MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Sports
  • Cricket
  • ಇಂದಿನ BCCI ಮಹತ್ವದ ಮೀಟಿಂಗ್‌ಗೆ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದೇಕೆ? ಕೊನೆಗೂ ಬಯಲಾಯ್ತು ಇಂಟ್ರೆಸ್ಟಿಂಗ್ ಡೀಟೈಲ್ಸ್

ಇಂದಿನ BCCI ಮಹತ್ವದ ಮೀಟಿಂಗ್‌ಗೆ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದೇಕೆ? ಕೊನೆಗೂ ಬಯಲಾಯ್ತು ಇಂಟ್ರೆಸ್ಟಿಂಗ್ ಡೀಟೈಲ್ಸ್

ಭಾರತೀಯ ಕ್ರಿಕೆಟ್‌ನ ಕೆಲ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗೆ ಗುರುವಾರ ಬಿಸಿಸಿಐ ಸಭೆ ಕರೆದಿತ್ತು, ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ಪ್ರವಾಸಗಳಲ್ಲಿ ಎದುರಾದ ವೈಫಲ್ಯದ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ವರದಿಯಾಗಿತ್ತು. ಈ ಸಭೆಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಚಕ್ಕರ್ ಹಾಕಿದ್ದಾರೆ.

2 Min read
Author : Naveen Kodase
Published : Sep 03 2026, 06:58 PM IST
Share this Photo Gallery
  • FB
  • TW
  • Linkdin
  • Whatsapp
16
ಮುಂಬೈನಲ್ಲಿಂದು ಬಿಸಿಸಿಐ ಪರಾಮರ್ಶನಾ ಸಭೆ
Image Credit : chat GPT

ಮುಂಬೈನಲ್ಲಿಂದು ಬಿಸಿಸಿಐ ಪರಾಮರ್ಶನಾ ಸಭೆ

ಐರ್ಲೆಂಡ್ ಎದುರಿನ ಟಿ20 ಹಾಗೂ ಇಂಗ್ಲೆಂಡ್ ಎದುರಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ಸೋತು ಬರಿಗೈನಲ್ಲಿ ಭಾರತ ತಂಡವು ತವರಿಗೆ ವಾಪಾಸ್ಸಾಗಿತ್ತು. ಈ ಬಗ್ಗೆ ಪರಾಮರ್ಶೆ ಮಾಡಲು ಬಿಸಿಸಿಐ ಮುಂಬೈನಲ್ಲಿಂದು ಸಭೆ ಕರೆದಿತ್ತು. ಈ ಮಹತ್ವದ ಸಭೆಯಲ್ಲಿ ಭಾರತ ತಂಡದ ಕೋಚ್‌ ಗೌತಮ್‌ ಗಂಭೀರ್‌, ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌, ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌, ಭಾರತ ಟೆಸ್ಟ್‌ ಹಾಗೂ ಏಕದಿನ ತಂಡದ ನಾಯಕ ಶುಭ್‌ಮನ್‌ ಗಿಲ್‌, ಟಿ20 ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಇರಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಜಿತ್ ಅಗರ್ಕರ್ ಈ ಸಭೆಗೆ ಗೈರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬಿಸಿಸಿಐ ಮಹತ್ವದ ಸಭೆಗೆ ಅಗರ್ಕರ್ ಗೈರು
Image Credit : AI generated

ಬಿಸಿಸಿಐ ಮಹತ್ವದ ಸಭೆಗೆ ಅಗರ್ಕರ್ ಗೈರು

ಇನ್ನು ಇದೇ ವೇಳೆ ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ತಂಡದ ಸಿದ್ಧತೆ, ರೋಹಿತ್‌ ಶರ್ಮಾರ ಭವಿಷ್ಯದ ಬಗ್ಗೆಯೂ ಗಂಭೀರ ಚರ್ಚೆ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿತ್ತು. ಆದರೆ ಇದೆಲ್ಲದರ ನಡುವೆ ಅಜಿತ್ ಅಗರ್ಕರ್ ಈ ಮಹತ್ವದ ಸಭೆಯಿಂದ ಹೊರಗುಳಿದಿದ್ದು ಏಕೆ ಎನ್ನುವುದರ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆ ಶುರುವಾಗಿದೆ.

Related Articles

Related image1
ಸಚಿನ್ ಜತೆ ಬೆಸ್ಟ್ ಕ್ರಿಕೆಟರ್ ಪ್ರಶಸ್ತಿ, 16 ಎಸೆತಗಳಲ್ಲಿ ಫಿಫ್ಟಿ; ಬಿಸಿಸಿಐ ಸೆಲೆಕ್ಟರ್ಸ್‌ಗೆ ಲಂಚ ನೀಡಲು ಹೋಗಿ ಬ್ಯಾನ್ ಆದ ಪ್ರತಿಭಾನ್ವಿತ ಕ್ರಿಕೆಟಿಗ..!
Related image2
ಮತ್ತೊಂದು ಮಹತ್ವದ ಟೂರ್ನಿಯಿಂದಲೂ ಗೌತಮ್ ಗಂಭೀರ್ ಔಟ್? ತೆರೆ ಮರೆಗೆ ಸರಿತಾರಾ ಟೀಂ ಇಂಡಿಯಾ ಹೆಡ್‌ ಕೋಚ್‌?
36
ರೋಹಿತ್-ಅಗರ್ಕರ್ ನಡುವೆ ಮುಸುಕಿನ ಗುದ್ದಾಟ
Image Credit : Asianet News

ರೋಹಿತ್-ಅಗರ್ಕರ್ ನಡುವೆ ಮುಸುಕಿನ ಗುದ್ದಾಟ

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ರೋಹಿತ್ ಶರ್ಮಾ ಅವರನ್ನು ಏಕದಿನ ವಿಶ್ವಕಪ್ ಟೂರ್ನಿಗೆ ಪರಿಗಣಿಸದಿರಲು ಹಾಗೂ ಇಂಗ್ಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದ ಬಳಿಕ ರೋಹಿತ್ ಶರ್ಮಾ ಅವರ ನಿವೃತ್ತಿ ಪಡೆಯಲು ಆಯ್ಕೆ ಸಮಿತಿ ಮೂಲಗಳು ಸೂಚಿಸಿದ್ದವು ಎನ್ನಲಾಗಿತ್ತು. ಆದರೆ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

46
ಅಜಿತ್ ಅಗರ್ಕರ್ ತಲೆದಂಡಕ್ಕೆ ಬಿಸಿಸಿಐ ಪ್ಲಾನ್
Image Credit : Instagram

ಅಜಿತ್ ಅಗರ್ಕರ್ ತಲೆದಂಡಕ್ಕೆ ಬಿಸಿಸಿಐ ಪ್ಲಾನ್

ಇದೀಗ ನ್ಯೂಸ್ 24 ವರದಿಯ ಪ್ರಕಾರ, ಬಿಸಿಸಿಐ ಇದೀಗ ಅಜಿತ್ ಅಗರ್ಕರ್ ಅವರ ತಲೆದಂಡ ಮಾಡಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಬಿಸಿಸಿಐ ಇದೀಗ ಹೊಸ ಚೀಫ್ ಸೆಲೆಕ್ಟರ್ ಹುಡುಕಾಟದಲ್ಲಿದೆ. ಇದೇ ಕಾರಣಕ್ಕೆ ಅಜಿತ್ ಅಗರ್ಕರ್ ಅವರನ್ನು ಹೊರಗಿಟ್ಟು ಈ ಸಭೆ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

56
ವೈಯುಕ್ತಿಕ ಕಾರಣ ನೀಡಿ ಮೀಟಿಂಗ್‌ಗೆ ಅಗರ್ಕರ್ ಚಕ್ಕರ್
Image Credit : X

ವೈಯುಕ್ತಿಕ ಕಾರಣ ನೀಡಿ ಮೀಟಿಂಗ್‌ಗೆ ಅಗರ್ಕರ್ ಚಕ್ಕರ್

ಅಜಿತ್ ಅಗರ್ಕರ್ ಸದ್ಯ ವೈಯುಕ್ತಿಕ ಕಾರಣ ನೀಡಿ ಈ ಸಭೆಗೆ ಗೈರಾಗಿದ್ದಾರೆ. ಇದೇ ಸೆಪ್ಟೆಂಬರ್‌ನಲ್ಲಿ ಅಜಿತ್ ಅಗರ್ಕರ್ ಅವರ ಜತೆಗಿನ ಬಿಸಿಸಿಐ ಕಾಂಟ್ರ್ಯಾಕ್ಟ್ ಕೊನೆಯಾಗಲಿದೆ. ಸದ್ಯದ ಮಾಧ್ಯಮಗಳ ವರದಿಗಳ ಪ್ರಕಾರ ಬಿಸಿಸಿಐ, ಅಜಿತ್ ಅಗರ್ಕರ್ ಅವರ ಕಾಂಟ್ರ್ಯಾಕ್ಟ್ ವಿಸ್ತರಿಸದಿರಲು ತೀರ್ಮಾನಿಸಿದೆ ಎನ್ನಲಾಗಿದೆ. ಇನ್ನು ಮತ್ತೊಂದು ಮೂಲಗಳ ಪ್ರಕಾರ ವೆಸ್ಟ್ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಸರಣಿಗೂ ಮುನ್ನವೇ ಹೊಸ ಚೀಫ್ ಸೆಲೆಕ್ಟರ್ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

66
ರೋಹಿತ್ ಶರ್ಮಾ ಕ್ರಿಕೆಟ್ ಭವಿಷ್ಯದ ಬಗ್ಗೆ
Image Credit : BCCI

ರೋಹಿತ್ ಶರ್ಮಾ ಕ್ರಿಕೆಟ್ ಭವಿಷ್ಯದ ಬಗ್ಗೆ

ಇನ್ನು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ಆಯ್ಕೆಯ ಕುರಿತಂತೆ ಹೊಸ ಚೀಫ್ ಸೆಲೆಕ್ಟರ್ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ಫಿಟ್ನೆಸ್ ಹಾಗೂ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಹೊಸ ಚೀಫ್ ಸೆಲೆಕ್ಟರ್ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಅಜಿತ್ ಅಗರ್ಕರ್
ಟೀಮ್ ಇಂಡಿಯಾ
ಬಿಸಿಸಿಐ

Latest Videos
Recommended Stories
Recommended image1
ನನ್ನ ಹತ್ತಿರ ಟಿಪ್ಸ್ ಪಡೆದು ಈಗ ನಮ್ಮ ವಿರುದ್ಧವೇ ಟ್ವೀಟ್ ಮಾಡ್ತಾನೆ - ಭಾರತೀಯ ಕ್ರಿಕೆಟಿಗನ ಮೇಲೆ ಅಕ್ರಮ್ ಆಕ್ರೋಶ
Recommended image2
ಮತ್ತೊಂದು ಮಹತ್ವದ ಟೂರ್ನಿಯಿಂದಲೂ ಗೌತಮ್ ಗಂಭೀರ್ ಔಟ್? ತೆರೆ ಮರೆಗೆ ಸರಿತಾರಾ ಟೀಂ ಇಂಡಿಯಾ ಹೆಡ್‌ ಕೋಚ್‌?
Recommended image3
ರಿಂಕು ಸಿಂಗ್ ವೃತ್ತಿ ಬದುಕಿಗೆ BCCI ಕೊನೆ ಮೊಳೆ; ಚೆನ್ನಾಗಿ ಆಡ್ತಿದ್ದರೂ ಯಾಕೆ ಆಯ್ಕೆ ಮಾಡ್ತಿಲ್ಲ, ಅಸಲಿ ಕತೆ ಇಲ್ಲಿದೆ
Related Stories
Recommended image1
ಸಚಿನ್ ಜತೆ ಬೆಸ್ಟ್ ಕ್ರಿಕೆಟರ್ ಪ್ರಶಸ್ತಿ, 16 ಎಸೆತಗಳಲ್ಲಿ ಫಿಫ್ಟಿ; ಬಿಸಿಸಿಐ ಸೆಲೆಕ್ಟರ್ಸ್‌ಗೆ ಲಂಚ ನೀಡಲು ಹೋಗಿ ಬ್ಯಾನ್ ಆದ ಪ್ರತಿಭಾನ್ವಿತ ಕ್ರಿಕೆಟಿಗ..!
Recommended image2
ಮತ್ತೊಂದು ಮಹತ್ವದ ಟೂರ್ನಿಯಿಂದಲೂ ಗೌತಮ್ ಗಂಭೀರ್ ಔಟ್? ತೆರೆ ಮರೆಗೆ ಸರಿತಾರಾ ಟೀಂ ಇಂಡಿಯಾ ಹೆಡ್‌ ಕೋಚ್‌?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved