ್ರಯಾಣಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿ ಹೊಂದಿದೆ.
Read Full Story
05:28 PM (IST) May 07

India Latest News Live 7 May 2026Drishyam 3 - ಸಿನಿರಸಿಕರಿಗೆ ಗುಡ್‌ನ್ಯೂಸ್.. ಸೆನ್ಸಾರ್ ಮುಗಿಸಿ ಈ ದಿನ ತೆರೆಮೇಲೆ ಬರ್ತಿದ್ದಾನೆ ಜಾರ್ಜ್‌ಕುಟ್ಟಿ!

ಸದ್ಯ ಬಹುನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3'. ಇದೀಗ ಸಿನಿಮಾದ ಸೆನ್ಸಾರ್ ಮುಗಿದಿದ್ದು, ಮೇ 21 ರಂದು ತೆರೆಗೆ ಬರಲಿದೆ.

Read Full Story
04:56 PM (IST) May 07

India Latest News Live 7 May 2026ಫಾಸ್ಟ್‌ಟ್ಯಾಗ್ ಕೈಯಲ್ಲಿ ಹಿಡಿದು ಟೋಲ್ ಕಟ್ಟುವುದು ಇನ್ಮುಂದೆ ಶಿಕ್ಷಾರ್ಹ ಅಪರಾಧ; NHAI ನೀಡಿದೆ ಬ್ಲ್ಯಾಕ್‌ಲಿಸ್ಟ್ ಮಾಡುವ ಎಚ್ಚರಿಕೆ!

ಫಾಸ್ಟ್‌ಟ್ಯಾಗ್ ಅನ್ನು ವಿಂಡ್‌ಶೀಲ್ಡ್‌ಗೆ ಅಂಟಿಸದೆ ಕೈಯಲ್ಲಿ ಹಿಡಿದು ತೋರಿಸುವ ಚಾಲಕರ ವಿರುದ್ಧ NHAI ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಯಮ ಉಲ್ಲಂಘಿಸುವವರ ಫಾಸ್ಟ್‌ಟ್ಯಾಗ್‌ಗಳನ್ನು 'ಬ್ಲ್ಯಾಕ್‌ಲಿಸ್ಟ್' ಮಾಡಲಾಗುವುದು ಮತ್ತು ಅವರು ದುಪ್ಪಟ್ಟು ಟೋಲ್ ಅಥವಾ ಕಾನೂನು ಕ್ರಮ ಎದುರಿಸಬೇಕಾಗಬಹುದು.
Read Full Story
04:50 PM (IST) May 07

India Latest News Live 7 May 2026ಪ್ರಾಣಿಪ್ರೇಮಿ ಸುನೀತಾ ಕೊಲೆ, ಆರೋಪಿಯನ್ನ ಯಾಕೆ ಇನ್ನೂ ಅರೆಸ್ಟ್ ಮಾಡಿಲ್ಲ? ಮಿಲನ ನಟಿ ಕಣ್ಣೀರು!

ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಯತ್ನವನ್ನು ವಿರೋಧಿಸಿದ್ದಕ್ಕೆ ಕೊಲೆಯಾದ ಪ್ರಾಣಿಪ್ರೇಮಿ ಸುನೀತಾ ಸಾವಿಗೆ ಮಿಲನ ನಟಿ ಪಾರ್ವತಿ ತಿರುವೊತ್ತು ಕಂಬನಿ ಮಿಡಿದಿದ್ದಾರೆ. ಆರೋಪಿಯನ್ನು ಯಾಕೆ ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

Read Full Story
04:35 PM (IST) May 07

India Latest News Live 7 May 2026Vijay Trisha ವಿವಾದಕ್ಕೆ ನಟಿ ಗಾಯತ್ರಿ ಶಂಕರ್ ಎಂಟ್ರಿ - ಡಬಲ್ ಸ್ಟ್ಯಾಂಡರ್ಡ್ ವಿರುದ್ಧ ಆಕ್ರೋಶ

ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದರೂ, ರಾಜಕೀಯದ ಕಾವು ಇನ್ನೂ ಆರಿಲ್ಲ. ಮಾಜಿ ಸಿಎಂ ಸ್ಟಾಲಿನ್ ಸೋತರೆ, ನಟ ವಿಜಯ್ ಅವರ ಟಿವಿಕೆ ಪಕ್ಷ ಅನಿರೀಕ್ಷಿತ ಗೆಲುವು ಸಾಧಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

Read Full Story
04:29 PM (IST) May 07

India Latest News Live 7 May 2026'118 ಶಾಸಕರ ಸಹಿಯೊಂದಿಗೆ ಬನ್ನಿ..' - ವಿಜಯ್ ಬೇಡಿಕೆಯನ್ನು ಎರಡನೇ ಬಾರಿ ತಿರಸ್ಕರಿಸಿದ ರಾಜ್ಯಪಾಲ

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ, ರಾಜ್ಯಪಾಲರು ಬಹುಮತ ಸಾಬೀತುಪಡಿಸಲು 118 ಶಾಸಕರ ಸಹಿ ಇರುವ ಪತ್ರವನ್ನು ಕೇಳಿದ್ದಾರೆ. ಸದ್ಯ ಬಹುಮತಕ್ಕೆ 6 ಶಾಸಕರ ಕೊರತೆಯನ್ನು ವಿಜಯ್‌ ಎದುರಿಸುತ್ತಿದ್ದಾರೆ.

Read Full Story
04:16 PM (IST) May 07

India Latest News Live 7 May 2026ಇದು AIನಾ? ನಿಜಾನಾ? ನಟನ ಮಗಳ ಬೋಲ್ಡ್ ವಿಡಿಯೋ ಲೀಕ್ - ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

ನಟ ಕೃಷ್ಣಕುಮಾರ್ ಅವರ ಮಗಳು ಹಂಸಿಕಾ ಕೃಷ್ಣ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಿಂದಾಗಿ ಹಂಸಿಕಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಏನೂ ಕನ್ಫರ್ಮ್ ಆಗಿಲ್ಲ.

Read Full Story
01:28 PM (IST) May 07

India Latest News Live 7 May 2026Met Gala - ಇಶಾ ಅಂಬಾನಿ ಕೈಯಲ್ಲಿ 95 ಲಕ್ಷ ರೂ. ಮಾವಿನ ಹಣ್ಣು! ಫ್ಯಾಷನ್​ ಲೋಕ ದಿಗ್ಭ್ರಮೆ- ಏನಿದರ ವಿಶೇಷತೆ

ಮೆಟ್ ಗಾಲಾ 2026 ರ ರೆಡ್ ಕಾರ್ಪೆಟ್ ಮೇಲೆ ಇಶಾ ಅಂಬಾನಿ ಸೀರೆಯುಟ್ಟು ಗಮನ ಸೆಳೆದರು. ಆದರೆ ಎಲ್ಲರ ಕಣ್ಣು ಬಿದ್ದಿದ್ದು ಅವರ ಕೈಯಲ್ಲಿದ್ದ ಮಾವಿನ ಹಣ್ಣಿನಂತಹ ವಸ್ತುವಿನ ಮೇಲೆ. ಇದು ನಿಜವಾದ ಹಣ್ಣಲ್ಲ, ಬದಲಿಗೆ ಕಲಾವಿದ ಸುಬೋಧ್ ಗುಪ್ತಾ ರಚಿಸಿದ ಸುಮಾರು 95 ಲಕ್ಷ ರೂಪಾಯಿ ಮೌಲ್ಯದ ಉಕ್ಕಿನ ಕಲಾಕೃತಿಯಾಗಿದೆ.
Read Full Story
12:34 PM (IST) May 07

India Latest News Live 7 May 2026ತಮಿಳುನಾಡಲ್ಲಿ ಮಧ್ಯರಾತ್ರಿ ಬೆಳವಣಿಗೆ - ದಳಪತಿ ವಿಜಯ್​ಗೆ ಕೊಟ್ಟ Z+ ಭದ್ರತೆ, ಬೆಂಗಾವಲು ವಾಪಸ್​; ಆಗಿದ್ದೇನು?

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್ ಅವರಿಗೆ ನೀಡಲಾಗಿದ್ದ Z-ಪ್ಲಸ್ ಮಟ್ಟದ ಉನ್ನತ ಭದ್ರತೆಯನ್ನು, ಅವರದೇ ಪಕ್ಷವಾದ 'ತಮಿಳಗ ವೆಟ್ರಿ ಕಳಗಂ' ನಾಯಕರ ಕೋರಿಕೆಯ ಮೇರೆಗೆ ದಿಢೀರ್ ಹಿಂಪಡೆಯಲಾಗಿದೆ. ಆದಾಗ್ಯೂ, ಕೇಂದ್ರ ಸರ್ಕಾರದಿಂದ ಒದಗಿಸಲಾದ 'ವೈ' ಶ್ರೇಣಿಯ ಭದ್ರತೆಯು ಮುಂದುವರಿಯಲಿದ್ದು, ಸರ್ಕಾರ ರಚನೆಯ ಕಸರತ್ತು ನಡೆಯುತ್ತಿದೆ.
Read Full Story
12:16 PM (IST) May 07

India Latest News Live 7 May 2026Political Murder - ಸುವೇಂದು ಅಧಿಕಾರಿಯ ಆಪ್ತ ಸಹಾಯಕನ ಹ*ತ್ಯೆಗೆ ಕಾರಣ ಯಾರು? ಸಹೋದರ ಹೇಳಿದ್ದಿಷ್ಟು!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರನಾಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದೊಂದು 'ಯೋಜಿತ ಕೊಲೆ' ಎಂದು ಬಿಜೆಪಿ ಆರೋಪಿಸಿದೆ. ಮೃತನ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ. 

Read Full Story
10:53 AM (IST) May 07

India Latest News Live 7 May 2026ಬರ್ತೀಯಾ? ನಿನ್ನ ರೇಟ್ ಎಷ್ಟು? ಸುತ್ತುವರಿದ 40 ಜನ, ಮಹಿಳಾ IPSಗೆ ಎದುರಾದ ಆಘಾತಕಾರಿ ಅನುಭವ

ಐಟಿ ಸಿಟಿಯಲ್ಲಿ ಮಹಿಳೆಯರಿಗೆ ಭದ್ರತೆ ಇದೆಯೇ? ಈ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರವೇ ಸಿಗುತ್ತಿದೆ. ಸ್ವತಃ ಮಹಿಳಾ ಪೊಲೀಸ್ ಕಮಿಷನರ್‌ಗೇ ಕಿಡಿಗೇಡಿಗಳಿಂದ ಕಿರುಕುಳ ತಪ್ಪಿಲ್ಲ ಎಂದಾದರೆ, ಸಾಮಾನ್ಯ ಮಹಿಳೆಯರ ಪಾಡೇನು?

Read Full Story
10:47 AM (IST) May 07

India Latest News Live 7 May 2026ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ, ಪಟ್ಟು ಬಿಡದ ಮಮತಾ, ಮೇ 9ರ ಪ್ರಮಾಣಕ್ಕೆ ಬಿಜೆಪಿ ಸಜ್ಜು, ಮುಂದೇನು?

ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಜಯದ ನಂತರ ಬಿಜೆಪಿ ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಸಿದ್ಧತೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆದು, ಮೇ 9 ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Read Full Story
09:27 AM (IST) May 07

India Latest News Live 7 May 2026ಕೊರೋನಾ ರೀತಿ ಮಹಾಮಾರಿ ‘ಹಂಟು ವೈರಸ್‌’ ಪತ್ತೆ - ವಿಶ್ವಾದ್ಯಂತ ಆತಂಕ, ಸೋಂಕಿತರಿಗಾಗಿ WHO ಹುಡುಕಾಟ

ಹಡಗೊಂದರಲ್ಲಿ 'ಹಂಟು ವೈರಸ್‌' ಪತ್ತೆಯಾಗಿದ್ದು, 8 ಜನರಿಗೆ ಸೋಂಕು ತಗುಲಿ ಮೂವರು ಮೃತಪಟ್ಟಿದ್ದಾರೆ. ಇಲಿಗಳಿಂದ ಹರಡುವ ಈ ವೈರಸ್ ತೀವ್ರ ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ್ದು, ಸೋಂಕಿತರ ಸಂಪರ್ಕಿತರ ಮೇಲೆ ನಿಗಾ ಇರಿಸಿದೆ.

Read Full Story