11:52 PM (IST) Feb 22

India Latest News Live:AI4Agri 2026 - ಭಾರತದ ಮುಂದಿನ ಕೃಷಿ ಕ್ರಾಂತಿಗೆ AI ಸಾಥ್ - ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದೇನು?

India AI Mission for farmers: ಭಾರತದ ಮುಂದಿನ ಕೃಷಿ ಕ್ರಾಂತಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಾಲನೆ ನೀಡಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 'ಇಂಡಿಯಾ AI ಮಿಷನ್' ಅಡಿಯಲ್ಲಿ, ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆ ಸಮಸ್ಯೆಗಳಿಗೆ AI ಪರಿಹಾರ ನೀಡಲಿದೆ.

Read Full Story
11:34 PM (IST) Feb 22

India Latest News Live:Imran Masood - ಮೋದಿಗೆ ಟ್ರಂಪ್ ಅಂದ್ರೆ ಭಯ, ತಮ್ಮವರ ಮೇಲೆಯೇ ದಾಳಿ - ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಕಿಡಿ

ಪ್ರಧಾನಿ ಮೋದಿ ತಮ್ಮವರ ಮೇಲೆಯೇ ದಾಳಿ ಮಾಡ್ತಾರೆ, ಆದರೆ ಟ್ರಂಪ್‌ರನ್ನು ಟೀಕಿಸೋಕೆ ಅವರಿಗೆ ಧೈರ್ಯ ಇಲ್ಲ ಅಂತ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಕಿಡಿಕಾರಿದ್ದಾರೆ. ಬಿಜೆಪಿಯನ್ನು ಎದುರಿಸಬಲ್ಲ ತಾಕತ್ತು ರಾಹುಲ್ ಗಾಂಧಿಗೆ ಮಾತ್ರ ಇದೆ, INDIA ಒಕ್ಕೂಟದ ಬೇರೆ ನಾಯಕರಿಗೆ ಇಲ್ಲ ಎಂದೂ ಅವರು ಹೇಳಿದ್ದಾರೆ.
Read Full Story
11:09 PM (IST) Feb 22

India Latest News Live:ಕೊನೆಗೂ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ನೀಡಿದ 'ವಿರೋಶ್' ಎಂಬ ಹೆಸರಿನಲ್ಲೇ ತಮ್ಮ ವಿವಾಹವನ್ನು ಆಚರಿಸುವುದಾಗಿ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. 

Read Full Story
10:53 PM (IST) Feb 22

India Latest News Live:T20 World Cup 2026 - ಭಾರತಕ್ಕೆ ಸೌತ್ ಆಫ್ರಿಕಾ ವಿರುದ್ಧ ಮೂರು ನಾಮ! ಟೀಂ ಇಂಡಿಯಾ ಎದುರು ಸೇಡು ತೀರಿಸಿಕೊಂಡ ಹರಿಣಗಳು!

ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 76 ರನ್‌ಗಳ ಹೀನಾಯ ಸೋಲು ಕಂಡಿದೆ. 188 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ 111 ರನ್‌ಗಳಿಗೆ ಸರ್ವಪತನಗೊಂಡು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿದೊಡ್ಡ ಸೋಲನ್ನು ದಾಖಲಿಸಿತು.
Read Full Story
10:33 PM (IST) Feb 22

India Latest News Live:Mani Shankar Aiyar - ರಾಹುಲ್ ಗಾಂಧಿಗೆ INDIA ಒಕ್ಕೂಟದ ಹಿರಿತನ ಬೇಡ, ಮಮತಾ ಬ್ಯಾನರ್ಜಿ ನಾಯಕಿಯಾಗಲಿ ಎಂದ ಹಿರಿಯ ನಾಯಕ!

INDIA ಒಕ್ಕೂಟದ ನಾಯಕತ್ವದಿಂದ ರಾಹುಲ್ ಗಾಂಧಿ ಹಿಂದೆ ಸರಿಯಬೇಕು, ಮಮತಾ ಬ್ಯಾನರ್ಜಿ ಅದರ ಮುಖವಾಗಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಆಗ್ರಹಿಸಿದ್ದಾರೆ. ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಚುನಾವಣೆಯಲ್ಲಿ ಲಾಭವಾಗಲಿದೆ ಎಂದೂ ಅವರು ಹೇಳಿದ್ದಾರೆ.
Read Full Story
10:07 PM (IST) Feb 22

India Latest News Live:ನಟ ನಂದಮೂರಿ ಬಾಲಕೃಷ್ಣ ನಿವಾಸದ ಮುಂದೆ ಭೀಕರ ಅಪಘಾತ - ನಜ್ಜುಗುಜ್ಜಾಯ್ತು 4 ಕೋಟಿ ಮೌಲ್ಯದ ಫೆರಾರಿ ಕಾರು

ಹೈದರಾಬಾದ್‌ನ ಜ್ಯುಬಿಲಿಹಿಲ್ಸ್‌ನಲ್ಲಿ ನಟ ನಂದಮೂರಿ ಬಾಲಕೃಷ್ಣ ಅವರ ನಿವಾಸದ ಮುಂದೆ 4 ಕೋಟಿ ಮೌಲ್ಯದ ಫೆರಾರಿ ಕಾರು ಭೀಕರ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು, ಸರಣಿ ಅಪಘಾತಕ್ಕೆ ಕಾರಣವಾಗಿ ಹಲವರು ಗಾಯಗೊಂಡಿದ್ದಾರೆ. 

Read Full Story
09:01 PM (IST) Feb 22

India Latest News Live:ಮದುವೆಯ ಸುಳಿವು ನೀಡಿದ ಬಿಗ್ಬಾಸ್ ಬೆಡಗಿ - ವೀಡಿಯೋ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್

Tanya Mittal wedding rumors: ಹಿಂದಿ ಬಿಗ್‌ಬಾಸ್ 19ರ ಸ್ಪರ್ಧಿ ತಾನ್ಯಾ ಮಿತ್ತಲ್ ಮದುಮಗಳ ವೇಷದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮದುವೆಯ ಊಹಾಪೋಹಗಳಿಗೆ ಕಾರಣವಾಗಿದೆ. ಸಿದ್ಧತೆ ಆರಂಭವಾಗಿದೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋ ಪೋಸ್ಟ್ ಮಾಡಿರುವುದರಿಂದ ವೀಡಿಯೋ ಜನರ ಕುತೂಹಲ ಹೆಚ್ಚಾಗಿದೆ.

Read Full Story
08:58 PM (IST) Feb 22

India Latest News Live:T20 World Cup - ಗುಡುಗಿದ ಮಿಲ್ಲರ್, ಬ್ರೆವೀಸ್, ಸ್ಟಬ್ಸ್‌; ಭಾರತಕ್ಕೆ ಗೆಲ್ಲಲು ಕಠಿಣ ಟಾರ್ಗೆಟ್ ಕೊಟ್ಟ ಹರಿಣಗಳು

ಆರಂಭಿಕ ಆಘಾತದ ಹೊರತಾಗಿಯೂ, ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವೀಸ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಚೇತರಿಸಿಕೊಂಡಿತು. ಅಂತಿಮವಾಗಿ, ಹರಿಣಗಳ ಪಡೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಭಾರತಕ್ಕೆ ಸವಾಲಿನ ಗುರಿ ನೀಡಿದೆ.
Read Full Story
08:36 PM (IST) Feb 22

India Latest News Live:ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ - ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?

ಯಶಸ್ಸಿಗೆ ಕೇವಲ ಅಂಕಗಳೇ ಮಾನದಂಡವಲ್ಲ, ಅದೃಷ್ಟ ಮತ್ತು ಪ್ರಯತ್ನವೂ ಮುಖ್ಯ. ಈ ಲೇಖನವು ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಸೇರಿದಂತೆ ಹಲವು ಬಾಲಿವುಡ್ ತಾರೆಯರ ಪಿಯುಸಿ ಅಂಕಗಳು ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ವಿವರಿಸುತ್ತದೆ.

Read Full Story
08:17 PM (IST) Feb 22

India Latest News Live:Terror Module - ಎಲ್‌ಇಟಿ ಭಾರಿ ಸಂಚು ಭೇದಿಸಿದ ದೆಹಲಿ ಪೊಲೀಸರು - 8 ಉಗ್ರರ ಬಂಧನ, 7 ಮಂದಿ ಬಾಂಗ್ಲಾ ನುಸುಳುಕೋರರೇ!

ದೆಹಲಿಯಲ್ಲಿ ಉಗ್ರರ ಪರ ಪೋಸ್ಟರ್‌ಗಳು ಕಾಣಿಸಿಕೊಂಡ ಬೆನ್ನಲ್ಲೇ ದೆಹಲಿ ಪೊಲೀಸರ ವಿಶೇಷ ದಳ ಕಾರ್ಯಾಚರಣೆ ನಡೆಸಿದೆ. ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ದೊಡ್ಡ ಜಾಲವನ್ನು ಭೇದಿಸಿದ್ದು, ಕೋಲ್ಕತ್ತಾ ಮತ್ತು ತಿರುಪ್ಪೂರಿನಲ್ಲಿ ಏಳು ಬಾಂಗ್ಲಾದೇಶಿ ಪ್ರಜೆಗಳು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.

Read Full Story
07:39 PM (IST) Feb 22

India Latest News Live:ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ - ಡಿವೋರ್ಸ್​ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ

ಪಂಚಭಾಷಾ ತಾರೆಯಾಗಿ ಯಶಸ್ಸು ಕಂಡ ನಟಿ ರೇವತಿಯವರ ವೈಯಕ್ತಿಕ ಜೀವನ ನೋವಿನಿಂದ ಕೂಡಿತ್ತು. ಪತಿ ಸುರೇಶ್ ಚಂದ್ರ ಮೆನನ್ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡು, ಆ ತಪ್ಪನ್ನು ರೇವತಿಯವರ ಮೇಲೆ ಹಾಕಿದ್ದರಿಂದ ವಿಚ್ಛೇದನ ಪಡೆದರು. ನಂತರ, 48ನೇ ವಯಸ್ಸಿನಲ್ಲಿ IVF ಮೂಲಕ ಮಗಳಿಗೆ ಜನ್ಮ ನೀಡಿ ತಾಯಿಯಾದರು.
Read Full Story
07:14 PM (IST) Feb 22

India Latest News Live:ಇರಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚಿಸಿದ ಸ್ವೀಡನ್, ಸೆರ್ಬಿಯಾ

Countries advised to leave Iran: ಇರಾನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಅಮೆರಿಕದ ಸಂಭವನೀಯ ಮಿಲಿಟರಿ ಕಾರ್ಯಾಚರಣೆಯ ಬೆದರಿಕೆಯ ಹಿನ್ನೆಲೆಯಲ್ಲಿ, ಸೆರ್ಬಿಯಾ ಹಾಗೂ ಸ್ವೀಡನ್ ದೇಶಗಳು ತಮ್ಮ ಪ್ರಜೆಗಳಿಗೆ ತಕ್ಷಣವೇ ಇರಾನ್ ತೊರೆಯುವಂತೆ ಸೂಚಿಸಿವೆ. 

Read Full Story
06:42 PM (IST) Feb 22

India Latest News Live:ಟಿ20 ವಿಶ್ವಕಪ್ - ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; 4 ಬದಲಾವಣೆ

ಐಸಿಸಿ ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಆದರೆ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ತಂಡಕ್ಕೆ ಚಿಂತೆಯಾಗಿದೆ.
Read Full Story
05:31 PM (IST) Feb 22

India Latest News Live:ಪ್ರೀತಿಯ ಮಾಯಾಜಾಲಕ್ಕೆ ಬಿದ್ದು ಸ್ವರ್ಗದಿಂದ ನರಕಕ್ಕೆ ಜಾರಿದ ಅಮೆರಿಕನ್ ಬಾಲೆ - ಪಾಕಿಸ್ತಾನಿ ಯುವಕನ ಮದ್ವೆಯಾದ ಯುವತಿ ಹೇಳಿದ್ದೇನು?

ಪಾಕಿಸ್ತಾನ ಅಂದ್ರೆ ಜಗತ್ತಿನ ಬೇರೆ ದೇಶಗಳು ಮೂಗು ಮುರಿಯೋದೇ ಜಾಸ್ತಿ. ರಾಜಕೀಯ ಅಸ್ಥಿರತೆ, ತೀವ್ರ ಹಣದುಬ್ಬರದ ಕಾರಣದಿಂದಾಗಿ ಅಲ್ಲಿನ ನಿವಾಸಿಗಳೇ ದೇಶ ಬಿಟ್ಟು ದೂರ ಹೋಗಿ ನೆಲೆಸಲು ಬಯಸುತ್ತಾರೆ. ಹೀಗಿರುವಾಗ ಅಲ್ಲಿಗೆ ಮದುವೆಯಾಗಿ ಬಂದ ಅಮೆರಿಕನ್ ಯುವತಿ ತಮ್ಮ ಬದುಕಿನ ಕತೆ ಹೇಳಿಕೊಂಡಿದ್ದು ವೈರಲ್ ಆಗಿದೆ.

Read Full Story
04:37 PM (IST) Feb 22

India Latest News Live:T20 World Cup - ಟೀಂ ಇಂಡಿಯಾ ಸೂಪರ್ 8 ಹಂತದಲ್ಲೇ ಔಟ್! ಪಾಕ್ ಆಟಗಾರನಿಂದ ಶಾಕಿಂಗ್ ಭವಿಷ್ಯ!

2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ ತಲುಪುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಗಂಭೀರ ಹೇಳಿಕೆ ನೀಡಿದ್ದಾರೆ. ಸೂಪರ್ 8 ಹಂತದಲ್ಲೇ ಭಾರತ ಟೂರ್ನಿಯಿಂದ ಹೊರಬೀಳಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
Read Full Story
04:34 PM (IST) Feb 22

India Latest News Live:Kishtwar Encounter - ಭಾರತೀಯ ಸೇನೆಯ ಭರ್ಜರಿ ಆಪರೇಷನ್, ಕಿಶ್ತ್ವಾರದಲ್ಲಿ ಇಬ್ಬರು ಜೈಶ್ ಉಗ್ರರ ಹತ್ಯೆ, 2 ಎಕೆ-47 ರೈಫಲ್ ವಶ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯ ಚಾಟ್ರೂ ಪ್ರದೇಶದಲ್ಲಿ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಕಾರ್ಯಾಚರಣೆ ವೇಳೆ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Read Full Story
04:28 PM (IST) Feb 22

India Latest News Live:ಹೆಂಗಸ್ರು ಬಿಟ್ರು- ಗಂಡಸ್ರು ಅಪ್ಪಿಕೊಂಡ್ರು - ಈಗ ಮಂಗಳಸೂತ್ರದ ಸರದಿ! ಪ್ರಿಯಾಂಕಾ ಪತಿಯ ಬ್ರೇಸ್​ಲೈಟ್​ ನೋಡಿ

ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಆಭರಣಗಳನ್ನು ತ್ಯಜಿಸುತ್ತಿದ್ದರೆ, ಪುರುಷರು ಮಹಿಳೆಯರ ಆಭರಣಗಳನ್ನು ಧರಿಸುವ ಟ್ರೆಂಡ್ ಶುರುವಾಗಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಮಂಗಳಸೂತ್ರದ ವಿನ್ಯಾಸದ ಬ್ರೇಸ್ಲೆಟ್ ಧರಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

Read Full Story
04:19 PM (IST) Feb 22

India Latest News Live:ಕುಟುಂಬದವರೊಂದಿಗೆ ಕುಳಿತು ತಿಂಡಿ ತಿನ್ತಿದ್ದಾಗಲೇ ಬಂತು ಕಾಲನ ಕರೆ - ಕುಸಿದು ಬಿದ್ದು 21ರ ತರುಣ ಸಾವು

ಕೇರಳದ ಕೊಚ್ಚಿಯಲ್ಲಿ 21 ವರ್ಷದ ಯುವಕನೋರ್ವ ಕುಟುಂಬದೊಂದಿಗೆ ಉಪಹಾರ ಸೇವಿಸುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಚರ್ಚ್‌ನಿಂದ ಬಂದ ನಂತರ ತಿಂಡಿ ತಿನ್ನುವಾಗ ಈ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಬೇಕಿದೆ.

Read Full Story
03:35 PM (IST) Feb 22

India Latest News Live:ಆತಂಕಕಾರಿ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದು ಲಿಫ್ಟ್‌ನಲ್ಲಿ ಸಿಲುಕಿದ ಇಬ್ಬರು ಪುಟ್ಟ ಮಕ್ಕಳ ರಕ್ಷಿಸಿದ ಬಾಲಕಿ

girl saves toddlers from lift: ಹಠಾತ್ತನೆ ಸ್ಥಗಿತಗೊಂಡ ಲಿಫ್ಟ್‌ನಲ್ಲಿ ಸಿಲುಕಿದ್ದ ಇಬ್ಬರು ಪುಟ್ಟ ಮಕ್ಕಳನ್ನು, ಬಾಲಕಿಯೊಬ್ಬಳು ತನ್ನ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾಳೆ. ತನ್ನ ಕೈ ಮತ್ತು ಕಾಲುಗಳನ್ನು ಬಳಸಿ ಲಿಫ್ಟ್ ಬಾಗಿಲನ್ನು ತೆರೆದು ಮಕ್ಕಳನ್ನು ಹೊರತಂದ ಈಕೆಯ ಸಾಹಸದ ವಿಡಿಯೋ ವೈರಲ್ ಆಗಿದೆ.

Read Full Story
02:09 PM (IST) Feb 22

India Latest News Live:ಮದುವೆಗೆ ದಿನ ಮೊದಲು ಸಾವಿಗೆ ಶರಣಾದ ಶಿಕ್ಷಕ ಸೋದರಿಯರು - ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕ

ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದ ಸೋದರಿಯರಿಬ್ಬರೂ ತಮ್ಮದೇ ಮದುವೆಗೆ ಇನ್ನೇನು ಒಂದು ದಿನ ಬಾಕಿ ಇರುವಾಗ ಶವವಾಗಿ ಪತ್ತೆಯಾಗಿದ್ದಾರೆ. ರಾಜಸ್ಥಾನ ಜೋಧ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮದುವೆಯ ಸಂಭ್ರಮವಿರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Read Full Story