11:07 PM (IST) Mar 18

India Latest News Live 18 March 2026ಎಲ್ಲಿಂದರಲ್ಲಿ ಬಂದು ಬಾಯಿ ಹಾಕುವ ರಾಹುಲ್​ ಗಾಂಧಿ - ಆ ಶಬ್ದ ಬಳಸಿ ಕಂಗನಾ ರಣಾವತ್ ಹೇಳಿದ್ದೇನು

ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 'ಟಪೋರಿ' ಎಂದು ಕರೆದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಕಲಾಪದ ವೇಳೆ ಅವರ ವರ್ತನೆ ಮತ್ತು ಮಹಿಳೆಯರ ವಿಷಯದಲ್ಲಿ ಅವರು ನಡೆದುಕೊಳ್ಳುವ ರೀತಿ ನಾಚಿಕೆಗೇಡಿನ ಸಂಗತಿ ಎಂದಿರುವ ಕಂಗನಾ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯಿಂದ ಕಲಿಯಬೇಕು ಎಂದು ಹೇಳಿದ್ದಾರೆ.
Read Full Story
10:08 PM (IST) Mar 18

India Latest News Live 18 March 2026ಭಾರತದಲ್ಲಿ ನಕ್ಸಲರು,ದಂಗೆಕೋರ ಗುಂಪುಗಳಿಗೆ ತರಬೇತಿ - ಅಮೆರಿಕನ್ ಪ್ರಜೆ ಸೇರಿ 7 ವಿದೇಶಿಗರ ಬಂಧನ - NIA ಕಸ್ಟಡಿ

ಭಾರತದಲ್ಲಿ ನಕ್ಸಲರು ಮತ್ತು ದಂಗೆಕೋರ ಗುಂಪುಗಳಿಗೆ ಭಯೋತ್ಪಾದನಾ ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಓರ್ವ ಅಮೆರಿಕನ್ ಪ್ರಜೆ ಸೇರಿದಂತೆ ಏಳು ವಿದೇಶಿಗರನ್ನು ಬಂಧಿಸಿದೆ. ಮ್ಯಾನ್ಮಾರ್‌ನಲ್ಲಿ ತರಬೇತಿ ಪಡೆದಿದ್ದ ಈ ಆರೋಪಿಗಳಿಗೆ ನ್ಯಾಯಾಲಯ 11 ದಿನಗಳ ಕಸ್ಟಡಿ ನೀಡಿದೆ.

Read Full Story
09:13 PM (IST) Mar 18

India Latest News Live 18 March 2026ಟ್ರೈನ್​, ಬಸ್​ನಲ್ಲಿ ಹೀಗೆ ನಿಲ್ಲೋ ಹುಡುಗಿಯರೇ ಎಚ್ಚರ! ಬ್ಯಾಗ್​ನಲ್ಲಿ ಕೈ ಹಾಕಿ ಈ ಆಸಾಮಿ ಏನ್​ ಮಾಡ್ದ ನೋಡಿ

ಮೆಟ್ರೋ ಟ್ರೈನ್​ನಲ್ಲಿ ಸ್ಲೀವ್​ಲೆಸ್​ ಡ್ರೆಸ್​ ಹಾಕಿಕೊಂಡು ನಿಂತಿದ್ದ ಯುವತಿಯ ಕಂಕುಳಿಂದ ಬರುತ್ತಿದ್ದ ಬೆವರಿನ ವಾಸನೆಗೆ ಬೇಸತ್ತ ಸಹ ಪ್ರಯಾಣಿಕನೊಬ್ಬ, ಬ್ಯಾಗ್​ನಲ್ಲಿ ಕೈ ಹಾಕಿ ಏನು ಮಾಡಿದ್ದಾನೆ ನೋಡಿ . ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಯುವಕನ ಕೃತ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Read Full Story
09:06 PM (IST) Mar 18

India Latest News Live 18 March 2026ಯುದ್ಧದ ನಡುವೆಯೇ ಇರಾನ್‌ನಿಂದ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲ ರಫ್ತು - ಹರ್ಮುಜ್ ದಾಟಿ ಹೊರ 90 ಹಡಗುಗಳು

ಅಮೆರಿಕಾ-ಇಸ್ರೇಲ್ ಯುದ್ಧದ ನಡುವೆಯೂ, ಪರಿಣಾಮಕಾರಿಯಾಗಿ ಮುಚ್ಚಲ್ಪಟ್ಟ ಹರ್ಮುಜ್ ಜಲಸಂಧಿಯ ಮೂಲಕ ಇರಾನ್ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲವನ್ನು ರಫ್ತು ಮಾಡುತ್ತಿದೆ. ತೈಲ ಆರಂಭವಾದಾಗಿನಿಂದ ತೈಲ ತುಂಬಿದ 90 ಹಡಗುಗಳು ಈ ಜಲಮಾರ್ಗವನ್ನು ದಾಟಿ ಸಾಗಿವೆ.

Read Full Story
08:19 PM (IST) Mar 18

India Latest News Live 18 March 2026ಹತ್ತಿರ ಹತ್ತಿರ ಬಾರೆ ಎಂದು ಅಂಬಾನಿ ಹಿಡಿದ್ರೂ, ದೂರ ಸರಿದ ನೀತಾ- ಲಕ್ಷ ಲಕ್ಷ ವ್ಯೂವ್ಸ್‌ ಕಂಡ ವಿಡಿಯೋ ವೈರಲ್‌

ಕಾರ್ಯಕ್ರಮವೊಂದರಲ್ಲಿ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿ ಅವರ ಕೈ ಹಿಡಿಯಲು ಮತ್ತು ಸೊಂಟದ ಮೇಲೆ ಕೈ ಹಾಕಲು ಪ್ರಯತ್ನಿಸಿದಾಗ, ನೀತಾ ಅವರು ತಪ್ಪಿಸಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story
06:15 PM (IST) Mar 18

India Latest News Live 18 March 2026ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿಗೆ ಮಾಟ-ಮಂತ್ರ ಮಾಡಿಸಿದ್ರಾ? ಆ ಒಂದು ಹಾಡು ನರಕ ತೋರಿಸಿತ್ತಂತೆ!

ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಧ್ವನಿಗೆ ಯಾರಾದರೂ ಮಾಟ ಮಾಡಿಸಿದ್ದರೇ? ಅವರ ಧ್ವನಿಗೆ ಬಂದಿದ್ದ ಸಮಸ್ಯೆ ಏನು? ಮನೆಯವರು ಯಾಕೆ ಹಾಗೆ ಅನುಮಾನಪಟ್ಟರು? ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ನರಕ ತೋರಿಸಿದ ಆ ಹಾಡು ಯಾವುದು?

Read Full Story
06:11 PM (IST) Mar 18

India Latest News Live 18 March 2026ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಮೀನಿಗೆ ಜಿರಳೆ ಔಷಧಿ ಹಿಟ್ ಸ್ಪ್ರೇ ಮಾಡಿದ ಯುವಕ

ಮಹಾರಾಷ್ಟ್ರದ ವಸೈನಲ್ಲಿ ವ್ಯಾಪಾರಿಯೊಬ್ಬ ಮಾರಾಟಕ್ಕಿಟ್ಟ ಮೀನುಗಳ ಮೇಲೆ ಜಿರಳೆ ನಾಶಕ 'ಹಿಟ್' ಸ್ಪ್ರೇ ಮಾಡುತ್ತಿರುವ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಆಹಾರ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
Read Full Story
06:06 PM (IST) Mar 18

India Latest News Live 18 March 2026IPL 2026 - ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗಲೇ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಇಬ್ಬರು ಸ್ಪೋಟಕ ಬ್ಯಾಟರ್‌ಗಳಿಗೆ ನಾಯಕ ಹಾಗೂ ಉಪನಾಯಕ ಪಟ್ಟ ಕಟ್ಟಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

Read Full Story
05:57 PM (IST) Mar 18

India Latest News Live 18 March 2026Rithu Chowdary - 'ನನ್ನನ್ನು ಮೋಸ ಮಾಡಿ ಬೇರೆ ಹುಡುಗಿ ಜೊತೆ ಹೋದ' - ನಟಿ ರಿತು ಚೌಧರಿ ಭಾವುಕ

ನಟಿ ರಿತು ಚೌಧರಿ ಹಂಚಿಕೊಂಡಿರುವ ಭಾವುಕ ಇನ್‌ಸ್ಟಾಗ್ರಾಮ್ ಸ್ಟೋರಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರೀತಿ, ಬ್ರೇಕಪ್ ಮತ್ತು ವದಂತಿಗಳ ಬಗ್ಗೆ ಅವರ ಮಾತುಗಳು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.

Read Full Story
05:45 PM (IST) Mar 18

India Latest News Live 18 March 2026T20 Rankings - ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!

ದುಬೈ: ಅಂತಾರಾಷ್ಟ್ರೀಯ ಟಿ20 ನೂತನ ರ್‍ಯಾಂಕಿಂಗ್‌ ಪ್ರಕಟವಾಗಿದ್ದು, ಕೆಲವೊಂದು ಮಹತ್ವದ ಬದಲಾವಣೆಗಳಾಗಿವೆ.ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ ಪಡೆದಿದ್ದಾರೆ.

Read Full Story
05:37 PM (IST) Mar 18

India Latest News Live 18 March 2026Suriya - ದಳಪತಿ ವಿಜಯ್ ಸಿನಿಮಾ ರಿಲೀಸ್ ತಡ - ಸೂರ್ಯ ಜೊತೆ ಕೈಜೋಡಿಸಿದ ನಿರ್ದೇಶಕ ಹೆಚ್.ವಿನೋದ್!

ಮೊದಲು 'ಜನ ನಾಯಗನ್' ಚಿತ್ರವನ್ನು ಜನವರಿ 9 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇರುವುದು ಮತ್ತು ಕೋರ್ಟ್ ಕೇಸ್‌ಗಳಿಂದಾಗಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ.

Read Full Story
05:24 PM (IST) Mar 18

India Latest News Live 18 March 2026ಐಪಿಎಲ್‌ಗೆ ಸಡ್ಡು ಹೊಡೆಯಲು ಹೋದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಖಭಂಗ!

ಲಾಹೋರ್‌: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಡ್ಡು ಹೊಡೆದು ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಲು ಹೊರಟಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಇದೀಗ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದೆ. ಅಷ್ಟಕ್ಕೂ ಏನಿದು ಘಟನೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read Full Story
04:47 PM (IST) Mar 18

India Latest News Live 18 March 2026ತೀವ್ರವಾದ ರಾಜಮನೆತನದ ಆಸ್ತಿ ಬಿಕ್ಕಟ್ಟು, ಅಪ್ಪನ ಆಸ್ತಿಯ ನಿರ್ವಹಣೆ ಕೇಳಿದ್ದ ಪದ್ಮಜಾ ಕುಮಾರಿಗೆ ಹಿನ್ನಡೆ!

ಉದಯಪುರದ ಮಾಜಿ ರಾಜಮನೆತನದ ಆಸ್ತಿ ವಿವಾದದಲ್ಲಿ, ದಿವಂಗತ ಅರವಿಂದ್ ಸಿಂಗ್ ಮೇವಾರ್ ಅವರ ಪುತ್ರಿ ಪದ್ಮಜಾ ಕುಮಾರಿ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸಹೋದರ ಲಕ್ಷ್ಯರಾಜ್ ಸಿಂಗ್ ಮಂಡಿಸಿರುವ 'ವಿಲ್' ಪ್ರಕರಣ ಬಾಕಿ ಇರುವ ಕಾರಣ, ಆಡಳಿತಾತ್ಮಕ ಹಕ್ಕು ನೀಡಲು ನ್ಯಾಯಾಲಯ ನಿರಾಕರಿಸಿದೆ.

Read Full Story
03:27 PM (IST) Mar 18

India Latest News Live 18 March 2026ಟಿ20 ವಿಶ್ವಕಪ್ ಬಹಿಷ್ಕಾರ, ಬಾಂಗ್ಲಾ ಮಂಡಳಿಗೆ ಈಗ ಪಶ್ಚಾತ್ತಾಪ! ತನಿಖೆಗೆ ಸಮಿತಿ ರಚನೆ

ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿದ್ದನ್ನು 'ದೊಡ್ಡ ರಾಜತಾಂತ್ರಿಕ ಪ್ರಮಾದ' ಎಂದು ಕ್ರೀಡಾ ಸಚಿವರು ಕರೆದಿದ್ದಾರೆ. ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Read Full Story
03:23 PM (IST) Mar 18

India Latest News Live 18 March 2026ನಡು ಸಮುದ್ರದಲ್ಲೇ ಡೀಲ್‌, ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಈಗ ಮಂಗಳೂರಿನತ್ತ ಯು-ಟರ್ನ್!

ಚೀನಾದತ್ತ ಸಾಗುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಲವು ನೌಕೆಗಳು ತಮ್ಮ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಮಧ್ಯಪ್ರಾಚ್ಯದ ಪೂರೈಕೆ ಕೊರತೆಯನ್ನು ನೀಗಿಸಲು ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿದೆ.
Read Full Story
03:03 PM (IST) Mar 18

India Latest News Live 18 March 2026ಆಸ್ಪತ್ರೆ ಬಿಲ್ ಕಟ್ಟುವ ಮುನ್ನ ಎಚ್ಚರ! ಐಟಮೈಸ್ಡ್ ಬಿಲ್ ಕೇಳಿದ ರೋಗಿಗೆ ಬರೋಬ್ಬರಿ 44,000 ರೂ. ಉಳಿತಾಯ!

ರೋಗಿಯೊಬ್ಬರು ಆಸ್ಪತ್ರೆಯಿಂದ 'ಐಟಮೈಸ್ಡ್ ಬಿಲ್' ಕೇಳುವ ಮೂಲಕ ತಮ್ಮ ಬಿಲ್‌ನಲ್ಲಿ 44,000 ರೂ. ಉಳಿತಾಯ ಮಾಡಿದ್ದಾರೆ. ತಾವು ಪಡೆಯದ ಚಿಕಿತ್ಸೆಗೂ ಬಿಲ್‌ನಲ್ಲಿ ಹಣ ಸೇರಿಸಿರುವುದನ್ನು ಕಂಡುಕೊಂಡ ಅವರು, ಈ ಮೂಲಕ ಆಸ್ಪತ್ರೆ ಬಿಲ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರ ಮಹತ್ವವನ್ನು ಸಾರಿದ್ದಾರೆ.

Read Full Story
02:34 PM (IST) Mar 18

India Latest News Live 18 March 2026ಬಾಲಿವುಡ್​ ಸ್ಟಾರ್‌ಗೂ ತಟ್ಟಿದ LPG ಸಿಲಿಂಡರ್ ಅಭಾವ! ಹೀಗಾಗಿ ಅಕ್ಷಯ್ ಕುಮಾರ್ ಪತ್ನಿ ಮಾಡಿದ್ರು ಕಿಲಾಡಿ ಐಡಿಯಾ!

ದೇಶಾದ್ಯಂತ ಎಲ್.ಪಿ.ಜಿ ಸಿಲಿಂಡರ್ ಅಭಾವ ತಲೆದೋರಿದ್ದು, ಇದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೂ ತಟ್ಟಿದೆ. ಅನಿಲ ಕೊರತೆಯಾದರೆ ಅಡುಗೆಗೆ ತೊಂದರೆಯಾಗಬಾರದೆಂದು, ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಈಗಾಗಲೇ ಎರಡು ಇಂಡಕ್ಷನ್ ಸ್ಟೌವ್‌ಗಳನ್ನು ತರಿಸಿಕೊಂಡಿದ್ದಾರೆ ಎಂದು ಅಕ್ಷಯ್ ಬಹಿರಂಗಪಡಿಸಿದ್ದಾರೆ.
Read Full Story
02:19 PM (IST) Mar 18

India Latest News Live 18 March 2026ಮಾರುತಿ ಸುಜುಕಿ ವಿರುದ್ಧ 200 ಕೋಟಿ ಕೇಸ್ - ಕೋರ್ಟ್ ಒಳಗೆ ಭ್ರೂಣ ತಂದ ವ್ಯಕ್ತಿ, ಹೈಕೋರ್ಟ್ ಗರಂ!

ಅರ್ಜಿದಾರರ ಕುಟುಂಬ ಎದುರಿಸಿದ ವೈಯಕ್ತಿಕ ನಷ್ಟ ಅಥವಾ ಸಂಕಷ್ಟದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ನ್ಯಾಯಾಲಯ, ಭಾವನೆಗಳು ನ್ಯಾಯಾಂಗ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಒತ್ತಿಹೇಳಿದೆ.

Read Full Story
01:53 PM (IST) Mar 18

India Latest News Live 18 March 2026Back to India - 17 ವರ್ಷ ಅಮೆರಿಕ ವಾಸಕ್ಕೆ ಗುಡ್‌ಬೈ! ನೆಮ್ಮದಿಯ ಜೀವನ ಅರಸಿ ಭಾರತಕ್ಕೆ ಮರಳಿದ NRI ಕುಟುಂಬ!

17 ವರ್ಷಗಳ ಅಮೆರಿಕ ವಾಸಕ್ಕೆ ಅಂತ್ಯ ಹಾಡಿ, ಎನ್‌ಆರ್‌ಐ ಕುಟುಂಬವೊಂದು ಭಾರತಕ್ಕೆ ಮರಳುತ್ತಿದೆ. ಮಗನಿಗೆ ಉತ್ತಮ ಸಾಮಾಜಿಕ ವಾತಾವರಣ ಮತ್ತು ನೆಮ್ಮದಿಯ ಜೀವನಕ್ಕಾಗಿ ಪುಣೆಯಲ್ಲಿ ನೆಲೆಸಲು ಈ ಫ್ಯಾಮಿಲಿ ನಿರ್ಧರಿಸಿದೆ. ಇದಕ್ಕಾಗಿ 4 ಕೋಟಿ ರೂ.ವರೆಗೂ ಖರ್ಚು ಮಾಡಲು ಸಿದ್ಧವಾಗಿದೆ.
Read Full Story
01:18 PM (IST) Mar 18

India Latest News Live 18 March 2026ಚಾರ್ಜ್‌ಗೆ ಇಟ್ಟ ಇವಿ ಕಾರಿನಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ - ಮನೆಗೆ ಹಬ್ಬಿ 8 ಜನ ಬಲಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ, ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕ್ ಕಾರಿನಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮೂರಂತಸ್ತಿನ ಮನೆಗೆ ವ್ಯಾಪಿಸಿದೆ. ಈ ದುರಂತದಲ್ಲಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ, ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ.
Read Full Story