- Home
- News
- India News
- India Latest News Live: Viral Video - ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್
India Latest News Live: Viral Video - ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್

ಕೋಲ್ಕತಾ:‘ ಪಶ್ಚಿಮ ಬಂಗಾಳದಲ್ಲಿ ಬುಧವಾರ ನಡೆಯಲಿರುವ 2ನೇ ಹಂತದ ಚುನಾವಣೆಯಲ್ಲಿ ನಕಲಿ ಮತದಾನಕ್ಕಾಗಿ ಟಿಎಂಸಿ 700 ಕ್ಕೂ ಹೆಚ್ಚು ಕೃತಕ ಬೆರಳುಗಳನ್ನು ಖರೀದಿಸಿದೆ’ ಎಂದು ಭವಾನಿಪುರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೃಣಮೂಲ ಕಾಂಗ್ರೆಸ್ನ ಕೌನ್ಸಿಲರ್ ಒಬ್ಬರು ನಕಲಿ ಮತದಾನಕ್ಕಾಗಿ 700ಕ್ಕೂ ಹೆಚ್ಚು ಕೃತಕ ಬೆರಳುಗಳನ್ನು ಖರೀದಿಸಿದ್ದಾರೆ. ಇದು ಚುನಾವಣೆ ತಿರುಗಿಸುವ ಪ್ರಯತ್ನ. ನಾವು ಅಂತಹ ಪದ್ಧತಿಗಳನ್ನು ಅನುಮತಿಸುವುದಿಲ್ಲ’ ಎಂದಿದ್ದಾರೆ. ಇದಕ್ಕೆ ಟಿಎಂಸಿ ಪ್ರತಿಕ್ರಿಯಿಸಿದ್ದು, ‘ ಇದೊಂದು ಆಧಾರರಹಿತ ಆರೋಪ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಹದ್ದು ಸಾಧ್ಯವಿಲ್ಲ’ ಎಂದಿದೆ.
India Latest News Live 29 April 2026Viral Video - ಮಗನ ಉಳಿಸಲು ರೈಲ್ವೆ ಹಳಿ ಮೇಲೆ ಜಿಗಿದ ಅಪ್ಪ- ಸಿನಿಮಾದಲ್ಲೂ ತೋರಿಸದ ಕ್ಲೈಮ್ಯಾಕ್ಸ್
India Latest News Live 29 April 2026ಮಾತಿನಿಂದಲೇ ಕೋಟಿ ಕೋಟಿ ಗಳಿಕೆ.. ಮೈಕ್ ಸಿಕ್ಕರೆ ಪಟಪಟನೆ ಮಾತನಾಡೋ ಈ ಸ್ಟಾರ್ ಆಂಕರ್ ಸಂಭಾವನೆ ಇಷ್ಟೊಂದಾ?
India Latest News Live 29 April 2026ಪುದುಚೇರಿಯಲ್ಲಿ ಕಮಲ-ಕೈ ನಡುವೆ ಬಿಗ್ ಫೈಟ್ - ಸಮೀಕ್ಷೆಗಳಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಮೇಲುಗೈ!
ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದ್ದು, ಎನ್ಡಿಎ ಮತ್ತು ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಇದೆ. ನಟ ವಿಜಯ್ ಅವರ ಟಿವಿಕೆ ಪಕ್ಷದ ಪ್ರವೇಶದಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿವಿಧ ಮತಗಟ್ಟೆ ಸಮೀಕ್ಷೆಗಳು ಎನ್ಡಿಎಗೆ ಮುನ್ನಡೆ ನೀಡಿವೆ.
India Latest News Live 29 April 2026Exit Polls ತಮಿಳುನಾಡಿನಲ್ಲಿ ಬಿರುಗಾಳಿ, ನಟ ವಿಜಯ್ ಪಕ್ಷಕ್ಕೆ 120 ಸ್ಥಾನ ಜೊತೆಗೆ ಸಿಎಂ ಎಂದ ಸಮೀಕ್ಷೆ
Exit Polls ತಮಿಳುನಾಡಿನಲ್ಲಿ ಬಿರುಗಾಳಿ, ನಟ ವಿಜಯ್ ಪಕ್ಷಕ್ಕೆ 120 ಸ್ಥಾನ ಜೊತೆಗೆ ಸಿಎಂ ಎಂದ ಸಮೀಕ್ಷೆ, ಎಂಕೆ ಸ್ಟಾಲಿನ್ ಅಧಿಕಾರ ಅಂತ್ಯಗೊಳಿಸಿ ನಟ ವಿಜಯ್ ಮುಖ್ಯಮಂತ್ರಿ ಸಾಧ್ಯತೆಗಳನ್ನು ಸಮೀಕ್ಷೆ ಹೇಳುತ್ತಿದೆ.
India Latest News Live 29 April 2026ಕೇವಲ 87 ಸಾವಿರಕ್ಕೆ ಪವರ್ಫುಲ್ ಎಲೆಕ್ಟ್ರಿಕ್ ಸ್ಕೂಟರ್ - ಒಮ್ಮೆ ಚಾರ್ಜ್ ಮಾಡಿದರೆ 118 ಕಿಮೀ ಮೈಲೇಜ್!
India Latest News Live 29 April 2026ನೀನು ಯಾವ ದೇಗುಲ ಹೊಕ್ರೂ ಬಿಡೋಳಲ್ಲ, ಓಡಿ ಹೋಗಲು ಕೊನೆ ಅವಕಾಶ ಇದು - ಪ್ರಧಾನಿಗೆ ಧಮ್ಕಿ- ವಿಡಿಯೋ ಇಲ್ಲಿದೆ
India Latest News Live 29 April 2026Keralam Exit Poll 2026 - ದೇವರ ನಾಡಿನಲ್ಲಿ ಧ್ವಜ ಹಾರಿಸಲಿದೆ ಕಾಂಗ್ರೆಸ್ ನೇತೃತ್ವದ ಯುಡಿಎಫ್!
ಕೇರಳದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗಿದೆ.
India Latest News Live 29 April 2026Exit poll ತಮಿಳುನಾಡಿನಲ್ಲಿ ಸ್ಟಾಲಿನ್ ಪಕ್ಷಕ್ಕೆ ಅಧಿಕಾರ, ವಿಜಯ್ ಅಲೆಯಲ್ಲಿ ಸೊರಗಿದ ಬಿಜೆಪಿ
Exit poll ತಮಿಳುನಾಡಿನಲ್ಲಿ ಸ್ಟಾಲಿನ್ ಪಕ್ಷಕ್ಕೆ ಅಧಿಕಾರ, ವಿಜಯ್ ಅಲೆಯಲ್ಲಿ ಸೊರಗಿದ ಬಿಜೆಪಿ, ಎನ್ಡಿಎ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಡಿಎಂಗೆ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದೆ.
India Latest News Live 29 April 2026ಮನೆಯ ಡ್ರಾಯರ್ನಲ್ಲಿದ್ದ ಚಿನ್ನದ ಉಂಗುರ ಕದ್ದು ಮೈಗೆ ಹಾಕಿಕೊಂಡ ಹಾವು; ಬಳಿಕ ನಡೆದಿದ್ದೇ ರಣ ರೋಚಕ ಕಥೆ!
ಕಾಸರಗೋಡಿನ ಮನೆಯೊಂದರ ಟೇಬಲ್ ಡ್ರಾಯರ್ನಲ್ಲಿ ಇಟ್ಟಿದ್ದ ಚಿನ್ನದ ಉಂಗುರ, ಅಲ್ಲಿಗೆ ಬಂದಿದ್ದ ಕೇರೆ ಹಾವಿನ ಮೈಗೆ ಸಿಕ್ಕಿಹಾಕಿಕೊಂಡಿತ್ತು. ಮಕ್ಕಳು ಡ್ರಾಯರ್ ತೆರೆದಾಗ ಹಾವು ಕಂಡರೂ, ಅದೃಷ್ಟವಶಾತ್ ಏನೂ ಅನಾಹುತ ಆಗಿಲ್ಲ.
India Latest News Live 29 April 2026ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್, ಸತತ ಮೂರನೇ ಬಾರಿಗೆ ಕಮಲ ಅರಳುವ ಸೂಚನೆ ನೀಡಿದ ಎಕ್ಸಿಟ್ ಪೋಲ್
ಅಸ್ಸಾಮ್ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಬಹುಮತವನ್ನು ಮುನ್ಸೂಚಿಸಿವೆ. ಆಕ್ಸಿಸ್ ಮೈ ಇಂಡಿಯಾ ಮತ್ತು ಮ್ಯಾಟ್ರಿಜ್ನಂತಹ ಪ್ರಮುಖ ಸಮೀಕ್ಷೆಗಳು, ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸರ್ಕಾರವು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
India Latest News Live 29 April 2026ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯುದೇಕೆ?
ಭೂಮಿಯ ಮೇಲಿನ ಅತಿ ವೇಗದ ಪ್ರಾಣಿಯಾದ ಚೀತಾ, ತನ್ನ ಬೇಟೆಯ ನಂತರ ದೀರ್ಘಕಾಲ ವಿಶ್ರಾಂತಿ ಪಡೆಯುತ್ತದೆ. ಈ ಚೇತರಿಕೆಯ ಸಮಯವು ಅದರ ಮುಂದಿನ ಯಶಸ್ವಿ ಬೇಟೆಗೆ ಅತ್ಯಗತ್ಯವಾಗಿದೆ. ಇದೇ ರೀತಿ, ಮನುಷ್ಯರು ಕೂಡ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸೋಲಿನ ನಂತರ ಚೇತರಿಸಿಕೊಳ್ಳುವುದು ಎಷ್ಟು ಮುಖ್ಯ ಗೊತ್ತಾ?
India Latest News Live 29 April 2026ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಶೇ.90ರಷ್ಟು ವೋಟಿಂಗ್, ಕೇಂದ್ರದ ಮೇಲೆ ಮಮತಾ ಕಿಡಿ!
India Latest News Live 29 April 2026ವಿಚ್ಛೇದನಕ್ಕಾಗಿ ಗಂಡನ ಸಹೋದರಿಯನ್ನೇ 'ಸವತಿ' ಮಾಡಿದ ಕಿಲಾಡಿ ಪತ್ನಿ! ಹೈಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಕೇಸ್!
ಗ್ವಾಲಿಯರ್ನಲ್ಲಿ ಮಹಿಳೆಯೊಬ್ಬರು ವಿಚ್ಛೇದನ ಪಡೆಯಲು, ಪತಿಯ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ನ್ಯಾಯಾಲಯಕ್ಕೆ ದಾರಿ ತಪ್ಪಿಸಿದ್ದಾರೆ. ಕೌಟುಂಬಿಕ ಫೋಟೋವನ್ನು ಸುಳ್ಳು ಸಾಕ್ಷ್ಯವಾಗಿ ಬಳಸಿ ಏಕಪಕ್ಷೀಯ ವಿಚ್ಛೇದನ ಪಡೆದಿದ್ದಾರೆ.
India Latest News Live 29 April 2026ನಾಲ್ಕು ಹೆಂಡಿರ ಗಂಡನ ಜೊತೆ ಲಿವ್-ಇನ್ - ಮಗುವಾದ್ಮೇಲೆ ರೇ*ಪ್ ಕೇಸ್- 'ಸುಪ್ರೀಂ' ಮಹತ್ವದ ತೀರ್ಪು
ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು, ಮಗುವಾದ ಬಳಿಕ ಆತ ಮದುವೆಗೆ ನಿರಾಕರಿಸಿದಾಗ ಯುವತಿ ಅ*ತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಪ್ಪಿಗೆಯ ಸಹಬಾಳ್ವೆಯಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಅಂತಹ ಸಂಬಂಧದಿಂದ ಜನಿಸಿದ ಮಗುವಿಗೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ತಿಳಿಸಿದೆ.
India Latest News Live 29 April 2026'ಆ ನಟನಿಗೆ ನನ್ನ ಹೃದಯದಲ್ಲಿ 'ಸ್ಪೆಷಲ್' ಸ್ಥಾನ ಇದೆ'.. ಸ್ವತಃ ತಾವೇ ಗುಟ್ಟು ಬಿಟ್ಟುಕೊಟ್ಟ ನಟಿ ಅನುಷ್ಕಾ ಶೆಟ್ಟಿ!
ಸಾಮಾನ್ಯವಾಗಿ ಹೊಸ ನಟಿಯರು ಚಿತ್ರರಂಗಕ್ಕೆ ಕಾಲಿಡುವಾಗ ಬಣ್ಣ ಬಣ್ಣದ ಪೋರ್ಟ್ಫೋಲಿಯೋ, ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ನಿರ್ದೇಶಕರ ಮುಂದೆ ನಿಲ್ಲುತ್ತಾರೆ. ಆದರೆ ಅನುಷ್ಕಾ ಕಥೆಯೇ ಬೇರೆ! ಚಿತ್ರರಂಗಕ್ಕೆ ಬರುವ ಮೊದಲು ಅವರು ಮುಂಬೈನಲ್ಲಿ ಇದ್ದರು. ಮುಂದೇನಾಯ್ತು ನೋಡಿ..
India Latest News Live 29 April 2026ಪೆಟ್ರೋಲ್ ಡೀಸೆಲ್ ಕಾರಿಗೆ ಭವಿಷ್ಯವಿಲ್ಲ, ಶೀಘ್ರದಲ್ಲೇ ಯುಗಾಂತ್ಯ, ಸಂಚಲನ ಸೃಷ್ಟಿಸಿದ ನಿತಿನ್ ಗಡ್ಕರಿ
ಪೆಟ್ರೋಲ್ ಡೀಸೆಲ್ ಕಾರಿಗೆ ಭವಿಷ್ಯವಿಲ್ಲ, ಶೀಘ್ರದಲ್ಲೇ ಯುಗಾಂತ್ಯ, ಸಂಚಲನ ಸೃಷ್ಟಿಸಿದ ನಿತಿನ್ ಗಡ್ಕರಿ, ಗಡ್ಕರಿ ಹೇಳಿದಂತೆ ಇಂಧನ ಕಾರುಗಳು ಮ್ಯೂಸಿಯಂ ಸೇರಿಕೊಳ್ಳುತ್ತಾ? ಈ ಕಾರುಗಳನ್ನು ಗುಜುರಿ ಹಾಕಬೇಕಾ?
India Latest News Live 29 April 2026ಕೋಳಿ ಸಾರು ಮಾಡ್ಲಿಲ್ಲ ಎಂದು ಹೆಂಡ್ತಿ ಮೇಲೆ ರೇಗಾಡಿದ ಗಂಡ, ಕೊಡಲಿಯಿಂದ ಕೊಚ್ಚಿ ಕೊಂದ ಪತ್ನಿ!
ತೆಲಂಗಾಣದ ಕಾಮರೆಡ್ಡಿಯಲ್ಲಿ, ಕೋಳಿ ಸಾರು ಮಾಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯು ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ. ಆರು ವರ್ಷಗಳ ದಾಂಪತ್ಯದ ನಡುವೆ ಆಗಾಗ್ಗೆ ನಡೆಯುತ್ತಿದ್ದ ಕೌಟುಂಬಿಕ ಕಲಹವು ಈ ಭೀಕರ ದುರಂತಕ್ಕೆ ಕಾರಣವಾಗಿದೆ.ರೆ.
India Latest News Live 29 April 2026'ಇದು ಅಹಂಕಾರದ ಹೋರಾಟ' - 90 ವರ್ಷದ ವೃದ್ಧೆಗೆ 20 ವರ್ಷ ಕಾಯುವಂತೆ ಹೇಳಿದ ಬಾಂಬೆ ಹೈಕೋರ್ಟ್!
ವೈಯಕ್ತಿಕ ಪ್ರತಿಷ್ಠೆಗಾಗಿ 90 ವರ್ಷದ ವೃದ್ಧೆಯೊಬ್ಬರು ಹೂಡಿದ್ದ 20 ಕೋಟಿ ರೂ. ಮಾನನಷ್ಟ ಮೊಕದ್ದಮೆಯಿಂದ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಸಮಯವನ್ನು ವ್ಯರ್ಥ ಮಾಡುವ ಇಂತಹ ಪ್ರಕರಣಗಳಿಂದಾಗಿ, ನ್ಯಾಯಾಲಯವು ವಿಚಾರಣೆಯನ್ನು 20 ವರ್ಷಗಳ ಕಾಲ ಮುಂದೂಡಿದೆ.
India Latest News Live 29 April 2026ಭಾರತದಲ್ಲಿ ನೆಮ್ಮದಿಯ ನಿವೃತ್ತ ಜೀವನಕ್ಕೆ ಬೇಕು 40 ಕೋಟಿ ರೂಪಾಯಿ! ಸ್ಟಾರ್ಟ್ಅಪ್ ಸಂಸ್ಥಾಪಕನ ಲೆಕ್ಕಾಚಾರಕ್ಕೆ ಬೆಚ್ಚಿಬಿದ್ದ ನೆಟ್ಟಿಗರು
ಸಂಪತ್ತು ನಿರ್ವಹಣಾ ಸಂಸ್ಥೆ 'ಡೆಸರ್ವ್' ಸಹ-ಸಂಸ್ಥಾಪಕ ಸಂದೀಪ್ ಜೆತ್ವಾನಿ, ಮೆಟ್ರೋ ನಗರಗಳಲ್ಲಿ ಆರಾಮದಾಯಕ ನಿವೃತ್ತಿ ಜೀವನಕ್ಕೆ 60ನೇ ವಯಸ್ಸಿನಲ್ಲಿ 40 ಕೋಟಿ ರೂ. ನಿಧಿ ಬೇಕು ಎಂದು ಹೇಳಿದ್ದಾರೆ.
India Latest News Live 29 April 2026ಬೀಚ್ನಲ್ಲಿ ಶವವಾಗಿ ಪತ್ತೆಯಾದ 22ರ ಫಾತಿಮಾ ಕೇಸ್ಗೆ ಟ್ವಿಸ್ಟ್, ರೈಲಿಗೆ ತಲೆಕೊಡಲು ಹೋದ ಪತಿ ಅರೆಸ್ಟ್
ಬೀಚ್ನಲ್ಲಿ ಶವವಾಗಿ ಪತ್ತೆಯಾದ 22ರ ಫಾತಿಮಾ ಕೇಸ್ಗೆ ಟ್ವಿಸ್ಟ್, ರೈಲಿಗೆ ತಲೆಕೊಡಲು ಹೋದ ಪತಿ ಅರೆಸ್ಟ್, ಆರಂಭದಲ್ಲಿ ಬದುಕು ಅಂತ್ಯಗೊಳಿಸಿದ ಅಥವಾ ಬೀಚ್ನಲ್ಲಿ ದುರಂತ ಅಂತ್ಯ ಎಂದೇ ಹೇಳಲಾಗಿತ್ತು. ಆದರೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.