10:54 PM (IST) Feb 19

India Latest News Live 19 February 2026ಟ್ರಾಫಿಕ್‌ಗೆ ಸಿಲುಕಿ 4 ಗಂಟೆ ಪರದಾಟ - ಮೋದಿ ಜೊತೆಗಿನ ಡಿನ್ನರ್ ಮಿಸ್ ಮಾಡಿದ ಅಮೆರಿಕನ್ ಉದ್ಯಮಿ!

ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿತರಾಗಿದ್ದ ಅಮೆರಿಕದ ಉದ್ಯಮಿ ಸಾರಾ ಹೂಕರ್, ದೆಹಲಿಯ ಭೀಕರ ಟ್ರಾಫಿಕ್‌ನಿಂದಾಗಿ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು. ನಾಲ್ಕು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ, ಅಂತಿಮವಾಗಿ ಹೋಟೆಲ್‌ನಲ್ಲಿ ರೂಮ್ ಸರ್ವಿಸ್ ಮೂಲಕ ಊಟ ಮಾಡಿದ್ದಾರೆ.

Read Full Story
09:52 PM (IST) Feb 19

India Latest News Live 19 February 2026ದೇಶದಲ್ಲಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ - 12 ರಾಜ್ಯಗಳಲ್ಲಿ ವಂಚನೆ ಜಾಲ

ಭಾರತದಲ್ಲಿ ನಕಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯುಜಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. ದೇಶದ 12 ರಾಜ್ಯಗಳಲ್ಲಿ 32 ನಕಲಿ ವಿವಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವೇಶ ಪಡೆಯುವ ಮುನ್ನ ಯುಜಿಸಿ ವೆಬ್‌ಸೈಟ್‌ನಲ್ಲಿ ಪಟ್ಟಿ ಪರಿಶೀಲಿಸುವಂತೆ ಸೂಚಿಸಲಾಗಿದೆ. 

Read Full Story
09:29 PM (IST) Feb 19

India Latest News Live 19 February 2026ಎಐ ಶೃಂಗಸಭೆ ವಿವಾದದ ಬೆನ್ನಲ್ಲೇ ಗಲ್ಗೋಟಿಯಾ ವಿವಿ ಯುವತಿಯ ಕಿಚ್ಚು ಹಚ್ಚಿಸುವ ಡ್ಯಾನ್ಸ್‌ ವಿಡಿಯೋ ವೈರಲ್!

AI ಸಮ್ಮಿಟ್‌ನಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾದ ರೋಬೋಡಾಗ್‌ ಅನ್ನು ತಮ್ಮದೆಂದು ಹೇಳಿಕೊಂಡು ವಿವಾದಕ್ಕೆ ಸಿಲುಕಿದೆ. ಸತ್ಯ ಬಯಲಾಗುತ್ತಿದ್ದಂತೆ ಕ್ಷಮೆಯಾಚಿಸಿದರೂ, ಈಗ ವಿಶ್ವವಿದ್ಯಾಲಯವು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್‌ಗೆ ಗುರಿಯಾಗಿದೆ.
Read Full Story
08:24 PM (IST) Feb 19

India Latest News Live 19 February 202653 ಕ್ಷೇತ್ರಗಳಲ್ಲಿ 'ಕೈ' ಸೋಲಿಗೆ ಕಾರಣವಾದ ರಾಹುಲ್​ ಗಾಂಧಿ ನಾಯಿ? ಏನಿದು ರೋಚಕ ಘಟನೆ?

ರಾಹುಲ್ ಗಾಂಧಿಯವರ ನಾಯಿಗೆ ಸಿಕ್ಕ ಪ್ರಾಮುಖ್ಯತೆಯಿಂದ ಬೇಸತ್ತು ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ತೊರೆದರು. ಇದರ ಪರಿಣಾಮವಾಗಿ ಅಸ್ಸಾಂನಲ್ಲಿ ಕಾಂಗ್ರೆಸ್ 53 ಸ್ಥಾನಗಳನ್ನು ಕಳೆದುಕೊಂಡು ಅಧಿಕಾರ ಕಳೆದುಕೊಂಡಿತು. ಈ ಘಟನೆಯು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
Read Full Story
08:20 PM (IST) Feb 19

India Latest News Live 19 February 2026ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ

ಬೆಂಗಳೂರು: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ 10ನೇ ಕ್ಲಾಸ್‌ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಕೊನೆಗೂ ವೈಭವ್ ತಂದೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.

Read Full Story
08:01 PM (IST) Feb 19

India Latest News Live 19 February 2026ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ದೇವರಿಗೆ ಹರಕೆ ಹೊತ್ತ 4 ತಿಂಗಳ ಬಳಿಕ ಪವಾಡ

ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ಮನೆ ಕ್ಲೀನ್ ಮಾಡಿ ಬೇಡದ ವಸ್ತುಗಳನ್ನು ಗುಜುರಿಗೆ ಮಾರಾಟ ಮಾಡಲಾಗಿತ್ತು. ಇದರಲ್ಲಿ ಚಿನ್ನವೂ ಹೋಗಿತ್ತು. ದೇವರಿಗೆ ಹರಕೆ ಹೊತ್ತ ಬಳಿಕ ನಡೆಯಿತು ಪವಾಡ

Read Full Story
07:21 PM (IST) Feb 19

India Latest News Live 19 February 2026ಚೀನಾ ರೋಬೋಡಾಗ್ ತಮ್ಮದೆಂದು ತೋರಿಸಿದ ಗಾಲ್ಗೋಟಿಯಾಸ್ ವಿವಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು

Galgotias robodog controversy: ವಿಶ್ವ ಮಟ್ಟದ ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ಅನ್ನು ತಮ್ಮದೆಂದು ಹೇಳಿ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವು ಮುಜುಗರಕ್ಕೀಡಾಗಿತ್ತು. ಈ ಘಟನೆಯ ನಂತರಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಶ್ವವಿದ್ಯಾನಿಲಯವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

Read Full Story
06:53 PM (IST) Feb 19

India Latest News Live 19 February 2026ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ

ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ, ಇರಾನ್ ಮೇಲೆ ಏರ್‌ಸ್ಟ್ರೈಕ್ ಮಾಡಲು ಅಮೆರಿಕ ಮಿಲಿಟರಿ ಪಡೆ ಸನ್ನದ್ಧವಾಗಿದೆ. ಟ್ರಂಪ್ ಅಂತಿಮ ಆದೇಶಕ್ಕಾಗಿ ಕಾಯುತ್ತಿದೆ. ಸ್ಟ್ರೈಕ್ ನಡೆದರೆ ಭಾರತದಲ್ಲಿ ಹಲು ವಸ್ತುಗಳ ಬೆಲೆ ಏರಿಕೆಯಾಗಲಿದೆ.

Read Full Story
06:49 PM (IST) Feb 19

India Latest News Live 19 February 2026Tata Share - 7 ಲಕ್ಷ ಕೋಟಿ ತೊಳೆದು ಹೋದ ದಿನದಲ್ಲಿ, ಶೇ.13ರಷ್ಟು ಏರಿಕೆ ಕಂಡ ಟಾಟಾ ಷೇರು!

ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರುಗಳು ಒಂದೇ ದಿನದಲ್ಲಿ ಶೇ. 13 ರಷ್ಟು ಏರಿಕೆ ಕಂಡಿವೆ. ಎನ್. ಚಂದ್ರಶೇಖರನ್ ಅವರ ಮರು ನೇಮಕಾತಿ ಸುದ್ದಿ ಮತ್ತು ಕಂಪನಿಯ ಡಿಸೆಂಬರ್ ತ್ರೈಮಾಸಿಕದಲ್ಲಿನ ಶೇ. 284.45 ರಷ್ಟು ಲಾಭದ ಹೆಚ್ಚಳವು ಈ ಜಿಗಿತಕ್ಕೆ ಪ್ರಮುಖ ಕಾರಣಗಳಾಗಿವೆ.
Read Full Story
06:47 PM (IST) Feb 19

India Latest News Live 19 February 2026ಧೂಮಪಾನಕ್ಕಿಂತಲೂ ಇದರಿಂದ ಸಾಯೋರು ಅಧಿಕ, ಜೋಪಾನ!

ಮಹಾ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಇತ್ತೀಚೆಗೆ ಬೆಂಗಳೂರು ಗ್ರಾಮೀಣ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಎಚ್ಚರಿಸಿದ್ದರು.

Read Full Story
06:26 PM (IST) Feb 19

India Latest News Live 19 February 20262026 ಚೀನೀ ಹೊಸ ವರ್ಷ ಶುರು, ಈ ಕೆಲಸ ಮಾಡಿದರೆ ಹಣ-ಅದೃಷ್ಟ ಓಡಿ ಬರುತ್ತೆ! ಆದ್ರೆ ಆ ತಪ್ಪುಗಳನ್ನು ಮಾಡ್ಬೇಡಿ

ಚೀನಾ ಜ್ಯೋತಿಷ್ಯ ಪದ್ಧತಿಯಲ್ಲಿ ಹೊಸ ವರ್ಷದ ಮೊದಲ ಕೆಲವು ದಿನಗಳು ಪೂರ್ತಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತೆ ಎಂಬ ನಂಬಿಕೆ ಇದೆ. ಈ ಪದ್ಧತಿ ಪ್ರಕಾರ ವರ್ಷ ಪೂರ್ತಿ ಖುಷ್ ಖುಷಿಯಾಗಿ, ಕೈ ತುಂಬಾ ದುಡ್ಡಿರುವಂತೆ ಮಾಡಲು ಹೇಗಿರಬೇಕು?

Read Full Story
06:05 PM (IST) Feb 19

India Latest News Live 19 February 2026ಸಿನಿ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿದ್ದ ನಟಿ ಪ್ರತ್ಯುಷಾ ಸಾವಿನ ಕೇಸ್​ - 24 ವರ್ಷಗಳ ಬಳಿಕ ಈಗ ಶಿಕ್ಷೆ ಪ್ರಕಟ!

ನಟಿ ಪ್ರತ್ಯುಷಾ ಅವರ ಸಾವು 'ಪುನ್ನಗೈ ಮನ್ನನ್' ಚಿತ್ರದ ಕಥೆಯನ್ನು ಹೋಲುತ್ತದೆ. ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮ*ಹತ್ಯೆಗೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದ ಈ ಪ್ರಕರಣದಲ್ಲಿ, 24 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಏನಿದೆ ತೀರ್ಪಿನಲ್ಲಿ?

Read Full Story
05:55 PM (IST) Feb 19

India Latest News Live 19 February 2026ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ₹10 ಲಕ್ಷ ಕೋಟಿ ಹೂಡಿಕೆ ಘೋಷಿಸಿದ ಅಂಬಾನಿ

ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ಇದಕ್ಕಾಗಿ ಮುಕೇಶ್ ಅಂಬಾನಿ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ದೆಹಲಿ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಅಂಬಾನಿ ಘೋಷಣೆ ಹಲವು ದೇಶಗಳನ್ನೇ ಚಕಿತಗೊಳಿಸಿದೆ.

Read Full Story
05:52 PM (IST) Feb 19

India Latest News Live 19 February 202699 ವರ್ಷದ ವೃದ್ಧೆಯ ಕೊಲೆ ಮಾಡಿ ದರೋಡೆ - ಶವ ಕಬ್ಬಿಣದ ಪೆಟ್ಟಿಗೆಗೆ ತುಂಬಿ ಎಸ್ಕೇಪ್

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ 99 ವರ್ಷದ ವೃದ್ಧೆ ಜೋಗಿಂದರ್ ಕೌರ್ ಅವರನ್ನು ದರೋಡೆಕೋರನೊಬ್ಬ ಕೊಲೆ ಮಾಡಿದ್ದಾನೆ. ಒಂಟಿಯಾಗಿ ವಾಸಿಸುತ್ತಿದ್ದ ಅವರ ಶವವು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆಯಾಗಿದ್ದು, ಕಳ್ಳತನದ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
Read Full Story
05:25 PM (IST) Feb 19

India Latest News Live 19 February 2026ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್

ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್‌ಗೆ ಮಿಲಿಯನ್ ಲೈಕ್ಸ್, ಅಪ್ಪಟ ಸುಂದರ ಈಕೆ. ಸೀರೆ, ಮಾಡರ್ನ್ ಡ್ರೆಸ್ ಸೇರಿದಂತೆ ಭಿನ್ನ ಶೈಲಿಯಲ್ಲಿ ಈಕೆ ಮಿಂಚುತ್ತಿದ್ದಾಳೆ. ಇನ್ನು ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಟ್ರೆಂಡ್‌ನಲ್ಲಿರುವ ಈ ನೈನಾ ಯಾರು?

Read Full Story
05:00 PM (IST) Feb 19

India Latest News Live 19 February 2026ಕಾಮಾಕ್ಯ ದೇಗುಲದಲ್ಲಿ ಜೊತೆಯಾದ PM-CM ಆಕಾಂಕ್ಷಿಗಳು - ನೆರವೇರತ್ತಾ ಆಸೆ? ಡಿಕೆಶಿ ಹೇಳಿದ್ದೇನು?

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾಂತ್ರಿಕ ದೇವಿಯು ಇವರ ರಾಜಕೀಯ ಬಯಕೆಗಳನ್ನು ಈಡೇರಿಸುವಳೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

Read Full Story
04:34 PM (IST) Feb 19

India Latest News Live 19 February 2026ಟಾಪ್-5 ಸಾರ್ವಕಾಲಿಕ ಶ್ರೇಷ್ಠ ಟಿ20 ಕ್ರಿಕೆಟಿಗರನ್ನು ಸೆಲೆಕ್ಟ್ ಮಾಡಿದ ದಿನೇಶ್ ಕಾರ್ತಿಕ್! ಇವರೆಲ್ಲ ಡೇಂಜರಸ್ ಬ್ಯಾಟರ್ಸ್‌

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಾರ್ವಕಾಲಿಕ ಶ್ರೇಷ್ಠ ಟಾಪ್ 5 ಟಿ20 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.

Read Full Story
04:30 PM (IST) Feb 19

India Latest News Live 19 February 2026ಹಾರಿ ಹೋಗಿ ಸೈನ್ ಬೋರ್ಡ್‌‌ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ

ಹಾರಿ ಹೋಗಿ ಸೈನ್ ಬೋರ್ಡ್‌‌ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ ವೈರಲ್ ವಿಡಿಯೋ ಹಿಂದಿನ ಅಸಲಿ ಕಹಾನಿ ಬಹಿರಂಗವಾಗಿದೆ. ಎಕ್ಸ್‌ಪ್ರೆಸ್ ಹೈವೇನಲ್ಲಿ ಕಾಣಿಸಿಕೊಂಡ ಈ ದೃಶ್ಯದ ಅಸಲಿ ಕತೆ ಇಲ್ಲಿದೆ.

Read Full Story
04:25 PM (IST) Feb 19

India Latest News Live 19 February 2026ಪ್ರಧಾನಿಗೆ ಪತ್ರ ಬರೆದರೂ ಸಿಗದ ರಕ್ಷಣೆ - ವಿಸ್ಲ್ ಬ್ಲೋವರ್ ಕಾಯ್ದೆಗೆ ನಾಂದಿಯಾದ ನಿಷ್ಠಾವಂತ ಅಧಿಕಾರಿಯ ಕೊ*ಲೆ!

ಪ್ರಾಮಾಣಿಕ ಐಇಎಸ್ ಅಧಿಕಾರಿ ಸತ್ಯೇಂದ್ರ ದುಬೆ, ದೇಶದ ಪ್ರತಿಷ್ಠಿತ 'ಸುವರ್ಣ ಚತುಷ್ಪಥ' ಹೆದ್ದಾರಿ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದರು. ಆದರೆ, ಅವರ ಅಮಾನುಷ ಹತ್ಯೆ 'ಮಾಹಿತಿ ನೀಡುವವರ ಸಂರಕ್ಷಣಾ ಕಾಯ್ದೆ' ಜಾರಿಗೆ ಬರಲು ಪ್ರೇರಣೆಯಾಯಿತು.

Read Full Story
04:16 PM (IST) Feb 19

India Latest News Live 19 February 2026ಅವಲಕ್ಕಿ ಮೇಲೆ ಕುಳಿತೇ ಅವಲಕ್ಕಿ ಪ್ಯಾಕಿಂಗ್‌ - ಪೋಹಾ ಪ್ಯಾಕಿಂಗ್ ವಿಡಿಯೋ ನೋಡಿ ಸಿಡಿಸಿಡಿಯಾದ ವೀಕ್ಷಕರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಕಾರ್ಮಿಕರು ಅವಲಕ್ಕಿಯ ರಾಶಿಯ ಮೇಲೆ ಕುಳಿತುಕೊಂಡು ಅಶುಚಿಯಾಗಿ ಪ್ಯಾಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ಆಹಾರ ಸುರಕ್ಷತೆ ಮತ್ತು FSSAIನಂತಹ ನಿಯಂತ್ರಕ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.
Read Full Story