ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿಯಲ್ಲಿದ್ದಾರೆ. ಶುಕ್ರವಾರ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ಬಂದಾಗ, ಅವರು ರಾಷ್ಟ್ರಪತಿಗಾಗಲಿ, ಪ್ರಧಾನಿಗಾಗಲಿ ಮೊದಲು ಕೈಕುಲುಕಲಿಲ್ಲ..
- Home
- News
- India News
- India Latest News Live: ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್ನಿಂದ ಇಳಿದ ಬಳಿಕ ಪುಟಿನ್ ಶೇಕ್ಹ್ಯಾಂಡ್ ಮಾಡಿದ್ದು ಇವರಿಗೆ..
India Latest News Live: ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್ನಿಂದ ಇಳಿದ ಬಳಿಕ ಪುಟಿನ್ ಶೇಕ್ಹ್ಯಾಂಡ್ ಮಾಡಿದ್ದು ಇವರಿಗೆ..

ಭಾರತ- ರಷ್ಯಾ ಸಂಬಂಧಕ್ಕೆ ಹುಳಿ ಹಿಂಡಲು ಅಮೆರಿಕ ಯತ್ನಿಸುತ್ತಿರುವ ಹೊತ್ತಿನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ತಮ್ಮ ಆತ್ಮೀಯ ಮಿತ್ರನನ್ನು ಆಲಿಂಗಿಸಿ ಸ್ವಾಗತಿಸಿದರು. ಯಾವುದೇ ಮುನ್ಸೂಚನೆ ನೀಡದೆ, ಶಿಷ್ಟಾಚಾರ ಉಲ್ಲಂಘಿಸಿ ವಿಮಾನ ನಿಲ್ದಾಣಕ್ಕೆ ತೆರಳಿ ಪುಟಿನ್ರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ಅವರ ಸ್ನೇಹಪರತೆ ಬಗ್ಗೆ ರಷ್ಯಾ ಅತೀವ ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದೆ. ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಷ್ಟೇ ಅಲ್ಲದೆ ಬಳಿಕ ಪುಟಿನ್ರನ್ನು ತಮ್ಮ ಕಾರಿನಲ್ಲೇ ಕೂರಿಸಿ ಕರೆದೊಯ್ದ ಮೋದಿ ತಮ್ಮ ನಿವಾಸದಲ್ಲಿ ರಷ್ಯಾ ಅಧ್ಯಕ್ಷರಿಗೆ ಖಾಸಗಿ ಭೋಜನಕೂಟ ಆಯೋಜಿಸಿದ್ದರು. 4 ವರ್ಷದ ಬಳಿಕ ಭಾರತಕ್ಕೆ ಬಂದಿಳಿದ ತಮ್ಮ ಮಿತ್ರನನ್ನು ಮೋದಿ ಸ್ವಾಗತಿಸಿದ ರೀತಿ, ಉಭಯ ದೇಶಗಳ ನಡುವಿನ ಸಂಬಂಧ ಹೊಸ ಎತ್ತರಕ್ಕೆ ಏರಿದರ ಸಂಕೇತ ಎಂದೇ ಬಣ್ಣಿಸಲಾಗಿದೆ.
India Latest News Liveರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್ನಿಂದ ಇಳಿದ ಬಳಿಕ ಪುಟಿನ್ ಶೇಕ್ಹ್ಯಾಂಡ್ ಮಾಡಿದ್ದು ಇವರಿಗೆ..
India Latest News Liveಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಈ ಮಹಿಳೆಯರು ಪುರುಷರನ್ನು ತಮ್ಮ ಗಂಡಂದಿರನ್ನಾಗಿ ನೇಮಿಸಿಕೊಳ್ಳುತ್ತಾರೆ, ಮತ್ತು ಅವರಿಗೆ ಗಂಟೆಯ ವೇತನ ನೀಡಲಾಗುತ್ತದೆ. ನೇಮಕಗೊಂಡ ಪುರುಷನು ಮಹಿಳೆ ಏನು ಹೇಳುತ್ತಾರೋ ಅದನ್ನು ಮಾಡಬೇಕು. ಪ್ರತಿಯಾಗಿ, ಅವನಿಗೆ ಉತ್ತಮ ಸಂಬಳವೂ ಸಿಗುತ್ತದೆ.
India Latest News Liveಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್ಗೆ ಜಾಕ್ಪಾಟ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್ಗೆ ಜಾಕ್ಪಾಟ್, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
India Latest News Live'ನನಗೆ ಡೈವೋರ್ಸ್ ಸಿಗೋದು ಪಕ್ಕಾ..' ನ್ಯಾಷನಲ್ ಕ್ರಶ್ ಗಿರಿಜಾ ಓಕ್ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್
India Latest News LiveExplainer - ವಿಶ್ವದ ಅತಿದೊಡ್ಡ ಏರ್ಲೈನ್ಸ್ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ಶೂನ್ಯ ಸಾಲ, ಅತಿಯಾದ ಅಲಂಕಾರ ಇದ್ಯಾವುದೂ ಇಲ್ಲದೆ ಇಂಡಿಗೋ ಇಲ್ಲಿಯವರೆಗೂ ಲಾಭದತ್ತ ಮುಖ ಮಾಡಿತ್ತು. ಆದರೆ ಹೊಸ FDTL ನಿಯಮಗಳು ಮತ್ತು ಹೆಚ್ಚುತ್ತಿರುವ ವೆಚ್ಚಗಳು ಅದರ ಹಿಂದಿನ ಶಕ್ತಿಯನ್ನು ಪ್ರಶ್ನಿಸುತ್ತಿವೆ. ಟಾಟಾ ಏರ್ ಇಂಡಿಯಾಕ್ಕೆ ಹೊಸ ಜೀವ ನೀಡಿದೆ, ಆದರೆ ಅದು ಇನ್ನೂ ಬಹಳ ದೂರ ಸಾಗಬೇಕಾಗಿದೆ.
India Latest News Liveರತನ್ ಟಾಟಾ ಮಲತಾಯಿ, ಲ್ಯಾಕ್ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ರತನ್ ಟಾಟಾ ಮಲತಾಯಿ, ಲ್ಯಾಕ್ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ , ರತನ್ ಟಾಟಾ ನಿಧನದ ಬಳಿಕ ಟಾಟಾ ಟ್ರಸ್ಟ್ ಚೇರ್ಮೆನ್ ಆಗಿರುವ ನೋಯೆಲ್ ಟಾಟಾ ತಾಯಿ ಸೈಮನ್ ಟಾಟಾ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
India Latest News Liveಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ, ಜಗತ್ತಿನಲ್ಲಿ ಐದು ದೇಶಗಳು ಮಾತ್ರವೇ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಿ, ಕಾರ್ಯಾಚರಿಸುವ ಸಾಮರ್ಥ್ಯ ಗಳಿಸಿವೆ. ಭಾರತವೂ ಈ ಗುಂಪಿನಲ್ಲಿ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದೆ.
India Latest News Liveಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್ ಮುಚ್ಚಾಲ್?
Smriti Mandhana and Palash Muchhal Wedding New Date: ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಅವರ ವೈಯಕ್ತಿಕ ಜೀವನವು ಪ್ರಸ್ತುತ ಸುದ್ದಿಯಲ್ಲಿದೆ. ಪಲಾಶ್ ಮುಚ್ಚಲ್ ಅವರೊಂದಿಗಿನ ಅವರ ವಿವಾಹದ ಬಗ್ಗೆ ವಿವಿಧ ಚರ್ಚೆಗಳು ನಡೆಯುತ್ತಿವೆ.
India Latest News Liveಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ಚೆನ್ನೈನಲ್ಲಿ ನೀಲಿ ಮಾರ್ಗದ ಮೆಟ್ರೋ ರೈಲೊಂದು ತಾಂತ್ರಿಕ ದೋಷದಿಂದಾಗಿ ಸುರಂಗ ಮಾರ್ಗದಲ್ಲಿ ಹಠಾತ್ ಸ್ಥಗಿತಗೊಂಡಿತು. ಇದರಿಂದಾಗಿ ವಿದ್ಯುತ್ ಕಡಿತಗೊಂಡು ಬೋಗಿಯಲ್ಲಿ ಕತ್ತಲಾವರಿಸಿದ್ದು ಪ್ರಯಾಣಿಕರು, ರೈಲಿನಿಂದ ಇಳಿದು ಹಳಿಗಳ ಮೇಲೆ ನಡೆದು ಸಮೀಪದ ನಿಲ್ದಾಣವನ್ನು ತಲುಪಬೇಕಾಯ್ತು
India Latest News Liveಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್ಗೆ ಸೂಚನೆ
ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್ಗೆ ಸೂಚನೆ ನೀಡಲಾಗಿದೆ. ಬಾಂಬೆ ಹೈಕೋರ್ಟ್ ಈ ಸೂಚನೆ ನೀಡಿದೆ. ಹಿರಿಯ ನಟ ಸುಧೀರ್ ತೀವ್ರ ಅಸ್ವಸ್ಥಗೊಂಡಿದ್ದಾರೆ.
India Latest News Liveರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ - ಮದುವೆ ಮನೆಯಾಯ್ತು ರಣಾಂಗಣ
ಬಿಹಾರದ ಬುದ್ಧಗಯಾದಲ್ಲಿ ನಡೆದ ಮದುವೆಯೊಂದರಲ್ಲಿ ರಸಗುಲ್ಲಾ ಖಾಲಿಯಾದ ಕಾರಣಕ್ಕೆ ವರನ ಕಡೆಯವರು ದೊಡ್ಡ ಗಲಾಟೆ ಮಾಡಿದ್ದಾರೆ. ಅತಿಥಿಗಳು ಪರಸ್ಪರ ಕುರ್ಚಿಗಳಿಂದ ಹೊಡೆದಾಡಿದ್ದು, ಈ ಘಟನೆಯಿಂದಾಗಿ ಮದುವೆಯೇ ನಿಂತು ಹೋಗಿದೆ.
India Latest News Liveವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು - ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಅಮೆರಿಕನ್ ಡಾಲರ್ ವಿಶ್ವದ ಅತ್ಯಂತ ಬಲಿಷ್ಠ ಕರೆನ್ಸಿ ಎಂಬುದು ಒಂದು ಮಿಥ್ಯೆ. 2025ರ ವರದಿ ಪ್ರಕಾರ, ಅಮೇರಿಕಾ ಡಾಲರ್ಗಿಂತ ತೈಲ ಸಮೃದ್ಧ ಮಧ್ಯಪ್ರಾಚ್ಯ ದೇಶಗಳ ಕರೆನ್ಸಿಗಳು ಅಗ್ರಸ್ಥಾನದಲ್ಲಿವೆ. ವಿಶ್ವದ ಟಾಪ್-7 ಬಲಿಷ್ಠ ಕರೆನ್ಸಿಗಳು ಇಲ್ಲಿವೆ.
India Latest News Liveಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ? ಈ ಚರ್ಚೆ ಶುರುವಾಗಿದೆ. ರೇಂಜ್ ರೋವರ್, ಬೆಂಜ್ ಸೇರಿದಂತೆ ಇತರ ಶಸ್ತ್ರಸಜ್ಜಿತ ಹಾಗೂ ಸುರಕ್ಷಿತ ವಾಹನಗಳಿದ್ದರೂ ಫಾರ್ಚನರ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
India Latest News Liveಸೊಂಟ ಹಾಗೂ ತಲೆಯ ಮೇಲೆ ತಲವಾರು ಇರಿಸಿಕೊಂಡು ಬಾಲೆಯ ಬೆಲ್ಲಿ ಡಾನ್ಸ್ - ವೀಡಿಯೋ ಭಾರಿ ವೈರಲ್
India Latest News Liveಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ, ಭಾರತದ ವಿಶಾಲವಾದ ಬಾಹ್ಯಾಕಾಶ ದೃಷ್ಟಿಕೋನದಲ್ಲಿ ಇದು ಪ್ರಮುಖ ಹೆಜ್ಜೆ. ಮುಂದಿನ ಎರಡು ದಶಕಗಳ ಅವಧಿಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣೆ ನಡೆಸುವ ಭಾರತದ ಮಾರ್ಗಸೂಚಿಗೆ ಈ ಯೋಜನೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
India Latest News Liveಆರ್ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಆರ್ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ, ಆರ್ಬಿಐ ಗರ್ವನರ್ ಘೋಷಣೆಯಿಂದ ಇನ್ನುಮುಂದೆ ಸಾಲ ಸುಲಭ ಮಾತ್ರವಲ್ಲ ಅತೀ ಕಡಿಮೆ ಬಡ್ಡಿಯಲ್ಲಿ ಲಭ್ಯವಾಗಲಿದೆ.
India Latest News Liveಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
India Latest News Liveಪುಟಿನ್ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುಟಿನ್ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಾತ್ರಿಯ ಭೋಜನಕೂಟದ ವೇಳೆ ಮೋದಿ ಈ ಉಡುಗೊರೆ ನೀಡಿದ್ದಾರೆ. ಮೋದಿ ಗೀತೆಯ ರಾಯಭಾರಿ ಎಂದು ಹಲವರು ಪ್ರಶಂಸಿದ್ದಾರೆ. ಇದೇ ವೇಳೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
India Latest News Liveಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!
ಗಂಡು ಮಕ್ಕಳು ನಮ್ಮ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ, ಕ್ಯಾರೇ ಮಾಡಲ್ಲ ಅಂತ ಮನೆಯ ಹೆಣ್ಣು ಮಕ್ಕಳು ಗೋಳಾಡೋದು ಇದೆ. ಆದರೆ ಇದು ಕೇವಲ ಹೆಂಗೆಳೆಯರ ಸಮಸ್ಯೆ ಅಲ್ಲ, ಆ ಮನೆಯ ಪ್ರಾಣಿಗಳ ಸಮಸ್ಯೆಯೂ ಅದೇ, ಸಂಶೋಧನೆಯಲ್ಲಿ ಸಾಬೀತಾದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.