ವೈಭವ್ ಅವರ ಈ ಅದ್ಭುತ ಬ್ಯಾಟಿಂಗ್ ನೋಡಿದ ಮಾಜಿ ಕ್ರಿಕೆಟಿಗ ಮತ್ತು 1983ರ ವಿಶ್ವಕಪ್ ವಿಜೇತ ಕೆ.ಶ್ರೀಕಾಂತ್, ಗೌತಮ್ ಗಂಭೀರ್ ವಿರುದ್ಧ ಕಿಡಿಕಾರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಕ್ಕೆ ವೈಭವ್ ಅವರನ್ನು ತಂಡದಿಂದ ಕೈಬಿಟ್ಟಿದ್ದನ್ನು ಶ್ರೀಕಾಂತ್ ಪ್ರಶ್ನಿಸಿದ್ದಾರೆ.
- Home
- News
- India News
- India Latest News Live: ಜಿಂಬಾಬ್ವೆ ವಿರುದ್ಧ ಸೂರ್ಯವಂಶಿ ಅರ್ಧ ಶತಕ ಬಾರಿಸಿದ್ರೂ ಟೀಕೆಗೆ ಒಳಗಾದ ಗಂಭೀರ್.. ಕಾರಣ ಬೇರೆಯದ್ದೇ ಇದೆ!
India Latest News Live: ಜಿಂಬಾಬ್ವೆ ವಿರುದ್ಧ ಸೂರ್ಯವಂಶಿ ಅರ್ಧ ಶತಕ ಬಾರಿಸಿದ್ರೂ ಟೀಕೆಗೆ ಒಳಗಾದ ಗಂಭೀರ್.. ಕಾರಣ ಬೇರೆಯದ್ದೇ ಇದೆ!

ಮುಂಬೈ: ಪ್ರತಿಭಟನೆಯಲ್ಲಿ ಭಾಗಿಯಾದರೆ ಬ್ಯಾಗ್ನಲ್ಲಿ ಡ್ರಗ್ಸ್ ಇಟ್ಟು ಜೀವನ ಹಾಳು ಮಾಡುವುದಾಗಿ ಪೊಲೀಸ್ ಒಬ್ಬರು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದ ಪ್ರಕರಣದ ಬೆನ್ನಲ್ಲೇ, ಮಫ್ತಿಯಲ್ಲಿದ್ದ ಪೊಲೀಸರೊಬ್ಬರು ನೀಟ್ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಅನುಚಿತವಾಗಿ ನಿಯಂತ್ರಿಸಲು ಯತ್ನಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಇದು, ಮುಂಬೈ ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
ದಾದರ್ನ ಶಿವಾಜಿ ಪಾರ್ಕ್ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಹಿಳೆಯರನ್ನೂ ನಿಯಂತ್ರಿಸಲು ಪೊಲೀಸರೊಬ್ಬರು ಯತ್ನಿಸಿದ ವಿಡಿಯೋವನ್ನು ಹಂಚಿಕೊಂಡ ವಿಪಕ್ಷ ನಾಯಕರು, ಆ ಪೊಲೀಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅತ್ತ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಮುಂಬೈ ಪೊಲೀಸರು, ‘ವಿಡಿಯೋವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಪುರುಷರನ್ನು ನಿಯಂತ್ರಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ನಡುವೆ ಬಂದಿದ್ದರಷ್ಟೇ’ ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.
India Latest News Live 25 July 2026ಜಿಂಬಾಬ್ವೆ ವಿರುದ್ಧ ಸೂರ್ಯವಂಶಿ ಅರ್ಧ ಶತಕ ಬಾರಿಸಿದ್ರೂ ಟೀಕೆಗೆ ಒಳಗಾದ ಗಂಭೀರ್.. ಕಾರಣ ಬೇರೆಯದ್ದೇ ಇದೆ!
India Latest News Live 25 July 2026ಮೋದಿ ಸರ್ಕಾರ ವಿದ್ಯಾರ್ಥಿಗಳನ್ನ ದೇಶದ ಶತ್ರುಗಳಂತೆ ಕಾಣುತ್ತೆ - ಸೋನಿಯಾ ಗಾಂಧಿ ವಾಗ್ದಾಳಿ
ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.