ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಪಾರ್ಟ್ನರ್ ಮಹಿಕಾ ಶರ್ಮಾಗೆ 10 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಕಾರಿಗೆ ಮಹಿಕಾ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಲೇಖನವು ಕಾರಿನ ವಿಶೇಷತೆಗಳೇನು ನೋಡೋಣ ಬನ್ನಿ.
- Home
- News
- India News
- India Latest News Live: ಗೆಳತಿ ಮಹಿಳಾಗೆ ಕೋಟ್ಯಾಂತರ ಮೌಲ್ಯದ ಫೆರಾರಿ ಕಾರು ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ! ಬೆಲೆ ಕೇಳಿ ಫ್ಯಾನ್ಸ್ ಶಾಕ್, ಏನಿದರ ಸ್ಪೆಷಾಲಿಟಿ?
India Latest News Live: ಗೆಳತಿ ಮಹಿಳಾಗೆ ಕೋಟ್ಯಾಂತರ ಮೌಲ್ಯದ ಫೆರಾರಿ ಕಾರು ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ! ಬೆಲೆ ಕೇಳಿ ಫ್ಯಾನ್ಸ್ ಶಾಕ್, ಏನಿದರ ಸ್ಪೆಷಾಲಿಟಿ?

ಏರ್ ಇಂಡಿಯಾ ವಿಮಾನ ಮತ್ತೊಂದು ಎಡವಟ್ಟು ಮಾಡಿ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ದೆಹಲಿ ಕೆನಡಾ ಏರ್ ಇಂಡಿಯಾ ವಿಮಾನ ಬರೋಬ್ಬರಿ 5 ಗಂಟೆ ಹಾರಾಟದ ಬಳಿಕ ಅಧಿಕಾರಿಗಳಿಗೆ ತಾವು ಕೆನಡಾಗೆ ಕಳುಹಿಸಿದ ವಿಮಾನಕ್ಕೆ ವಿದೇಶದಲ್ಲಿ ಲ್ಯಾಂಡ್ ಆಗಲು ಅನುಮತಿ ಇಲ್ಲ ಅನ್ನೋದು ಜ್ಞಾನೋದಯವಾಗಿದೆ. ತಕ್ಷಣವೇ ಏರ್ ಇಂಡಿಯಾ ವಿಮಾನ ಯೂ ಟೂರ್ನ್ ಪಡೆದು ಮರಳಿ ದೆಹಲಿಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. ಅಧಿಕಾರಿಗಳಿಗೆ ತಪ್ಪಿನ ಅರಿವಾದಾಗ ವಿಮಾನ ಚೀನಾ ಗಡಿ ದಾಟಿತ್ತು. ಪಂಚ ರಾಜ್ಯ ಚುನಾವಣೆ ಅಪ್ಡೇಟ್, ಮದ್ಯಪ್ರಾಚ್ಯ ಯುದ್ಧ, ತೈಲ ಹಾಗೂ ಗ್ಯಾಸ್ ಕೊರತೆ ಸೇರಿದಂತೆ ಇಂದಿನ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ.
India Latest News Live 21 March 2026ಗೆಳತಿ ಮಹಿಳಾಗೆ ಕೋಟ್ಯಾಂತರ ಮೌಲ್ಯದ ಫೆರಾರಿ ಕಾರು ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ! ಬೆಲೆ ಕೇಳಿ ಫ್ಯಾನ್ಸ್ ಶಾಕ್, ಏನಿದರ ಸ್ಪೆಷಾಲಿಟಿ?
India Latest News Live 21 March 2026ಗುರೂಜಿ ರಾಸಲೀಲೆ ವಿಡಿಯೋ ಕೇಸ್ನಲ್ಲಿ ಮಹತ್ವದ ಬೆಳವಣಿಗೆ, ಮಹಿಳಾ ಆಯೋಗ ಮುಖ್ಯೆಸ್ಥೆ ರಾಜೀನಾಮೆ
ಗುರೂಜಿ ರಾಸಲೀಲೆ ವಿಡಿಯೋ ಕೇಸ್ನಲ್ಲಿ ಮಹತ್ವದ ಬೆಳವಣಿಗೆ, ಮಹಿಳಾ ಆಯೋಗ ಮುಖ್ಯೆಸ್ಥೆ ರಾಜೀನಾಮೆ, 35ರ ಮಹಿಳೆಯನ್ನು3 ವರ್ಷದಿಂದ ಬಳಸಿಕೊಂಡ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಗುರೂಜಿ ಪ್ರಕರಣ ಇದೀಗ ಕೆಲ ಟ್ವಿಸ್ಟ್ ಪಡೆದುಕೊಂಡಿದೆ.
India Latest News Live 21 March 2026Dhurandhar - 'ಧುರಂಧರ್' ಸಿನಿಮಾ ನೋಡುವವರು ಬಿಜೆಪಿಗೆ ವೋಟ್ ಹಾಕ್ತಾರೆ, ಬಿರುಗಾಳಿ ಎಬ್ಬಿಸಿದ ಅಸ್ಸಾಂ ಸಿಎಂ ಹೇಳಿಕೆ!
India Latest News Live 21 March 2026ಐಪಿಎಲ್ ಆರಂಭಕ್ಕೂ ಮುನ್ನವೇ ತಂಡಗಳಿಗೆ ಆಘಾತಕಾರಿ ಸುದ್ದಿ! ಹಲವು ತಂಡಗಳಿಗೆ ಗಾಯದ ಟೆನ್ಶನ್!
ಐಪಿಎಲ್ 2024 ಆರಂಭಕ್ಕೆ ಮುನ್ನವೇ ಹಲವು ಫ್ರಾಂಚೈಸಿಗಳು ಆಟಗಾರರ ಗಾಯದ ಸಮಸ್ಯೆಯಿಂದ ಕಂಗೆಟ್ಟಿವೆ. ಜೋಶ್ ಹೇಜಲ್ವುಡ್, ಪ್ಯಾಟ್ ಕಮಿನ್ಸ್ರಂತಹ ಪ್ರಮುಖರು ಆರಂಭಿಕ ಪಂದ್ಯಗಳಿಗೆ ಗೈರಾದರೆ, ಸ್ಯಾಮ್ ಕರನ್, ನೇಥನ್ ಎಲ್ಲಿಸ್ರಂತಹ ಆಟಗಾರರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
India Latest News Live 21 March 2026Dhruv Rathee - 'ಧುರಂಧರ್ 2' ಕಳಪೆ ಪ್ರೊಪಗಾಂಡ ಸಿನಿಮಾ, ಆದಿತ್ಯ ಧರ್ ಬಿಜೆಪಿಯ ಪ್ರಚಾರಕ; ಧ್ರುವ್ ರಾಠಿ ಕಿಡಿ
ಯೂಟ್ಯೂಬರ್ ಧ್ರುವ್ ರಾಥಿ ಅವರು 'ಧುರಂಧರ್ 2' ಚಿತ್ರವನ್ನು ಕಳಪೆ 'ಪ್ರೊಪಗಾಂಡ' ಎಂದು ಟೀಕಿಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರನ್ನು 'ಬಿಜೆಪಿ ಪ್ರಚಾರಕ' ಎಂದು ಕರೆದಿದ್ದು, ಈ ಚಿತ್ರದ ಮೂಲಕ ಅದು ಎಲ್ಲರಿಗೂ ತಿಳಿಯಲಿದೆ ಎಂದಿದ್ದಾರೆ.
India Latest News Live 21 March 2026Iran War - ಅಬ್ಬಾ ಕೊನೆಗೂ ಯುದ್ಧ ಮುಗೀತಾ? ವಾರ್ ನಿಲ್ಲಿಸುವ ಸುಳಿವು ಕೊಟ್ಟ ಟ್ರಂಪ್! ಹೇಳಿದ್ದೇನು?
ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗಳು ಬಹುತೇಕ ಗುರಿ ತಲುಪಿವೆ ಮತ್ತು ಅಲ್ಲಿನ ಸರ್ಕಾರವನ್ನು ಬದಲಿಸುವ ಪ್ರಯತ್ನ ಯಶಸ್ವಿಯಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕದನ ವಿರಾಮದ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಹಾರ್ಮುಜ್ ವಿಚಾರದಲ್ಲಿ ನ್ಯಾಟೋವನ್ನು ಟೀಕಿಸಿದ್ದಾರೆ.
India Latest News Live 21 March 2026ಕೆನಡಾ ಪ್ರವೇಶಕ್ಕೆ ಅನುಮತಿ ಇಲ್ಲದ ವಿಮಾನ
ಅಧಿಕಾರಿಗಳು ಬೋಯಿಂಗ್ 77-300 ER ವಿಮಾನದ ಬದಲು ಬೋಯಿಂಗ್ 777 ವಿಮಾನ AI185ವನ್ನು ಕೆನಡಾಗೆ ರೂಟ್ ಮಾಡಿದ್ದಾರೆ. ಪ್ರಯಾಣಿಕರ ಹೊತ್ತು ವಿಮಾನ ಚೀನಾ ಗಡಿ ದಾಟಿ ಸಾಗುತ್ತಿದ್ದಂತೆ ಅಧಿಕಾರಿಗಳಿಗೆ ತಪ್ಪಿನ ಅರಿವಾಗಿದೆ. ಬೋಯಿಂಗ್ 777 ವಿಮಾನಕ್ಕೆ ಕೆನಾಡ ಪ್ರವೇಶಿಸುವ ಅನುಮತಿ ಇರಲಿಲ್ಲ.