11:17 PM (IST) Mar 25

India Latest News Live: INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್‌ನಿಂದ ಏಕಕಾಲಕ್ಕೆ ಟೇಕಾಫ್ ಆದ Mig-29ಕೆ ಫೈಟರ್ ಜೆಟ್ - ವೀಡಿಯೋ ಭಾರಿ ವೈರಲ್

ಭಾರತೀಯ ನೌಕಾಪಡೆಯ ಎರಡು ಪ್ರಮುಖ ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ವಿಕ್ರಾಂತ್‌ನಿಂದ ಎರಡು ಮಿಗ್-29ಕೆ ಫೈಟರ್ ಜೆಟ್‌ಗಳು ಏಕಕಾಲಕ್ಕೆ ಟೇಕಾಫ್ ಆಗಿರುವ ದೃಶ್ಯ ವೈರಲ್ ಆಗಿದೆ.

Read Full Story
10:22 PM (IST) Mar 25

India Latest News Live: ಭಾರತಕ್ಕೂ ಬಂತಾ ಝೋಂಬಿ ಡ್ರಗ್ - ನಿಂತಲೇ ಗಂಟೆಗಳ ಕಾಲ ತೂಕಾಡಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

Zombie drug in Punjab: ಪಂಜಾಬ್‌ನಲ್ಲಿ ಡೆಲಿವರಿ ಯುವಕನೋರ್ವ ಝೋಂಬಿಯಂತೆ ತೂಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು, ಅಮೆರಿಕಾದಲ್ಲಿ ಕಂಡುಬರುವ ಕ್ಸೈಲಾಜಿನ್ ಎಂಬ 'ಝೋಂಬಿ ಡ್ರಗ್' ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ.

Read Full Story
10:21 PM (IST) Mar 25

India Latest News Live: 30 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ಹೋಂಡಾ WN7 ಬೈಕ್ - ಏನಿದರ ವಿಶೇಷ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಸಿದ್ಧ ಹೋಂಡಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ WN7, 'ಗೋಲ್ಡ್ iF ಡಿಸೈನ್' ಪ್ರಶಸ್ತಿಯನ್ನು ಗೆದ್ದಿದೆ. ಇದರ ವಿಶಿಷ್ಟ ವಿನ್ಯಾಸದಲ್ಲಿ ಬ್ಯಾಟರಿಯೇ ಫ್ರೇಮ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ ರೇಂಜ್ ನೀಡುತ್ತದೆ. 

Read Full Story
10:01 PM (IST) Mar 25

India Latest News Live: ಒಂದೇ ಒಂದು ಹೆಸರು... ಬದುಕು ಸೂಪರ್‌ - ನಟಿಯರಿಗೆ ಭಾರತಿರಾಜ ಇಟ್ಟ ಲಕ್ಕಿ ನೇಮ್ಸ್ ಸೀಕ್ರೆಟ್ ಏನು?

ಭಾರತಿರಾಜ ಅವರು ಪರಿಚಯಿಸಿದ ನಟಿಯರು ಸೂಪರ್‌ಸ್ಟಾರ್‌ಗಳಾಗಲು ಅವರು ಇಟ್ಟ 'ರಾಶಿ' ಹೆಸರುಗಳೂ ಒಂದು ಕಾರಣ. ಈ ಹೆಸರು ಬದಲಾವಣೆಯ ಹಿಂದಿನ ರಹಸ್ಯ ಮತ್ತು ಅದರ ಹಿಂದಿರುವ ಸ್ವಾರಸ್ಯಕರ ಕಥೆಗಳನ್ನು ಇಲ್ಲಿ ನೋಡೋಣ.

Read Full Story
08:56 PM (IST) Mar 25

India Latest News Live: 'ನಮ್ಮ ಷರತ್ತು ಒಪ್ಪಿದ್ರೆ ಮಾತ್ರ ಯುದ್ಧ ಮುಗಿಸ್ತೇವೆ' - ಟ್ರಂಪ್‌ ಆರ್ಡರ್‌ಗೆ ಡೋಂಟ್ ಕೇರ್ ಅಂದ ಇರಾನ್‌!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಇರಾನ್, ಯುದ್ಧ ನಿಲ್ಲಿಸಲು ತನ್ನದೇ ಆದ ಕಠಿಣ ಷರತ್ತುಗಳನ್ನು ವಿಧಿಸಿದೆ. ಹೋರ್ಮುಜ್ ಜಲಸಂಧಿಯ ಮೇಲೆ ಸಾರ್ವಭೌಮತ್ವ ಮತ್ತು ಯುದ್ಧದ ನಷ್ಟಕ್ಕೆ ಪರಿಹಾರ ನೀಡುವುದು ಇರಾನ್‌ನ ಪ್ರಮುಖ ಬೇಡಿಕೆಗಳಾಗಿವೆ. 

Read Full Story
08:43 PM (IST) Mar 25

India Latest News Live: ಚಿರು ಬೆಂಬಲದೊಂದಿಗೆ ಸೋಶಿಯಲ್ ಮೀಡಿಯಾಗೆ ಪವನ್ ಪತ್ನಿ ಎಂಟ್ರಿ - 1800 ಕೋಟಿ ಆಸ್ತಿ ಬಿಟ್ಟು ಬಂದಿದ್ದೇಕೆ?

ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿದೆಲಾ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಪೋಸ್ಟ್‌ನಲ್ಲಿ ಅವರು ಚಿರಂಜೀವಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Read Full Story
08:33 PM (IST) Mar 25

India Latest News Live: 'ನಮ್ಮದು ದಲ್ಲಾಳಿ ರಾಷ್ಟ್ರವಲ್ಲ' - ಇರಾನ್-ಅಮೆರಿಕ ಸಂಧಾನಕ್ಕೆ ಮುಂದಾದ ಪಾಕ್‌ಗೆ ಜೈಶಂಕರ್ ಪವರ್‌ಫುಲ್ ಕೌಂಟರ್!

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ ಎಂದಿಗೂ 'ದಲ್ಲಾಳಿ ರಾಷ್ಟ್ರ'ವಾಗಿ ವರ್ತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Read Full Story
06:51 PM (IST) Mar 25

India Latest News Live: ಚಂದಿರನತ್ತ ನಾಸಾ - ಭೂಮಿಯಿಂದ 3.84 ಲಕ್ಷ ಕಿ.ಮೀ ದೂರದ ಸಾಹಸ, ಅಪಾಯಗಳ ನಡುವೆಯೇ ಏ.1ಕ್ಕೆ ಹಾರಲಿದೆ ಆರ್ಟೆಮಿಸ್ II

ಅಪೋಲೋ ಕಾರ್ಯಕ್ರಮದ ಸುಮಾರು 50 ವರ್ಷಗಳ ನಂತರ, ನಾಸಾದ 'ಆರ್ಟೆಮಿಸ್ II' ಮಿಷನ್ ಮೂಲಕ ನಾಲ್ವರು ಗಗನಯಾತ್ರಿಗಳು ಚಂದ್ರನತ್ತ ಪ್ರಯಾಣ ಬೆಳೆಸಲಿದ್ದಾರೆ. ಈ ತಂಡವು ಚಂದ್ರನ ಮೇಲೆ ಇಳಿಯದೆ, 

Read Full Story
06:37 PM (IST) Mar 25

India Latest News Live: AR Rahman - 20 ವರ್ಷವಾದ್ರೂ ಬದಲಾಗದ ಮ್ಯಾಜಿಕ್, ಪ್ರತಿ ಸ್ಟೇಜ್‌ನಲ್ಲೂ ಅದೇ ಹಾಡು - ರೆಹಮಾನ್‌ರ ಸಿಗ್ನೇಚರ್ ಗೀತೆ!

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಾವು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದು ನಿರ್ದಿಷ್ಟ ಹಾಡನ್ನು ತಪ್ಪದೇ ಹಾಡುತ್ತಾರೆ. ಆ ಹಾಡಿನ ಹಿಂದಿರುವ ಸೆಂಟಿಮೆಂಟ್ ಮತ್ತು ರಹಸ್ಯವೇನು ಗೊತ್ತಾ?

Read Full Story
06:23 PM (IST) Mar 25

India Latest News Live: ನನ್ನ ಲವ್ ಲೆಟರ್‌ಗಳನ್ನೆಲ್ಲಾ ಅಪ್ಪ-ಅಮ್ಮ ಸುಟ್ಟು ಹಾಕಿದ್ರು - ನೋವಿನ ಕಥೆ ಬಿಚ್ಚಿಟ್ಟ ನಟಿ ಭಾಗ್ಯಶ್ರೀ

ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದಾಗಲೆಲ್ಲಾ ಜನ ಭಾಗ್ಯಶ್ರೀ ಮತ್ತು ಸಲ್ಮಾನ್ ಖಾನ್‌ರನ್ನು ಇಷ್ಟಪಡುತ್ತಾರೆ. ಮೊದಲ ಚಿತ್ರದಲ್ಲೇ ಭಾಗ್ಯಶ್ರೀ ಸೂಪರ್‌ಹಿಟ್ ಆದರು. ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ನೋವಿನ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

Read Full Story
06:17 PM (IST) Mar 25

India Latest News Live: ಪುನಃ ಕೋವಿಡ್​ನಂಥ ಸ್ಥಿತಿ ಎಂದ ಪ್ರಧಾನಿ, ಲಾಕ್​ಡೌನ್​ ಬಗ್ಗೆ ಹೇಳಿದ್ರಾ? ಸಂಸತ್ತಿನಲ್ಲಿ ಮೋದಿ ಭಾಷಣವೇನು

ಕೋವಿಡ್ ಸಂಕಷ್ಟದ ನೆನಪು ಮಾಸುವ ಮುನ್ನವೇ ಮಧ್ಯಪ್ರಾಚ್ಯದ ಯುದ್ಧ ಹೊಸ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಸಮಯದಂತೆ ಒಗ್ಗಟ್ಟು ಮತ್ತು ಸಂಯಮದಿಂದ ಇರಲು ಕರೆ ನೀಡಿದ್ದಾರೆ. ಅವರ ಈ ಹೇಳಿಕೆಯು ಮತ್ತೊಮ್ಮೆ ಲಾಕ್‌ಡೌನ್ ಆಗಬಹುದೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
05:48 PM (IST) Mar 25

India Latest News Live: Dhurandhar 2 - ರಣವೀರ್ ಸಿಂಗ್ ಸಿನಿಮಾ ನೋಡಿ ಅಮೀಶಾ ಪಟೇಲ್ ಹೇಳಿದ್ದೇನು? ಚಿತ್ರರಂಗಕ್ಕೆ ಕೊಟ್ಟ ಸಲಹೆ ಏನು?

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಎಲ್ಲೆಡೆ ಭರ್ಜರಿ ಮೆಚ್ಚುಗೆ ಗಳಿಸುತ್ತಿದೆ. ಈಗ ನಟಿ ಅಮೀಶಾ ಪಟೇಲ್ ಕೂಡ ಈ ಚಿತ್ರ ಮತ್ತು ಚಿತ್ರತಂಡವನ್ನು ಹೊಗಳಿದ್ದಾರೆ. ಈ ಸಿನಿಮಾ, ವಿಶ್ವಾದ್ಯಂತ ₹700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

Read Full Story
05:34 PM (IST) Mar 25

India Latest News Live: Fuel Crisis - ದೇಶಾದ್ಯಂತ ಪೆಟ್ರೋಲ್, ಡೀಸೆಲ್‌ಗೆ ಹಾಹಾಕಾರ? ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ!

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದೆಂಬ ಆತಂಕದಲ್ಲಿ ಜನರು ಇಂಧನಕ್ಕಾಗಿ ಮುಗಿಬೀಳುತ್ತಿದ್ದಾರೆ.

Read Full Story
05:28 PM (IST) Mar 25

India Latest News Live: ನೀನೇನು ಹುಚ್ಚಾ? ಎಂದಿದ್ದ ಅಕ್ಷಯ್ ಖನ್ನಾ - 300 ಆಡಿಷನ್, 2 ವರ್ಷದ ಕಷ್ಟದ ಕಥೆ ಬಿಚ್ಚಿಟ್ಟ ಮುಕೇಶ್!

ಧುರಂಧರ್ 2 ಯಶಸ್ಸಿನ ನಂತರ, ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ತಮ್ಮ 20 ವರ್ಷಗಳ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಂ ನೋಡಿ ಕಾಸ್ಟಿಂಗ್ ಮಾಡಲ್ಲ, ಆಡಿಷನ್ ಮೂಲಕವೇ ಆಯ್ಕೆ ಮಾಡ್ತೀನಿ ಎಂದಿರುವ ಅವರು, ಈ ಚಿತ್ರಕ್ಕಾಗಿ 300ಕ್ಕೂ ಹೆಚ್ಚು ಜನರನ್ನು ಆಯ್ಕೆ ಮಾಡಿದ್ದರಂತೆ.

Read Full Story
05:24 PM (IST) Mar 25

India Latest News Live: ಗಾಂಧಿ ಪ್ರತಿಮೆ ಏರಿ ಅಸಭ್ಯ ವರ್ತನೆ- ವಿಡಿಯೋ ರೆಕಾರ್ಡ್​ - ರಾಜಕೀಯ ತಿರುವು ಪಡೆದ ಘಟನೆ

ಉತ್ತರ ಪ್ರದೇಶದ ಬರೇಲಿಯಲ್ಲಿ ಕೆಲವು ಯುವಕರು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಅಗೌರವ ತೋರಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ರಾಜಕೀಯ ತಿರುವು ಪಡೆದುಕೊಂಡು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story
05:19 PM (IST) Mar 25

India Latest News Live: ಮಧ್ಯಪ್ರಾಚ್ಯ ಸಂಘರ್ಷ - ಎಣ್ಣೆ, ಬಿಯರ್ ರೇಟ್ ಏರಿಸದಿದ್ರೆ ಇಂಡಸ್ಟ್ರಿ ಉಳಿಯಲ್ಲ! ಸರ್ಕಾರದ ಮುಂದೆ ಬೇಡಿಕೆ

ಭಾರತದ ಪ್ರಮುಖ ಮದ್ಯ ತಯಾರಿಕಾ ಕಂಪನಿಗಳು ಶೇ. 15ರಷ್ಟು ಬೆಲೆ ಏರಿಕೆಗೆ ಬೇಡಿಕೆ ಇಟ್ಟಿವೆ. ಮಧ್ಯಪ್ರಾಚ್ಯ ಸಂಘರ್ಷದಿಂದ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬೆಲೆ ಪರಿಷ್ಕರಣೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿವೆ.
Read Full Story
05:08 PM (IST) Mar 25

India Latest News Live: Vande Bharat Accident - ಖೈನಿ ಉಗುಳಲು ಹೋಗಿ ಪ್ರಾಣ ಕಳ್ಕೊಂಡ! ವಂದೇ ಭಾರತ್ ರೈಲಿಗೆ ಸಿಕ್ಕಿ ವ್ಯಕ್ತಿ ದುರ್ಮರಣ

ಬಿಹಾರದ ಬಾರ್ಹ್ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ. ಈ ನಿಲ್ದಾಣವು ಪೂರ್ವ ಮಧ್ಯೆ ರೈಲ್ವೆಯ ದಾನಾಪುರ ವಿಭಾಗದ ವ್ಯಾಪ್ತಿಗೆ ಬರುತ್ತದೆ.

Read Full Story
05:00 PM (IST) Mar 25

India Latest News Live: ಅಗ್ನಿವೀರರಿಗೆ ಬಂಪರ್ - ಶೇ. 20ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿಗೆ ರಾಜ್ಯಗಳಿಗೆ ಕೇಂದ್ರದ ಪತ್ರ!

ಕೇಂದ್ರ ಗೃಹ ಸಚಿವಾಲಯವು ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸಿದ ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ. 20ರಷ್ಟು ಮೀಸಲಾತಿ ನೀಡುವಂತೆ ರಾಜ್ಯಗಳಿಗೆ ಪತ್ರ ಬರೆದಿದೆ. ಈ ಕ್ರಮವು ಅಗ್ನಿವೀರರ ಪುನರ್ವಸತಿ ಗುರಿಯನ್ನು ಹೊಂದಿದೆ.

Read Full Story
04:40 PM (IST) Mar 25

India Latest News Live: ಭೀಕರ ಕಾರು ಅಪಘಾತದಲ್ಲಿ 30 ವರ್ಷದ ನಟಿ ಸಾವು - ಸಿಸಿಟಿವಿಯಲ್ಲಿ ಸೆರೆಯಾಯ್ತು ನಡುಕ ಹುಟ್ಟಿಸುವ ದೃಶ್ಯ!

ಖ್ಯಾತ ನಟಿ ಮತ್ತು ಮಾಡೆಲ್ ಹರ್ಷಿಲ್ ಕಾಲಿಯಾ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ. 

Read Full Story
04:10 PM (IST) Mar 25

India Latest News Live: ಪಂಜಾಬ್‌ಗೆ ಪ್ರೀತಿ, ಸನ್‌ರೈಸರ್ಸ್‌ಗೆ ಕಾವ್ಯಾ.. RCB ಲೇಡಿ ಲಕ್‌ ಆಗ್ತಾರಾ ಗ್ಲಾಮರ್‌ ಗೊಂಬೆ ಅನನ್ಯಾ ಬಿರ್ಲಾ?

ಆರ್‌ಸಿಬಿ ಹೊಸ ಚೇರ್ಮನ್‌ ಆರ್ಯಮನ್‌ ಬಿರ್ಲಾ ಅವರ ಅಕ್ಕ ಅನನ್ಯ ಬಿರ್ಲಾ, ಕೇವಲ ಉದ್ಯಮಿಯ ಮಗಳಲ್ಲದೆ ಸ್ವಂತ ಪರಿಶ್ರಮದಿಂದ ಉದ್ಯಮಿ, ಗಾಯಕಿ ಮತ್ತು ಹೂಡಿಕೆದಾರರಾಗಿ ಬೆಳೆದಿದ್ದಾರೆ. 17ನೇ ವಯಸ್ಸಿಗೆ 'ಸ್ವತಂತ್ರ ಮೈಕ್ರೋಫಿನ್' ಸ್ಥಾಪಿಸಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

Read Full Story