MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ: ಡಿವೋರ್ಸ್​ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ

ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ: ಡಿವೋರ್ಸ್​ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ

ಪಂಚಭಾಷಾ ತಾರೆಯಾಗಿ ಯಶಸ್ಸು ಕಂಡ ನಟಿ ರೇವತಿಯವರ ವೈಯಕ್ತಿಕ ಜೀವನ ನೋವಿನಿಂದ ಕೂಡಿತ್ತು. ಪತಿ ಸುರೇಶ್ ಚಂದ್ರ ಮೆನನ್ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡು, ಆ ತಪ್ಪನ್ನು ರೇವತಿಯವರ ಮೇಲೆ ಹಾಕಿದ್ದರಿಂದ ವಿಚ್ಛೇದನ ಪಡೆದರು. ನಂತರ, 48ನೇ ವಯಸ್ಸಿನಲ್ಲಿ IVF ಮೂಲಕ ಮಗಳಿಗೆ ಜನ್ಮ ನೀಡಿ ತಾಯಿಯಾದರು.

3 Min read
Author : Suchethana D
Published : Feb 22 2026, 07:39 PM IST
Share this Photo Gallery
  • FB
  • TW
  • Linkdin
  • Whatsapp
16
ಜೀವನದಲ್ಲಿ ನೋವು
Image Credit : Social Media

ಜೀವನದಲ್ಲಿ ನೋವು

ಚಿತ್ರತಾರೆಯರ ಜೀವನ ಕಲರ್​ಫುಲ್​ ಎಂದು ಅಂದುಕೊಳ್ಳುವುದು ಉಂಟು. ಆದರೆ ಒಬ್ಬೊಬ್ಬರದ್ದು ಒಂದೊಂದು ಕಥೆ, ಅದರಲ್ಲಿಯೂ ನೋವಿನ ಸ್ಟೋರಿಗಳೇ ಹೆಚ್ಚು. ಸಾಮಾನ್ಯ ಜನರಂತೆಯೇ, ಸೆಲೆಬ್ರಿಟಿಗಳ ಲೈಫ್​ನಲ್ಲಿಯೂ ನೋವಿನ ಮದುವೆ, ಮಕ್ಕಳಾಗದೇ ಹಿಂಸೆ, ಮಕ್ಕಳಾಗದೇ ಇರುವುದಕ್ಕೆ ಚುಚ್ಚು ಮಾತುಗಳು ಇವೆಲ್ಲವೂ ಕಾಮನ್​. ಅಂಥದ್ದೇ ಒಂದು ನೋವಿನ ಸ್ಟೋರಿ ನಟಿ ರೇವತಿ ಅವರದ್ದು. ಅವರಿಗೆ ಈಗ 59 ವರ್ಷ ವಯಸ್ಸು. ಕನ್ನಡ ಸೇರಿದಂತೆ, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚ ಭಾಷಾ ತಾರೆ ಎನಿಸಿಕೊಂಡಿದ್ದಾರೆ ನಟಿ ರೇವತಿ. ಮೂಲತಃ ಕೆರಳದವರಾದ ಇವರು ನಟನೆ ಶುರು ಮಾಡಿದ್ದು ತಮಿಳು ಸಿನಿಮಾ ಮೂಲಕ. 17 ವರ್ಷದವರಿದ್ದಾಗ ನಾಯಕಿಯಾದವರು. ಮೊದಲ ಸಿನಿಮಾದಲ್ಲಿಯೇ ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದರು. ಕನ್ನಡದಲ್ಲಿ ಶಂಕರ್ ನಾಗ್ (Shankar Nag)ಅವರ ಜೊತೆ 'ಇದು ಸಾಧ್ಯ' ಸಿನಿಮಾ ಮತ್ತು ಡಾ. ವಿಷ್ಣುವರ್ಧನ್ ಅವರೊಡನೆ ನಿಶ್ಶಬ್ಧ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

26
ಪಂಚಭಾಷಾ ನಟಿ
Image Credit : Instagram

ಪಂಚಭಾಷಾ ನಟಿ

ಜೊತೆಗೆ, ಅರುಂಧತಿ ನಾಗ್ ಅವರ ರಂಗಶಂಕರದಲ್ಲಿ ಕೆಲವು ನಾಟಕಗಳಲ್ಲಿ ಕೂಡ ನಟಿಸಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಲವ್ ಚಿತ್ರದ ಮೂಲಕ ರೇವತಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದರ ನಂತರ ಅವರು ಸಲ್ಮಾನ್ ಮತ್ತು ಶಿಲ್ಪಾ ಶೆಟ್ಟಿ ಅಭಿನಯದ 'ಫಿರ್ ಮಿಲೇಂಗೆ' ಚಿತ್ರದಲ್ಲೂ ಕಾಣಿಸಿಕೊಂಡರು. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ವಿವಿಧ ವಿಭಾಗಗಳಲ್ಲಿ ಆರು ಸೌತ್ ಫಿಲ್ಮ್‌ಫೇರ್ (Filmfare)ಪ್ರಶಸ್ತಿಗಳನ್ನು ಒಳಗೊಂಡಂತೆ ಅವರು ಇಲ್ಲಿಯವರೆಗೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವರ ಅಭಿನಯದ ಮೌನರಾಗಂ ಕನ್ನಡಕ್ಕೆ ರಿಮೇಕ್ ಕೂಡ ಆಗಿದೆ. ನಿರ್ದೇಶಕಿ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ ರೇವತಿ. ಸದ್ಯ ಅಷ್ಟಾಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣವನ್ನೂ ಈಚೆಗೆ ನಟಿ ಹೇಳಿದ್ದರು.

Related Articles

Related image1
ಆರೋಗ್ಯಕ್ಕೆ ಬೇಕು ತಂಗಳನ್ನ: ನಟರಾದ ಸಪ್ತಮಿ ಗೌಡ- ನೀನಾಸಂ ಸತೀಶ್​ ಹೇಳಿದ ಮಾತು ಕೇಳಿ
Related image2
ದರ್ಶನ್​ ಬಗ್ಗೆ ಗುಡ್​ನ್ಯೂಸ್​ ಕೊಟ್ಟ ವಿಜಯಲಕ್ಷ್ಮಿ: ಕುಣಿದಾಡಿದ ಅಭಿಮಾನಿಗಳು- ಬಿಡುಗಡೆ ಯಾವಾಗ?
36
ಈಗಲೂ ಛಾನ್ಸ್​
Image Credit : Instagram

ಈಗಲೂ ಛಾನ್ಸ್​

ನನ್ನ ವಯಸ್ಸಿಗೆ ತಕ್ಕಂತೆ ನನಗೆ ಪಾತ್ರಗಳು ಸಿಗುತ್ತಿವೆ. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಆದರೆ ಸಿಗುತ್ತಿರುವ ಪಾತ್ರ ಸವಾಲು ಎಂಬ ಭಾವನೆ ಹುಟ್ಟಿಸುತ್ತಿಲ್ಲ. ಎಷ್ಟು ಸಿನಿಮಾ ಮಾಡಿದ್ದೇನೆ ಎಂಬುದಕ್ಕಿಂತ ಪಾತ್ರಗಳ ಮೌಲ್ಯ ಮುಖ್ಯವಾಗುತ್ತದೆ. ಅಂತಹ ಮೌಲ್ಯಯುತ ಪಾತ್ರ ಮಾಡಲು ನನಗೆ ಬಹಳ ಇಷ್ಟ.ಅಂತಹ ಪಾತ್ರಗಳನ್ನು ಹುಡುಕುತ್ತಿರುವುದರಿಂದಲೇ ಇಂದು ನಾನು 2 ವರ್ಷಗಳಿಗೊಮ್ಮೆ 1 ಚಿತ್ರದಲ್ಲಿ ಅಭಿನಯಿಸುತ್ತಿರುವುದು ಎಂದಿದ್ದರು.

46
ಮದುವೆಯೆಂಬ ನೋವು
Image Credit : Instagram

ಮದುವೆಯೆಂಬ ನೋವು

ರೇವತಿಯ (Revathi) ವೈಯಕ್ತಿಕ ಜೀವನ ಮಾತ್ರ ಕಲರ್‌ಫುಲ್‌ ಆದದ್ದಲ್ಲ. ಇದು ನೋವಿನ ಬೀಡು. ಹೌದು! ನಟಿ ರೇವತಿ, 1986 ರಲ್ಲಿ ನಿಮಾಟೋಗ್ರಾಫರ್ ಸುರೇಶ್ ಚಂದ್ರ ಮೆನನ್ (Suresh Chandra Menon) ಅವರನ್ನು ಪ್ರೀತಿಸಿ ವಿವಾಹವಾದರು. ಈ ಸಂದರ್ಭದಲ್ಲಿ ಅವರು ಸಿನಿಮಾ ಕ್ಷೇತ್ರದಲ್ಲಿ ಪೀಕ್‌ನಲ್ಲಿದ್ದರು. ಇವರಿಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೇ ಕೆಲಸ ಮಾಡಿದ್ದಾರೆ. ಎರಡು ಸಿನಿಮಾಗಳಲ್ಲಿ, ರೇವತಿ ಅವರು ತಮ್ಮ ಜೀವನದ ಗಳಿಕೆಯನ್ನು ಇನ್ವೆಸ್ಟ್ ಮಾಡಿ, ನಿರ್ಮಾಣ ಮಾಡಿದ್ದರು. ಸುರೇಶ್ ನಿರ್ದೇಶನ ಮಾಡಿದ್ದರು. ಎರಡೂ ಚಿತ್ರಗಳು ಹಿಟ್ ಆದರೂ, ಒಂದು ಸಿನಿಮಾ ಭಾರಿ ನಷ್ಟಕ್ಕೆ ಒಳಗಾಗಿತು. ಇದಾಗಲೇ ದುಡಿಮೆಯನ್ನು ಕಳಕೊಂಡಿದ್ದರು ರೇವತಿ. ಹಣಕ್ಕಾಗಿ ಪರದಾಡುವ ಸ್ಥಿತಿ ಉಂಟಾದಾಗ ಸುರೇಶ್‌ ಅವರು ಈ ಸಂದರ್ಭದಲ್ಲಿ ಮಕ್ಕಳಾದರೆ ಕಷ್ಟ ಎಂದು ಆಪರೇಷನ್‌ ಮಾಡಿಸಿಕೊಂಡುಬಿಟ್ಟರಂತೆ.

56
ಮಕ್ಕಳಾಗಿದ್ದಕ್ಕೆ ಡಿವೋರ್ಸ್​
Image Credit : Google

ಮಕ್ಕಳಾಗಿದ್ದಕ್ಕೆ ಡಿವೋರ್ಸ್​

ಈ ವಿಷಯ ಖುದ್ದು ರೇವತಿಯವರಿಗೂ ತಿಳಿದಿರಲಿಲ್ಲವಂತೆ. ಆದರೆ ವರ್ಷಗಳಾದರೂ ಮಕ್ಕಳಾಗದ್ದರಿಂದ ಮನೆಯಲ್ಲಿ ಕೇಳಲು ಶುರು ಮಾಡಿದಾಗ, ರೇವತಿಯವರದ್ದೇ ತಪ್ಪಿಗೆ ಎಂದುಬಿಟ್ಟಿದ್ದರು ಸುರೇಶ್‌. (Suresh) ಮೊದಲಿಗೆ ಇದು ನಿಜ ಎಂದುಕೊಂಡಿದ್ದರೂ ನಂತರ ಸತ್ಯದ ಅರಿವಾಯಿತು ರೇವತಿಯವರಿಗೆ. ಇದು ಅವರಿಗೆ ಆಘಾತ ತಂದಿತ್ತು. ಪತಿ ಈ ರೀತಿ ಮೋಸ ಮಾಡಿರುವುದನ್ನು ಸಹಿಸಿಕೊಳ್ಳದ ಆಕೆ, ಬಹಳ ನೋವುಂಡರು. ಆದರೆ ಇದರ ನಡುವೆಯೇ ಸುರೇಶ್‌ ಅವರ ಹೆಸರಿನಲ್ಲಿ ಸ್ಟುಡಿಯೋ ಆರಂಭಿಸಿ ಅವರಿಗಾಗಿ ಶೇರ್ ಗಳನ್ನು ಖರೀದಿಸಿದ್ದರು. ಇಬ್ಬರು ಸೇರಿ ತಮಿಳು ಕಿರುತೆರೆಗೆ ಹಲವಾರು ಧಾರಾವಾಹಿಗಳನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಿ, ನಟನೆ ಕೂಡ ಮಾಡಿದರು. ಅವೆಲ್ಲವೂ ಸಕ್ಸಸ್‌ ಆಗುತ್ತಲೇ ಬಂದವು. ಆದರೆ ಪತಿ ಆಪರೇಷನ್‌ (Opeation) ಮಾಡಿಸಿಕೊಂಡು ಎಲ್ಲರೆದರು ತಮ್ಮನ್ನು ಬಂಜೆ ಎಂದು ಹೇಳುತ್ತಿದ್ದುದನ್ನು ಅರಿತ ರೇವತಿಯವರು ತುಂಬಾ ನೊಂದು ಡಿವೋರ್ಸ್‌ ಕೊಟ್ಟರು.

66
48ನೇ ವಯಸ್ಸಿಗೆ ಅಮ್ಮ
Image Credit : our own

48ನೇ ವಯಸ್ಸಿಗೆ ಅಮ್ಮ

ಮದುವೆಯಾದ 16 ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು. ವಿಚ್ಛೇದನದ ಕೆಲವು ವರ್ಷಗಳ ನಂತರ ನಟಿ ವೀರ್ಯ ದಾನಿಗಳ ಸಹಾಯದಿಂದ IVF (ಇನ್ ವಿಟ್ರೋ ಫರ್ಟಿಲೈಸೇಶನ್) ಮೂಲಕ 48 ನೇ ವಯಸ್ಸಿನಲ್ಲಿ ಅಮ್ಮನಾದರು. ಮಗಳು ಮಹಿಗೆ 8 ವರ್ಷ. ಆಕೆಯಿಂದ ತಮ್ಮ ಜೀವನಕ್ಕೆ ಅರ್ಥ ಸಿಕ್ಕಿದೆ ಎಂದಿರುವ ರೇವತಿ, ಮಗಳು ಸ್ವಲ್ಪ ದೊಡ್ಡವಳಾದ ಮೇಲೆ ಎಲ್ಲಾ ವಿಷಯಗಳನ್ನು ಹೇಳುವುದಾಗಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಬಾಲಿವುಡ್
ಸ್ಯಾಂಡಲ್ವುಡ್ ಫಿಲ್ಮ್
ಸಂಬಂಧಗಳು
ಮಹಿಳೆಯರು
ಮಕ್ಕಳು

Latest Videos
Recommended Stories
Recommended image1
Samantha: ಸಮಂತಾ ಫ್ಯಾನ್ಸ್‌ಗೆ ಗುಡ್ ನ್ಯೂಸ್: 'ಮಾ ಇಂಟಿ ಬಂಗಾರಂ' ರಿಲೀಸ್ ಡೇಟ್ ಫಿಕ್ಸ್!
Recommended image2
ದರ್ಶನ್​ ಬಗ್ಗೆ ಗುಡ್​ನ್ಯೂಸ್​ ಕೊಟ್ಟ ವಿಜಯಲಕ್ಷ್ಮಿ: ಕುಣಿದಾಡಿದ ಅಭಿಮಾನಿಗಳು- ಬಿಡುಗಡೆ ಯಾವಾಗ?
Recommended image3
ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು: ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್​
Related Stories
Recommended image1
ಆರೋಗ್ಯಕ್ಕೆ ಬೇಕು ತಂಗಳನ್ನ: ನಟರಾದ ಸಪ್ತಮಿ ಗೌಡ- ನೀನಾಸಂ ಸತೀಶ್​ ಹೇಳಿದ ಮಾತು ಕೇಳಿ
Recommended image2
ದರ್ಶನ್​ ಬಗ್ಗೆ ಗುಡ್​ನ್ಯೂಸ್​ ಕೊಟ್ಟ ವಿಜಯಲಕ್ಷ್ಮಿ: ಕುಣಿದಾಡಿದ ಅಭಿಮಾನಿಗಳು- ಬಿಡುಗಡೆ ಯಾವಾಗ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved