'ಧುರಂಧರ್ 2' ಸಿನಿಮಾ ಬಗ್ಗೆ ವಿವಾದ ಜೋರಾಗುತ್ತಿದೆ. ಈಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ವಕ್ತಾರ ವಾರಿಸ್ ಪಠಾಣ್ ಈ ಸಿನಿಮಾವನ್ನು 'ಪ್ರಾಪಗಾಂಡ' ಎಂದು ನೇರವಾಗಿ ಕರೆದಿದ್ದಾರೆ.

AIMIM ಪಕ್ಷದ ವಕ್ತಾರ ವಾರಿಸ್ ಪಠಾಣ್ ಅವರು 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಿನಿಮಾ ಮುಸ್ಲಿಮರನ್ನು ಖಳನಾಯಕರಂತೆ ತೋರಿಸಿ ಸಮಾಜದಲ್ಲಿ ದ್ವೇಷ ಹರಡುತ್ತಿರುವ 'ಪ್ರಾಪಗಾಂಡ' ಚಿತ್ರ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಬಾಲಿವುಡ್‌ನ 'ಧುರಂಧರ್: ದಿ ರಿವೆಂಜ್' ಸಿನಿಮಾ ಬಗ್ಗೆ ವಿವಾದ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈಗ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ವಕ್ತಾರ ವಾರಿಸ್ ಪಠಾಣ್ ಈ ಸಿನಿಮಾವನ್ನು 'ಪ್ರಾಪಗಾಂಡ' ಎಂದು ನೇರವಾಗಿ ಕರೆದಿದ್ದಾರೆ. ಇಂತಹ ಚಿತ್ರಗಳು ಸಮಾಜದಲ್ಲಿ ದ್ವೇಷ ಹರಡುತ್ತವೆ, ಹಾಗಾಗಿ ಇವನ್ನು ನಿಷೇಧಿಸಬೇಕು ಅಂತ ಅವರು ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ ನಟಿ ರಮ್ಯಾ ಸ್ಪಂದನ, ಪ್ರಕಾಶ್ ರಾಜ್ ಮತ್ತು ಯೂಟ್ಯೂಬರ್ ಧ್ರುವ ರಾಠಿ ಕೂಡ ಈ ಚಿತ್ರವನ್ನು ಟೀಕಿಸಿದ್ದರು. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ನಾನು ಇಂಥಾ ಕಳಪೆ ಪ್ರಾಪಗಾಂಡ ಸಿನಿಮಾ ನೋಡಲ್ಲ: ವಾರಿಸ್ ಪಠಾಣ್

ಮುಂಬೈನಲ್ಲಿ ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವಾರಿಸ್ ಪಠಾಣ್, "ನಾನು ಸುಳ್ಳನ್ನೇ ಹರಡುವ ಇಂತಹ ಅಸಂಬದ್ಧ, ಪ್ರಾಪಗಾಂಡ ಸಿನಿಮಾಗಳನ್ನು ನೋಡುವುದಿಲ್ಲ. ಸ್ವಲ್ಪ ಹಣ ಗಳಿಸುವುದಕ್ಕಾಗಿ ದ್ವೇಷ ಮತ್ತು ಸುಳ್ಳನ್ನು ಹರಡುವ ಕೆಲವು ಅಗ್ಗದ ವ್ಯಕ್ತಿಗಳಿದ್ದಾರೆ. ಅವರಿಗೆ ಬೇರೇನೂ ಮಾಡಲು ಬರುವುದಿಲ್ಲ. ನೋಟು ಅಮಾನ್ಯೀಕರಣದಂತಹ ನೈಜ ಸಮಸ್ಯೆಗಳನ್ನು ಇವರು ಬಳಸಿಕೊಳ್ಳುತ್ತಾರೆ. ಆದರೆ ಜನರು ಲೈನ್‌ನಲ್ಲಿ ನಿಂತಿದ್ದ ಸತ್ಯ ಎಲ್ಲರಿಗೂ ಗೊತ್ತಿದೆ," ಎಂದು ಹೇಳಿದರು.

"ಮುಸ್ಲಿಮರನ್ನು ವಿಲನ್ ಮಾಡಿ ಕೋಟಿ ಕೋಟಿ ಗಳಿಸ್ತಿದ್ದಾರೆ"

ಪಠಾಣ್ ಮಾತು ಮುಂದುವರಿಸಿ, "ಇಂತಹ ಸಿನಿಮಾಗಳು ಮುಸ್ಲಿಮರನ್ನು ಖಳನಾಯಕರನ್ನಾಗಿ ತೋರಿಸಿ ಕೋಟಿಗಟ್ಟಲೆ ಹಣ ಗಳಿಸುತ್ತಿವೆ. ಸಿನಿಮಾ ಮಾಡುವುದಾದರೆ ಮನರಂಜನೆಗೆ ಮಾಡಿ ಅಥವಾ ನಿಜವಾದ ಇತಿಹಾಸ ತೋರಿಸಿ. ಜನರನ್ನು ಖುಷಿಪಡಿಸಲು ಸಿನಿಮಾ ಮಾಡಿ, ದ್ವೇಷ ಹರಡಲು ಅಲ್ಲ. ಸರ್ಕಾರ ಇಂತಹ ಚಿತ್ರಗಳನ್ನು ನಿಷೇಧಿಸಬೇಕು. ಎಪ್‌ಸ್ಟೀನ್ ಫೈಲ್ಸ್‌ನಂತಹ ವಿಷಯಗಳ ಮೇಲೆ ಸಿನಿಮಾ ಮಾಡಿ. ಪಾಕಿಸ್ತಾನದ ವಿರುದ್ಧ ಸಿನಿಮಾ ಮಾಡಿದ್ದರೆ, ಅದನ್ನು ಅಲ್ಲಿ ಹೋಗಿ ತೋರಿಸಿ, ಇಲ್ಲಿ ಯಾಕೆ ವಾತಾವರಣ ಹಾಳು ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.

Scroll to load tweet…

'ಧುರಂಧರ್: ದಿ ರಿವೆಂಜ್' ಕಥೆ, ತಾರಾಗಣ ಮತ್ತು ಬಾಕ್ಸ್ ಆಫೀಸ್

ಆದಿತ್ಯ ಧರ್ ಅವರು 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಇದು 2025ರಲ್ಲಿ ಹಿಟ್ ಆಗಿದ್ದ 'ಧುರಂಧರ್' ಚಿತ್ರದ ಸೀಕ್ವೆಲ್ ಆಗಿದೆ. ಇದರಲ್ಲಿ ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನಕ್ಕೆ ಹೋಗಿ ಭಯೋತ್ಪಾದಕ ಸಂಘಟನೆಯನ್ನು ಮಟ್ಟ ಹಾಕುತ್ತಾನೆ. ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್, ಆರ್. ಮಾಧವನ್ ಸೇರಿದಂತೆ ಹಲವು ದೊಡ್ಡ ತಾರೆಯರು ನಟಿಸಿದ್ದಾರೆ. ಈ ಸಿನಿಮಾ ಪ್ರೀಮಿಯರ್‌ನಿಂದ ಇಲ್ಲಿಯವರೆಗೆ ಮೂರು ದಿನಗಳಲ್ಲಿ ಭಾರತದಲ್ಲಿ ಸುಮಾರು 226.27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರದ ಒಟ್ಟು ಕಲೆಕ್ಷನ್ ಸುಮಾರು 330 ಕೋಟಿ ರೂಪಾಯಿ ಆಗಿದೆ.